ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು

ಪುಸ್ತಕ ಸಂಗಾತಿ ಗೊರೂರು ಅನಂತರಾಜು ಹೆಚ್‌ ಎಸ್ ಗೋವಿಂದಗೌಡ “ಕಂಪನಿ ಕಲಾವಿದರು”ಅವಲೋಕನ ಅರಕಲಗೊಡು ತಾ. ಹನ್ಯಾಳು ಗ್ರಾಮದ ಹೆಚ್.ಎಸ್.ಗೋವಿಂದಗೌಡರು ಸದ್ಯ ಮೈಸೂರು ವಾಸಿ. ಪೌರಾಣಿಕ ರಂಗನಟರಾದ ಇವರು ರಂಗಕೃತಿಗಳ ಪ್ರಕಟಣೆ ಕೂಡ ಮಾಡುತ್ತಾ ರಂಗಸೇವೆಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊನ್ನೆ ಇವರನ್ನು ಮನೆಯಲ್ಲಿ ಭೇಟಿಯಾದೆ. ಇತ್ತೀಚಿಗೆ ಮೈಸೂರಿನಲ್ಲಿ ಬಿಡುಗಡೆಯಾದ ಕೆಲವು ರಂಗಕೃತಿಗಳನ್ನು ನೀಡಿದರು. ಅದರಲ್ಲಿ ಕಂಪನಿ ಕಲಾವಿದರು ಒಂದು. ಇದರಲ್ಲಿ ನಾಟಕ ಕಂಪನಿಗಳ ಕಲಾವಿದರನ್ನು ಮಾತ್ರ ಪರಿಚಯ ಮಾಡಿದ್ದೇನೆ ಎಂದರು. ನಾನು (ಗೊರೂರು ಅನಂತರಾಜು) ೨೦೧೧ರಲ್ಲಿ ಪ್ರಕಟಿಸಿದ ಅಭಿನಯ ಅಭಿವ್ಯಕ್ತಿ ಕೃತಿಯಲ್ಲಿ ಸುಮಾರು ೧೫೦ ಮಂದಿ ರಂಗ ಕಲಾವಿದರನ್ನು ಪರಿಚಯಿಸಿದಂತೆಯೇ  ಲೇಖಕರು ನಾಟಕ ಕಂಪನಿ ಕಲಾವಿದರ ಕಿರು ಪರಿಚಯ ಮಾಡಿರುವರು. ಅರಮನೆಯಲ್ಲಿ ಪ್ರತಿವರ್ಷ ಗೌರಿ ಹಬ್ಬದಲ್ಲಿ ಗೌರಿಪೂಜೆ ಮಾಡುತ್ತಿದ್ದರಾದ್ದರಿಂದ ಗೌರಿ ನರಸಿಂಹಯ್ಯ ಎಂದೇ ಕರೆಯಲ್ಪಟ್ಟ ಗೌರಿ ನರಸಿಂಹಯ್ಯನವರು ಹರಿಶ್ಚಂದ್ರ, ಶೂರಸೇನ, ರತ್ನಾವಳಿ, ಮಂದಾರವಲ್ಲಿ, ದ್ರೌಪದಿ, ಚಂದ್ರಮತಿ ಪಾತ್ರಗಳನ್ನು ನಿರ್ವಹಿಸಿದವರು. ೧೮೭೮ರಲ್ಲಿ ಮುಂಬೈನ ಮರಾಠಿ ಹಾಗೂ ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿ ಇಂದ್ರಸಭಾ ಬಾಣಾಸುರೋಪಾಖ್ಯಾನ ನಾಟಕ ೧೮೮೧ರಲ್ಲಿ ಅಂದಿನ ದಿವಾನರು ರಂಗಾಚರ‍್ಲು ಅವರ ಅಧ್ಯಕ್ಷತೆಯಲ್ಲಿ ನಾಯಕನ ಪಾತ್ರದಲ್ಲಿ ರಂಗಗೀತೆ ಗಾಯನದಿಂದ ಪ್ರೇಕ್ಷಕರ ಮನಸೂರೆಗೊಂಡವರು ಮಂಡ್ಯ ರಂಗಾಚರ‍್ಯರು. ಉಡುಪಿ ಬಳಿಯ ನಂದಳಿಕೆ ಗ್ರಾಮದಲ್ಲಿ ೧೮೬೬ರಲ್ಲಿ ಜನಿಸಿದ ಬಿಡಾರಂ ಕೃಷ್ಣಪ್ಪನವರು ಯಕ್ಷಗಾನ ಮಂಡಳಿಯವರು ಆಡುತ್ತಿದ್ದ ದಶಾವತಾರ ನಾಟಕದಲ್ಲಿ ಸ್ತಿçà ಪಾತ್ರ ಮಾಡುತ್ತಿದ್ದರು. ವಿರಾಟಪರ್ವ ಗಯಚರಿತ್ರೆ ನಾಟಕ ಬರೆದ ಗಿರಿಭಟ್ಟರ ತಮ್ಮಯ್ಯ ನವರು ಶಾಕುಂತಲ ನಾಟಕದಲ್ಲಿ ಕಣ್ವ ಋಷಿಯ ಪಾತ್ರಕ್ಕೆ ಖ್ಯಾತಿ ಪಡೆದಿದ್ದರು. ೩೩ ವರ್ಷ ಕಲಾವಿದರಾಗಿದ್ದ ಲಕ್ಷಿö್ಮÃಪತಿಶಾಸ್ತಿç ಆಲ್ ರೌಂಡ್ ಆಕ್ಟರ್. ಅರಮನೆಯಲ್ಲಿ ವಿದೂಷಕನಾಗಿ ತೆಳ್ಳಗೆ ಕುಳ್ಳಗೆ ಇದ್ದ ಪುಟ್ಟಾರಿಶಾಸ್ತಿç ಹಾಸ್ಯ ಪಾತ್ರದಾರಿ. ಬಸವಪ್ಪ ಶಾಸ್ತಿçಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಮೇಲೆ ೧೮೮೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಅರಮನೆ  ಕಂಪನಿಯ ಗಿರಿಭಟ್ಟರ ತಮ್ಮಯ್ಯ, ಲಕ್ಷಿö್ಮÃಪತಿಶಾಸ್ತಿçಗಳ ಜೊತೆಗೆ  ದುಷ್ಯಂತನ ಪಾತ್ರದಲ್ಲಿ ಯಶಸ್ಸು ಗಳಿಸಿದ ನಟರು ನಟಶೇಖರ ಎಂ.ಡಿ.ಸುಬ್ಬಣ್ಣನವರು. ಅರಮನೆ ಕಂಪನಿ ೧೯೧೭ರಲ್ಲಿ ಕೊನೆಗೊಂಡು ೧೯೧೯ರಲ್ಲಿ ಶಾಕುಂತಲ ಕರ್ನಾಟಕ ನಾಟಕ ಸಭಾ ಎಂಬ ಹೆಸರಿನಿಂದ ಪ್ರಾರಂಭಗೊAಡು ಮದ್ರಾಸಿಗೆ ಪ್ರಯಾಣ ಮಾಡಿ ರಾಣಿ ಪಾತ್ರದಲ್ಲಿ ಟಿ.ನರಸೀಪುರದ ಎನ್.ಸುಬ್ಬಣ್ಣ ಮತ್ತು ರಾಜಪಾರ್ಟಿನ ವಿದ್ವಾನ್ ಬಿ.ರಾಚಪ್ಪನವರ ರಾಜನ ಪಾತ್ರದ ನಟನೆಗೆ ಜನ ಮೆಚ್ಚಿ  ಬಂಗಾರದ ಪದಕ ಕೊಟ್ಟರು.ರಂಗದಿAದ ಸಿನಿಮಾರಂಗಕ್ಕೆ ಬಂದ ಜಿ.ವಿ.ಅಯ್ಯರ್ ತಮ್ಮ ೮ನೇ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿದವರು. ರಾಜವಿಕ್ರಮ ನಾಟಕದಲ್ಲಿ ಭಟ್ಟಿ ಎಂಬ ಮಂತ್ರಿ ಪಾತ್ರ ಮಾಡುತ್ತಿದ್ದ ಟಿ.ನರಸೀಪುರ ತಾ. ಮುಸುವಿನ ಕೊಪ್ಪಲು ಭಟ್ಟಿಮಹದೇವಪ್ಪ ಮತ್ತು ಮಳವಳ್ಳಿ ತಾ. ಬೆಳಕವಾಡಿಯ ಶನಿದೇವರ ಪಾತ್ರ ನಟನೆಯಿಂದ ಶನಿಮಹದೇವಪ್ಪ  ಎಂದು ಖ್ಯಾತರಾದ ಇವರು ಸಿನಿಮಾ ರಂಗದಲ್ಲಿ ಬೆಳಗಿದವರು. ಹಾಸನ ಜಿಲ್ಲೆಯ ರಾಜಾನಂದ್ ೩೦ಕ್ಕೂ ಹೆಚ್ಚು ವರ್ಷ ನಾಟಕ ರಂಗದಲ್ಲಿದ್ದು ನಾಟಕಗಳನ್ನು ಬರೆದವರು. ಚಕ್ರತೀರ್ಥ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ೩೦೦ ಚಿತ್ರಗಳಲ್ಲಿ ನಟಿಸಿದ ಇವರ ಶ್ರೀ ಶಿರಡಿ ಸಾಯಿಬಾಬಾ ಮಹಾತ್ಮೆ, ಮಕರಜ್ಯೋತಿ ಮಣಿಕಂಠ ನಾಟಕಗಳನ್ನು  ಗೋವಿಂದಗೌಡರು  ಪ್ರಕಟಿಸಿದ್ದಾರೆ. ವಿಶೇಷ ಧ್ವನಿಯ ಚಿತ್ರನಟ ಕೆ.ಎಂ.ರತ್ನಾಕರ್, ಹೊ.ನ.ಪುರ ತಾ. ಜೋಡಿಗುಬ್ಬಿಯ ಕಂಚಿನ ಕಂಠದ ಚಿತ್ರನಟ ಧೀರೇಂದ್ರ ಗೋಪಾಲ್, ನಂಜನಗೂಡು ಚಿತ್ರರಂಗದ ಖಳನಟ ನಾಗಪ್ಪ, ಪೋಷಕ ಪಾತ್ರದ ಚಿತ್ರನಟ ದ.ಕ.ದ  ಸದಾಶಿವ ಬ್ರಹ್ಮಾವರ್, ಚಿಂತಾಮಣಿಯ ಚಿತ್ರನಟಿ ಎಂ.ಎನ್.ಲಕ್ಷಿö್ಮÃದೇವಿ, ಚೋಮನದುಡಿ ಖ್ಯಾತಿಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಮೂಡುಬಿದರೆಯ ಎಂ.ವಿ.ವಾಸುದೇವರಾವ್, ಪರಸಂಗ ಗೆಂಡೆತಿಮ್ಮ ಚಿತ್ರದಿಂದ ಪ್ರಸಿದ್ಧಿಯಾದ ಡಿಂಗ್ರಿ ನಾಗರಾಜ್, ೪ನೇ ವಯಸ್ಸಿಗೆ ಬಣ್ಣ ಹಚ್ಚಿದ ಚಿತ್ರನಟ ಎಂ.ಎಸ್.ಉಮೇಶ್. ವಿಲನ್ ಆಗಿ ಚಿತ್ರರಂಗಕ್ಕೆ ಬಂದು ಹಾಸ್ಯನಟರಾದ ಮೈಸೂರಿನ ದಿನೇಶ್, ೭೫ ಚಿತ್ರಗಳಲ್ಲಿ ನಟಿಸಿ ೩ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಂಗಳೂರಿನ ಕಲ್ಪನಾ, ಭೂತಯ್ಯನ ಮಗ ಅಯ್ಯು ಚಿತ್ರದ ನಟನೆಗೆ ಪ್ರಶಸ್ತಿ ವಿಜೇತ ಲೋಕೇಶ್, ದೆಹಲಿಯ ರಂಗಶಾಲೆಯಲ್ಲಿ ತರಬೇತಿ ಪಡೆದ ಗುಬ್ಬಿ ವೀರಣ್ಣನವರ ಮೊಮ್ಮಗಳು ಜಯಶ್ರೀ ಬಿ. ಕಂಠದಾನ ಕಲಾವಿದೆ ಸರ್ವಮಂಗಳ, ಸುಬ್ಬಾಶಾಸ್ತಿç, ಸಂಸ್ಕಾರ, ಕಾಡು ಚಿತ್ರಗಳಲ್ಲಿ ನಟಿಸಿರುವ ಜಿ.ವಿ.ಶಿವಾನಂದ, ಚಿತ್ರರಂಗದಲ್ಲಿ ಮಿಂಚಿರುವ  ಶರಣ್ ಹಾಗೂ ಶೃತಿ ಅವರ ತಂದೆ ಜಿ.ವಿ.ಕೃಷ್ಣ ಇವರ ನಾಟಕ ಕಂಪನಿಯ ಪಾತ್ರದ ಕಿರು ಪರಿಚಯ ಮಾಡಿದ್ದಾರೆ. ೧೯೭೦ರ ದಶಕದಲ್ಲಿ ಕುರುಕ್ಷೇತ್ರ ನಾಟಕವೆಂದರೆ ಪಿ.ವಜ್ರಪ್ಪ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು ನೂರಾರು ರಂಗಗೀತೆಗಳನ್ನು ಬರೆದಿರುವರು. ಐದು ದಶಕ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಮಾಲತಿಶ್ರೀ ಮೈಸೂರು ಇವರ ಪರಿಚಯ ಒಳಗೊಂಡು ಎಲೆಮರೆಕಾಯಿ ಯಂತೆ ಇದ್ದು ಮರೆಯಾಗಿ ಹೋದ ಅನೇಕ  ಕಲಾವಿದರನ್ನು ಪರಿಚಯಿಸಿದ್ದಾರೆ. ಅರಮನೆ ಕಂಪನಿ ಸಮಕಾಲೀನರು ಬೋಧರಾಯ, ಸಂಗೀತಗಾರ ಸದಾಶಿವರಾಯರ ಮೊಮ್ಮಗ ಸರ್ಟನ್ ರಾಮರಾವ್, ಹರ‍್ಮೋನಿಯಂ ವಾದ್ಯದ ಬೆಂಗಳೂರಿನ ಅರುಣಾ ಚಲಪ್ಪ, ಶಿವಮೊಗ್ಗದ ಸಿ.ಬಿ.ಜಯರಾಮ್, ಸದಾರಮೆ ನಾಟಕದ ಕಾಲಾಪಿಲ್ಲಯ್ಯ, ಮೈಸೂರು  ಬೆಳಕವಾಡಿಯ ಶ್ರೀನಿವಾಸ ಅಯ್ಯಂಗಾರ್, ಕೋಲಾರ ಕುರುಡಿ ಗ್ರಾಮದ  ಸಂಗೀತರತ್ನ ಚಿಕ್ಕರಾಮರಾಯ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಬುಜಭಲದಂತಿದ್ದ ಕೃಷ್ಣಮೂರ್ತಿರಾಯ, ತುಮಕೂರು ದ್ಯಾವರಾಯಪಟ್ಟಣದ ಡಿ.ಆರ್.ಕೃಷ್ಣಮೂತಿಥ,  ಗುಂಡ್ಲುಪೇಟೆಯ ಕಲಿಯುಗ ಭೀಮ   ಜಿ.ವಿ.ಕೃಷ್ಣಮೂರ್ತಿ, ಚಿತ್ರಕಲೆಯ ಅಚಾರ್ ಕೆ.ವಿ, ಸೊರಬ ತಾ. ಮೂಡಿಯ ಅಣ್ಣಪ್ಪ ಎಂ.ಎಸ್, ಮೈಸೂರು ಹಳೇ ಬಂಡಿಕೇರಿಯ ಹಾರ್ಮೋನಿಯಂ ಎಂ.ಶಿವಪ್ಪ, ಚಿಕ್ಕನಾಯಕನಹಳ್ಳಿಯ ಸಿ.ಎಲ್.ರಾಮರಾಜೇ ಅರಸ್, ಗುಬ್ಬಿ ಕಂಪನಿಯ ಜಿ.ವಿ. ಸುಂದರಮ್ಮ, ಪ್ರಾಕ್ಟೀಸ್ ಮೇನೇಜರ್ ಮುನಿಯಪ್ಪ, ಟಿಪ್ಪುಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರ ಖ್ಯಾತಿಯ ಸಾಗರ ತಾ. ಮುಡಗೋಡು ಗ್ರಾಮದ ಎಂ.ಶಾAತ ಕುಮಾರ್, ಕನ್ನಡ ರಂಗಭೂಮಿ ಚಾಣಕ್ಯ ಎಂ.ಸಿ.ಮಹದೇವಸ್ವಾಮಿ, ಹರಿಕಥೆ ಮಾಡುತ್ತಾ ಹರಿಕಥಮ್ಮ ಎಂದೇ ಕರೆಯಲ್ಪಟ್ಟ ವೆಂಕಟೇಶಮ್ಮ, ಗುಬ್ಬಿ ಕಂಪನಿ ಸ್ತಿçà ಪಾತ್ರದಾರಿ ತ್ರಿಪುರಾಂಬ, ೭೬ ವರ್ಷ ಸುಧೀಘ  ರಂಗಸೇವೆಯ ಮೈಸೂರು ಆರ್. ಮಂಜುಳಮ್ಮ, ಕೆ.ಆರ್.ಪೇಟೆ ಹೊಸಹೊಳಲು ಗ್ರಾಮದ ಎಚ್.ಆರ್.ನಂಜಶೆಟ್ಟರು,  ಆಂಜನೇಯ ಪಾತ್ರ ಖ್ಯಾತಿಯ ಬೆಳ್ಳೂರು ನಂಜುAಡಯ್ಯ ಉತ್ತರ ಕರ್ನಾಟಕದವರು.  ಬಿ.ಎಂ.ಸೀತರಾಮರಾಜು ಜನಪ್ರಿಯ ಸಂಗೀತ ನಿರ್ದೇಶಕರು. ಗುಬ್ಬಿ ವೀರಣ್ಣರ ಮಗ ಚನ್ನಬಸವಣ್ಣ, ಪೇಂಟರ್ ಎಲ್.ನಾರಾಯಣಯ್ಯಂಗಾರ್, ಬೆಂಗಳೂರು ಪದ್ಮ ವೇಣುಗೋಪಾಲ್, ಮಾವನ ಮನೆ ನಾಟಕದ ಭಾಗೀರಥಿ ಪಾತ್ರದಾರಿಣಿ ಪ್ರಭಾ ಜಿ.ಸಿ.ಬಸವರಾಜು, ಮೇಲುಕೋಟೆ ಎಂ.ಎನ್.ಪ್ರೇಮಕುಮಾರಿ ಕೂಡಿ ಬಾಳೋಣ ಚಲನಚಿತ್ರದಲ್ಲಿ ನಟಿಸಿರುವರು.  ೯೮ ವಯಸ್ಸಿನ  ಕುಪ್ಯ ಎಂ.ಎಸ್.ವೆAಕಟರಾA ಲೇಖಕರಿಗೆ ತಾವು ಕಂಡ ಇಲ್ಲಿಯ ಕೆಲವು ನಟರ ಪಾತ್ರಾಭಿನಯ ಮಾಹಿತಿ ನೀಡಿರುವರು. ಇವರ ಪರಿಚಯವನ್ನು ನಾನು ನಿಂತು ಹೋದ ರಂಗವೈಭವ ಪುಸ್ತಕದಲ್ಲಿ ಮಾಡಿರುವೆನು. ಉಡುಪಿ ಕಡೆಯ ಬಂಗೇರ ಐತಪ್ಪ, ಮೇಕಪ್ ಮಾಡುವ ತರೀಕೆರೆ ಕೃಷ್ಣಮೂರ್ತಿ, ಸ್ತಿçà ನಾಟಕ ಮಂಡಳಿ ನರ್ತಕಿ ಎಂ.ಕೆ.ಸುಜಾತ, ಚನ್ನರಾಯಪಟ್ಟಣ ತಾ. ಚಿಕ್ಕೋನಹಳ್ಳಿಯ ಸಿ.ವಿ.ವೀರಭದ್ರಾಚಾರ್, ಶೃಂಗೇರಿಯ ಪ್ರಸಿದ್ಧ ನಟಿ ಬಿ.ಎಸ್.ಮಂಜುಳಾ ಅವರ ಸಹೋದರಿ ಬಿ.ಎಸ್.ಪೂರ್ಣಿಮ, ಗುಬ್ಬಿ ತಾ. ಒಡೆಯರ್ ಮಟಿಘಟ್ಟ ಗ್ರಾಮದ ಚನ್ನಬಸವಯ್ಯ, ಮೈಸೂರು ಟಿ.ಎಸ್. ದೊರೆಸ್ವಾಮಿ, ಅರಸೀಕೆರೆ ತಾ. ಯೆರಗೇನಹಳ್ಳಿಯ ರಂಗಸAಗೀತ ಶಿಕ್ಷಕರು ವೈ.ಎಂ.ಪುಟ್ಟಣ್ಣಯ್ಯ, ೨ನೇ ಮಳವಳ್ಳಿ ಸುಂದರಮ್ಮ ಎಂದು ರಂಗದಿಗ್ಗಜ ಹೊನ್ನಪ್ಪ ಭಾಗವತರಿಂದ ಕರೆಸಿಕೊಂಡಿದ್ದ ಮೈಸೂರಿನ ಕಲಾವತಿ, ಶ್ರೀಕೃಷ್ಣಲೀಲೆ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ರಂಗನಾಯಕಿ ಎಂದು ಮರುನಾಮಕರಣಗೊಂಡ ಬೆಂಗಳೂರಿನ ನಿರ್ಮಲ, ಕೋಲಾರದ ಕಲಾರತ್ನ ಕೆ.ಎನ್.ಬಸವರಾಜು, ಮಂಡ್ಯದ ಎನ್.ಶಾಂತಮ್ಮ, ಇಂದಿಗೂ ನಟಿಸುತ್ತಿರುವ ಮೈಸೂರಿನ ಎಸ್.ಸರೋಜಿನಿ, ಆಲನಹಳ್ಳಿಯ  ಎ.ಪಿ.ರಾಜಪ್ಪ, ನಂಜನಗೂಡು ತಾ. ಬಿಳಗಲಿ ಗ್ರಾಮದ ಸುಲೋಚನ ಇವರಿಗೆೆ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇತ್ತೀಚಿಗೆ ೨೭-೧-೨೦೨೬ರಂದು ನಿಧನರಾದ ಮಂಡ್ಯ ನಾಗರಾಜಾಚಾರ್ ಇವರು ಹಾಸನದಲ್ಲಿ ರಾಮಾಯಣ ನಾಟಕ ಕಲಿಸಿ ಅವರನ್ನು ಮಾತನಾಡಿಸಿದ್ದೆನು.  ಚಿಕ್ಕನಾಯಕನಹಳ್ಳಿಯ ಹಾಸ್ಯ ಕಲಾನಿಪುಣ ಬಿ.ಕೆ. ಪಂಚಲಿAಗಯ್ಯ ಇವರ ಚಿಕ್ಕಪ್ಪ ರಂಗದಿಗ್ಗಜ ಸಿ.ಬಿ.ಮಲ್ಲಪ್ಪನವರು. ಕಲಾತಪಸ್ವಿ ಬಿ.ಕೆ.ಈಶ್ವರಪ್ಪ  ಇವರ ರಂಗಪರಿಚಯವನ್ನು ನಾನು  ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಕೃತಿಯಲ್ಲಿ    ಮಾಡಿರುವೆನು. ತುಮಕೂರು ಮಲ್ಲಸಂದ್ರದ ಡಾ.ಲಕ್ಷö್ಮಣದಾಸ್ ಇದೇ ಕೃತಿಗೆ ಆಶಯನುಡಿ ಬರೆದಿರುವರು. ಚಾಮರಾಜನಗರ ಆಲೂರು ಗ್ರಾಮದ ನಾಗರಾಜು, ತಬಲವಾದಕ ವಿ.ಎಂ.ಧನಪಾಲ್, ಕೊಪ್ಪಳ  ಕುಕನೂರಿನ ಸರಸ್ವತಿ ಜುಲೇಖಾ ಬೇಗಂ, ತಿಪಟೂರಿನ ಟಿ.ಎಚ್.ಹೇಮಲತ, ಈಗಲೂ ರಂಗದಲ್ಲಿರುವ ಅರಳಗುಪ್ಪೆಯ ಎನ್.ಸುಮಿತ್ರಮ್ಮ, ಇದೇ ಊರಿನ ನೀಲಕಂಠಾಚಾರ್, ಕಾಮಿಡಿ ಪಾತ್ರದಾರಿ ಎಂ.ನಾಗರಾಜ್ ಇವರ ದೊಡ್ಡಪ್ಪ ಚಿತ್ರನಟ ಡಿಕ್ಕಿಮಾಧವರಾವ್. ಮೈಸೂರಿನ ಕಲಾವಿದೆಯರು ಕಮಲಮ್ಮ, ಇಂದ್ರಾಣಿ, ಹೇಮಲತಾ,  ವಸಂತಕುಮಾರಿ. ಸುವರ್ಣಮ್ಮ, ಮಂಜುಳಾರಾಜ್, ಎಸ್.ಭಾರತಿ, ಶಕುಂತಲಾ ವಾಸುದೇವನ್ ಇವರುಗಳ ಪರಿಚಯವಿದೆ.  ತಿಪಟೂರು ತಾ. ಕೋಟನಾಯಕನಹಳ್ಳಿಯ ಪರಪ್ಪ, ಇದೇ ತಾ. ಹೊನ್ನವಳ್ಳಿಯ ಲಕ್ಷö್ಮಮ್ಮ ಇವರ ಸೋದರಮಾವ ಚಿತ್ರನಟ ನರಸಿಂಹರಾಜು.   ಅರಸೀಕೆರೆ ತಾ. ಬಾಣಾವರದ ಬಿ.ಲೀಲಾವತಿ, ಸೊಲ್ಲಪುರ ಗ್ರಾಮದ ಎಸ್.ಎಸ್.ಗಾಯಿತ್ರಿ, ಬೆಂಗಳೂರು ಬಿ.ಎ. ಶಾಂತಮ್ಮ,  ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಚ್.ಕೆ.ಯೋಗಾನರಸಿಂಹ ಅವರ ಪುತ್ರ ಮೈಸೂರು ಎಚ್.ವೈ.ರಾಜೇಶ್ವರ್, ಸೋಮವಾರಪೇಟೆಯ ಮೇರಿ ವಸಂತ ಮತ್ತು ಇವರ ಯಜಮಾನರು ವಸಂತಕುಮಾರ್, ಇಂದಿಗೂ ರಂಗಸೇವೆ ಮುಂದುವರೆಸಿರುವ  ಜಯಂತಿ ಇವರ  ಯಜಮಾನರು ಕಳಲೆ ದೊರೆಯವರು. ಹರಿಹರದ ರಾಜೇಶ್ವರಿ, ನಂಜನಗೂಡು ತಾ. ಹುರ ಗ್ರಾಮದ ಎಚ್.ಎನ್.ಶೇಷಾಚಲ, ಮಂಡ್ಯ  ಗಂಜಾAನವರಾದ ಮಂಗಳಗೌರಿ, ಮೈಸೂರು ಶ್ರೀಕಂಠು, ಐದು ದಶಕಗಳ ಕಾಲ ರಂಗ ಸೇವೆ ಮಾಡಿದ ಲಕ್ಷö್ಮಮ್ಮ, ಸರಗೂರು ಶ್ರೀಪತಿರಾವ್, ಗುಬ್ಬಿ ಮುರಳೀಧರ್, ತುರುವೇಕೆರೆ ತಾ. ಸಂಪಿಗೆ ಗ್ರಾಮದ ಶಂಕರ್, ಹೊಸದುರ್ಗ ತಾ. ಕಾಮಸಂದ್ರದ ನರಸಿಂಹಮೂರ್ತಿ, ಸೋದರ ಸಂಬAಧಿ ಬಂಧುಗಳಾಗಿದ್ದ ಅಡಗೂರು ಬಸವರಾಜು, ಶಿವಲಿಂಗಯ್ಯ, ಸಿದ್ಧಲಿಂಗಮರಿಗಳು, ತುಮಕೂರು  ಸೀತಕಲ್ ಕೃಷ್ಣಮೂರ್ತಿ, ನಂಜನಗೂಡು ತಾ. ಮೂಲದ ಎನ್.ಎಸ್.ಮೂರ್ತಿ, ಗುಬ್ಬಿ ಕಂಪನಿಯ ಬ್ರಾಂಚ್ ಕಂಪನಿ ಬಾಲ ಕಲಾವರ್ಧನಿ ಕಲಾವಿದರು ಶ್ರೀಕಂಠಾಚಾರ್, ಹರ‍್ಮೋನಿಯಂ ಮಾಸ್ಟರ್ ಸಕ್ಕರೆ ಪಟ್ಟಣದ ಶಾಮಣ್ಣಿ, ಟಿ.ನರಸೀಪುರ ಚಿದರಹಳ್ಳಿ ಗ್ರಾಮದ ಸಿ.ಎನ್.ಶ್ರೀಕಂಠಮೂರ್ತಿ, ನಾಟಕ ಕಂಪನಿಗಳಲ್ಲಿ ಜೋಡಿ ನೃತ್ಯಗಾರ್ತಿ ಸಹೋದರಿಯರು ರಾಧಾ ಮತ್ತು ಶಾಂತ ಹಾಗೂ ಕಡೆಗೆ ಹರ‍್ಮೋನಿಯಂ ಜಾದುಗಾರ ಮೇಲುಕೋಟೆ ಎಂ.ಶ್ರೀಕAಠಶೆಟ್ಟರ ಪರಿಚಯ ಸೇರಿದಂತೆ ೧೨೫ ರಂಗ ಕಲಾವಿದರ ಪರಿಚಯ ಒಳಗೊಂಡ ಕಂಪನಿ ಕಲಾವಿದರು ಕೃತಿ ಗತಿಸಿಹೋದ ನಾಟಕ ಕಂಪನಿಗಳನ್ನು ಜೊತೆಗೆ ಪರಿಚಯಿಸುತ್ತದೆ. ಗೊರೂರು ಅನಂತರಾಜು, ಹಾಸನ. ಪ

ಹೆಚ್‌ ಎಸ್ ಗೋವಿಂದಗೌಡ ಅವರ ಕೃತಿ “ಕಂಪನಿ ಕಲಾವಿದರು”ಅವಲೋಕನ ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ

ಪುಸ್ತಕ ಸಂಗಾತಿ ತಿಲಕಾ ನಾಗರಾಜ್ ಹಿರಿಯಡಕ ಡಾ| ಶ್ರುತಿ ಮಧುಸೂದನ್ “ಪೇರಳೆ ಕಾಕು” ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.           ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ.  ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ  ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ,  ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.       ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ. ತಿಲಕಾ ನಾಗರಾಜ್ ಹಿರಿಯಡಕ

ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ “ಪೇರಳೆ ಕಾಕು” ಅವಲೋಕನ ತಿಲಕಾ ನಾಗರಾಜ್ ಹಿರಿಯಡಕ Read Post »

ಪುಸ್ತಕ ಸಂಗಾತಿ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ

ಪುಸ್ತಕ ಸಂಗಾತಿ ಡಾ. ಅಶೋಕ ನರೋಡೆ ಡಿ.ನಳಿನಾ “ಮನೋಮಂಥನ” ಕೃತಿಯ ಅವಲೋಕನ “ಮನೋಮಂಥನ ” ಡಿ.ನಳಿನಾ ಅವರ ವ್ಯಕ್ತಿತ್ವದ ವಿಕಸನದ ಕೃತಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಮಕ್ಕಳ ಮನೋ ವೈಜ್ಞಾನಿಕ ಅಂಕಣಗಳ ಸಂಕಲನ ಮೈಸೂರು ಆನಂದಿ ಪ್ರಕಾಶನವು ೨೦೨೫ ರಲ್ಲಿ ಪ್ರಕಟಿಸಿದೆ.” ಇಂದೀನ ಮಕ್ಕಳೆ ನಾಳಿನ ಪ್ರಜೆಗಳು. ಆರೋಗ್ಯವಂತ ಸಮಾಜ ರೂಪು ಗೊಳ್ಳಲು ಆರೋಗ್ಯವಂತ ಸಮಾಜ ತತ್ಪರವಾಗಿರಬೇಕು. ಅದಕ್ಕಾಗಿಯೇ ವೇದಗಳಾದಿಯಾಗಿ ಯೋಗಿಗಳು, ಋಷಿಮುನಿಗಳು, ಪ್ರಾಜ್ಞರು, ಪಂಡಿತರು, ಸಂಶೋಧಕರು, ವಿಜ್ಞಾನಿಗಳು, ಸಮಾಜಸುಧಾರಕರು, ಶಿಕ್ಷಕರು ನಿರಂತರ ದುಡಿಯುತ್ತಿದ್ದಾರೆ ಭಾರತೀಯ ಯೋಗ ಪರಂಪರೆಯ ಯಮ ನಿಯಮ  ಜನರ ಅಂತರಂಗ ಬಹಿರಂಗ ಶುದ್ಧಿಗೆ ಸಹಕರಿಸುತ್ತದೆ.” ಎಂಬುದು ಗಮನಾರ್ಹವಾಗಿದೆ. ಸುವಿಖ್ಯಾತ  ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರರ ಮೌಲಿಕ ಮುನ್ನುಡಿ  ಪುಸ್ತಕ ಕನ್ನಡಿಯಾಗಿದೆ. ಪ್ರಸ್ತುತ ಮನೋಮಂಥನ ಗ್ರಂಥದಲ್ಲಿ -ಜವಾಬ್ದಾರಿಯ ಮಕ್ಕಳು, ಕುಟುಂಬ ಮೌಲ್ಯಗಳು ಬೆಳೆಯಲಿ, ಮಕ್ಕಳ ಜಾಹೀರಾತು, ಮಕ್ಕಳನ್ನು ಬಯಲಿಗೆ ಒಡ್ಡಿ, ಮಕ್ಕಳಿಗೆ ಅವಮಾನ ಅನಿಸಿದರೆ ನಿಲ್ಲಿಸಿ, ಮಕ್ಕಳಿಗೆ ಕೋಟು ಹಾಕಿಸುವ ಪರಿಣಾಮ, ಮಕ್ಕಳಿಗೆ ವರ್ತನೆ ಕಲಿಸಿ, ಪಿರಿಯಡ್ಸ್ ಬಗ್ಗೆ ಅರಿವು ಮೂಡಿಸಿ, ಶಿಕ್ಷಕರು ಗೇಲಿ ಮಾಡಬಾರದು, ತಂದೆಗೆ ಇದು ಗೊತ್ತಿರಲಿ, ವಿವೇಚನೆಯೇ ಮದ್ದು, ಆರೋಗ್ಯಕರ ಸಂಬಂಧ ಬೆಳೆಸಿ, ಮಕ್ಕಳ ಸ್ನೇಹಿ ಪಾಲಕರಾಗಿ, ಮಕ್ಕಳಲ್ಲಿ ಮೌಲ್ಯ ಬೆಳೆಸೋಣ,ಮಕ್ಕಳ ಮನಸ್ಸು ಅರಿಯೋಣ, ಬೆಳೆವ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅಗತ್ಯ, ಮಕ್ಕಳ ಮನೋಬಲ ವೃದ್ಧಿಸಿ, ಮಕ್ಕಳ ನ್ನು ಮುಕ್ತವಾಗಿ ಬೆಳೆಯಲು ಬಿಡಿ, ಮಕ್ಕಳೇ ಮನೆ ಬೆಳಕು, ಮಕ್ಕಳಲ್ಲಿ ಆತ್ಮಸ್ಥೈರ್ಯ ಮೂಡಿಸಿ, ಮಕ್ಕಳಿಗೆ ಬೇಕಿದೆ ಆಸರೆ, ಕುಟುಂಬದ ಸಾಮರ್ಥ್ಯವೇ ಸದಸ್ಯರ ನೈತಿಕ ಶಕ್ತಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು, ಮಕ್ಕಳ ಶ್ರಮ ಗೌರವಿಸಿ, ಮಕ್ಕಳ ಮನಸ್ಸನ್ನು ಗೆಲ್ಲಿ, ಮಕ್ಕಳಲ್ಲಿ ದ್ವೇಷ ಬಿತ್ತ ಬಾರದು, ಏಕಾಗ್ರತೆ ವಿದ್ಯಾರ್ಥಿ ಹಂತ ದಲ್ಲಿ ಬೆಳಕು, ಮಕ್ಕಳಲ್ಲಿನ ಕುತೂಹಲ ತಣಿಸಬೇಕು, ಮಕ್ಕಳಲ್ಲಿ ಎದೆಗಾರಿಕೆ ಬೆಳೆಸುವುದು ಹೇಗೆ?, ಪರೀಕ್ಷೆ ಬರೆಸೋಣ ಧೈರ್ಯವಾಗಿ, ಮಕ್ಕಳ ಮೇಲೆ ನಿಗಾ ಇರಲಿ, ಮಕ್ಕಳನ್ನು ಥಳಿಸದೇ ಕಲಿಸುವ ಜಾಣ್ಮೆ, ಮಕ್ಕಳ ಮೇಲೆ ಕರುಣೆ ಉಕ್ಕಲಿ, ಮಕ್ಕಳು ನಿರೀಕ್ಷಿಸುವ ಗುಣಗಳು ನಮ್ಮಲ್ಲಿ ಇರಲಿ,ಮಕ್ಕಳಿಗೆ ಸಾಹಿತ್ಯದ ಪುಸ್ತಕ ಓದಲು ಕಲಿಸಿ, ಆನಲೈನ್ ವಂಚನೆ ಮಕ್ಕಳನ್ನು ಬಾಧಿಸದಿರಲಿ, ಮಕ್ಕಳಲ್ಲಿ ಸಭಾಕಂಪನ ತೊಲಗಿಸಲು ಶ್ರಮಿಸಿ, ಮಕ್ಕಳನ್ನು ನೀರಿನೊಂದಿಗೆ ಚೆಲ್ಲಾಟಕೆ ಬಿಡಬೇಡಿ, ಮಕ್ಕಳು ಜೀವನ್ಮಖತೆ ಮೈಗೂಡಿಸಿಕೊಳ್ಳಲು ಸಹಕರಿಸಿ, ಶಾರ್ಟ್ ಕಟ್ – ಕಟ್ ಕಟ್, ಮಕ್ಕಳನ್ನು ಟಾರ್ಗೆಟ್ ಮಾಡಬಾರದು, ಮಕ್ಕಳಿಗೆ ಉಳಿತಾಯದ ಮಹತ್ವ ತಿಳಿಸಿ, ಮಕ್ಕಳಲ್ಲಿ ಪರೀಕ್ಷಾ ಭೀತಿ ತೊಲಗಿ ಸುವುದು ಹೇಗೆ ?, ಮಕ್ಕಳಿಗೆ ಶಾಲೆಯ ಸಾಮಾಜಿಕ ಜೀವನ ಅಗತ್ಯ, ಶಿಸ್ತು ಶಿಕ್ಷೆ ಆಗಬಾರದು,ಹಾರ್ಮೋನ್ಸ್ ಬದಲಾ ವಣೆ- ಬೇಕು ತಿಳುವಳಿಕೆ, ಮಕ್ಕಳಿಗೆ ಪಾಲಕರೆ ಆದರ್ಶ, ವಿಶೇಷ ಚೇತನರ ಮೇಲೆ ಗೌರವ- ಪ್ರೀತಿ ಅಚ್ಚಳಿಯ ದಂತಿರಲಿ,ಮಕ್ಕಳಿಗೆ ಸಂಸ್ಕೃತಿ ಕಲಿಸ ಲೇಬೇಕಾದ ಅನಿವಾರ್ಯತೆ, ಮಕ್ಕಳೆದುರು ಪಾಲಕರು ಮೋಬೈಲ್ ದೂರವಿರಿಸಿ,ಹುಡುಗಾಟದಿಂದ ಭವಿಷ್ಯ ಬಡಿದಾಟ,ಹರೆಯದ ವಿದ್ಯಾರ್ಥಿಗಳ ನಡುವೆ ಸಲುಗೆ ಸಲ್ಲ, ಮಕ್ಕಳಲ್ಲಿ ಕಲಾಭಿರುಚಿ, ಮಕ್ಕಳಿಗೆ ಕಣ್ಣೀರು ಹಾಕಿಸಬಾರದು, ಬೇಸಿಗೆ ರಜೆ ಹಾಯಾಗಿರಲಿ, ಬಿಸಿಲು ಜಾಗ್ರತೆ ಅವಶ್ಯ, ದೇಹ ರಕ್ಷಣಾ ಕೌಶಲ್ಯ ತರಬೇತಿ  ಅಗತ್ಯ, ಡ್ರಗ್ಸ್ ವಿಷವುಣಿಸುವ ವರಿದ್ದಾರೆ ಎಚ್ಚರ!, ಪರೀಕ್ಷೆ ದಿಟ್ಟತನ ದಿಂದ ಎದುರಿಸೋಣ, ಪರೀಕ್ಷಾ ಫೋಬೀಯಾ ಓಡಿಸಿ,ಮಕ್ಕಳ ಆದ್ಯತೆಗೆ ಗಮನವಿರಲಿ, ಮಕ್ಕಳನ್ನು ಗ್ರಾಮದ ಅನುಭವಗಳಿಗೆ ಒಡ್ಡಿ, ಮಕ್ಕಳಿಗೆ ವಿವೇಚನೆಯಿಂದ ತಿನ್ನಿಸಿ, ಮಕ್ಕಳು  ಫೇಲಾದರೆ ಅವರ ತಪ್ಪೇ ?, ಪಾಲಕರೆ ಅಪ್ರಾಪ್ತರಿಗೆ ವಾಹನ ನೀಡದಿರಿ, ಶಿಕ್ಷಣ ಉದ್ಯಮದೊಳಗೆ ಪಾಲಕರು ಕಂಗಾಲು ಮುಂತಾದ ಎಪ್ಪತ್ತೊಂದು ಸೊಗಸಾದ ಬರಹಗಳಿವೆ.”ಶ್ರೀಮತಿ ನಳಿನಾ ಅವರು ಮಕ್ಕಳ ಪುಟ್ಟ ಪುಟ್ಟ ಹೆಜ್ಜೆಗಳಂತೆ; ಪುಟ್ಟ ಪುಟ್ಟ ಲೇಖನಗಳ ಸರಮಾಲೆ ಯನ್ನು ಸಿದ್ದಪಡಿಸಿ, ಮನೋಮಂಥನ ಸುಂದರ  ಪುಸ್ತಕವನ್ನು ಕೈಗಿತ್ತಿದ್ದಾರೆ.” ಓದುವುದೇ ಚೇತೋಹಾರಿ ಅನುಭವ. ಬರವಣಿಗೆ ಸರಳ ಸಹಜ ಸುಂದರ ವಾಗಿ ಬಂದಿದೆ.ಮಕ್ಕಳು ಮಾತ್ರವಲ್ಲ, ಪಾಲಕರು, ಶಿಕ್ಷಕರು, ಅಧಿಕಾರಿ ವರ್ಗ, ಆಡಳಿತ‌ ಮಂಡಳಿಯವರು ಓದ ಲೇಬೇಕಾದ ಮಹತ್ವದ ಲೇಖನಗಳ ಗೊಂಚಲಿದು. ನಳಿನ ರಸವತ್ತಾಗಿ ಬರೆದಿದ್ದಾರೆ. ಘಟನೆಗಳು ಹೃದಯ ತಟ್ಟುತ್ತ್ತವೆ. ನಿರೂಪಣಾ ಶೈಲಿಯು ಚಿತ್ತಾಕರ್ಷಕವಾಗಿದೆ. ಪಾಲಕರ ಜವಾಬ್ದಾರಿ, ಶಿಕ್ಷಕರ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ವಿಕಾಸಕ್ಕೆ ರಹದಾರಿಯಾಗು ವಂತಹ ಕೃತಿ. “ಮನೋಮಂಥನ ಇಂದಿನ ಕಾಲದ ಪಾಲಕರ ಕೈಪಿಡಿಯಾಗಿ ರೂಪುಗೊಂಡಿದೆ. ವರ್ತಮಾನದಲ್ಲಿ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ತ್ರೀಕೋನೀ ಯ ಸಂಬಂಧಿತ ಸವಾಲುಗಳನ್ನು ಸಮಸ್ಯೆಗಳನ್ನು ಪರಿಹಾರಗಳನ್ನು ಬಹಳ ಆಪ್ತತೆಯ ದೃಷ್ಟಿಯಿಂದ ಮಾತೃ ವಾತ್ಸಲ್ಯದ ಕಕ್ಕುಲಾತಿಯಿಂದ ನೀಡ ಲಾಗಿದೆ.” ಎಂಬ ಯೋಗಿ ದೇವರಾಜ ಅವರ ಅಭಿಪ್ರಾಯವು ಪ್ರಸ್ತುತ ಪುಸ್ತಕದ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತದೆ.” ಕಳೆದ ಹದಿನೈದು ವರ್ಷಗಳ ಹಿಂದಿನಿಂದಲೂ ನಳಿನಾ ಅವರ ಬರಹಗಳು ಮಾನವೀಯ ಮೊರೆತವನ್ನು ಹೊಂದಿದ್ದು ಸಮಾಜದ ಒಳಿತಿಗಾಗಿ ತುಡಿಯುತ್ತಿವೆ.ಇಂತಹ ಸಕಾರಾತ್ಮಕ ಕೃತಿಗಳು ನಾಡಿನ ಪಾಲಕರ ಕೈಗೆ ತಲುಪಿ, ಮಕ್ಕಳ ಬದುಕು ಹಸನಾಗಲಿ” ಎಂದು ಹಾರೈಸಿದ್ದು ಸಮಂಜಸವಾಗಿದೆ.ಸದಾ ಲೋಕಕಲ್ಯಾಣದ ಚಿಂತನೆಗಳಿಂದ ಕೆಲಸ ಮಾಡುವ ಲೇಖಕಿ, ನಳಿನಾ ಅವರ ಮನೋಮಂಥನ ಮಕ್ಕಳ ಮನೋವಿಕಾಸಕೆ ರಹದಾರಿಯಾಗಲಿ.  ಡಾ. ಅಶೋಕ ನರೋಡೆ   ಡಾ. ಅಶೋಕ ನರೋಡೆ

ಡಿ.ನಳಿನಾ ಅವರ ಅಂಕಣ ಬರಹಗಳ ಸಂಕಲನ “ಮನೋಮಂಥನ” ಕೃತಿಯ ಅವಲೋಕನ ಡಾ. ಅಶೋಕ ನರೋಡೆ ಅವರಿಂದ Read Post »

ಪುಸ್ತಕ ಸಂಗಾತಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ

ಪುಸ್ತಕ ಸಂಗಾತಿ ಶೋಭಾ.ಬಿ ಡಾ. ನೀ. ಗೂ ರಮೇಶ್ “ಗಾಂಧೀಮರ” ನಿರಾಶ್ರಿತ ಮನಗಳಿಗೆ ನೆರಳನ್ನು ನೀಡುವ ಗಾಂಧೀಮರ   ಡಾ. ನೀ. ಗೂ ರಮೇಶ್ ಅವರ ಗಾಂಧೀಮರ ಕವಿತೆಯು ಜಗತ್ತಿಗೆ ಗಾಂಧಿ ತತ್ವಗಳ ಅವಶ್ಯಕತೆಯನ್ನು ತನ್ನೊಳಗೆ ಬಹಳ ಗೌಣವಾಗಿಸಿಕೊಂಡು ಸಹೃದಯನ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ಒಂದು ಕವಿತೆ. ಶೀರ್ಷಿಕೆಯೇ ನಮ್ಮನ್ನು ಹಲವಾರು ಚಿಂತನೆಗಳಿಗೆ ಒಳಪಡುವಂತೆ ಮಾಡುತ್ತದೆ. ಹಾಗೆಯೇ ಗಾಂಧೀಮರ ಕೃತಿಯೂ ಕೂಡ ವಿವಿಧ ಶೀರ್ಷಿಕೆಗಳ ಕವಿತೆಗಳ ರಸದೌತಣವನ್ನು ಉಣಬಡಿಸುತ್ತದೆ. ಕಾವ್ಯ ಎನ್ನುವುದು ಕವಿಯ ಸುಪ್ತಭಾವಗಳ ಅಕ್ಷರ ರೂಪದ ಅಭಿವ್ಯಕ್ತಿ. ಭಾವಗಳು ಕೇವಲ ಭಾವನಾತ್ಮಕವಾದವುಗಳಲ್ಲ ಅಥವಾ ವೈಯಕ್ತಿಕ ಪ್ರೀತಿ ಪ್ರೇಮದ ಕಾವ್ಯಗಳಲ್ಲ. ಅವು ಸಮಾಜಮುಖಿಯೂ ಆಗಿರಬೇಕು. ಅಂತಹ ಅಮೂಲ್ಯವಾದ ಸಮಾಜದ ಓರೆಕೋರೆಗಳಿಗೆ ಕೈಗನ್ನಡಿಯಂತಿವೆ ಗಾಂಧೀಮರ ಕೃತಿಯಲ್ಲಿನ ಕವನಗಳು. ಇದರಲ್ಲಿರುವ ೭೭ ಕವಿತೆಗಳು ಒಂದಕ್ಕೊAದು ವಿಭಿನ್ನ ಚಿತ್ರಣವನ್ನು ನೀಡುತ್ತವೆ. ಇದರ ಮೂಲಕ ಡಾ. ನಿ ಗೂ ರಮೇಶ್ ಅವರ ಕಾವ್ಯ ಪ್ರತಿಭೆಯು ಉತ್ತುಂಗಕ್ಕೇರಿದೆ.  ಇವರ ಗಾಂಧೀಮರ ಕವಿತೆಯಲ್ಲಿಯೇ ಗುಲಾಮಗಿರಿಯಿಂದ ಭಾರತವನ್ನು ತಪ್ಪಿಸಲು ಮಹಾತ್ಮರ ಅವಶ್ಯಕತೆ ಎಷ್ಟಿತ್ತು , ಮಹಾತ್ಮರ ಹೆಮ್ಮರದ ನೆರಳು ದೇಶದಗಲ ಹರಡಿ ಶಾಂತಿ, ಅಹಿಂಸೆಗಳಿAದ ಹಾರಾಡುತ್ತಿದ್ದ ಸ್ವಾತಂತ್ರದ ಹಕ್ಕಿಯು ದೇಶಕ್ಕೆ ಬಿಡುಗಡೆಯ ಸನ್ಮಾನವನ್ನು ಸಲ್ಲಿಸಿದ ಗಾಂಧಿಯ ಅವಶ್ಯಕತೆ ಎಷ್ಟಿತ್ತು ಎನ್ನುವುದನ್ನು ಬಿಂಬಿಸುವ ಕವನವಾಗಿದೆ. ಅದೇ ರೀತಿ ಆ ಗಾಂಧಿಮರದ ಬುಡಕ್ಕೆ ಕೋವಿಯ ಕೊಡಲಿಯಿಟ್ಟು ಭಾವೈಕ್ಯತೆಯ ಭಾವ ಕೆರಳಿಸಿ ಜಗ ಮರುಗುವಂತೆ ಮಾಡಿದ್ದನ್ನು ಕಣ್ಣಿನ ಮುಂದೆ ಕಟ್ಟಿಡುತ್ತದೆ ಈ ಕವನ ಹಾಗೆಯೇ ಕೆಳಗುರುಳಿದರೂ ಅಂತಹ ಎಷ್ಟೋ ಗಾಂಧಿಮರಗಳು ಪಸರಿಸಿದರೂ ಮರಗಳನ್ನು ಉರುಳಿಸುವ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ ಎನ್ನುವ ವಿಷಾದ ಕಾವ್ಯದಲ್ಲಿ ಅಡಗಿದೆ.ಹಾಗೆಯೇ ಸಹೃದಯನನ್ನು ಸೆಳೆಯುವ ಹಲವು ಕವನಗಳು ಇಲ್ಲಿವೆ. ಬೇಲಿ ಹಾಕಬೇಡಿಮಹಾಚೇತನಗಳಿಗೆಜಾತಿ, ಮತ, ಧರ್ಮಗಳೆಂಬಇದ್ದತೆಯೇ ಇರಲಿ ಬಿಡಿಹೇಗೆ ಇದ್ದರೂಅವು ದೀಪ ಸ್ತಂಭ ಇಂದು ಜಗತ್ತು ಎಷ್ಟೇ ಅಬಿವೃದ್ಧಿ ಹೊಂದುತ್ತಿದ್ದರೂ ಸಹ ಸಾಧಕನ ಸಾಧನೆಯನ್ನಷ್ಟೇ ಪುರಸ್ಕರಿಸದೆ ಅವನ ಜಾತಿ ಧರ್ಮವನ್ನು ಹಿಡಿದು ಜರಿಯುವುದರ ವಿರುದ್ಧ ಧ್ವನಿ ಇದಾಗಿದೆ. ಕಿಟಕಿ ಮತ್ತು ಕನ್ನಡಿ ಕವಿತೆಯಲ್ಲಿಈ ನಾಡಿಗೊಂದು ಕಿಟಕಿ ಇದೆಭಾಷೆ ಗಡಿ ಗೋಡೆಗಳ ಕಟ್ಟಿ ಬೀಗಲುಇರುವ ಕಿಟಕಿಯ ಮುಚ್ಚಿಧರ್ಮ ಜಾತಿಗಳ ಬೇರು ಹುಡುಕಲುಕತ್ತಲಲ್ಲಿ ಕಣ್ಣು ಕಟ್ಟಿಗೌಪ್ಯವಾಗಿ ಗುದ್ದಾಡಲು ಎನ್ನುವ ಸಾಲುಗಳಲ್ಲಿ ಮತ್ತೆ ಮತ್ತೆ ಜಾತಿಧರ್ಮಗಳ ಬಗೆಗೆ ಜಗತ್ತಿನ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂದು ಹಸುಳೆಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಹತ್ತಿಕ್ಕಲು,  ಅಲ್ಪ ಸುಖಕ್ಕಾಗಿ ಅಡ್ಡದಾರಿಗಳನ್ನು ಹುಡುಕುತ್ತಿರುವ ಜನರನ್ನು ಬದಲಿಸಲು ಹೊಸ ಕಿಟಕಿಯೊಂದು ಬೇಕಾಗಿದೆ. ಅದಕ್ಕಾಗಿ ನಾನೇಒಂದು ಕಿಟಕಿಯಾಗಬೇಕಾಗಿದೆ ಎನ್ನುವ ಕವಿಯ ಕಾಳಜಿ ನಿಜಕ್ಕೂ ಶ್ಲಾಘನೀಯವಾದದ್ದು.ಹಾಗೆಯೇ ಕ್ಷಮಿಸಿ ಬಿಡಿ ಬಸವಣ್ಣ ಕವಿತೆಯಲ್ಲಿ ಲೋಕದ ಡೊಂಕು ತಿದ್ದಿಸಮತೆಯ ಕನಸು ಬಿತ್ತಿಎಚ್ಚರಿಸಿದ ನುಡಿ ಕಿಡಿಗಳುಕಪಟಭಕ್ತನ ಸರಕಾದವು! ಎನ್ನುತ್ತಾ ಕವಿಯು ಬಸವ ತತ್ವವನ್ನು ಜನತೆ ತಪ್ಪಾಗಿ ಅರ್ಥೈಸಿಕೊಂಡಿರುವ ಜನತೆಯ ಪರವಾಗಿ ಬಸವಣ್ಣನಲ್ಲಿ  ಕ್ಷಮೆಯನ್ನು ಯಾಚಿಸಿದ್ದಾರೆ. ನಮಗೇನೂ ಅನಿಸುವುದೇ ಇಲ್ಲ ಕವಿತೆಯಲ್ಲಿ ದೇವರಿಗಿಂತ ಪೂಜಾರಿಯ ನಂಬಿಮಣ್ಣಿಗಿಂತ ಮಾರುಕಟ್ಟೆಯ ನಂಬಿಆಹಾರಕ್ಕಿಂತ ಔಷಧಿಯ ನಂಬಿನೆಮ್ಮದಿ ಕಳೆದುಕೊಳ್ಳುತ್ತೇನೆನಮಗೇನೂ ಅನಿಸುವುದೇ ಇಲ್ಲ! ಎನ್ನುತ್ತಾ ಇಂದಿನ ಜನರ ಮನಸ್ಥಿತಿಯನ್ನು ಇಡೀ ಕವಿತೆಯಲ್ಲಿ ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಜಗತ್ತಿನಲ್ಲಿ ಅಕ್ರಮ ಅತ್ಯಾಚಾರ, ಕೊಲೆ ಸುಲಿಗೆ ಮೋಸ ಮಾಡಿದವರನ್ನೇ ಮೆರೆಸುವವರಿಗೆ ಶಾಲು ಸುತ್ತಿ ಹೊಡೆದಂತೆ ಬಡಿದೆಚ್ಚರಿಸಿದ್ದಾರೆ. ಸಮಾಜದಲ್ಲಿ ಆಗುವ ಅಥವಾ ನಡೆಯುವ ಅದೆಷ್ಟೋ ಸಂಗತಿಗಳಿಗೆ, ಅಪಘಾತ ಅವಘಡಗಳಿಗೆ ತಲೆಕೆಡಿಸಿಕೊಳ್ಳದೇ ವ್ಯವಸ್ಥೆಯನ್ನೇ ಕಾನೂನನ್ನೇ ನಿಂದಿಸುವವರನ್ನು ಹೀಗಳೆದು ವಿಡಂಬಿಸಿದ್ದಾರೆ.ಇAತಹ ಅದೆಷ್ಟೋ ವಿಚಾರಗಳನ್ನು ಹೊತ್ತ ಗಾಂಧೀಮರ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆಯಾಗಿದೆ. ಈ ಕೃತಿಯನ್ನು ಕನ್ನಡಿಗರ ಚಿಂತನಾ ಲೋಕಕ್ಕೆ ಅರ್ಪಿಸಿದ್ದಕ್ಕಾಗಿ ಅಪ್ರತಿಮ ಕವಿಗಳಾದ ಡಾ. ನಿ.ಗೂ ರಮೇಶ್ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶೋಭಾ ಬಿ

ಡಾ. ನೀ. ಗೂ ರಮೇಶ್ ಅವರ “ಗಾಂಧೀಮರ” ಕೃತಿಯ ಅವಲೋಕನ ಶೋಭಾ.ಬಿ ಅವರಿಂದ Read Post »

ಪುಸ್ತಕ ಸಂಗಾತಿ

ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ

ಪುಸ್ತಕ ಸಂಗಾತಿ ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಯೋಜನೆಯ ಜಿಲ್ಲಾ ಸಂಚಾಲಕ, ಹಿರಿಯ ಕವಿ ಎ.ಎಸ್.ಮಕಾನದಾರ ಅವರ ದರ್ವೇಶಿ ಪದ್ಯ  ಕವನ ಸಂಕಲನ ದಿ 29 ರ ರವಿವಾರ ದಂದು ಹೂವಿನಹಡಗಲಿಯ ಸರ್ಕಾರಿ ನೌಕರರ  ಭವನದಲ್ಲಿ ಜನಾರ್ಪಣೆ ಗೊಳ್ಳಲಿದೆ. ಹೂವಿನ ಹಡಗಲಿಯ ಸಿಂಚನ ಪ್ರಕಾಶನ ಮತ್ತು ಮೇ ಸಾಹಿತ್ಯ ಮೇಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆಕುವೆಂಪು ವಿಶ್ವ ವಿದ್ಯಾಲಯ ಮತ್ತು ವಿಜಯನಗರ ಜಿಲ್ಲೆಯ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿ  ಪಠ್ಯ ಪುಸ್ತಕಗಳಲ್ಲಿ  ಸೇರ್ಪಡೆ ಯಾದ ಕವಿತೆಗಳುಳ್ಳ ದರ್ವೇಶಿ ಪದ್ಯ ಕವನ ಸಂಕಲನವನ್ನು ಕವಿ ಇಸ್ಮಾಯಿಲ್ ಯಲಿಗಾರರವರು ಲೋಕಾರ್ಪಣೆಗೊಳಿಸುವರು.ಹಾವೇರಿ ಜಿಲ್ಲೆ ಹಾನಗಲ್ ನ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥೆ  ಡಾ. ಪುಷ್ಪ ವತಿ ಶೆಲವಡಿಮಠ ಅವರು ಕೃತಿ ಅವಲೋಕನ ಮಾಡುವರು.2023ನೇ ಸಾಲಿನ ಸಿಂಚನ ಕಾವ್ಯ ಪ್ರಶಸ್ತಿ ಬೀಳಗಿಯ ಸೋಮಲಿಂಗ ಬೇಡರ ಆಳೂರ ಅವರ ಗೋರಿ ಮತ್ತು ಧರ್ಮ, 2024ನೇ ಸಾಲಿನ ಕಾವ್ಯ ಪ್ರಶಸ್ತಿ ಗೆ ಬಾಚಿಗೊಂಡನ ಹಳ್ಳಿಯ ಹಿರಿಯ ಸಾಹಿತಿ ಹುರಕಡ್ಲಿ ಶಿವಕುಮಾರ್ ಅವರ ಕನ್ನಡ ಮಾನಿಪ್ಪಾ ನಾಡು ಕೃತಿಗಳು ಆಯ್ಕೆ ಆಗಿದ್ದು ಪ್ರತಿ ಪುರಸ್ಕಾರವೂ 5ಸಾವಿರ ನಗದು ಎರಡು ಸಾವಿರ ಮುಖ ಬೆಲೆಯ ಪುಸ್ತಕ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುವದುಹಿರಿಯ ಸಾಹಿತಿ ರಾಮಪ್ಪ ಕೋಟಿಹಾಳ್  ಪುರಸ್ಕೃತ ಕೃತಿಗಳ ಪರಿಚಯ ಮಾಡಲಿದ್ದು  ತೊ ಮ ಶಂಕ್ರಯ್ಯ ಸಮಾರಂಭ ದ ಅಧ್ಯಕ್ಷ ತೆ ವಹಿಸುವರುಇದೆ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಲಗುವದೆಂದು ಪ್ರಕಾಶಕಿ ಸವಿತಾ ಅಂಗಡಿ, ಸಂಚಾಲಕ ಸುರೇಶ್ ಅಂಗಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ

ದಿ 29ರಂದು ಕವಿ ಮಕಾನದಾರರ ದರ್ವೇಶಿ ಪದ್ಯ ಜನಾರ್ಪಣೆ Read Post »

ಪುಸ್ತಕ ಸಂಗಾತಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಜ್ಯೋತಿ ಮಾಳಿ “ಹಾಳು ಗೋಡೆಯಲೊಂದು ಚಿಗುರು“ ಕೃತಿ ಶೀಷಿ೯ಕೆ:ಹಾಳು ಗೋಡೆಯಲೊಂದು ಚಿಗುರುಲೇಖಕರು:ಜ್ಯೋತಿ ಮಾಳಿ…..೭೩೩೭೭ ೦೯೫೧೨*ಪ್ರಕಾಶಕರು:ಜ್ಯೋತಿ ಪ್ರಕಾಶನ ಬೆಳಗಾವಿ ೭೩೩೭೭ ೦೯೫೧೨ಪುಸ್ತಕದ ಬೆಲೆ:126=00 ಹಾಳು ಗೋಡೆಯಲಿ ಚಿಗುರಿದ ಪ್ರಕೃತಿಯ ಆತ್ಮಬಲ ತೋರಿಸುವ ಗಜಲ್ ಗಳು… ಗಜಲ್ ಅಂದರೆ ಏನು ? ,ಅದು ಹೇಗೆ ಹುಟ್ಟಿತು ‌ , ಎಲ್ಲಿ ಬೆಳೆದು ಭಾರತಕ್ಕೆ ಹೇಗೆ ಬಂದಿತೆಂದು , ಕನ್ನಡ ಗಜಲ್ ರಚನಾ ಛಂದಸ್ಸು ಏನು, ಹೇಗೆ , ಗಜಲ್ ರಚನಾ ನಿಯಮಗಳು ಹೇಗೆಂದು ಡಾ . ಶಾಂತರಸ ಹೆಂಬೇರಾಳ ಅವರಿಂದ ಪ್ರಾರಂಭವಾದ ಈ ವಿಷಯ ಇಂದಿನ ಎಲ್ಲಾ ಗಜಲ್ ಸಂಕಲಗಳಲ್ಲಿ ವಿವರಣೆ ಸಿಗುತ್ತದೆ. ಆದ ಕಾರಣ ನಾನು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ . ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ , ಆತ್ಮಾನು ಸಂಧಾನ , ನಮ್ಮನ್ನು ನಾವು ಅರಿತುಕೊಳ್ಳುವುದು , ಲೌಕಿಕ ಪ್ರೀತಿಯಿಂದ ಆಧ್ಯಾತ್ಮಿಕ ಪ್ರೀತಿಯಲ್ಲಿ ಕೊನೆಗೊಳ್ಳುವುದು . ನಿರಾಕಾರನಾದ ಆ ಭಗವಂತನೊಂದಿಗೆ ಮಾತನಾಡುವುದು , ನಿವೇದಿಸಿಕೊಳ್ಳುವುದು , ಲಿಂಗಪತಿ ಶರಣ ಸತಿ ಭಾವ ಮೈ ತಾಳುವುದು , ಮೀರಾ ಮಾಧವನ ಭಕ್ತಿಯಂತೆ , ರಾಧಾಕೃಷ್ಣರ ಪ್ರೀತಿಯಂತೆ , ಅಕ್ಕಮಹಾದೇವಿ ಮಲ್ಲಿಕಾರ್ಜುನ ಧ್ಯಾನಿಸಿದಂತೆ . ಗಜಲ್ ಮೃದು ಮಧುರ ಭಾವನೆಗಳನ್ನು ಒಂದು ಹೃದಯ ಇನ್ನೊಂದು ಹೃದಯಕ್ಕೆ ನಿವೇಸದಿಸಿಕೊಳ್ಳು ಕಾವ್ಯ. ಗೇಯತೆ ,ಲಯ, ಮಧುರ , ಮಾಧುರ್ಯ ಉಳ್ಳ ಕಾವ್ಯವಾಗಿದೆ. ಇದು ಹಾಡುಗಬ್ಬ ಇಲ್ಲಿ ಗೇಯತೆ ,ಲಯ ,ಮಾಧುರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ . ಆತ್ಮವೂ ತನ್ನ ಸುತ್ತ ಹೆಣೆದುಕೊಳ್ಳುವ ನೋವು ನಲಿವುಗಳ ಮೋಹಕವಾದ ಪ್ರೇಮಿಗಳ ಪಿಸುಮಾತುಗಳೇ ಗಜಲ್ ಎಂದು ಹೇಳಬಹುದು. ಹೃದಯಗಳನ್ನು ಬೆಸೆಯುವ ಒಂದು ಅದ್ಭುತವಾದ ಶಕ್ತಿ ಇದಕ್ಕಿದೆ ನೋವಿನ ಕಡಲಲ್ಲಿನ ಬದುಕನ್ನು ದಡ ಸೇರಿಸುವ ಸುಖದ ಹಾಯ್ ದೋಣಿ ಇದಾಗಿದೆ.‌ ಧರ್ಮದ ಯಾವ ಕಟ್ಟುಪಾಡುಗಳನ್ನು ಸ್ವೀಕರಿಸದೆ ಸರ್ವರನ್ನು ಮನುಷ್ಯರನ್ನಾಗಿಸುವ ಕರುಣೆ ಸ್ನೇಹ ಅಸಹಾಯಕ ಅನುಕಂಪಗಳಲ್ಲಿ ದೇವರನ್ನು ಕಾಣಿಸುವ ಕಾವ್ಯ ಇದಾಗಿದೆ.. ಗಜಲ್ ಕಾವ್ಯ ನೋಡಲು ಸುಲಭವೆಂದು ಕಂಡರೂ ಇದರ ರಚನೆ ಸುಲಭವಲ್ಲ. ಗಂಭೀರ ಅಧ್ಯಯನ,ದಟ್ಟವಾದ ಅನುಭವ, ಧ್ಯಾನಿಸುವ ಮನೋದರ್ಮ, ಜನಸಾಮಾನ್ಯನ ಎದೆಗೂ ಮುಟ್ಟಿಸಬೇಕೆನ್ನುವ ತುಡಿತ ಸರಳ ಮೃದು ಶಬ್ದಗಳ ಬಳಿಕೆ ಇದ್ದರೆ ಮಾತ್ರ ಗಜಲ್ ರಚನೆ ಸಾಧ್ಯ. ಇದರ ಜೊತೆಗೆ ರಚನಾ ನಿಯಮಗಳನ್ನು ಅರಿತಿರಬೇಕು. ಇಂದು ಅನೇಕರು ಕನ್ನಡ ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ .ಕೆಲವರಿಗೆ ಮಾತ್ರ ಈ ರಾಣಿ ಒಲೆದಿದ್ದಾಳೆ,ಬಹಳ ಜನ ಎಡವುತಿದ್ದಾರೆ. ವಯಸ್ಸು ಲಿಂಗ ಭೇದವಿಲ್ಲದೆ ಅನೇಕರು ಗಜಲ್ ರಚಿಸಿ ಕೃತಿಗಳನ್ನು ಪ್ರಕಟಿಸಿ ಗಜಲ್ ಕಾರರಾಗಿದ್ದರೆ. ಬೆಳಗಾವಿ ಜಿಲ್ಲೆಯ ಜ್ಯೋತಿ ಮಾಳಿ ಇವರು ತಮ್ಮ ಹಾಳು ಗೋಡೆಯಲೊಂದು ಚಿಗುರು ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ. ಜ್ಯೋತಿ ಮಾಳಿಯವರು ಈಗಾಗಲೇ ದುರುಡುಂಡೇಶ್ವರ ನಾಮಾಂಕಿತ ಆಧುನಿಕ ವಚನಗಳು ಮತ್ತು ಅಗಣಿತ ಮಹಿಮೆ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ . ಸದ್ಯ ಬೆಳಗಾವಿಯ ಕೋಟಕ್ ಮಹೀಂದ್ರ ಲೈಫ್ ಇನ್ಸೂರೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ . ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ . ಅನೇಕ ಹಿರಿಯರ ಗಜಲ್ ಕೃತಿಗಳನ್ನು ಅಧ್ಯಯನ ಮಾಡಿ ಗಜಲ್ ರಚನಾ ಕ್ರಮವನ್ನು ಅರ್ಥೈಸಿಕೊಂಡು ನಿಯಮಗಳನ್ನು ಪಾಲಿಸಿಕೊಂಡು ಗಜರಗಳನ್ನು ರಚಿಸಿ ಕೃತಿಯನ್ನು ಪ್ರಕಟಿಸಿದ್ದಾರೆ ಬದುಕಿನಲ್ಲಿ ಮಹಿಳಗೆ ಬರುವ ಕಷ್ಟ ,ನೋವು, ತಿರಸ್ಕಾರ ಗಳನ್ನು ವಿಷಯವಾಗಿಟ್ಟುಕೊಂಡು ಗಜಲ್ ಗಳನ್ನು ರಚಿಸಿದ್ದಾರೆ . ಜ್ಯೋತಿ ಮಾಳಿಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ನಾಗೇಶ್ ಜೆ ನಾಯಕ ಅವರು ಅಮೂಲ್ಯವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ .‌ ಅದೇ ರೀತಿಯಾಗಿ ಸಿದ್ದರಾಜು ಪೂಜಾರಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಪ್ರಕಟಣೆಗೆ ಮುಂಚಿತವಾಗಿ ಈಶ್ವರ ಮಮದಾಪುರ ಹಾಗೂ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಇವರುಗಳು ಗಜಲ್ ಗಳನ್ನು ಓದಿ ಶುಭ ಹಾರೈಕೆಯನ್ನು ಬರೆದಿದ್ದಾರೆ . ಜ್ಯೋತಿ ಮಾಳಿ ಇವರ ಕೃತಿ ಹಾಳು ಗೋಡೆಯಲೊಂದು ಚಿಗರು ಗಜಲ್ ಸಂಕಲನದಲ್ಲಿ 103 ಗಜಲ್ ಗಳಿದ್ದು 5 ,7 ,9 ದ್ವಿಪದಿಗಳ ಗಜಲ್ ಗಳಿವೆ. ಮುರದ್ಧಫ್ ಗಜಲ್ ,ಗೈರ್ ಮುರದ್ಧಫ್ ಗಜಲ್ ಗಳಿವೆ ಈ ಸಂಕಲದಲ್ಲಿವೆ. ಇರವ ಗಜಲ್ ಗಳು ಸ್ತ್ರೀ ಸಂವೇದನ ಬದುಕಿನ ತಲ್ಲಣಗಳನ್ನು ವಿಷಯವಾಗಿಟ್ಟುಕೊಂಡು ಗಜಲನ್ನು ರಚಿಸಿದ್ದಾರೆ . ಪುರುಷ ಪ್ರಧಾನವಾದ ಸಮಾಜದ ದೌರ್ಜನ್ಯಗಳನ್ನು, ದಬ್ಬಾಳಿಕೆಯನ್ನು, ಅನುಭವಿಸಿದ ಸಂಕಟ , ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ . ಹೆಣ್ಣು ಎಲ್ಲವನ್ನು ಸಹಿಸಿಕೊಂಡು ಬದುಕಿನ ಸವಾಲು ಮೆಟ್ಟಿ ಮುನ್ನ ನಡೆಯುವ ಧೋರಣೆಯನ್ನು ಜ್ಯೋತಿಯವರು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .ಜ್ಯೋತಿ ಮಾಳಿಯವರು ಗಜಲ್ ಕಾವ್ಯದಲ್ಲಿ ತಮ್ಮ ತಖಲುಸ್ ನಾಮವನ್ನು “ಜ್ಯೋತಿ” ಎಂದು ಉಪಯೋಗಿಸಿದ್ದಾರೆ. ಜ್ಯೋತಿ ಮಾಳಿ ಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನದ ಕೆಲವು ಗಜಲ್ ಗಳ ಸಾಲುಗಳ ವಿಶ್ಲೇಷಣೆ…. ಗಾಳಿಗೆ ಕಿಡಿ ಹೊತ್ತಿ ಉರಿಯುಲು ಎಷ್ಟು ಹೊತ್ತು ಬೇಕುನದಿಗೆ ಹರಿಯುತ ಕೊಚ್ಚಿಹೋಗಲು ಎಷ್ಟು ಹೊತ್ತು ಬೇಕು ಮೇಲಿನ ಗಜಲ್ ಓದಿದಾಗ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ನೆನಪಾಯಿತು ,ಬದುಕು ಕಟ್ಟುವುದು ಬಹಳ ಕಷ್ಟ ಆದರೆ ಅದೇ ಬದುಕು ಹಾಳಾಗಲು ಬಹಳ ಸಮಯ ಬೇಕಾಗುವುದಿಲ್ಲ ವೆಂದು ಮನನೊಂದು ವಿವಿಧ ರೀತಿಯ ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ . ಕೈಯಿಂದ ಜಾರಿದ ಸಣ್ಣ ಬೆಂಕಿ ಕಡ್ಡಿಯ ಕಿಡಿ ಹೊತ್ತಿ ಇಡೀ ಹುಲ್ಲು ಗೂಡನ್ನು ಸುಡಲು ಬಹಳ ಹೊತ್ತು ಹಿಡಿಯುವುದಿಲ್ಲ.. ಅನ್ನೋನ್ಯವಾದ ಸಂಬಂಧಗಳ ಮಧ್ಯೆ ಅನೈತಿಕ ಸಂಬಂಧಗಳು ಇಣುಕಿದಾಗ ಸುಂದರವಾದ ಸಂಸಾರ ಹಾಳಾಗುವುದೆಂದು ಗಜಲ್ ಕಾರ್ತಿಯು ಮನನೊಂದು ಮಾರ್ಮಿಕವಾಗಿ ಗಜಲ್ ದಲ್ಲಿ ರೂಪಕಗಳೊಂದಿಗೆ ವಿವರಿಸಿದ್ದಾರೆ. ಯಾವ ಸುಖಕ್ಕಾಗಿ ಕಮರಿ ಹೋದೆ ಊಮಿ೯ಳೆ?ಲಕ್ಷ್ಮಣ ನಿನಗಾಗಿ ಸಮಯ ನೀಡ ಬೇಕಿತ್ತು ನೊಂದೆ ಏಕೆ? ಯುಗ ಯುಗಗಳಿಂದಲೂ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಅಲಕ್ಷಗಳು ನಡೆದಿದ್ದು ಮಹಿಳೆ ತನ್ನ ಆಸೆ ಆಕಾಂಕ್ಷೆಗಳಿಗೆ ತಿಲಾಂಜನ ಕೊಟ್ಟು ಬದುಕುವುದನ್ನು ಕಲಿತಿದ್ದಾಳೆ. ನಾವು ಪುರಾಣಗಳಲ್ಲಿ ಬರುವ ಪಾತ್ರಗಳಲ್ಲಿ ಇದನ್ನು ಕಂಡುಕೊಂಡಿದ್ದೇವೆ . ಗಜಲ್ ಕಾರ್ತಿಯು ರಾಮಾಯಣದ ಊಮಿ೯ಳೆಯ ಜೀವನದ ಚಿತ್ರಣಯನ್ನು ಉದಾಹರಣೆಯಾಗಿ ಗಜಲ್ ದಲ್ಲಿ ಎತ್ತಿ ತೋರಿಸಿದ್ದಾರೆ. ಹಂಗಿನ ಅರಮನೆ ಕೂಳನೆಂದು ನುಂಗಲಾರೆನುಕಣ್ಣೀರಾಗಿ ರೆಪ್ಪೆ ತೊರೆದು ಜಾರಲಾರೆನು ಈ ಗಜಲ್ ದ ಮತ್ಲಾ ಓದಿದಾಗ ಗಜಲ್ ಕಾರ್ತಿಯು ಸ್ವಾಭಿಮಾನದ ಬದುಕು ಬಾಳ ಬಯಸುವುದು ತಿಳಿಯುತ್ತದೆ . ಹೆಣ್ಣು ಅಬಲೆ ಎಂದು ಸದಾ ಪುರುಷರ ಆಶ್ರಯದಲ್ಲಿ ಇರಬೇಕೆಂದು ಸಮಾಜ ಬಯಸುತ್ತದೆ . ಅದನ್ನು ಖಂಡಿಸಿದ ಗಜಲ್ ಕಾತಿ೯ ಅನ್ಯರ ಹಂಗಿನ ಅರಮನೆ ಕೂಳನೆಂದು ನುಂಗಲಾರೇ ಎಂದು ಮತ್ತು ಎಷ್ಟೇ ದುಃಖ ಇದ್ದರು ಕಣ್ಣೀರನ್ನು ಜಾರಿಸಿ ಅಬಲೆ ಎಂದು ಸಮಾಜದಮುಂದೆ ಸಾರಲು ಬಯಸುವುದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ದೃಢ ನಿಲುವನ್ನು ಗಜಲ್ ದಲ್ಲಿ ರೂಪಕಗಳೊಂದಿಗೆ ತೋರಿಸಿದ್ದಾರೆ. ಹೆಣ್ಣಾಗಿ ಹುಟ್ಟೋದು ಈ ಭೂಮಿ ಮ್ಯಾಲ ಯಾರಿಗೆ ಬೇಕಿತ್ತು•ಹುಣ್ಣಾಗಿ ಕಂಡು ಆ ತೆಗಳೋ ಮಾತು ಯಾರಿಗೆ ಬೇಕಿತ್ತು* ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪಾಗಿದೆ , ಹೆಣ್ಣಾಗಿ ಹುಟ್ಟುವುದು ಯಾರಿಗೆ ಬೇಕಾಗಿದೆ. ಹುಟ್ಟು ಯಾರ ಕೈಯಲ್ಲಿ ಇಲ್ಲ ಆದರೂ ಹೆಣ್ಣಾಗಿ ಹುಟ್ಟಿದಾಕೆ ಹೆತ್ತವರಿಂದ , ಒಡಹುಟ್ಟಿದವರಿಂದ, ಕೈ ಹಿಡಿದ ಗಂಡಸಿನಿಂದ , ದೌರ್ಜನ್ಯವನ್ನು ಸಹಿಸುತ್ತಾ ಸಮಾಜದ ತೆಗಳಿಕೆಯ ಮಾತುಗಳನ್ನು ಕೇಳುವುದು ಯಾರಿಗೆ ಬೇಕಾಗಿದೆ ಎಂದು ಹೇಳುತ್ತಾ ಈ ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು ಎಂಬ ಭಾವನೆಯಲ್ಲಿ ಗಜಲ್ ನ್ನು ಸುಂದರವಾಗಿ ರೂಪಕಗಳೊಂದಿಗೆ ಮನದ ಮಾತು ಗಜಲ್ ದಲ್ಲಿ ಹೇಳಿದಿದ್ದಾರೆ. ಕಟ್ಟಿಕೊಂಡ ಕನಸುಗಳು ಬಿಕರಿಗೊಂಡವು ಬಾಳ ಬುತ್ತಿಯನು ಬಿಚ್ಚಿಟ್ಟಾಗಗಟ್ಟಿತನದ ಆಸೆಗಳು ನಿರಾಶೆಗೊಂಡವು ನಂಬಿಕೊಂಡದನು ಕೈ ಬಿಡುವಾಗ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ತನ್ನದೇ ಆದ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಆ ಕನಸುಗಳು ನನಸಾಗದೆ ಬಿಕರಿಯಾದಾಗ ಬದುಕು ಹಾಳ ಸಂತೆಯಾಗುತ್ತದೆ . ತಾ ಬಯಸಿದ ಆಸೆಗಳೆಲ್ಲ ಈಡೆರದೆ ನಿರಾಶೆ ಆಗುತ್ತದೆ. ಬಯಸಿದ ಬದುಕು ಸಿಗದಾಗ ಮನನೊಂದು ನಿರಾಸೆಗೊಂಡು ತಾನು ನಂಬಿದ ಶುದ್ಧವಾದ ಜೀವನ ಸಿಗದೇ ಬದುಕು ಹಾಳಾಗಿದ್ದಕ್ಕೆ ಮರಗುತ್ತದೆ . ಈ ಗಜದಲ್ಲಿ ಗಜಲ್ ಕಾತಿ೯ ನಿರಾಶೆಯ ಭಾವವನ್ನು ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಮಾಳಿಯವರ ಪ್ರಥಮ ಗಜಲ್ ಸಂಕಲನ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಸಮಾಜದಲ್ಲಿ ಮಹಿಳೆ ಅನುಭವಿಸಿದ ನೋವು ಅವಮಾನ ,ಮನದ ತಲ್ಲಣಗಳು,ತಣ್ಣನೆಯ ಆಕ್ರೋಶ , ಬಂಡಾಯ ಧ್ವನಿ , ಸಮಾಜದ ಆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗೆ ಮಹಿಳೆ ಏನೆಲ್ಲಾ ಸಮಸ್ಯೆ ಬಂದರೂ ಅವುಗಳನ್ನು ಎದುರಿಸಿ ಬದುಕಬಲ್ಲೆ ಎಂಬ ಭಾವಗಳನ್ನು ಎದ್ದು ಕಾಣುವ ಗಟ್ಟಿಯಾದ ಗಜಲ್ ಗಳು ಈ ಸಂಕಲನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ಜ್ಯೋತಿ ಮಾಳಿ ಅವರ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಮಹಿಳೆ ಇಂದು ಹಾಗೂ ಹಿಂದೆ ಅನುಭವಿಸಿದ ನೋವುಗಳನ್ನು ಸಹಜವಾಗಿ ತಾವು ಅನುಭವಿಸಿ ನೋವುಗಳೆಂಬಂತೆ ಈ ಸಂಕಲನದ ಗಜಲ್ ದಲ್ಲಿ ತೋರಿಸಿಕೊಟ್ಟಿದ್ದಾರೆ.. ಭಾವ ತೀವ್ರತೆಯನ್ನು ಓದಗ ಅರ್ಥ ವಾಗುವಂತೆ ರೂಪಕಗಳನ್ನು ಬಳಸಿದ್ದಾರೆ ಜ್ಯೋತಿಯವರುಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆದು ಕನ್ನಡ ಗಜಲ್ ಕಣಜವನ್ನು ತುಂಬಲೆಂದು ಶುಭ ಹಾರೈಸುತ್ತಾ ವಿರಾಮ ಕೊಡುತ್ತೇನೆ . ಪ್ರಭಾವತಿ ಎಸ್ ದೇಸಾಯಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ Read Post »

ಪುಸ್ತಕ ಸಂಗಾತಿ

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ

ಪುಸ್ತಕ ಸಂಗಾತಿ ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಲೋಕಾರ್ಪಣೆ ಯಾದಗಿರಿ:- ಇತ್ತೀಚೆಗೆ ಇಲ್ಲಿಗೆ ಸಮೀಪದ ಗುರುಮಠಕಲ್ ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡದ ಅಸ್ಮಿತೆ ಕಾರ್ಯಕ್ರಮದಲ್ಲಿ ಲೇಖಕ ಡಾ. ಸಿದ್ಧರಾಮ ಹೊನ್ಕಲ್ ಅವರ *ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ..* ಎಂಬ ಅವರ ಹತ್ತನೇ ಪ್ರವಾಸ ಕಥನವನ್ನು ಸಾನಿಧ್ಯ ವಹಿಸಿದ ಪರಮಪೂಜ್ಯ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವೇದಿಕೆಯಲ್ಲಿದ್ದ ಡಾ.ಜೆ.ವಿ.ಪುರುಷೋತ್ತಮ ಅವರು ಹಾಗೂ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದ ಡಾ.ಎಂ.ಎಸ್.ಶಿರವಾಳ,ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಾಬುರಾಯ ದೊರೆ, ಇಂಗ್ಲಿಷ್ ಉಪನ್ಯಾಸಕರಾದ ಮಹೇಶ ಚಂದಾಪುರ ಮುಂತಾದವರು ಲೋಕಾರ್ಪಣೆ ಮಾಡಿದರು.ಲೇಖಕ ಸಿದ್ಧರಾಮ ಹೊನ್ಕಲ್ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಈ ಹಿಂದೆ ಪ್ರಶಸ್ತಿ ಪಡೆದ ಅವರ ಪ್ರವಾಸ ಕೃತಿ ಪಂಚನದಿಗಳ ನಾಡಿನಲ್ಲಿ, ಗುಲ್ಬರ್ಗಾ ವಿವಿಯ ಪ್ರಶಸ್ತಿ ಪಡೆದ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ, ಗಾಂಧೀಯ ನಾಡಿನಲ್ಲಿ, ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ, ಪಂಚವಟಿಯ ನೆಲದಲ್ಲಿ, ಮೂರು ದೇಶ ನೂರೊಂದು ಅನುಭವ, ಲಕ್ನೋ ಸಾಂಸ್ಕೃತಿಕಯಾನ, ಲೋಕ ಸಂಚಾರಿ, ಹೀಗೆ ವೈವಿಧ್ಯಮಯ ಪ್ರದೇಶಗಳ, ವಿದೇಶಗಳ ಪ್ರವಾಸ ಕಥನ ಬರೆದು ನಾಡಿನಲ್ಲಿ ಅತ್ಯಂತ ಹೆಚ್ಚು ಪ್ರವಾಸ ಕಥನ ಬರೆದ ಲೇಖಕರ ಸಾಲಿನಲ್ಲಿ ಇರುವ ಲೇಖಕ ಸಿದ್ಧರಾಮ ಹೊನ್ಕಲ್ ಅವರ ಹೊಸ ಕೃತಿ  “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ” ಇಂದು ತಮ್ಮ ಕಾಲೇಜಿನಲ್ಲಿ,  ಅದು ಈ ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಕುರಿತ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಆದದ್ದೂ ತುಂಬಾ ಸಂತೋಷ ಎಂದು ಪ್ರಾಚಾರ್ಯರಾದ ಡಾ.ಜೆ.ವಿ.ಪುರುಷೋತ್ತಮ ಅವರು ಲೇಖಕ ಸಿದ್ಧರಾಮ ಹೊನ್ಕಲ್ ಅವರಿಗೆ ಅಭಿನಂದಿಸಿದರು.ಅವರ ಪ್ರವಾಸ ಕಥನಗಳು ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಪಠ್ಯವಾಗಿ ರೋದು ಈ ಗಿರಿ ನಾಡಿಗೆ ಸಂದ ಗೌರವ ಎಂದು ಮುಂದುವರಿದು  ಕೃತಿ ಕುರಿತು ಮಾತನಾಡಿದರು. ಪೂಜ್ಯರಾದ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಿದ್ಧರಾಮ ಹೊನ್ಕಲ್ ರು ಈಗಾಗಲೇ ಎಂಬತ್ತು ಕೃತಿ ರಚಿಸಿ ಗಡಿನಾಡಿನ ಈ ಜಿಲ್ಲೆಗೆ ಹೆಸರು ತಂದಿದ್ದಾರೆ.ಅವರು ನೂರು ಕೃತಿ ತರಲಿ ಎಂದು ಶುಭಾಶೀರ್ವಾದ ಮಾಡಿ ಅಭಿನಂದಿಸಿದರು.

ಲೇಖಕ ಡಾ. ಹೊನ್ಕಲ್ ಅವರ ಹತ್ತನೇ ಪ್ರವಾಸ ಕಥನ “ದಕ್ಷಿಣ ಧ್ರುವದಿಂ ಉತ್ತರ ಧ್ರುವಕೆ”ಲೋಕಾರ್ಪಣೆ Read Post »

ಪುಸ್ತಕ ಸಂಗಾತಿ

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು

ಪುಸ್ತಕ ಸಂಗಾತಿ ವಿಮಲಾರುಣ ಪಡ್ಡoಬೈಲು  ಬಿ. ಆರ್. ಲಕ್ಷ್ಮಣರಾವ್ “ಎಂಥಾ ಮೋಜಿನ ಕುದುರಿ!” ಕೃತಿ: *ಎಂಥಾ ಮೋಜಿನ ಕುದುರಿ!* ಕಿರು ಕಾದಂಬರಿಲೇಖಕರು; ಬಿ. ಆರ್. ಲಕ್ಷ್ಮಣರಾವ್ಬೆಲೆ: 60 ರೂದೂರವಾಣಿ:9845693614 *ರಸಗವಳ  ಎಂಥಾ ಮೋಜಿನ ಕುದುರಿ!*                  ಪ್ರೇಮಕವಿ ಎಂದೇ ಚಿರಪರಿಚಿತರಾದ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರ ಸಾಹಿತ್ಯ ಸೃಜನಶೀಲತೆ ಸದಾ ಭಾವಲೋಕವನ್ನು ಆಳವಾಗಿ ತಟ್ಟುವ ಶಕ್ತಿಯನ್ನು ಹೊಂದಿದೆ. ಅವರ ಕವಿತೆಗಳು ಹಾಗೂ ಭಾವಗೀತೆಗಳು ಓದುಗರ ಮನಸ್ಸಿನಲ್ಲಿ ಪ್ರೀತಿಯ ಸೂಕ್ಷ್ಮತೆಯನ್ನು ಮೂಡಿಸುವಂತೆ, ಅವರ ಕಿರು ಕಾದಂಬರಿ “ಎಂಥಾ ಮೋಜಿನ ಕುದುರಿ” ಕೂಡ ಕಲ್ಪನೆ, ರಸಿಕತೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆಯ ಮೂಲಕ ವಿಭಿನ್ನ ಅನುಭವವನ್ನು ನೀಡುತ್ತದೆ.ಶೀರ್ಷಿಕೆ ಸೂಚಿಸುವಂತೆ ” ಎಂಥಾ ಮೋಜಿನ ಕುದುರಿ!” ಹಲವು ದಿಕ್ಕುಗಳಲ್ಲಿ ತನ್ನ ಪಯಣವನ್ನು ವಿಸ್ತರಿಸುತ್ತದೆ.ಈ ಕಾದಂಬರಿಯ ಕಾಲಯಂತ್ರದ  ಕೇಂದ್ರಬಿಂದು ‘ಮನಸ್ಸು’ ಆಗಿದೆ. ಆ ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸುತ್ತಾ, ಅನೇಕ ಅವಘಡಗಳನ್ನು ಎದುರಿಸುವ ಮೂಲಕ ಕಾಲಯಂತ್ರದ ಅನುಭವ ಮತ್ತು ಸಂಕಷ್ಟಕರ ಪರಿಸ್ಥಿತಿಗಳನ್ನು ಲೇಖಕರು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಭೌತಶಾಸ್ತ್ರಜ್ಞ ಪ್ರೊಫೆಸರ್ ನರಸಿಂಗರಾಯರ ಕಾಲಯಂತ್ರ ಎಂಬ ಕಲ್ಪನೆಯೇ ಕಾದಂಬರಿಯ ಪ್ರಮುಖ ಆಧಾರ. ಈ ಕಾಲಯಂತ್ರ ಕೇವಲ ವೈಜ್ಞಾನಿಕ ಉಪಕರಣವಷ್ಟೇ ಅಲ್ಲದೆ, ಕಥಾನಾಯಕನ ಅಂತರಂಗದ ಮನೋಯಾನಕ್ಕೆ ದಾರಿ ಮಾಡಿಕೊಡುತ್ತದೆ. ಕಾದಂಬರಿಯ ಪ್ರತಿಯೊಂದು ತಿರುವು ಓದುಗರಲ್ಲಿ ‘ಮುಂದೇನು?’ ಎಂಬ ಕುತೂಹಲವನ್ನು ಜೀವಂತವಾಗಿಡುತ್ತದೆ.               ಸುಂದರ ಮೈಮಾಟದ ಲಲನೆಯರನ್ನು ಕಂಡಾಗ ಚಂಚಲಗೊಳ್ಳುವ ಮನಸ್ಸು, ಪ್ರೀತಿಸಿದ ಹುಡುಗಿ ‘ಮಿನಿ’ಯ ನೆನಪು ಬಂದಾಗ ಅವಳ ಪ್ರೀತಿಗೆ ತನ್ನನ್ನು ತಾನೇ ನಿಯಂತ್ರಿಸುವ ಕಥಾನಾಯಕನ ಯತ್ನ, ಮಾನವ ಮನಸ್ಸಿನ ಸಹಜ ದ್ವಂದ್ವವನ್ನು ಸುಂದರವಾಗಿ ಅನಾವರಣಗೊಳಿಸುತ್ತದೆ. ಕಾಮಕ್ಕಿಂತ ಪ್ರೀತಿಗೆ ಹೆಚ್ಚಿನ ಗೌರವ ನೀಡುವ ಕಥಾನಾಯಕನ ಶೀಲ, ಕೃತಿಗೆ ನೈತಿಕ ಘನತೆಯನ್ನು ನೀಡುತ್ತದೆ.ಕಾದಂಬರಿಯಲ್ಲಿನ ಪ್ರತಿಯೊಂದು ಘಟನೆಯಲ್ಲಿ ಹೆಣ್ಣಿನ ಭಾವೋದ್ರೇಕದ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಹಳ್ಳಿಯಿಂದ ಪಟ್ಟಣದವರೆಗೆ, ಅಲ್ಲಿಂದ ಪುರಾಣದ ಸುರ -ಅಸುರರ ಆಸ್ಥಾನಗಳವರೆಗೆ ಕಥೆ ಸಾಗಿದರೂ, ಎಲ್ಲೆಡೆಯೂ ಹೆಣ್ಣಿನ ಮನಸ್ಸಿನ ಹರೆಯದ ಭಾವನೆಗಳು ಹಾಗು ಅವಳ ಮನಸ್ಸಿನ ಹಳಹಳಿಕೆ, ಕಾಮ ದಹನಕೆ ಸೂಕ್ತ ವ್ಯಕ್ತಿಯ ತಡಕಾಟದಲ್ಲಿ  ಸಾಗುತ್ತಾ  ಕಥಾ ನಾಯಕನೇ ಬಲಿಪಶುವಾಗುವುದು. ರೋಮಾಂಚನ ನೀಡುವ ಈ ರಸಮಯ ಕ್ಷಣಗಳು  ಖುಷಿ ಕೊಟ್ಟರು, ಕ್ಷಣದಲ್ಲಿ ಜಾಗೃತನಾಗುತ್ತ ಮೂಲ ಸ್ಥಿತಿಗೆ ಮರಳುವುದು  ಹೀಗೆಯೇ ಕಾದಂಬರಿಯ  ಉದ್ದಕ್ಕೂ  ನಾಯಕನ ಸೂತ್ರದಾರಿಕೆಯಲ್ಲಿ ಕಥೆ ಸಾಗುತ್ತದೆ.  ಈ ಕೃತಿ ಕೇವಲ ಕಾಲಯಾನ ಕಥೆಯಾಗದೆ, ಮಾನವ ಮನಸ್ಸಿನ ಅಧ್ಯಯನವಾಗುತ್ತದೆ.       ಕಾಲತಂತ್ರವೆಲ್ಲಾ ಕಲ್ಪನೆಯೇ ಎಂಬ ಅರಿವು ಇದ್ದರೂ, ಕಥಾನಾಯಕನಲ್ಲಿ ಮೂಡುವ ತೃಪ್ತಭಾವ ಗಮನಾರ್ಹ. ಭ್ರಮಾಲೋಕದಲ್ಲಿ ವಿಹರಿಸಿದ ಹನ್ನೆರಡು ತಾಸುಗಳು ಹಲವಾರು ದಿನಗಳಂತೆ ಅನುಭವವಾಗುವುದು ಕಾಲದ ಅನಿಶ್ಚಿತತೆಯ ಭಾವವನ್ನು ಮೂಡಿಸುತ್ತದೆ. ಕಾಲ್ಪನಿಕ ವೈಜ್ಞಾನಿಕ ತಂತ್ರ ವಾಸ್ತವ ಬದುಕಿನಲ್ಲಿ ಅಸ್ತಿತ್ವಕ್ಕೆ ಬಂದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗರ ಮುಂದಿಡುತ್ತದೆ. ಹಾಗು ಓದುಗನಿಗೂ ಆ ಕ್ಷಣಗಳು ರೋಮಾಂಚನಗೊಳಿಸುತ್ತದೆ.ಈ ಕಿರು ಕಾದಂಬರಿ ಸರಳವಾದರೂ ಅರ್ಥಪೂರ್ಣವಾದ ಭಾಷಾಶೈಲಿ, ಕಾದಂಬರಿಯನ್ನು ಒಂದೇ ಉಸಿರಲ್ಲಿ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.ಒಟ್ಟಿನಲ್ಲಿ “ಎಂಥಾ ಮೋಜಿನ ಕುದುರಿ!”  ಕಿರು ಕಾದಂಬರಿಯು ಭ್ರಮಾ ಲೋಕಕ್ಕೆ  ಸೆಳೆದೊಯ್ದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಾ ಮನ   ಮುದಗೊಳಿಸುವ ಕೃತಿ. ಚಂಚಲ ಮನಸ್ಸನ್ನು ಹತ್ತೋಟಿ ಇಡುವುದರಲ್ಲಿಯು  ಕಥಾನಾಯಕ ಗೆದ್ದಿದ್ದಾನೆ.  ಕಾಲ್ಪನಿಕವಾದ ಈ ಕಾದಂಬರಿ  ಓದುಗರ ಮನಸ್ಸಿನಲ್ಲಿ ಬೆಚ್ಚನೆಯ ತಾಪವನ್ನುಂಟುಮಾಡಿ,   ನಂತರ ತಂಪಾಗಿ ನೆಲೆಸುವ ಕೃತಿ.  ತಮಗೆ ಅಭಿನಂದನೆಗಳು ಸರ್ ವಿಮಲಾರುಣ ಪಡ್ಡoಬೈಲು

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು Read Post »

ಪುಸ್ತಕ ಸಂಗಾತಿ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ

ಪುಸ್ತಕ ಸಂಗಾತಿ ಗಣೇಶ್ ವಂದಗದ್ದೆ ವಾಣಿ ಭಂಡಾರಿ “ಮಲ್ನಾಡು ಕವಳ”       ಮಲೆನಾಡಿನ ಮೂಲೆಯಾದ ರಿಪ್ಪನ್ ಪೇಟೆಯಲ್ಲಿ ಜನಿಸಿದ ಶ್ರೀಮತಿ ವಾಣಿ ಭಂಡಾರಿ ಅವರು ಬಹುಮುಖ ಪ್ರತಿಭೆಯ ಸಾಹಿತಿ. ತಮ್ಮ ಶಾಲಾ ದಿನಗಳಿಂದಲೂ ಸಾಹಿತ್ಯ,ಸಂಸ್ಕೃತಿ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತಿದ್ದ ಶ್ರೀಮತಿ ವಾಣಿಯವರು  ಕನ್ನಡದ ಹೆಸರಾಂತ ಲೇಖಕಿಯಾಗಿ ಹೊರಬಂದಿರುವುದಲ್ಲಿ ಆಶ್ಚರ್ಯವೇನಿಲ್ಲ. ಈಗಾಗಲೇ ಇವರ ಲೇಖನಿಯಿಂದ ಕಥೆ, ಕವನ,ಚುಟುಕು, ಗಜಲ್ ,ಭಾವಗೀತೆ ಮುಂತಾದ ಅನೇಕ ಪ್ರಕಾರದ  ಕೃತಿಗಳು ಹೊರಬಂದಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ. ಈಗ ಹೊರ ತರುತ್ತಿರುವ “ಮಲೆನಾಡು ಕವಳ” ಪ್ರಬಂಧ ಸಂಕಲನದಲ್ಲಿ ತಾವು ಕಂಡು, ಕೇಳಿದ ಅನುಭವಿಸಿದ ಘಟನೆಗಳನ್ನು ರಸವತ್ತಾಗಿ ಹೊರ ಚೆಲ್ಲುತ್ತಾ ಹೋಗಿದ್ದಾರೆ.      . ” ಮಲೆನಾಡು ಕವಳ” ಕೃತಿಯನ್ನು ಈಗ ತಾನೇ ಓದಿ ಮುಗಿಸಿದೆ. ಈ ಕೃತಿಯಲ್ಲಿ ಮಲೆನಾಡಿನ ಕವಳದ ತರ ತರದ ಸವಿಯನ್ನು  ತರತರವಾಗಿ ಚಿತ್ರಿಸುತ್ತಾ ಹೋಗಿದ್ದಾರೆ.  ಅವರಂತೆ ನಾನು ಕೂಡ ಮಲೆನಾಡಿನಿಂದಲೇ ಬಂದಿರುವುದರಿಂದ ನನಗೂ ಕೂಡ ಆ ಕವಳದ ಸವಿ, ಏನು ಎಂಬುದು ಚೆನ್ನಾಗಿ ಅನುಭವ ವಾಗುತ್ತಿದೆ. ಈ ದಿಸೆಯಲ್ಲಿ ಡಾ ಶಂಕರ್ ಶಾಸ್ತ್ರಿ ಎನ್ನುವವರು ಒಂದು “ಕವಳ” ಎಂಬ ಕವನ ಸಂಕಲನವನ್ನು ಹೊರತಂದಿರುತ್ತಾರೆ. ಎರಡು ಕೃತಿಗಳ ಹೂರಣವೂ ಒಂದೇ ತರನಾಗಿದ್ದರು ಡಾ. ಶಾಸ್ತ್ರೀಯವರ ಅನುಭವ ಪದ್ಯ ರೂಪದಲ್ಲಿದ್ದರೆ ಈ ಲೇಖಕಿಯ ಅನುಭವ ಗದ್ಯ ರೂಪದಲ್ಲಿದೆ.     ಸರಿಸುಮಾರು 25 ವಿಷಯಗಳು ಆರಿಸಿಕೊಂಡಿರುವ ಈ ಸಂಕಲನದಲ್ಲಿ ಎಲ್ಲಾ ಘಟನೆಗಳು ಚಿರಪರಿಚಿತವಾದದ್ದೆ. ಎಲ್ಲೂ ಬೇಸರವಾಗುವಂತೆ  ಲೇಖನಗಳನ್ನು ಎಳೆದುಕೊಂಡು ಹೋಗಿಲ್ಲ. ಹೇಳಬೇಕಾದ ವಿಷಯಗಳನ್ನು ಚಿಕ್ಕದಾಗಿ ಚೊಕ್ಕದಾಗಿ ನಿರೂಪಿಸುತ್ತಾ ಹೋಗಿರುತ್ತಾರೆ. ಹಾಗಾಗಿ ಕೃತಿ ಮುಂದುವರಿದಂತೆ ಓದುಗರ ಆಸಕ್ತಿ ಹೆಚ್ಚುತ್ತಾ ಹೋಗುತ್ತದೆ.  ಒಂದೆರಡು ಘಟನೆಗಳನ್ನು ಇಲ್ಲಿ ಮೆಲುಕು ಹಾಕಲು ಪ್ರಯತ್ನಿಸುತ್ತೇನೆ.        ಸಂತೃಪ್ತ ದಾಂಪತ್ಯಕ್ಕೆ ತಾಳ್ಮೆ, ಶ್ರಮ,ತ್ಯಾಗ, ಸಮಾಧಾನ ಮುಂತಾದವು ತುಂಬಾ ಅವಶ್ಯಕ ಎಂಬ  ಸೂತ್ರಗಳನ್ನು ಒಪ್ಪುತ್ತಾ ಅದಕ್ಕೆ ನನ್ನ ತಂದೆ ತಾಯಿಯಂದಿರೆ ಉದಾಹರಣೆ ಎನ್ನುತ್ತಾರೆ. ತಮ್ಮ ಅಪ್ಪ ಅಮ್ಮ ಅದೆಷ್ಟು ಅನ್ಯೋನ್ಯವಾಗಿದ್ದರು ಎಂದರೆ ಅಪ್ಪ ಹೋದ ಮೂರೇ ತಿಂಗಳಿಗೆ ಅಮ್ಮನೂ ತನ್ನ ಬದುಕಿನ ಯಾತ್ರೆಯನ್ನು ಮುಗಿಸಿಬಿಟ್ಟಳು ಎನ್ನುತ್ತಾರೆ. ಬಕೆಟ್ ಹಿಡಿಯುವುದರ ಬಗ್ಗೆ ಬರೆಯುತ್ತಾ ಅದು ಜೀವನದ ಒಂದು ಭಾಗವೋ ಎಂಬಂತೆ  ಸ್ಪಷ್ಟವಾಗಿ  ಹೇಳುತ್ತಾರೆ. ತಾವು ಸೈಕಲ್ ಕಲಿತ ಅನುಭವವನ್ನು  ಹಂಚಿಕೊಳ್ಳುತ್ತಾ ಅದೆಷ್ಟು ತಾನು ಅದರೊಂದಿಗೆ ಹೊಂದಿಕೊಂಡಿದ್ದೆ ಎಂಬುದನ್ನು ಹೇಳುತ್ತಾ ನಿರ್ಜೀವ ವಸ್ತುಗಳೇ ಆದರೂ ಅವು ಹೇಗೆ ನಮ್ಮೊಂದಿಗೆ ಸಜೀವ ವಸ್ತುಗಳಂತೆ ಹೊಂದಿಕೊಳ್ಳುತ್ತವೆ ಎಂಬುದನ್ನು ಜೀವಂತವಾಗಿಯೇ ಚಿತ್ರಿಸುತ್ತಾರೆ. ಕೆಲವು ವಸ್ತುಗಳನ್ನು ನಾವು ತುಂಬಾ ಹಚ್ಚಿಕೊಂಡರೆ ಅವು ಜೀವ ಇರುವ ವಸ್ತುಗಳಂತೆ ನಮಗೆ ಕಾಣಿಸುತ್ತದೆ ಅಷ್ಟೇ ಅಲ್ಲ ಅವು ನಮ್ಮ ಜೀವನದ ಒಂದು ಭಾಗವೇ ಆಗಿಬಿಡುತ್ತವೆ ಎನ್ನುತ್ತಾರೆ.        “ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ”ಎಂಬ ಅಭಿಪ್ರಾಯವನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತಾ ಮಾನವ ಹೆಣ್ಣಿಗೆ ಎರಡನೇ ಸ್ಥಾನ ಕೊಟ್ಟು, ದೂರ ತಳ್ಳುತ್ತಿರುವುದು ಖಂಡಿತ ಸಾಧುವಲ್ಲ ಎಂದು ವಾದಿಸುತ್ತಾರೆ. ಇವರ ಬರಹಗಳೇ ಹಾಗೆ, ಹೆಚ್ಚಾಗಿ ಹೆಣ್ಣಿನ ಪರವಾಗಿಯೇ ವಾದಿಸುತ್ತಾ  ಹೋಗುತ್ತಾರೆ.     ಒಟ್ಟಿನಲ್ಲಿ ಅವರು ವಸ್ತುಗಳಿಗಾಗಿ ಪರದಾಡಲೇ ಇಲ್ಲ ಕೈಗೆ ಸಿಕ್ಕಿದ ವಸ್ತುಗಳನ್ನು ಆರಿಸಿಕೊಂಡು ಅದಕ್ಕೆ ಉಡುಗೆ ತೊಡುಗೆಗಳನ್ನು ತೊಡಿಸಿ ತಮ್ಮ ಹಾಸ್ಯಲೇಪನವನ್ನು ಸವರುತ್ತಾ ನಮ್ಮ ಮುಂದೆ ನೈಜ ಘಟನೆಗಳೋ ಎಂಬಂತೆ ತೆರೆದಿಡುತ್ತಾ ಹೋಗುತ್ತಾರೆ. ಅದು ಗೊರಕೆ ಹೊಡೆಯುವವರ ಕಾಟ, ಬೀದಿ ನಾಯಿಯ ಪುರಾಣ ಮುಯಿಗೆ ಮುಯಿ ತೋರಿಸುವ ಛಲ, ಪಂಕ್ತಿ ಊಟದಲ್ಲಿ ಆಗುವ ತೊಂದರೆ,  ಕಟ್ಟೆಯ ಬುಡದಲ್ಲಿ ಪಾರತಕ್ಕನಂತವರ  ಹರಟೆ ಪುರಾಣ ಮುಂತಾದವುಗಳನ್ನು ಕಾಣಬಹುದು. ಒಟ್ಟಿನಲ್ಲಿ ಜೀವನದಲ್ಲಿ ನಾವು ಅನುಭವಿಸಿದ, ಎದುರಿಸಿದ ಅನೇಕ ಘಟನೆಗಳನ್ನು ಅವರು ಮೆಲುಕು ಹಾಕುವಂತೆ ಮಾಡಿದ್ದಾರೆ. ಹಾಗಾಗಿ ಈ ಲೇಖನಗಳು ನಮ್ಮನ್ನು ಜೀವಂತವಾಗಿ ಇಡುತ್ತವೆ ಎಂಬ ಮಾತುಗಳು ಖಂಡಿತ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇಂತಹ ಕೃತಿಗಳು ಇವರಿಂದ ಇನ್ನಷ್ಟು ಮಗದಷ್ಟು ಹೊರಬರಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ. ಗಣೇಶ್ ವಂದಗದ್ದೆ

ವಾಣಿ ಭಂಡಾರಿ ಅವರ ಕೃತಿ “ಮಲ್ನಾಡು ಕವಳ” ಅವಲೋಕನ ಗಣೇಶ್ ವಂದಗದ್ದೆ Read Post »

ಪುಸ್ತಕ ಸಂಗಾತಿ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ

ಪುಸ್ತಕ ಸಂಗಾತಿ ಪ್ರೊ ಶಕುಂತಲಾ. ಸಿಂಧೂರ ಗದಗ “ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ,   ‘ಮಾಹಿತಿ ಹಕ್ಕು ಅಧಿನಿಯಮ-2005 ಒಂದು ವಿಶ್ಲೇಷಣೆ ‘ (The Right to Information Act-2005 An Analysis) ಇದು ಕಾನೂನಿನ ಅರಿವು ಮೂಡಿಸುವ ಗ್ರಂಥಪುಷ್ಪ. ಈ ಕ್ರೃತಿಯು ಸಾರ್ವಜನಿಕ ನಾಗರಿಕರ ಮನಪರಿವರ್ತಿಸಿ, ಪ್ರಚಲಿತ ಕಾಯ್ದೆ ಕಾನೂನುಗಳ ಬಗ್ಗೆ ತಿಳುವಳಿಕೆ ಸ್ಪುರಿಸಿ ಜಾಗ್ರತರನ್ನಾಗಿಸುವಂತಿದೆ. ಮನುಕುಲದವರಲ್ಲಿ ಜಾತ್ಯಾತೀತ ವರ್ಗ-ವರ್ಣರಹಿತ ಭಾವೖಕ್ಯತಾ ಬಾಂಧವ್ಯ ವರ್ಧಿಸುವ, ಭ್ರಷ್ಟಾಚಾರ ಮುಕ್ತವಾದ ದಟ್ಟ ಪರಿಸರ ಹುಟ್ಟುಹಾಕುವ ಸದಾಶಯವುಳ್ಳ ವಸ್ತುವಿಷಯವನ್ನು ತುಂಬಾ ಪರಿಣಾಮಕಾರಿಯಾಗಿ ಲೇಖಕರು ವಿಶ್ಲೇಷಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮವನ್ನು ಕಾನೂನುಬದ್ಧವಾಗಿ, ಪಾರದರ್ಶಕವಾಗಿ ಪರಿಪಾಲಿಸುವ, ಧ್ಯೇಯೋದ್ದೇಶಗಳಿಂದೊಡಗೂಡಿರುವ ಕೖದೀವಿಗೆಯಂತಿದೆ.                     ವಿಶ್ರಾಂತ ಮಾನ್ಯ ಮಾಹಿತಿ ಆಯುಕ್ತರು, ಕರ್ನಾಟಕ ಮಾಹಿತಿ ಆಯೋಗದ ಡಾ.ಶೇಖರ.ಡಿ.ಸಜ್ಜನರ ಅವರು ಈ ಕ್ರೃತಿರತ್ನದ ಕರ್ತೃ.ಲೇಖಕರು  ಗದಗನಲ್ಲಿ 40 ವರ್ಷಗಳಿಂದ ಖ್ಯಾತ ವೖದ್ಯಕೀಯ ವ್ರತ್ತಿ ಪ್ರೀಯರಾಗಿದ್ದರೂ ಕೂಡ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡವರು.  ಕರ್ನಾಟಕ ಮಾಹಿತಿ ಆಯುಕ್ತರಾಗಿಯಲ್ಲದೇ ಪ್ರಭಾರಿ ಮುಖ್ಯ ಮಾಹಿತಿ ಆಯುಕ್ತರಾಗಿಯೂ ನೇಮಕಗೊಂಡು ಸೇವೆ ಸಲ್ಲಿಸಿದ್ದು ಅಭಿನಂದನಾರ್ಹವಾದುದಲ್ಲದೆ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ”ಎಂಬ ಶರಣರ ವಾಣಿಗೆ ಸಾಕ್ಷಿಯಂತಿದೆ.            ಮೂಲತಃ ವೖದ್ಯರಾದ ಶ್ರೀಯುತರಿಗೆ ಕಾನೂನು ಪರಿಭಾಷೆಯ ಪರಿಚಯ ಅಷ್ಟಾಗಿ ಇರದಿದ್ದರೂ ಕೂಡಾ ವಕೀಲರು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳವರಿಗಿಂತ ಮಿಗಿಲಾಗಿ ಆಸಕ್ತರಾಗಿರುವ ಡಾ.ಶೇಖರವರು ಸತತ ಪರಿಶ್ರಮದಿಂದ ಅಧ್ಯಯನಶೀಲರಾಗಿ ಈ ಕಾನೂನನ್ನು ಸುಲಿದ ಬಾಳೆಯಹಣ್ಣಿನಂದದಿ ಆರ್ಥೖಸಿಕೊಂಡು ಆತ್ಯುತ್ತಮವೆನ್ನಬಹುದಾದ ಅನೇಕ ಮಹತ್ವದ ತೀರ್ಪುಗಳನ್ನಿತ್ತಲ್ಲದೇ ಈ ಕಾನೂನು ಹೆಬ್ಬೊತ್ತಿಗೆಯನ್ನು ಪ್ರಕಟಿಸಿ ಸರ್ವರ ಕೖಗೆಟಕುವಂತೆ ಪರಿಶ್ರಮಿಸಿರುವದು ಕಾನೂನು ಪರಿಪಾಲಿಸುವಂತಹ ಜ್ಞಾನತ್ರಷೆಯುಳ್ಳವರಿಗೆ ಅನುಕರಣೀಯವಾದುದು.ಅವರ ಅನುಭವ ಅಧ್ಯಯನದ ಮೂಸೆಯಲ್ಲಿ ಸಮರ್ಪಕವಾಗಿ ಸ್ರಜಿಸಲ್ಪಟ್ಟಿರುವ ಉತ್ತಮ ದಾರಿದೀಪದಂತಹ ಕ್ರೃತಿಯಿದಾಗಿದೆಯೆಂಬುದರಲ್ಲಿ ಉತ್ಪ್ರೆಕ್ಷೆಯೇನಿಲ್ಲ.                         ” ಈ ಕ್ರೃತಿಯಲ್ಲಿ ಮಾಹಿತಿ ಎಂದರೇನು ಎನ್ನುವುದರಿಂದ ಪ್ರಾರಂಭವಾಗಿ ಈ ಕಾನೂನಿನ ವ್ಯಾಪ್ತಿ ನಿಯಮಗಳು ನಾಗರಿಕರು ಮಾಹಿತಿ ಪಡೆಯುವ ವಿಧಾನ, ಅಧಿಕಾರಿಗಳ ಕರ್ತವ್ಯಗಳು, ವಿನಾಯಿತಿಯ ಸಂದರ್ಭಗಳು, ಕಡತಗಳ ಸಂರಕ್ಷಣೆ, ಇವುಗಳ ಸಮರ್ಪಕ ವಿವರಣೆಯನ್ನು ಕೊಟ್ಟಿರುವುದಲ್ಲದೆ ರಾಜ್ಯ ಮಾಹಿತಿ ಆಯೋಗ ಕೇಂದ್ರ, ಮಾಹಿತಿ ಆಯೋಗ ಹಾಗೂ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳ ಸಾರಾಂಶಗಳನ್ನು ಉಲ್ಲೇಖಿಸಿದ್ದಾರೆ ಅಲ್ಲದೆ ಸಂಪೂರ್ಣ ಕಾನೂನನ್ನು ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಬರೆದಿರುವರಲ್ಲದೆ  ಟಿಪ್ಪಣಿಗಳನ್ನು ಬರೆಯುವಾಗ ಅವಶ್ಯವಿದ್ದಲ್ಲಿ ಕನ್ನಡವನ್ನು ಬಳಸಿರುವುದು ಇಂಗ್ಲಿಷ್ ಭಾಷೆಯ ಜ್ಞಾನ ಹೆಚ್ಚಿಗೆ ಇಲ್ಲದವರಿಗೆ ಉಪಯುಕ್ತವಾಗಿದೆ. ಹೀಗಾಗಿ ಇದು ಜನಸಾಮಾನ್ಯರ ಅಳವಿಗೆ ನಿಲುಕುವ ಜನಸ್ನೇಹಿ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು” ಎಂಬುದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ.ಅರಳಿ ನಾಗರಾಜ ಅವರ ಅಭಿಪ್ರಾಯವಾಗಿರುತ್ತದೆ.           ರಾಜ್ಯ ಮಾಹಿತಿ ಹಕ್ಕು ಕಾಯ್ದೆ ಕುರಿತು ಬೆಳಗಾಂವಿಯಲ್ಲಿ ಅಧಿಕಾರಿಗಳಿಗೆ ಲೇಖಕರುತರಬೇತುದಾರರಾಗಿದ್ದರು.ಈ ಸಂದರ್ಭದಲ್ಲಿ ಡಾ.ಶೇಖರ ಸಜ್ಜನರವರು ನೀಡುತ್ತಲಿರುವ ತರಬೇತಿಯಲ್ಲಿ ಪಾಲ್ಗೊಂಡ ಅಧಿಕಾರಿಯೊಬ್ಬರು ತರಬೇತಿಯ ಪ್ರೇರಣೆಯಿಂದ ಪ್ರಭಾವಿತರಾದುದರ ಫಲಶ್ರತಿಯಾಗಿ,ತಾವೇ ಈ ಕಾಯ್ದೆಗಳ ಮಾಹಿತಿ ಕುರಿತು ಸವಿಸ್ತಾರವಾಗಿ ಗ್ರಂಥ ರಚಿಸಿದರೆ ಸಾರ್ವಜನಿಕರಿಗಷ್ಟೇ ಅಲ್ಲದೇ ಕಾನೂನು ವಿದ್ಯಾರ್ಥಿಗಳಿಗೆ,ನ್ಯಾಯವಾದಿಗಳಿಗೆ,ಆಡಳಿತಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ,ಎಲ್ಲ ವರ್ಗಗಳ ಅಧ್ಯಯನಾಸಕ್ತರಿಗೆ ಅತ್ಯುಪಯುಕ್ತವಾದ ಮಾರ್ಗದರ್ಶಕ ಪುಸ್ತಕವಾಗುತ್ತದೆ ಎಂದು ತಮ್ಮಪ್ರಶಂಸಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದುದರಿಂದ, ಈ ಅಮೂಲ್ಯ ಸತ್ಪ್ರೇರಣೆಯ ನುಡಿಗಡಣದಂತೆ,ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಹೊತ್ತಿಗೆಯು ಈಗ ನಾಲ್ಕನೆಯ ಆವ್ರೃತ್ತಿಗಳನ್ನು ಯಶಸ್ವಿಯಾಗಿ ಮುದ್ರಿಸಿ ಲೋಕಾರ್ಪಣೆಗೊಳಿಸಿರುವ ಸಂತ್ರೃಪ್ತಿ ನನಗಿದೆ ಎಂಬುದು ಈ ಕ್ರೃತಿಯ ಲೇಖಕರ ಅಭಿಪ್ರಾಯವಾಗಿರುತ್ತದೆ.                 ನಮ್ಮ ದೇಶ ಸ್ವಾತಂತ್ರ್ಯ ನಂತರ ಅಂಗೀಕರಿಸಿದ ಸಂವಿಧಾನದನ್ವಯ ನಮ್ಮಲ್ಲಿರುವುದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ.ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಹಳ್ಳಿಯಿಂದ ದಿಲ್ಲಿಯವರೆಗೆ ಆಡಳಿತದ ಸೂತ್ರವನ್ನು ಹಿಡಿದರು. ಆಡಳಿತದ ಸಂಬಂಧ ಜನಪ್ರತಿನಿಧಿಗಳು, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳು, ಹೊರಡಿಸುವ ಆದೇಶಗಳು, ಜನಸಾಮಾನ್ಯರ ಮೇಲೆ ವಿವಿಧ ರೀತಿಯ ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಆಡಳಿತದಲ್ಲಿ ಪಾರದರ್ಶಕತೆ ಉತ್ತರದಾಯಿತ್ವ ಹಾಗೂ ನಾಗರೀಕರ ಪಾಲ್ಗೊಳ್ಳುವಿಕೆಯನ್ನು ತರುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟುವ ಸದುದ್ದೇಶದಿಂದ ನಮ್ಮ ಕೇಂದ್ರ ಸರಕಾರವು  ಆತ್ಯುಪಯುಕ್ತವಾದ, ಬ್ರಹ್ಮಾಸ್ತ್ರ ಸ್ವರೂಪವಾದ ಶಾಸನ ” ಮಾಹಿತಿ ಹಕ್ಕು ಅಧಿನಿಯಮ 2005″ ನ್ನು ಅಕ್ಟೋಬರ್ 25 ರಂದು ಜಾರಿಗೆ ತಂದಿತು. ಜಾರಿಗೊಂಡ ಎರಡು ದಶಕಗಳ ಅವಧಿಯಲ್ಲಿ ಈ ಕಾನೂನಿನ ಸದುಪಯೋಗಪಡಿಸಿಕೊಂಡ ನಾಗರಿಕರು ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ತಂದು ಭ್ರಷ್ಟ ಆಡಳಿತಗಾರರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಿದ್ದು ಸರ್ವ ವಿಧಿತ ಸಂಗತಿ.                  ನಮ್ಮ ರಾಜ್ಯದ ಹಾಗೂ ದೇಶದ ನಾಗರಿಕರಿಗೆ ಈ ಕಾಯ್ದೆಯ ಉಪಯೋಗ ಪಡೆದುಕೊಳ್ಳುವವರಿಗೆ ಮತ್ತು ಈ ಕಾಯ್ದೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಾರ್ವಜನಿಕ ಅಧಿಕಾರಿಗಳಿಗೆ ಈ ಕಾಯ್ದೆಯ ಪರಿಚಯ ಮಾಡಿಕೊಳ್ಳುವುದು ಸುಲಭಸಾಧ್ಯವಾಗಿರುವ ನಿಟ್ಟಿನಲ್ಲಿ ಅತ್ಯುಪಯುಕ್ತ ಮಾಹಿತಿ ಗ್ರಂಥವಿದಾಗೀದೆವೆಂಬುದರಲ್ಲಿ ಎರಡು ಮಾತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರಿಗೆ ರಾಮಬಾಣ ಬ್ರಹ್ಮಾಸ್ತ್ರಗಳಂತೆ ಉಪಯೋಗಿಸಬಹುದಾದ ಪ್ರಸ್ತುತ ಕಾಯ್ದೆಯ ಸಂಪೂರ್ಣ ಪರಿಚಯವನ್ನು ವಿಶ್ಲೇಷಣಾತ್ಮಕವಾಗಿ ಓದುಗರಿಗೆ ಮಾಡಿಕೊಡುವಲ್ಲಿ ಈ ಕೃತಿಯ ಕರ್ತೃ ಡಾ. ಶೇಖರ. ಡಿ.ಸಜ್ಜನರವರು ಯಶಸ್ವಿಯಾಗಿದ್ದಾರೆ ಎಂಬುದು ಮುನ್ನುಡಿ ಬರಹಗಾರರಾದ ನ್ಯಾಯಮೂರ್ತಿ ಶ್ರೀ. ಅರಳಿ ನಾಗರಾಜರ ಅಭಿಪ್ರಾಯ ಈ ಕ್ರೃತಿಗೆ ಕಳಶಪ್ರಾಯದಂತಾಗಿದೆ. ಕಾನೂನಿನ ಅರಿವು ಮೂಡಿಸಲು, ಅರ್ಥೖಸಲು ಕಾನೂನು ಪದವೀಧರರೇ ಆಗಿರಬೇಕೆಂದಿಲ್ಲಾ. ಆ ವ್ಯಕ್ತಿಯಲ್ಲಿ ವಿಷಯದ ಬಗ್ಗೆ ಜ್ಞಾನತ್ರೃಷೆ ಅದನ್ನು ಅರ್ಥೖಸುವ   ಉತ್ಸುಕತೆ,ಬದ್ಧತೆ ಮತ್ತು ಸೇವಾಭಾವನೆಯ ವ್ಯಕ್ತಿತ್ವ ಇದ್ದರೆ ಸಾಕು.ತಮ್ಮಲ್ಲಿರುವ ಸಂಪೂರ್ಣ ಜ್ಞಾನದಾಹವನ್ನು ಸಾರ್ವಜನಿಕರಿಗೆ ತಿಳಿಯಪಡಿಸಿದರೆ, ಅಂತರಾಳದಲ್ಲಿ ಹುದುಗಿರುವಂತಹ ಆ ಅಪೂರ್ವ ಜ್ಞಾನವು ಬಾವಿಯೊಳಗಿರುವ ನೀರಿನ ಸೆಲೆಯಂತೆ ಧಾರಾಕಾರವಾಗಿ ಸುರಿಯುತ್ತಾ ಇಮ್ಮಡಿ ಮುಮ್ಮಡಿಗೊಳ್ಳುತ್ತಲಿರುತ್ತದೆಂಬುದನ್ನರಿತ  ಡಾ.ಸಜ್ಜನರವರು 2011 ರಿಂದ ಐದು ವರ್ಷಗಳವರೆಗೆ ಆಯುಕ್ತರಾಗಿ ರಾಜ್ಯದ ಜನರ ಸೇವೆಯನ್ನು ಮಾಡಿದ್ದುದರ ಪ್ರತೀಕವಾಗಿ ಒಟ್ಟು ಆರು ಅಧ್ಯಾಯಗಳುಳ್ಳ ಈ ಗ್ರಂಥ ಸಾರ್ವಜನಿಕರಿಗೆ ಕೖಗೆಟಕುವಂತಾಗಿರುವದು ಸ್ತುತ್ಯಾರ್ಹವಾದುದು ಎಂಬುದಾಗಿ ಇನ್ನೋರ್ವ ನ್ಯಾಯಮೂರ್ತಿಗಳಾದ ಶ್ರೀ.ಜಿ.ಎಸ್.ಪಲ್ಲೇದ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕ್ರೃತಿಯ ಮೂಲಕ ತಮ್ಮ ಅಪಾರ ಅನುಭವವನ್ನು ಮಾಹಿತಿ ಹಕ್ಕು ಕಾಯ್ದೆ 2005 ರ ಒಂದು ವಿಶ್ಲೇಷಣೆ ಗ್ರಂಥದ ನಾಲ್ಕು ಆವ್ರೃತ್ತಿಗಳನ್ನು ಪ್ರಕಟಿಸಿ ಸಾರ್ವಜನಿಕ ರಂಗದ ಪರವಾಗಿರುವ ತಮ್ಮ ಅನುಪಮ ಬದ್ಧತೆಯನ್ನು ಆಚರಣೆಗೊಳಿಸುವ ಮುಖೇನ ಕ್ರೃತಿಯ ರೂಪದಲ್ಲಿ  ಪ್ರದರ್ಶಿಸಿರುವದು ದಾಖಲಾರ್ಹವೇ ಸರಿ.                 ಸರ್ಕಾರಿ ವ್ಯವಸ್ಥೆಯಲ್ಲಿನ ಆಡಳಿತ ಹಾಗೂ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು ಕಾನೂನಿನ ಅರಿವುಳ್ಳವರಾಗಬೇಕಾಗಿದೆ.  ಪಾರದರ್ಶಕತೆಯಿಂದ ಕೂಡಿರುವದರ ಮಾಹಿತಿ ಬಗ್ಗೆ ತಿಳುವಳಿಕೆ ಅಧಿಕವಾಗಿಸಿಕೊಳ್ಳುವ ಸದುದ್ದೇಶದಿಂದಾಗಿಯೇ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.ಇದಕ್ಕೂ ಮೊದಲು ಬ್ರಿಟೀಷರ ಕಾಲದಲ್ಲಿ ಆಫೀಸಿಯಲ್ ಸಿಕ್ರೇಟ್ Act 1923 ರಲ್ಲಿ ಜಾರಿಯಲ್ಲಿತ್ತು.ಇದು ಆಡಳಿತ ಮತ್ತು ಅಧಿಕಾರ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು.ದೇಶದಲ್ಲಿ ಮಾಹಿತಿ ಹಕ್ಕು ಜಾರಿಯಾದಾಗಿನಿಂದ ದೇಶದ ಅನೇಕ ಹಗರಣಗಳು ಹೊರಗೆ ಬರುವಂತಾಯಿತು.ಇದರ ಪರಿಣಾಮವಾಗಿ ಸರಕಾರ ಬದಲಾವಣೆಯಾದವು.ದೆಹಲಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗ ಮೊದಲ ಬಾರಿಗೆ ಅರ್ಜಿ ಹಾಕಿದವರೇ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ಅರವಿಂದ ಕ್ರೇಜಿವಾಲ ಅವರು.ಇದರ ಪರಿಣಾಮದಿಂದಾಗಿ ಕಲ್ಲಿದ್ದಲು 2 ಜಿ ಸ್ಪ್ರೆಕ್ಟ್ರಂ, ಕಾಮನ್ ವೆಲ್ತ್ ಹಗರಣಗಳು ಬಹಿರಂಗಗೊಂಡವು. ‘ಪರಿವರ್ತನೆ ಜಗದ ನಿಯಮ’ ಎಂಬ ಉಕ್ತಿಯಂತೆ ಈ ಸಣ್ಣ ಕಾಯ್ದೆ ಸರಕಾರವನ್ನೇ ಬದಲಾಯಿಸಿತು.               ಇಂದಿನ ದಿನಮಾನದಲ್ಲಿ ಕಾನೂನಿನ ಅರಿವು ಮೂಡಿಸುವದು ತುಂಬಾ ಅತ್ಯವಶ್ಯಕವಾಗಿರುತ್ತದೆ.ಮಾಹಿತಿ ಹಕ್ಕು ಕಾಯ್ದೆ 2005 ಇಲ್ಲದ ಸಂದರ್ಭದ ದೇಶವನ್ನು ನೆನಪಿಸಿಕೊಂಡರೆ ಬೇಜಾರಾಗುವದು ಸರ್ವರ  ಸಹಜಾನುಭವ.ಈ ಕಾಯ್ದೆ ಜಾರಿಯಲ್ಲಿದ್ದರೂ ಕೂಡಾ ಜಾತೀಯತೆ,ಭ್ರಷ್ಟಾಚಾರ ನಿಯಂತ್ರಣಕ್ಕೆ ಬಾರದಂತಾದುದು ಖಂಡನಾರ್ಹ.ಈ ಕಾಯ್ದೆ ಕುರಿತು ಅಪಾರ ಜನತೆಗೆ ತಿಳುವಳಿಕೆಯಿಲ್ಲದಿರುವದು ವಿಷಾದನೀಯ ಸಂಗತಿ.ಪ್ರತಿಯೊಂದು ಜಿಲ್ಲೆ ತಾಲೂಕು ಹೋಬಳಿಗಳ ಶಾಲೆ ಕಾಲೇಜ ಹಾಗೂ ಆಯಾ ಸಂಘಸಂಸ್ಥೆಗಳ ಸಂಘಟನೆಗಳಲ್ಲಿ ಆಗಾಗ ತರಬೇತಿ ಶಿಬಿರ, ಕಾರ್ಯಾಗಾರ,ಉಪನ್ಯಾಸ, ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ‘ಸರ್ವೆ ಜನಃ ಸುಖಿನೋ ಭವಂತು’ ಎಂಬ ಹೇಳಿಕೆಯಂತೆ ಸಾರ್ವಜನಿಕರಲ್ಲಿ ಸ್ನೇಹಿ ಪರಿಸರ ಹುಟ್ಟುಹಾಕುತ್ತಾ ಸರ್ವರಿಗೂ ‘ಸಮಪಾಲು ಸರ್ವರಿಗೂ ಸಮಬಾಳು’ ತತ್ವದಂತೆ ಮುಗ್ಧ ಜನತೆಯಲ್ಲಿ ಜಾಗ್ರತಿ ಬಲಪಡಿಸುತ್ತಾ, ಗಮನ ಸೆಳೆಯುವಂತಾದರೆ ಮಾತ್ರ, ನಮ್ಮ ದೇಶ ನಂಬರ್ ಒನ್ ಸ್ಥಾನ ಪಡೆಯುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.          ಪ್ರಾಮಾಣಿಕತೆಯ ಸದುದ್ದೇಶವುಳ್ಳ ಸಾರ್ವಜನಿಕ ಹಿತಾಸಕ್ತಿ ಹೊಂದಿದ ನಾಗರಿಕರು ಈ ಕಾಯ್ದೆಯನ್ನು ಸದ್ಬಳಕೆ ಮಾಡಿಕೊಂಡಲ್ಲಿ ಆಡಳಿತದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ನಿಷ್ಪಕ್ಷಪಾತತನ ಮುಂತಾದವುಗಳನ್ನು ತರುವುದರ ಮೂಲಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಹಂತಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ವ್ಯಾಪಕವಾಗಿರುವ ಅದರ ನಿರ್ಮೂಲನೆ ಸಾಧ್ಯವೇ ಇಲ್ಲ ಎನ್ನುವ ಮಟ್ಟಕ್ಕೆ ಹೋಗಿರುವ, ಭ್ರಷ್ಟಾಚಾರವನ್ನು ಸಮರ್ಪಕವಾಗಿ ನಿಯಂತ್ರಿಸುವುದು ಸಾಧ್ಯ. ನಮ್ಮ ದೇಶವು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಭ್ರಷ್ಟಾಚಾರ. ಅದೊಂದು ಮಾತ್ರ ನಿರ್ಮೂಲನಗೊಂಡರೆ ಅಥವಾ ಗಣನೀಯವಾಗಿ ನಿಯಂತ್ರಣಕ್ಕೆ ಬಂದರೆ ನಮ್ಮ ದೇಶ ವಿಶ್ವದ ಯಾವ ರಾಷ್ಟ್ರಕ್ಕೂ ಕಡಿಮೆಯಿಲ್ಲದಂತೆ ಸರ್ವತೋಮುಖ ಶ್ರೇಯೋಭಿವ್ರೃದ್ಧಿ ಸಾಧಿಸುವದರಲ್ಲಿ ಎಳ್ಳಷ್ಟೂ ಸಂದೇಹವೇ ಇಲ್ಲ.           ಮಾಹಿತಿ ಹಕ್ಕು ಅಧಿನಿಯಮ-2005 ಕ್ಕೆ 2019 ನೇ ಇಸ್ವಿಯಲ್ಲಿ ತಿದ್ದುಪಡಿ ತರಲಾಗಿದೆ.ಕಲಂ 13,16,27 ಗಳಲ್ಲಿ ಮಾತ್ರ ತಿದ್ದುಪಡಿ ಮಾಡಲಾಗಿದ್ದು,ಸದರ ತಿದ್ದುಪಡಿ-2019(24 OF 2019) ಯು ದಿ.01-08-2019 ರಂದು ಅಂಗೀಕಾರಗೊಂಡು,24-10-2019 ರಂದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ.ಜಮ್ಮು ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ಸಂವಿಧಾನದ ಅನುಚ್ಛೇದ-370 ನ್ನು, ತೆರವುಗೊಳಿಸಲಾಗಿದ್ದು (34 OF 2019 w.e.f. 31-10-2019), ಇವೆಲ್ಲವುಗಳನ್ನೂ ಈ ಆವ್ರೃತ್ತಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ದೇಶದಲ್ಲಿ 20 ವರ್ಷಗಳಿಂದ ಜಾರಿಯಲ್ಲಿದ್ದರೂ ಕೂಡಾ ಇನ್ನೂ ಸಾರ್ವಜನಿಕರಲ್ಲಿ ಹಾಗೂ ಮಾಹಿತಿ ಅಧಿಕಾರಿಗಳಲ್ಲಿ ಅನೇಕ ದ್ವಂದ್ವಗಳು ಹಾಗೂ ಕಾಯಿದೆಯ ಬಗ್ಗೆ ಸ್ಪಷ್ಟತೆಯ ಅರಿವು ಇಲ್ಲದೆ ಇರುವುದರಿಂದ ಅವಶ್ಯಕತೆಯಿರುವವರು ಡಾ.ಸಜ್ಜನ ಅವರನ್ನು ಸಂಪರ್ಕಿಸಿ ಅನೇಕ ದ್ವಂದ್ವ ಹಾಗೂ ಸಂದೇಹಗಳಿಗೆ ಮಾಹಿತಿ ಪಡೆಯುತ್ತಲಿರುವಂತೆ ಇಲ್ಲವೇ ಈ ಕ್ರೃತಿಯನ್ನು ಅಧ್ಯಯನಗೖದು ಉಪಯುಕ್ತ ಮಾಹಿತಿವುಳ್ಳವರಾಗುವಂತಾಗಲು ಈ ಹೆಬ್ಬೊತ್ತಿಗೆಯು ತುಂಬಾ ಸಹಾಯಕಾರಿಯಾಗುವದಂತೂ ಖಚಿತ.ಅನೇಕ ಕಾನೂನು ತಜ್ಞರು, ಕರ್ನಾಟಕ ಮಾಹಿತಿ ಆಯೋಗದ ಮಾಜಿ ಹಾಗೂ ಹಾಲಿ ಆಯುಕ್ತರುಗಳು ಈ ಕ್ರೃತಿಯ ಮಾಹಿತಿ ಅಧ್ಯಯನಗೖದು ಮೆಚ್ಚುಗೆ ಅಭಿವ್ಯಕ್ತಪಡಿಸಿರುವರಲ್ಲದೆ,ಕರ್ನಾಟಕದ ರಾಜ್ಯಪಾಲರಾದ ಸನ್ಮಾನ್ಯ ಶ್ರೀ.ವಜುಭಾಯಿ ವಾಲಾರವರೂ ಕೂಡಾ ವೖದ್ಯರಾದ ಡಾ. ಶೇಖರ ಸಜ್ಜನರವರು ಕಾನೂನು ಗ್ರಂಥ ರಚಿಸಿರುವದಕ್ಕೆ ಹ್ರೃತ್ಪೂರ್ವಕವಾಗಿ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಭಿಮಾನದ ಸಂಗತಿಯೇ ಸರಿ.              2005ರಲ್ಲಿ ಜಾರಿಗೊಂಡ ಈ ಮಾಹಿತಿ ಹಕ್ಕನ್ನು ಈ ವರೆಗೂ ಸಂಪೂರ್ಣವಾಗಿ ಯಾರು ಅರ್ಥೈಸಿಕೊಂಡಿಲ್ಲ.ಮಾಹಿತಿ ಕೇಳುವವರು ಮತ್ತು ಪೂರೈಸುವವರು ಇಂದಿಗೂ ಸರಿಯಾದ ಮಾರ್ಗದರ್ಶನ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೃತಿ ಅವರ ಎಲ್ಲ ಸಂದೇಹಗಳಿಗೆ ನಿವಾರಣೆ ನೀಡಬಲ್ಲ ಉಪಯುಕ್ತ ಕೃತಿಯೆನಿಸಿದೆ. ಅದರಲ್ಲಿಯೂ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯಗಳ ತೀರ್ಪುಗಳ ಉಲ್ಲೇಖ, ಕೇಂದ್ರ- ರಾಜ್ಯ ಮಾಹಿತಿ ಆಯೋಗಗಳ ತೀರ್ಪುಗಳ ಉಲ್ಲೇಖ, ಸರಕಾರದ ಸುತ್ತೋಲೆಗಳು ಇತ್ಯಾದಿ ಸಮಗ್ರ ಮಾಹಿತಿಗಳು ಇಲ್ಲಿ ಪ್ರಸ್ತಾಪಿಸಲ್ಪಟ್ಟಿವೆ. ಹೀಗಾಗಿ ಇದೊಂದು ಸಮಯೋಚಿತ, ಸಾರ್ವಜನಿಕ ಹಿತಾಸಕ್ತಿ ಹೊಂದಿದ ಉಪಯುಕ್ತ ಕ್ತೃತಿಯಾಗಿದ್ದು, ತನ್ಮೂಲಕ ಕಾಯ್ದೆ ಸದ್ಬಳಕೆಯಾಗುವದರಲ್ಲಿ ಸಂಶಯವಿಲ್ಲ ಎಂಬುದು ಘನ ಕರ್ನಾಟಕ ಉಚ್ಛ ನ್ಯಾಯಾಲಯ,ಮಾಜಿ ಅಧ್ಯಕ್ಷರು,ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಬೆಂಗಳೂರು ಮಾಜಿ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಶ್ರೀ.ಚಂದ್ರಶೇಖರಯ್ಯ (ನಿ)ಅವರ ಅಭಿಪ್ರಾಯವಾಗಿರುತ್ತದೆ.            ವೖದ್ಯಕೀಯ ಕ್ಷೇತ್ರದಿಂದ ಕಾನೂನು ಕ್ಷೇತ್ರಕ್ಕೆ ದಾಪುಗಾಲಿಟ್ಟು ಅಲ್ಲಿಯ ವಿಷಯಗಳನ್ನರಗಿಸಿಕೊಂಡು ಕಾನೂನು ಗ್ರಂಥ ರಚಿಸಿರುವರಲ್ಲದೆ ಇದು ನಾಲ್ಕನೆಯ ಆವ್ರತ್ತಿಯಲ್ಲಿ ಪಾದಾರ್ಪಣೆಗೊಂಡಿರುವದು ಅಂತರ್ಜಾಲದ ಹಾವಳಿಯ ತಂತ್ರಜ್ಞಾನದ ಈ ಯುಗದಲ್ಲಿ ಓದುಗರ ಸಂಖ್ಯೆಯು ಕ್ಷೀಣಿಸುತ್ತಲಿದೆ ಎಂಬ ಹೇಳಿಕೆ ಅಲ್ಲಗಳೆದಿರುವದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಾಖಲಾರ್ಹ

“ಡಾ.ಶೇಖರ.ಡಿ.ಸಜ್ಜನರ ಕೃತಿ “ಮಾಹಿತಿ ಹಕ್ಕು ಅಧಿನಿಯಮ-2005ಒಂದು ವಿಶ್ಲೇಷಣೆ ( ತಿದ್ದುಪಡಿ 2019 ಸಹಿತ)” ಕೃತಿ ಪರಾಮರ್ಶೆ, ಪ್ರೊ ಶಕುಂತಲಾ. ಸಿಂಧೂರ ಗದಗ Read Post »

You cannot copy content of this page

Scroll to Top