ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ”

ಕಾವ್ಯಸಂಗತಿ ಜಯಶ್ರೀ .ಭ.ಭಂಡಾರಿ “ನೀನುಬಂದ ಮೇಲೆ” ಪತ್ರ ಬರೆಯುವ ಸಂಸ್ಕೃತಿಮಾಯವಾಯಿತುಬರೀ ಫೋನಿನಲ್ಲಿ ಮಾತುಕತೆಮುಗಿಯುವಂತಾಯ್ತು. ಎಳ್ಳು ಬೆಲ್ಲ, ಬನ್ನಿ ಕೊಡುವ ಸಂಪ್ರದಾಯಕಡಿಮೆಯಾಯಿತುಇವೆಲ್ಲಾ ಇಮೇಜುಗಳ ಮೂಲಕವಾಟ್ಸಾಪ್ನಲ್ಲಿ ಕಾಣುವಂತಾಯಿತು. ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆಕೊಡ್ತಿದ್ವಿಈಗ ಮೊಬೈಲ್ ನಲ್ಲಿ ಕಳಿಸಿ ಬನ್ನಿ ಅಂತಕರಿತಿವಿ. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿಓದುತ್ತಿದ್ವಿಈಗ ಏನಿದ್ದರೂ ಗೂಗಲ್ ಸರ್ಚ್ ಮಾಡಿಪಡಕೊಂತೀವಿ. ದಿನಪತ್ರಿಕೆಗಳು ಮನೆಗೆ ತರಿಸುವದುಕಡಿಮೆಯಾಯಿತುಸಮಯ ಸಿಕ್ಕಾಗ , ತಾಳ್ಮೆ ಇದ್ದಾಗ ಮಾತ್ರಮೊಬೈಲ್ ನಲ್ಲಿ ಓದುವಂತಾಗಿದೆ. ಪಿಯಾನೋ ಪೆಟ್ಟಿಗೆ, ತಬಲಾ ತಂದು ವಾರ್ಷಿಕ ಸಮ್ಮೇಳನಪ್ರಾಕ್ಟೀಸ್ ಮಾಡಸ್ತಿದ್ವಿ.ಈಗ ಮಕ್ಕಳು ಮೊಬೈಲ. ನೋಡಿಭರ್ಜರಿ ಡ್ಯಾನ್ಸ್ ಮಾಡ್ತಾರೆ. ಒಂದು ಹೊತ್ತಿನ ಊಟ ಇರದಿದ್ದರೂಜೀವನ ನಡೆದೀತು..ಒಂದು ಕ್ಷಣ ಮೊಬೈಲು ಕೈಗೆ ಸಿಗದಿದ್ದರೆಜೀವವೇ ಹೋದೀತು.. ನೀನಿಲ್ದಾಗ ಅದೆಷ್ಟು ಚಂದ ಇದ್ವಿಕೂಡಿ ಬದುಕುತ್ತಿದ್ದಿ ಕೂಡಿ ಮಾತಾಡ್ತಿದ್ವಿನೀ ಬಂದ್ಮೇಲೆ ನಿನ್ ಕೈಯಾಗ ಸಿಕ್ಕುಒದ್ದಾಡ್ತಿದ್ದೀವಿ. ಜಯಶ್ರೀ .ಭ.ಭಂಡಾರಿ.

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನನ್ನೆದೆಯ ಖಾಲಿ ಪುಟದ ಮೇಲೆ ಬರೆದೆ ನೋವಿನ ಶಾಯರಿಹೃದಯದಾ ಗೋಡೆಯ ಮೇಲೆ ಕೊರೆದೆ ನೋವಿನ ಶಾಯರಿ ಪುಟಿದೇಳುವ ಭಾವಗಳ ಸಲುಹಲಾರದೆ ನೆಚ್ಚಿದೆ ಮಧುಶಾಲೆಮನದಂಗಳ ರಂಗವಲ್ಲಿ ತುಂಬಾ ಹಾಸಿದೆ ನೋವಿನ ಶಾಯರಿ ನೆನಪಿನಲೆ ಅಪ್ಪಳಿಸೋ ವೇಗಕೆ ತುಟಿಗಂಟಿತು ಮಧುಬಟ್ಟಲುತಲ್ಲಣಿಸೋ ದೇಹಧರೆ ಮೇಲೆಲ್ಲಾ ಹೊಸೆದೆ ನೋವಿನ ಶಾಯರಿ ಪ್ರೇಮದೋಲೆಯ ಅಕ್ಷರಗಳು ಕಾಣದಂತೆ ಕುಡಿದೆ ಮಧುಪಾಕಸಂತಸದ ಸರಸದಲೆಯ ಅಬ್ಬರಕೆ ಬೆಸೆದೆ ನೋವಿನ ಶಾಯರಿ ತನು ಒಲವ ಒಸುಗೆಯ ಕಸಿವಿಸಿಯಲಿರೆ ಸುರೆ ಒಳಗೆ ಸುರಿದೆಜೀವ ತರಂಗದ ಆಲಾಪಕೆ ಕಲ್ಲಂತೆ ಎಸೆದೆ ನೋವಿನ ಶಾಯರಿ ಆ ಸಮ್ಮಿಲನ ಸಲುಗೆಗಳ ನೆನೆನೆನೆದು ಮಧಿರೆಯ ಬೆನ್ನತ್ತಿರುವೆತೋಂ ತನನನ ರಾಗ ತಾಳಕೆ ಹೊದಿಸಿದೆ ನೋವಿನ ಶಾಯರಿ ಅನು ಹುಚ್ಚೆದ್ದಾಸೆಗಳ ತಣಿಸಲಾರದೆ ನಂಜು ಗುಟುಕಿಸಿದಳುಸವಿ ಸಲ್ಲಾಪದ ಅಂದದ ಚಿತ್ರಕೆ ಅಂಟಿಸಿದೆ ನೋವಿನ ಶಾಯರಿ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನ ಗೌಡ್ರ “ಗುಂಪಿಗರ್ಥವಾಗಲಿಲ್ಲ” ಆಒಬ್ಬಂಟಿಯನ್ನುತಂಗಾಳಿ ತಬ್ಬಿಕೊಂಡಾಗನೆರಳು ನಾಚಿ ನೀರಾಯಿತು ಆಒಬ್ಬಂಟಿಯನ್ನುಪುಸ್ತಕ ನೆತ್ತಿನೇವರಿಸಿದಾಗಬೆಳಕು ಕತ್ತಲೆಗೆ ಮುತ್ತಿಕ್ಕಿತು ಆಒಬ್ಬಂಟಿಯನ್ನುಕ್ಯಾಂಟೀನ್ ಉಣಿಸಿದಾಗಇಂದಿರಮ್ಮನಾತ್ಮ ತಣಿಯಿತು ಆಒಬ್ಬಂಟಿಯನ್ನುಆಲಯ ನೋಡಿ ನಕ್ಕಾಗಬಯಲು ಎದೆಗಾಣಿಸಿಕೊಂಡಿತು ಆಒಬ್ಬಂಟಿಗುಂಪಿಗರ್ಥವಾಗಲಿಲ್ಲಗಾಳಿ ಬೆಳಕು ನೆರಳಿಗರ್ಥವಾದ. -ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ” Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ”

ಕಾವ್ಯಸಂಗಾತಿ ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” ಯುದ್ಧ ರಣರಂಗದಲ್ಲಿ …ಬೆಂಕಿಯುಂಡೆ ಹಾರಿತು ಅತ್ತಿತ್ತ,ಪುಣ್ಯ ರಮಝಾನ್ ಮಾಸದಲ್ಲೂಸೈತಾನನ ಬಿಚ್ಚಿ ಹೊರ ಬಿಟ್ಟರೇಕೆ?ರಕ್ತದಾಹಕೆ ಮಕ್ಕಳ ಬಲಿ ಕೊಟ್ಟರೇಕೆ? ರಕ್ತದಾಹಿ ದುಷ್ಟರವರುಜಗದೊಳು ಕಂಟಕ ದುರಾಂಕಾರಿಗಳುಮಾನವೀಯತೆಯ ನರರಹಿತರಾಕ್ಷಸಪುತ್ರ ಅಧಿಕಾರಶಾಹಿಗಳವರುಕೆಣಕಿ ನೋಡ ಬಾರದಿತ್ತು ಶತ್ರುಗಳನು,! ಕಂದಮ್ಮಗಳ ಸರಣಿ ಕೊಲೆಅದೊಂದು ಅಮಾನವೀಯ ಕೃತ್ಯಪಾಪಿಗಳು ಅನುಭವಿಸುತ್ತಿಹರುಪ್ರತಿಕಾರ ಪ್ರಾರಂಭ ಅವಕಾಶವೆಲ್ಲೊ?ರಕ್ತದಾಹಿಗೆ ರಕ್ತದಿಂದ ಪ್ರತ್ಯೂತ್ತರವಷ್ಟೇ,! ಯಾರ ಬೆವರಿನ ಬಂಗಲೆ,ಯಾರದ್ದೊ ಬಾಂಬಿಗೆ ಉರುಳಲುಕನಸು ಹಲವರ ನುಚ್ಚುನೂರಾಗಲುಯುದ್ದವೆಂಬ ಭಯಾನಕತೆ ಕಾವೇರಿದೆಸರ್ವನಾಶಕ್ಕೆ ಹೊಸ ಇತಿಹಾಸ ಬರೆಯಲಿದೆ,! ಸೋತು ಹೋದರೇನು?ಗೆದ್ದು ಪ್ರತಿಕಾರ ತೀರಿಸಿದರೇನು?,ಈ ಸಾವು ನೋವಿಗೆ ಬಲಿಗಳಾರೊ,ಬೆವರಿಳಿಸಿ ಕಟ್ಟಿಸಿದ ಬೆಚ್ಚನೆ ಆ ಮನೆಗಳು,ಯುದ್ಧದ ಕಾರ್ಮೊಡಕೆ ಸಿಲುಕಿ ಮಣ್ಣಾಗಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟ “ನೀ ನನ್ನ ಕವಿತೆ” ದೇಹಕ್ಕೆ ಉಸಿರಾದೆಭಾವಕ್ಕೆ ಬೆಸುಗೆಮೌನಕ್ಕೆ ಮಾತಾದೆಮಾತಿಗೆ ಮುತ್ತಾದೆನೀ ನನ್ನ ಕವಿತೆ ಸ್ನೇಹಕ್ಕೆ ಗೆಳೆಯಪ್ರೇಮಕ್ಕೆ ಇನಿಯಹೃದಯಕ್ಕೆ ಸನಿಹಪ್ರೀತಿಗೆ ನೀ ಪ್ರಾಣನೀ ನನ್ನ ಕವಿತೆ ಅರಿವಿಗೆ ಗುರು ನೀನುಸಾಧನೆಗೆ ಸ್ಪೂರ್ತಿಜ್ಞಾನದ ದೇಗಲವುಬಾಳಿಗೆ ನೀ ಬೆಳಕುನೀ ನನ್ನ ಕವಿತೆ ಮಮತೆಗೆ ತಾಯ್ಮಡಿಲುಮುಗ್ದತೆಗೆ ನೀ ಮಗವುಭೇದವಿಲ್ಲದ ಒಲವುಸಂಬAಧಕ್ಕೆ ಜೀವ ಸೆಲೆನೀ ನನ್ನ ಕವಿತೆ ರಾಗಕ್ಕೆ ಸ್ವರ ನೀನುನೆರಳಿಗೆ ನೀ ಮರವುನೋವಿಗೆ ನಲಿವುಮನಸಿಗೆ ಮುದವುನೀ ನನ್ನ ಕವಿತೆ ಬರಹಕ್ಕೆ ಮುಣ್ಣುಡಿಯುನುಡಿಗೆ ನೀ ಜೀವನಾಡಿಬದುಕಿಗೆ ಬರವಸೆಬಾಳಸಂಗಾತಿ ನೀನುನೀ ನನ್ನ ಕವಿತೆ ಡಾ. ಗೀತಾ ದಾನಶೆಟ್ಟಿ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಭಗವಂತ ನೀ ಹಿಂಗ್ಯಾಕೋ?” ದೊಡ್ಡ ಮಂದಿ ತಲ್ಯಾಗೆಲ್ಲ ಸಣ್ಣತನ ತುಂಬಿದಿ.ಸಣ್ಣ ಮಂದಿಗ್ಯಾಕ ಬೇಕಾದಷ್ಟ ದೊಡ್ಡತನ ಇಟ್ಟಿ.ಆದ್ರ ಅವರನ್ನ ಬಡವರನ್ನಾಗಿಮಾಡಿ ಬಿಟ್ಟಿ.ಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಡೊ ಮನಸ್ಸಿದ್ದವಗ ಏನೂ ಇಲ್ಲದಂಗ ಬದಕಾಕ ಹಚ್ಚಿದಿಹಂಚುವ ಗುಣ ಇಲ್ಲದವನಸಿರಿವಂತನಾಗಿಸಿದಿಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಹಸಿದ ಹೊಟ್ಟಿಗಿ ಅನ್ನ ಇಲ್ಲದಂಗ(ಸಿಗದಂಗ) ಮಾಡಿದಿಎಲ್ಲ ತಿನ್ನಾಕ ಇದ್ದವಗ ಮೈ ತುಂಬನೂರೆಂಟ ರೋಗ ಇರಿಸಿದಿಕಷ್ಟದೊಳಗಿದ್ದವ್ರಿಗೆ ಇನ್ನಷ್ಟ ಕಷ್ಟ ಕೊಟ್ಟ ಪರೀಕ್ಷೆ  ಮಾಡತಿದಿಹರಾಮಿ ಮಂದಿನೆಲ್ಲ ಹೊರಗತಿರಗಾಕ ಬಿಟ್ಟಿದಿಯಾಕೋ ನೀ ಹಿಂಗ್ಯಾಕೋ?ಹೇ ಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಲ್ಲವ್ರಿಗಿಂತ ಕಾಯಾವ ಲೇಸಂತನಾ ನಿನ್ನ ನಂಬಿದ್ನಿನೀನ ಕೊಂದರ ನಾ ಯಾರನ್ನ ನಂಬಲಿನೀನ ಹೇಳಾಕೋನೀ ಹಿಂಗ್ಯಾಕೋ?ಹೇಳೊ ಭಗವಂತ ಯಾಕೋ,ನೀ ಹಿಂಗ್ಯಾಕೋ?ನೀ ಹಿಂಗ ಅಂದ್ರ ಹಿಂಗನೀ ಹಂಗ ಅಂದ್ರ ಹಂಗನಾ ಬೇಡೂದೊಂದ ಇರಸಬ್ಯಾಡಪ್ಪನನ್ನ ಯಾರದೂ ಹಂಗನ್ಯಾಗ.ಈ ಕಾಯ ಈ ಉಸಿರ ಕಡಿತನಕಿರಲಿ ನಿನ್ನ ಕೈಯ್ಯಾಗ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?” Read Post »

ಕಾವ್ಯಯಾನ

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ “ಆರ್ಥನಾದ” ದಟ್ಟ ಕಾನನದ ಮಡಿಲಲ್ಲಿ ಹುಟ್ಟಿದ ಕಾಳಿ ನದಿ,ಹಾರ್ನಬಿಲ್‌ ಪಕ್ಷಿಗಳ ಹಾಡಿಗೆ ತೂಗಿದ ನದಿ,ಮರಗಳ ನೆರಳಲ್ಲಿ ಹರಿದ ಕನಸು,ಹಸಿರು ಕಾಡಿನ ತತ್ವಉಸಿರೇ ಅವಳು. ಆದರೆ ಇಂದು ಯಂತ್ರಗಳ ಗರ್ಜನೆ.,ನಿಶ್ಶಬ್ದ ಕಾಡಿನ ನೋವಿನ ಘೋಷಣೆ.ಅಭಿವೃದ್ಧಿಯ ಹೆಸರಿನ ಕಲ್ಲಿನ ಗೋಡೆ,ನದಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಬೇಡಿ ?ಕಾಳಿ ಕಣಿವೆಯ ಮಡಿಲಲ್ಲಿ ಮೌನ, ಪ್ರಕೃತಿಯ ಹೃದಯದಲ್ಲಿ ಕಾಣದ ಗಾಯ.ಮೀನುಗಳ ಕನಸುಗಳು ಕಣ್ಣೀರಾದವು,ಪಕ್ಷಿಗಳ ಗಾನವೂ ಮೌನವಾದವು.ಈ ಸುಂದರ ಕಾಳಿಯ ಕಣ್ಣೀರ ಕಥೆ,ಕೇಳುವವರಿಲ್ಲದ ಪ್ರಕೃತಿಯ ವ್ಯಥೆ ಎನ್. ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.9740635196

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ” Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಭಾವಗೀತೆ

ಕಾವ್ಯ ಸಂಗಾತಿ ಲೀಲಾಕುಮಾರಿ ತೊಡಿಕಾನ ಭಾವಗೀತೆ ಬರೆಯಲಾಗದ ಕವಿತೆಯೊಂದುಮನದ ಒಳಗಡೆ ಕುಳಿತಿದೆಪುಟಿಯೋ ನೆನಪು ಯಾಕೊ ಇಂದುಮೌನ ಕದವ ಬಡಿದಿದೆ ಪುಟ್ಟ ಪುಟ್ಟ ಹೆಜ್ಜೆ ಗುರುತುಹೃದಯ ನೆಲದೊಳು ಉಳಿದಿದೆಬಾಲ್ಯದಾಟ  ನಗುವಿನೂಟಅಣಕವಾಡಿ ನಗುತ್ತಿದೆ ಭಾವವಿರದ ಟೊಳ್ಳು ಪದಗಳಗಂಟಲೇಕೋ ಉಗುಳಿದೆನಗುವೇ ಬಿರಿಯದ ತುಟಿಗಳಿಂದುಮೌನ ಬಯಸಿ ಬಿದಿದಿದೆ ನೋವಿನಲೆಗಳ ಹೊಡೆತಕ್ಕೀಗಮನದ ದಡಗಳು ಕೊರೆದಿವೆಒಡಲಿನಾಳದ ಬೆಂಕಿ‌ಜ್ವಾಲೆಗೆನವಿರು ಭಾವ ಸತ್ತಿದೆ ಜೊತೆಲಿ ಬೆರೆತು ಮನೆಯ ಕಟ್ಟಿದಮುಗ್ಧ ಪ್ರೀತಿ ಎಲ್ಲಿದೆ?ಮನದ ನಡುವಣ ಗೋಡೆ ಮಾತ್ರಎತ್ತರೆತ್ತರಕ್ಕೇರಿದೆ!! ಲೀಲಾಕುಮಾರಿ ತೊಡಿಕಾನ

ಲೀಲಾಕುಮಾರಿ ತೊಡಿಕಾನ ಅವರ ಭಾವಗೀತೆ Read Post »

ಕಾವ್ಯಯಾನ

ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು”

ಕಾವ್ಯ ಸಂಗಾತಿ ಪ್ರಕಾಶ್‌ ಆರ್ ಸಾರ್ಥಕ ಬದುಕು ವಿದ್ಯೆಯ ನೆರಳು ಕಾಣದ ಹೆಣ್ಣು ಜೀವವೊಂದುಕರುಳ ಕುಡಿಯ ವಿದ್ಯೆಯಆಶ್ರಯ ಕೊಡಲೆಂದುಕರುಳನೇ ಬತ್ತಿಯಾಗಿಸಿ ಬೆಳಕನೀಡಿದಜೀವಕೆ ನೆರಳಾದರೆ ಬದುಕು ಸಾರ್ಥಕವಲ್ಲವೇ? ಹೆಗಲನೇ ನೊಗವಾಗಿಸಿಬೆನ್ನು ಮೂಳೆಯ ಬಲವಾಗಿಸಿಎತ್ತಾಡಿಸಿ ತುತ್ತನೊದಗಿಸಿದ ತಂದೆಗೆಊರುಗೋಲಾಗಿ ನಿಂತರೆಬದುಕು ಸಾರ್ಥಕವಲ್ಲವೇ? ಕಣ್ಣನು ಮಣ್ಣಿಗಿಡುವ ಮುನ್ನಕಣ್ಣಿಲ್ಲದೆ ಕತ್ತಲಲಿರುವ ಜೀವಕೆಕಣ್ಣಾಗಿ ಬೆಳಕಾದರೆ ಬದುಕು ಸಾರ್ಥಕವಲ್ಲವೇ ಅಂಗವಿಕಲನಾದರೇನುಅಂಗಗಳ ಹಂಗಿನ ಗುಂಗಿಲ್ಲದೆಸಕಲಾಂಗವಿರುವ ಮನವು ವಿಕಲವಾದ ಜನರ ನಡುವೆಛಲದಿಂದ ಬಾಳಿದರೆಬದುಕು ಸಾರ್ಥಕವಲ್ಲವೇ  ಪ್ರಕಾಶ್.ಆರ್ ತುಮಕೂರು ಡಿಸ್ಟ್ರಿಕ್ಟ್ ದಿವ್ಯಂಗ್ ಸ್ಪೋರ್ಟ್ಸ್ ಅಕಾಡೆಮಿ ಸಂಸ್ಥಾಪಕರು

ಪ್ರಕಾಶ್.ಆರ್ ಅವರ ಕವಿತೆ “ಸಾರ್ಥಕ ಬದುಕು” Read Post »

You cannot copy content of this page

Scroll to Top