ಕಾವ್ಯಯಾನ
ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು ಬೆಳಕು ಗಾಳಿ ಕೇಳಿದೀಯಾ ಜಾತಿಬಣಕ್ಕೆ ಬೇದ ಮೊದಲೇ ಇಲ್ಲ ಧರ್ಮದ ಹೆಂಡ ಕುಡಿದುಜಾತಿ ಮತ್ತೆರಿಸಿಕೊಂಡುಎಷ್ಟು ದಿನ ಕುಣಿಯುವಿರಿದೇವರೇ ಹೆಣವಾಗಿ ಹೆಗಲೇರಿರುವಾಗಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ ಎಷ್ಟಂತ ಆಡುವಿರಿ ನಲಿ-ಕಲಿ ಆಟಸನಿಹದಲ್ಲಿದೆ ಅಂತ್ಯಮನುಷ್ಯರಾಗಲು ಮರೆಯದಿರಿಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!








