ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸಂಕ್ರಾಂತಿ ಸಂಭ್ರಮ” ಭಾನು ಉದಯಿಸಿಕಿರಣ ಚೆಲ್ಲಿದ ದಿನಶೀತದ ನೆರಳು ಸರಿದುಹೊಸ ಕಾಲ ಅದುಬೆಳೆದು ನಿಂತ ಪೈರುಗಳು ನಗುವಿನ ಗೀತೆ ಮುಗುಳು ಮನೆ ಮನ ತುಂಬಿತುಸಂಕ್ರಾಂತಿಯ ಸಂಭ್ರಮ ಎಳ್ಳು–ಬೆಲ್ಲ ಹಂಚಿಹೃದಯ ಬೆಸೆಯುವಸಂಪ್ರದಾಯ,ಕಹಿ–ಸಿಹಿಯ ಸಂಗಮವೇಬದುಕಿನ ಸತ್ಯೋಪಾಯ,ಸಂಕ್ರಾಂತಿಯ ಸಂಭ್ರಮ “ಎಳ್ಳು ಬೆಲ್ಲ ತಿನ್ನಿಒಳ್ಳೇ ಮಾತಾಡಿ”  ಹಾರೈಕೆ,ಸ್ನೇಹದ ಬೀಜ ಬಿತ್ತುವಮಧುರ ಸಂಸ್ಕೃತಿಯ ಸಖ್ಯಹಸಿರು ಹೊಲಗಳಲ್ಲಿಕಂಗೊಳಿಸುವ ದವಸ,ಸಂಕ್ರಾಂತಿಯ ಸಂಭ್ರಮ ರೈತನ ಶ್ರಮಕ್ಕೆ  ಸಿಕ್ಕಿತುಸಾರ್ಥಕ ಉತ್ಸವ,ನೇಗಿಲು ಹಿಡಿದ ಕೈಗಳಿಗೆಗೌರವದ ನಮನ,ಅನ್ನದಾತನ ಬದುಕಿಗೆಬೆಳಕಿನ ಕಿರಣ.ಸಂಕ್ರಾಂತಿಯ ಸಂಭ್ರಮ ಗೋ  ಮಾತೆಗೂ ಹಬ್ಬ, ಕೊಂಬುಗಳಿಗೆ ಬಣ್ಣಗಂಟೆಯ ನಾದದಲ್ಲಿತುಂಬಿತು ಹಳ್ಳಿ–ಹಾಡುಉತ್ಸಾಹದ ಆಟ–ಪಾಠಸಂಕ್ರಾಂತಿ ತಂದಿತುಸಂಕ್ರಾಂತಿಯ ಸಂಭ್ರಮ ಸಂಭ್ರಮದ  ನೋಟ.ಆಕಾಶದಲ್ಲಿ ಗಾಳಿಪಟಬಣ್ಣದ ಬಣ್ಣದ  ಕೂಟಸಕ್ಕರೆ ಕಬ್ಬು ಕೈಯಲ್ಲಿಕನಸ  ಮನದಲ್ಲಿ,ಸಂತಸದ ಸಿಹಿ ಬೆಲ್ಲ ಎಲ್ಲರ ಬದುಕಿನಲ್ಲಿ.ಸಂಕ್ರಾಂತಿಯ ಸಂಭ್ರಮ ಸೂರ್ಯನಿಗೆ ನಮಿಸಿಹೊಸ ದಾರಿಗೆ ಪಯಣ ಭವಿಷ್ಯ ಕಟ್ಟುವೆವು, ಪಣಒಗ್ಗಟ್ಟಿನ ಸಂದೇಶ ಸಾರುವಪುಣ್ಯದ ಹಬ್ಬ,ಸಂಕ್ರಾಂತಿ , ಸಂಸ್ಕೃತಿ ಸಂಭ್ರಮ, ಸೌಭಾಗ್ಯಸಂಕ್ರಾಂತಿಯ ಸಂಭ್ರಮ. ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ” Read Post »

ಕಾವ್ಯಯಾನ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ”

ಕಾವ್ಯ ಸಂಗಾತಿ ಮಮತಾ ಜಾನೆ “ಹಸಿರು ಕಾಯುವ ರೈತ” ನೇಗಿಲು ಹಿಡಿದು ಬೆವರನು ಸುರಿಸಿಮಣ್ಣಲಿ ಕನಸನು ಬಿತ್ತುವನುರಜೆಗಳ ಲೆಕ್ಕಿಸದ ರೈತನಾಡಿಗೆ ಅನ್ನವ ನೀಡುವನು ಮೌನದಲಿ ಕಾಯಕ ತೋರುತದೇಶ ಸೇವೆಯ ಮಾಡುವನುಬಿತ್ತುವ ಬೀಜಕ್ಕೆ ಜೀವವ ತುಂಬುತಭೂಮಿಯ ಹಸಿರನು ಕಾಯುವನು ಶ್ರಮವನ್ನು ಹರಿಸುತ ರೈತಬೆಳೆಯನು ಬೆಳೆದು ಅನ್ನವ ನೀಡುವನುದೇಶಕ್ಕೆ ಬೆನ್ನೆಲುಬು ಆಗಿರುವ ರೈತಸರ್ವರಿಗೂ ಅನ್ನದಾತನು ಆಗಿರುವನು ಮಮತಾ ಜಾನೆ

ಮಮತಾ ಜಾನೆ ಅವರ ಕವಿತೆ “ಹಸಿರು ಕಾಯುವ ರೈತ” Read Post »

ಕಾವ್ಯಯಾನ

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ”

ಕಾವ್ಯ ಸಂಗಾತಿ ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” ಮಾಗಿಯ ಚಳಿಯಲ್ಲಿಅಂಗಳಕೆ ನೀರೆರೆದುಚಿತ್ತಾರವ ಬಿಡಿಸುತ್ತಾಮಾಧವನ ನೆನೆನೆನೆದುಸುಗ್ಗಿ ಸಂಭ್ರಮದಿ ಮುಳುಗುವುದು. ವರುಷಕ್ಕೊಮ್ಮೆ ಹರುಷತರುವ ಸಂಕ್ರಮಣವುಎಳ್ಳಹೋಳಿಗೆ ಮಾದಲಿ ತಿನಿಸಿಭೂರಿಭೋಜನ ಉಣಿಸುವುದುಸಂಕ್ರಾಂತಿ ಸಂಭ್ರಮದಿ ಮುಳುಗುವುದು. ರೈತನ ಫಸಲಿಗೆ ಭಕ್ತಿಯಿಂ ನಮಿಸಿರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿಜನಪದ ಸೊಗಡ ಎಲ್ಲೆಡೆ ಬೀರಿಭೂತಾಯಿ ಪೂಜೆ ಮಾಡುವೆವುಸಂಕ್ರಾಂತಿ ಹರುಷದಿ ಮುಳುಗುವುದು ವರುಷದ ಮೊದಲ ಹಬ್ಬಉತ್ತರಾಯಣ ಆರಂಭಸೂರ್ಯನ ಪಥ ಸಂಚಲನಮಕರ ರಾಶಿಗೆ ಸಾಗುವ ನೇಸರಸಂಕ್ರಾಂತಿ ಹರುಷ ತುಂಬುವನು. ರವಿಯ ಕಾಂತಿ ಹೊಳೆಯಲುಮನಕೆ ಶಾಂತಿ ಮೂಡಲುಕ್ರಾಂತಿ ಬ್ರಾಂತಿ ಹೊರದೂಡಿಹೊಸತನದ ಕಳೆ ಕಾಣುವೆವುಮಕರ ಸಂಕ್ರಾಂತಿಲಿ ಮುಳುಗುವುದು. ಎಳ್ಳು ಬೆಲ್ಲದ ಸಿಹಿ ಜೆಗೆದುಕಬ್ಬಿನ ರಸವನು ಕುಡಿದುಹುಗ್ಗಿಯ ಸವಿ ಸವಿದುಹೊಲದಲಿ ಊಟ ಮಾಡುವೆವುಸಗ್ಗದ ಸಂಕ್ರಾಂತಿಲಿ ಮುಳುಗುವುದು.  ರಾಜೇಶ್ವರಿ ಎಸ್ ಹೆಗಡೆ.

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮಕರ ಸಂಕ್ರಾಂತಿ” ಬೆಳಗುವ ಸೂರ್ಯಸಂತೋಷ ಸಮೃದ್ಧಿಬಾಳಲ್ಲಿ ತರಲಿಸುಖ ಶಾಂತಿ ಕರುಣಿಸಲಿಸಂಕ್ರಾಂತಿಯ ಸಂಭ್ರಮ ನಿತ್ಯ// ಸೂರ್ಯದೇವನುಉತ್ತರಾಯನ ಪಥಬದಲಿಸುವ ಹಾಗೆನಮ್ಮ ಜೀವನದದಾರಿ ಸಂತೋಷದಪಥದಲ್ಲಿ ಸಾಗಿಸೋಣ ನಿತ್ಯ// ಉದಯಿಸಲಿ ರವಿಬೆಳಕಿನ ಚಿಲುಮೆಯಂತೆಬಾಳು ಸಮೃದ್ಧಿಯಲಿದುಃಖವನ್ನು ಹಾರಿಬಿಟ್ಟುಎಳ್ಳಿನಲ್ಲಿ ಬೆಲ್ಲ ಬೆರತಂತೆ  ಸಂಬಂಧ ಬೆರೆಸೋಣ ನಿತ್ಯ// ಮಕರ ಸಂಕ್ರಾಂತಿನಮ್ಮ ನಿಮ್ಮಜೀವನದ ಹೊಸದೊಂದು ಕ್ರಾಂತಿಯನ್ನು ಮೂಡಿಸಲಿದೀಪ ಬೆಳಗಿಸಿಕಷ್ಟಕಾರ್ಪಣ್ಯವ ದೂರಮಾಡಿ ಯಶಸ್ಸಿನಸರಮಾಲೆಯನ್ನೇ ತರಲಿಸಂಕ್ರಾಂತಿ ಸಂಭ್ರಮ ನಿತ್ಯ//  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ” Read Post »

ಕಾವ್ಯಯಾನ

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”

ಕಾವ್ಯ ಸಂಗಾತಿ ಡಾ ತಾರಾ  ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »

ಕಾವ್ಯಯಾನ

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”

ಕಾವ್ಯ ಸಂಗಾತಿ ಸುಮತಿ ನಿರಂಜನ್‌ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ತಾಯಿಮನೆ” ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು. *ತಾಯಿ ಮನೆ* ಬೆವರ ಸುರಿಸಿ ದುಡಿದುತಂದೆ ಕಟ್ಟಿಸಿದ, ನಮ್ಮ ಮನೆಆಶ್ರಯ ನೀಡಿದ ಆ “ತಾಯಿ ಮನೆ”ಹಲವು ಕನಸುಗಳ ಅವರು ಕಂಡ ಮನೆ,! ನಮ್ಮ ತಾಯಿ ಮನೆನಾವು ಹುಟ್ಟಿ ಬೆಳೆದ ಮನೆಬಾಲ್ಯದಾಟದಲಿ ನಲಿದ ಮನೆತಾಯಿ ಮಮತೆಯ ಕಾರುಣ್ಯ ಮನೆ,! ಮತ್ತೇ ಬೆಳಗೊ ಕಾತರತಂದೆಯ ರಕ್ತದ ಆ ಬೆವರುನಿತ್ಯ ಸುವಾಸಿಸುವ ನಮ್ಮ ತವರುಮರೆಯಲಾರೆವು ನಾವೆಂದು ಕುವರರು,! ಕತ್ತಲಲಿ ಕೊಠಡಿಗಳುಗಾಜು ಹೊಡೆದ ಕಿಟಕಿಗಳುಬೀಡು ಬಿಟ್ಟ ಜೇಡ ಜಾಲಗಳುಕಾಡುತ್ತಿದೆ ಬಾಲ್ಯದ ಆ ನೆನಪುಗಳು,! ಅಂದು ರಾಜ ಮನೆತನಸಂಭ್ರಮ ಮೆರೆದಾಡಿತ್ತು ಕಣ್ಮನವೈವಾಹಿಕ ವೈಭವಗಳ ಜೊತೆ ಜೀವನಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ” Read Post »

ಕಾವ್ಯಯಾನ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು

ಕಾವ್ಯ ಸಂಗಾತಿ ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು ಅವಳು  ಶಬ್ಧ  ಅವನು ಕಾವ್ಯ      ಅವನು ರಾಗ ಅವಳು ತಾಳಅವನು ಭಾವ ಅವಳು ಜೀವ.ಅರಳಿವೆ ಶಬ್ಧ ಕಾವ್ಯದಲಿಹೊಮ್ಮಿವೆ ರಾಗಸೂಸುತ ಭಾವ.ತುಂಬಿದಳವಳದಕೆ ಜೀವಧಾರೆಯೆರೆಯುತ  ಒಲವಇಮ್ಮಡಿಸುತ ಗೆಲುವ.ಜಗವೇಈ ಪ್ರೀತಿಯ ನೀನೆಂದರಿವೆನಿನಗಿಲ್ಲ ಇದರ ಪರಿವೆ         ಭಾವನೆಗಳ ಬೆಸುಗೆಗೆಪ್ರತಿದಿನಭೇಟಿಯಾಗ ಬೇಕೆಂದಿಲ್ಲಮಾತಾಡಬೇಕೆಂದಿಲ್ಲಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲಹಿತಬಯಸುವಪ್ರೀತಿ ಹರಿಸುವ  ಉನ್ನತಿ ಹಾರೈಸುವ ಭಾವಎಲ್ಲಿದ್ದರೂ ಹೇಗಿದ್ದರೂ  ನೆಮ್ಮದಿಯಿಂದಿರುಮಾತನಾಡಿದರೂ ಮಾತನಾಡದಿದ್ದರೂಹಾರೈಕೆಯೊಂದೇಎಂದೆಂದಿಗೂ ನೀ ಸಂತಸದಿಂದಿರುಮೌನದಿ ಎಲ್ಲವ  ನುಡಿಯುತಿರುಸೂಸುತಿರು ಅಗೋಚರ ಭಾವನೆಗಳಸ್ಪರ್ಶಿಸುತಿರು ಈ ಮನದಾಳದ ಭಾವಗಳ. ಪ್ರೊ ರಾಜೇಶ್ವರಿ ಶೀಲವಂತ ಪುಣೆ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇನ್ನೂ ಕನಸಿದೆ” ಇನ್ನೂ ಕನಸಿದೆಬಣ್ಣ ಬಣ್ಣದ ಚಿತ್ರಸುಳಿವ ಗಾಳಿಸುರಿವ ಮಳೆಹಕ್ಕಿ ಪಕ್ಷಿಗಳ ಇಂಚರನೀಲಿ ಆಗಸದಲಿ ಹಾರುವ ಬಿಳಿ ಪಾರಿವಾಳಅದೆಷ್ಟೋ ಭಾವಗಳುಕವನವಾಗುವ ಸಮಯಬೆಸಗೊಳ್ಳುತ್ತಿವೆಪದ ಲಯಶಬ್ದಗಳ ಸಂಭ್ರಮಸೂರ್ಯನೇನೀನು ಇಷ್ಟು ಬೇಗಏಕೆ ಉದಯಿಸಿ ಬಿಟ್ಟೆಇನ್ನೂ ಕನಸಿದೆಮಧುರ  ಕ್ಷಣಗಳನ್ನುಕನಸಿನಲ್ಲಾದರೂ ಕಂಡುಕೊಂಚ ನೆಮ್ಮದಿಯಿಂದಇರುತ್ತಿದ್ದೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ” Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ “ಭಾವೈಕ್ಯದ ಗುಟ್ಟು” ಕಲ್ಲು ಮಣ್ಣಿಗೆ ಕಂತೆ ಕೊಟ್ಟುಅದಕೆ ನೂರು ನಾಮವಿಟ್ಟುಜಾತಿಯೆಂಬ ಕಳಸವಿಟ್ಟುಮನುಜ ಪಥದ ದಾರಿ ಬಿಟ್ಟುಮೌಲ್ಯ ತತ್ವಗಳನು ಸುಟ್ಟುಮೃದು ಭಾವಗಳಿಗೆ ಪೆಟ್ಟುದೂರ ತಳ್ಳು ಕ್ರೋಧ ಸಿಟ್ಟುಬದುಕ ಬೇಡ ದ್ವೇಷ ನೆಟ್ಟುಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟುಬೆಳೆಸು ಭಾವೈಕ್ಯದ ಗುಟ್ಟುಸ್ನೇಹ ಪ್ರೀತಿಗೆ ಕೈ ಕಟ್ಟುಸುಖದ ಯಶಕೆ ಬೆನ್ನ ತಟ್ಟು ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು” Read Post »

You cannot copy content of this page

Scroll to Top