ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಎದೆ ಹಾಲು” ನವಮಾಸ ಕತ್ತಲೊಳಗೆರಕ್ತ ದೀಪ ಹೊತ್ತಿತು,ಕರುಳು ಬಳ್ಳಿಯ ಸೇತುವೆಯಲಿಜೀವ ಹನಿ ತೇಲಿತು. ಪ್ರಸವ ನೋವಿನ ಅಲೆಗಳಲಿಸಾವಿನ ಬಾಗಿಲ ತಟ್ಟಿತು,ಮೊದಲ ಅಳುವ ನಾದದೊಡನೆಮಮತೆ ಹೊಳೆ ಹರಿಯಿತು. ಎದೆ ಹಾಲಿನ ಬಿಳಿಹರಿವುಕರಗಿದ ರಕ್ತ ಜ್ಯೋತಿ,ಮಗುವ ತುಟಿ ನಗುವಿನಲಿಮತ್ತೆ ಮೊಳೆದ ಜೀವಶಕ್ತಿ. ಕನ್ನಡಿ ಮಿಂಚಿನ ಮೋಹದಲಿಮಡಿಲ ಜೋಗುಳ ಮಂಕಾಯಿತು,ಮೊಬೈಲಿನ ನೀಲಿ ಕಣ್ಣಲಿಬಾಲ್ಯ ಮೌನವಾಗಿ ಕರಗಿತು. ಕರುಳು ಬಳ್ಳಿಯ ನoಟ್ಟಿoದುಕಸಬುಟ್ಟಿ ದಾರಿ ಹಿಡಿಯಿತು,ಕಣ್ಣೀರ ಹನಿಯ ಆಳದಲಿಮಮತೆ ದೀಪ ಉಳಿಯಿತು. ತಾಯಿಯೆಂದರೆ ಚಂದ್ರನಲ್ಲ,ಸುಟ್ಟು ಕರಕಾದ ದೀಪ,ಕರಗಿದ ಉಸಿರ ಬೂದಿಯಲಿಬಾಲ್ಯ ದಾರಿಯ ರೂಪ. ಡಾ. ಹೆಚ್. ನಟರಾಜ್ ಆರ್ಯ.
ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು” Read Post »









