ಕರುಣಾಮಯಿ
ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು ಸೀರೆಯ ಲೆಕ್ಕಿಸದೆನನಗೊಂದು ಹೊಸ ಅಂಗಿಯ ಕೊಡಿಸಿದೊಡ್ಡ ಅಧಿಕಾರಿಯ ಸ್ಥಾನದಲಿತಾ ಕೂಸ ನೋಡಬೇಕೆಂದುಆಸೆಯಿಂದ ಕಾಯುತ್ತ ಕುಳಿತವಳುಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….ಅವಳ ಋಣ ತೀರಿಸಲು ಸಾಧ್ಯವಿಹುದೇನು?…ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?…. ******









