ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕರ್ನಾಟಕ ರಾಜ್ಯೋತ್ಸವ ವಿಶೇಷ

ಗಝಲ್ ಜಯಶ್ರೀ.ಭ.ಭಂಡಾರಿ. ನಾಡವರು ನಾವು ಸಿರಿನಾಡವರು ನಾವು ಎನುತ ಮರಳಿ ಬಂದಿದೆ ರಾಜ್ಯೋತ್ಸವ.ಕನ್ನಡಕ್ಕಾಗಿ ದುಡಿದು ಮಡಿದವರ ಸೇವೆಗೆ ನಿತ್ಯನಿರಂತರ ಸಂದಿದೆ ರಾಜ್ಯೋತ್ಸವ. ಭುವನಗಿರಿಯಲಿ ನೆಲೆಸಿದ ಕನ್ನಡಮ್ಮನ ಒಡ್ಡೋಲಗ‌ ಒಮ್ಮೆ ಕಂಡು ಬರಬಾರದೇ ಭವನಗಳಲಿ ಆಲಸಿ ಭಾವದಿ ಮರೆದು ಹೆಮ್ಮೆ ಅಡಗಿ ಕುಂದಿದೆ ರಾಜ್ಯೋತ್ಸವ ಹಳದಿ, ಕೆಂಪು ಬಾವುಟ ಅರಿಸಿನ, ಕುಂಕುಮ ಸಂಕೇತ ಮುತ್ತೈದೆ ಚೆಲುವೆ ಅಂಬೆಕಳೆಯ ಕಂಪು ಕಂಗಳದಿ ಬೀರುತ ರಥವನೇರಿ ಸಂಭ್ರಮ ತಂದಿದೆ ರಾಜ್ಯೋತ್ಸವ. ಕನ್ನಡಿಗರು ತಾಯಿ ಭುವನೇಶ್ವರಿ ದೇವಿಯ ಸೇವೆಗೆ ಸದಾ  ಕಂಕಣ ಬದ್ಧರು. ಸನ್ನಡತೆಯ ವೀರಪುತ್ರರ ಕಾಯುತ  ತಾಯಿಯ ಅಭಯ ನಿಂದಿದೆ ರಾಜ್ಯೋತ್ಸವ. ದೇಶ ವಿದೇಶದಿ ವಾಸಿಸು ತನು ಮನದಿ ಮಾತೃಭಾಷೆಯ ಬಲ್ಮೆಯ ಉಸಿರಿಸುಆದೇಶ ಪಾಲಿಸುತ ಅನುದಿನದಿ ಕಂದಮ್ಮಗಳ  ನಲ್ಮೆಯು ಎಂದಿದೆ ರಾಜ್ಯೋತ್ಸವ ಹರಿದು ಹಂಚಿ ಹೋದ ನಾಡಿನ ಪ್ರಾಂತ್ಯಗಳ ವಿಲೀನದ ಸಡಗರದ ಹಬ್ಬವಿದು.ಮೆರೆದು ಗಂಗ ಕದಂಬ ರಾಷ್ಟ್ರಕೂಟ ಚಾಲುಕ್ಯ ಹೊಯ್ಸಳರ ಮಿಂದಿದೆ ರಾಜ್ಯೋತ್ಸವ. ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮಾ ನಮ್ಮವಳೆಂಬುದು ಜಯಳಿಗೆ ಕೆಚ್ಚೆದೆಯು.ಪಾರತಂತ್ರ್ಯವ ನುಚ್ಚು ನೂರು ಮಾಡಿದ ಧೀರನಾರಿಯರಿಗೆ ವಂದಿದೆ ರಾಜ್ಯೋತ್ಸವ ಜಯಶ್ರೀ.ಭ.ಭಂಡಾರಿ.

ಕರ್ನಾಟಕ ರಾಜ್ಯೋತ್ಸವ ವಿಶೇಷ Read Post »

ಇತರೆ

ರಾಜ್ಯೋತ್ಸವ ವಿಶೇಷ- ಡಾ. ಗುರುಸಿದ್ಧಯ್ಯಾ ಸ್ವಾಮಿ

ಸರಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ?

Read Post »

ಇತರೆ

ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಬೆಳಗಾವಿ-ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಯಿಂದ ಕನ್ನಡ ಕಾವ್ಯ ಪ್ರಕಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ  ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ರಾಜ್ಯ ಪ್ರಶಸ್ತಿಗಾಗಿ 2021 ನೇ ಸಾಲಿನಲ್ಲಿ ಪ್ರಥಮವಾಗಿ ಮುದ್ರಣಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ           ಪ್ರಶಸ್ತಿಯು ರೂ 10000/-(ರೂ ಹತ್ತು ಸಾವಿರ ) ನಗದು ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ ವಯಸ್ಸಿನ ಯಾವುದೇ ನಿರ್ಬಂಧವಿಲ್ಲ ಹೊರನಾಡಿನ ಕನ್ನಡ ಕವಿಗಳು ಕೂಡ ಭಾಗವಹಿಸಬಹುದು ಕವಿ ಕರ್ಕಿಯವರ ಜನ್ಮದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಆಸಕ್ತ ಕವಿಗಳು ತಮ್ಮ ಸ್ವರಚಿತ 2021 ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಕವನ ಸಂಕಲನದ ನಾಲ್ಕು ಪ್ರತಿಗಳನ್ನು             ಅಧ್ಯಕ್ಷರು ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಚಂದ್ರನಂದಾ # 2712 ಸೆಕ್ಟರ್ ನಂ 12 ಮಹಾಂತೇಶ ನಗರ ಬೆಳಗಾವಿ-590017           ಇಲ್ಲಿಗೆ ದಿನಾಂಕ 12/11/2022 ರ ಒಳಗಾಗಿ ಕಳುಹಿಸಲು ಕೋರಲಾಗಿದೆ ಹೆಚ್ಚಿನ ವಿವರಗಳಿಗಾಗಿ 8453500025,9901251436 ಸಂಪರ್ಕಿಸುವುದು.

ಡಾ ಡಿ ಎಸ್ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗೆ ಕೃತಿಗಳ ಆಹ್ವಾನ Read Post »

You cannot copy content of this page

Scroll to Top