ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಕವಿಗೆ ಸಮಾಜದ ನೋವುಗಳಿಗೆ ಮಿಡಿಯುವ ಒಲವಿನ ಮನಸ್ಸಿರಲಿ
ಸರ್ಕಾರಗಳು ತಪ್ಪು ಮಾಡಿದಾಗ, ತಪ್ಪು ಹೆಜ್ಜೆಯನ್ನು ಆಡಳಿತದಲ್ಲಿಟ್ಟಾಗ ಅದನ್ನು ಪ್ರಶ್ನಿಸುವ, ವಿರೋಧಿಸುವ ವ್ಯವಸ್ಥೆಯನ್ನು ಸರಿಪಡಿಸಲು ಮಾಡುವ ‘ವಿರೋಧ ಪಕ್ಷದ’ ಸ್ಥಾನ ಬಹಳ ಮುಖ್ಯ. ಅಂತಹ ಮಹತ್ವದ ಸ್ಥಾನವನ್ನು ಹೊಂದಿದ ವಿರೋಧ ಪಕ್ಷವು ಕೆಲವು ಸಲ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ಜನಸಾಮಾನ್ಯರ ನೋವುಗಳಿಗೆ ಕಾರಣವಾಗಿ ಬಿಡುತ್ತದೆ. ಆಗ ಸಾಹಿತಿಯಾದವನು ಕವಿಯಾದವನು, ಬರಹಗಾರನು ಅತ್ಯಂತ ಜಾಗೃತದಿಂದ ಆಡಳಿತ ಪಕ್ಷವನ್ನು ಎಚ್ಚರಿಸಬೇಕಾಗಿದ್ದು ಅಗತ್ಯವಾದ ಕರ್ತವ್ಯವಾಗಿದೆ.








