ಕಾವ್ಯಯನ
ಕಾಪಾಡಬೇಕಿದೆ ರಾಮಕೃಷ್ಣ ಸುಗತ ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನುಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನುಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನುಎಷ್ಟು ಬಣ್ಣ ಬಣ್ಣದ ಹೂಗಳುತಿಳಿಯುತ್ತಿಲ್ಲ ಅವುಗಳ ವಾಸನೆನೀವು ಆಯುವಂತರು ಸ್ವಾಮಿಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆನೀವು ದೂರು ಕೊಡುತ್ತೀರಿನೀವು ಪುಣ್ಯವಂತರು ಸ್ವಾಮಿನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ ಪ್ರೀತಿಯೆಂದರೆ ಕುದಿಯುವ ನಿಮ್ಮನ್ನುಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವುನೀವು ಆರೋಗ್ಯವಂತರು ಸ್ವಾಮಿನಾವು ಬೆಚ್ಚಗೆ ಮಲಗಿದರೆನಿದ್ರಾಹೀನತೆಯಿಂದ ಬಳಲುತ್ತೀರಲ್ಲಾಕನಿಷ್ಠ ನಮ್ಮ ಮನೆಗೆ ಬೆಂಕಿ ಹಚ್ಚುವಾಗಲಾದರೂಬಿಸಿಲಿಗೆ ನಿಂತುಕೊಳ್ಳಿ ಸರಿ ನಾನಿನ್ನು ಬರುತ್ತೇನೆಎದೆಯಲ್ಲಿ ಉಗಿಯ ಬಂಡಿಯೊಂದು ಓಡುತ್ತಿದೆನಿತ್ಯವೂ ನೋವು ಹೊತ್ತು ಸಾಗುತ್ತಿದೆಯಾರೋ ಕಟ್ಟಿಟ್ಟ ನಿಲ್ದಾಣಕ್ಕೆನನ್ನ ಹೆಸರಿಟ್ಟಿದ್ದಾರೆಇದೀಗ ನಾನು ಇಳಿಯಲೇಬೇಕಿದೆಹಳಿಯನ್ನೇ ಕಸಿವವರ ಮಧ್ಯೆ ಸರಕನ್ನು ಕಾಪಾಡಬೇಕಿದೆ **********









