ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ

ಪುಸ್ತಕ ಸಂಗಾತಿ ಅಂಬಿಕಾ ಅವಟಿ ಚಡಚಣ ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ “ಅಂತರಂಗದ ಪ್ರಣತಿ” ಅವಲೋಕನ ಅಂತರಂಗದ ಪ್ರಣತಿ… ಅಲ್ಪಾಕ್ಷರಗಳಲ್ಲಿ ಅನಂತದರ್ಶನಕನ್ನಡ ಸಾಹಿತ್ಯ ಲೋಕಕ್ಕೆ ‘ತನಗ’  ಎಂಬ ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನು ಪರಿಚಯಿಸಿ, ಅದರಲ್ಲಿ ದೇಸೀ ಸೊಬಗನ್ನು ತುಂಬಿದವರು ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ (ಕನ್ನಡದ ಕಂದ). ಈ ಕೃತಿಯನ್ನು ಲೇಖಕರು ಅತ್ಯಂತ ಪ್ರೀತಿ ಮತ್ತು ಸ್ನೇಹಪೂರ್ವಕವಾಗಿ ನನಗೆ ಉಡುಗೊರೆಯಾಗಿ ಕಳಿಸಿಕೊಟ್ಟಿದ್ದು, ಇದನ್ನು ಓದಿದಾಗ ಮನಸ್ಸಿಗೆ ಅಪಾರ ಸಂತೋಷವಾಯಿತು. ಅವರ ‘ಅಂತರಂಗದ ಪ್ರಣತಿ’ ಸಂಕಲನವು ಕೇವಲ ನಾಲ್ಕು ಸಾಲುಗಳಲ್ಲಿ ಬದುಕಿನ ಮಹೋನ್ನತ ಸತ್ಯಗಳನ್ನು ಹಿಡಿದಿಡುವ ಅದ್ಭುತ ಪ್ರಯತ್ನವಾಗಿದೆ. “ಕಡಿಮೆ ಪದಗಳಲ್ಲಿ ಹೆಚ್ಚಿನ ಅರ್ಥ”  ಇದು ಆಲಮೇಲರ ಕಾವ್ಯದ ಮಂತ್ರ. ಸಾಗರದ ಅಲೆಗಳು ಮೌನವಾಗಿ ತೇರನ್ನು ಎಳೆಯುವಂತೆ, ಇವರ ತನಗಗಳು ಓದುಗರ ಮನಸ್ಸನ್ನು ಮೌನವಾಗಿ ಆವರಿಸಿಕೊಳ್ಳುತ್ತವೆ. ಇಲ್ಲಿ ಶಬ್ದಗಳ ಆರ್ಭಟವಿಲ್ಲ, ಬದಲಾಗಿ ಅರ್ಥದ ಗಾಂಭೀರ್ಯವಿದೆ. ಮುಂಜಾನೆಯ ಮಂಜಿನ ಚೆಲ್ಲಾಟದಿಂದ ಹಿಡಿದು ಋತುಮಾನಗಳ ಬದಲಾವಣೆಯವರೆಗೆ ಪ್ರಕೃತಿಯ ಪ್ರತಿ ಚಲನೆಯನ್ನು ಇವರು ಕಾವ್ಯವಾಗಿಸಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಬಣ್ಣಿಸುತ್ತಲೇ, ಬದುಕಿನ **”ಹೊಸತನದ ಹಂದರ”**ವನ್ನು ಕವಿ ಇಲ್ಲಿ ಅನಾವರಣಗೊಳಿಸುತ್ತಾರೆ. ಜಗತ್ತು ಎಂಬ ಮಾಯಾಜಾಲದಲ್ಲಿ ಮನುಷ್ಯ ಅನುಭವಿಸುವ ಒದ್ದಾಟ, ದುಶ್ಚಟಗಳು, ಮೋಸ ಮತ್ತು ಅಸತ್ಯಗಳ ಕುರಿತು ಈ ತನಗಗಳು ಎಚ್ಚರಿಸುತ್ತವೆ.   ಗುರುವಿನ ಮಹತ್ವ ಮತ್ತು ಜ್ಞಾನದ ಅಗತ್ಯವನ್ನು ಶಕ್ತವಾಗಿ ಪ್ರತಿಪಾದಿಸಲಾಗಿದೆ.  ಜನನ ಮರಣಗಳ ನಡುವಿನ ಹೋರಾಟ, ನಂಬಿಕೆ ಮತ್ತು ವಿಶ್ವಾಸಗಳ ಮಹತ್ವವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಸೂರ್ಯ, ಚಂದ್ರ ಹಾಗೂ ಹೆಣ್ಣಿನ ಸೌಂದರ್ಯವನ್ನು ಕೇವಲ ನಾಲ್ಕು ಸಾಲುಗಳಲ್ಲಿ ಹಿಡಿದಿಡುವುದು ಒಂದು ಸವಾಲೇ ಸರಿ. ಆದರೆ ಆಲಮೇಲರು ಪ್ರೀತಿಯ ಉತ್ತುಂಗವನ್ನು ಮತ್ತು ಪ್ರಕೃತಿಯ ಚೆಲುವನ್ನು ಸೋಜಿಗವೆನಿಸುವಂತೆ ಅಲ್ಪ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಡಾ. ಮಲ್ಲಿಕಾರ್ಜುನ ಸರ್ ಅವರಿಗೆ ಒಂದೆರಡು ಚೆನ್ನುಡಿಗಳು. ಅಕ್ಷರಗಳ ಹಣತೆಯಲ್ಲಿ ಜ್ಞಾನದ ಎಣ್ಣೆ ಹೊಯ್ದು, ಸ್ನೇಹದ ಬತ್ತಿಯ ಮೂಲಕ ‘ಅಂತರಂಗದ ಪ್ರಣತಿ’ಯನ್ನು ಬೆಳಗಿದ್ದೀರಿ ಸರ್. ನಿಮ್ಮ ಈ ಕೃತಿ ಕೇವಲ ಕಾವ್ಯವಲ್ಲ, ಅದು ಬದುಕಿನ ದಾರಿದೀಪ. ತನಗ ಸಾಹಿತ್ಯದ ಮೂಲಕ ಕನ್ನಡದ ಕಣಜಕ್ಕೆ ಹೊಸ ಮೆರುಗು ನೀಡಿದ ನಿಮ್ಮ ಲೇಖನಿ ಹೀಗೆಯೇ ನಿರಂತರವಾಗಿ ಸಾಗಲಿ. ಒಟ್ಟಾರೆಯಾಗಿ ಹೇಳಬೇಕು ಅಂದರೆ‘ಅಂತರಂಗದ ಪ್ರಣತಿ’ ಕೃತಿಯು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ವಾಸ್ತವಗಳನ್ನು ಕನ್ನಡಿಯಂತೆ ಪ್ರತಿಫಲಿಸುತ್ತದೆ. ಫಿಲಿಪೈನ್ಸ್ ಮೂಲದ ಕಾವ್ಯ ಪ್ರಕಾರವನ್ನೇ ಬಳಸಿ ಕನ್ನಡ ಕಾವ್ಯದ ಕಣಜವನ್ನು ಶ್ರೀಮಂತಗೊಳಿಸಿರುವ ಡಾ. ಮಲ್ಲಿಕಾರ್ಜುನ ಆಲಮೇಲರ ಪ್ರಯತ್ನ ಶ್ಲಾಘನೀಯ. ಇದು ಅಂತರಂಗವನ್ನು ಬೆಳಗುವ ನಿಜವಾದ ಪ್ರಣತಿ… ಅಂಬಿಕಾ ಅವಟಿ ಚಡಚಣ.

ಡಾ. ಮಲ್ಲಿಕಾರ್ಜುನ ಎಸ್. ಆಲಮೇಲ ಯಡ್ರಾಮಿ ಅವರ ಕೃತಿ “ಅಂತರಂಗದ ಪ್ರಣತಿ” ಅವಲೋಕನ ಅಂಬಿಕಾ ಅವಟಿ ಚಡಚಣ Read Post »

ಪುಸ್ತಕ ಸಂಗಾತಿ

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ.

ಪುಸ್ತಕ ಸಂಗಾತಿ ಮಧು ಮಾಲತಿ. ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” “ದೇಶ ಸುತ್ತು ಕೋಶ ಓದು”” ಎಂಬ ಜನಜನಿತ ನುಡಿಯಂತೆ ವಿವಿಧ ಪ್ರದೇಶಗಳನ್ನು ಸುತ್ತುವುದರಿಂದ ಅಲ್ಲಿಯ ಜನರ ನಡೆ-ನುಡಿ ˌಸಂಪ್ರದಾಯ ˌ ಆಚಾರ ವಿಚಾರಗಳೆಲ್ಲವನ್ನು ಅರಿತು ಅನುಭವಿಸಿ ರೂಢಿಸಿಕೊಳ್ಳುವಲ್ಲಿ ಈ ಪ್ರಯಾಣ ಯಶಸ್ವಿಯಾಗುತ್ತದೆ. ಅಂತೆಯೇ ದೇಶ ಸುತ್ತಲು ಅಸಾಧ್ಯವಾದವರೂ ಕೂಡ ಪ್ರವಾಸ ಕಥನಗಳನ್ನು ಓದಿ ದೇಶ ಸುತ್ತಿದಷ್ಟೇ ಅನುಭವವನ್ನು ರೋಮಾಂಚನವನ್ನು ಅನುಭವಿಸುವುದು ಖಂಡಿತ ಸಾಧ್ಯ .ಈ ನಿಟ್ಟಿನಲ್ಲಿ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಅಚ್ಚುಮೆಚ್ಚಿನದಾಗುತ್ತದೆ .ಅನೇಕ ಸಾಹಿತಿಗಳ ಪ್ರವಾಸ ಕಥನಗಳು ಸಹ ಸಾಹಿತ್ಯ ಲೋಕಕ್ಕೆ ಅವಿರತವಾಗಿ ಅರ್ಪಣೆಯಾಗುತ್ತಿವೆ. ಇವೆಲ್ಲವುಗಳ ಪೈಪೋಟಿಗಳ ನಡುವೆ ಅನುಭವಿ ˌಹಿರಿಯರು ˌ ಸಾಹಿತಿಗಳು ˌಅಂಕಣಕಾರರು ಆದ ಶ್ರೀ ಗೊರೂರು ಅನಂತರಾಜುರವರ ಈ ಕೃತಿ ಎಲ್ಲರ ಗಮನವನ್ನು ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ . ಇಲ್ಲಿ ಮೂಡಿ ಬಂದಿರುವ ಅನೇಕ  ಪ್ರಸಿದ್ಧ ಸ್ಥಳಗಳ ಬಗ್ಗೆ ಕೂಲಂಕುಶವಾಗಿ ಅಧ್ಯಯನಗೈದು ಓದುಗ ಪ್ರಭು ಅಲ್ಲಿಯೇ ಸ್ವತಹ ನಡೆದಾಡಿದಂತೆ ಭಾಸವಾಗುವಂತೆ ತಮ್ಮ ಅನುಭವಗಳನ್ನು ಇಲ್ಲಿ ಕಟ್ಟಿಕೊಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಕಾವೇರಿ ತೀರದ ಅರ್ಕೇಶ್ವರನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಕೆ. ಆರ್.ನಗರದ ಅರ್ಕೇಶ್ವರ ದೇವಾಲಯ ಜಗತ್ತಿನ ಎರಡನೇ ಸೂರ್ಯ ದೇವಾಲಯ. ಗಂಗ ˌ ಚೋಳˌ ಹೊಯ್ಸಳˌ ವಿಜಯನಗರ ಮುಂತಾದ ಅರಸರ ಆಡಳಿತಕ್ಕೆ ಒಳಪಟ್ಟ ಈ ಸ್ಥಳದಲ್ಲಿ ಅರ್ಕೇಶ್ವರ ಸ್ವಾಮಿ ಸೂರ್ಯದೇವನಿಂದ ಪ್ರತಿಷ್ಠಾಪಿಸಲ್ಪಟ್ಟು ಭತ್ತದ ನಾಡೆಂದೇ ಹೆಸರುವಾಸಿಯಾಗಿದೆ .ಶ್ರೀಯುತರು ಮುಂದುವರೆಯುತ್ತಾ ಮೂಗೂರು ತ್ರಿಪುರ ಸುಂದರಿ  ಮುಸ್ಲಿಂ ಪಾಳೇಗಾರ ನಿರ್ಮಿಸಿದ ಹಿಂದೂ ದೇವಾಲಯಕ್ಕೆ ಸದ್ದಿಲ್ಲದೆ ನಮ್ಮನ್ನು ಕರೆದೊಯ್ಯುತ್ತಾರೆ . ಆದಿಶಕ್ತಿ ಅವತಾರವಾದ ತ್ರಿಪುರ ಸುಂದರಿ ದೇವಿಯ ಕೃಪಾಕಟಾಕ್ಷಕ್ಕೆ ನಾವೆಲ್ಲರೂ ಒಳಗಾಗುವುದು ಖಚಿತ. ಎಲ್ಲೆಡೆ ಸುತ್ತಾಡಿ ತಲಕಾಡಿನ ಪಂಚಲಿಂಗೇಶ್ವರನ ದರ್ಶನ ಮಾಡಿಸದಿರುತ್ತಾರೆಯೇ ? ಪಂಚಲಿಂಗ ದೇವರ ಅದ್ಭುತ ಕಲಾಕೃತಿಗಳು ಶಿವನ ವಿಷ್ಣುವಿನ ಲೀಲೆಗಳ ವಿಗ್ರಹಗಳು ಎಲ್ಲರ ಮನ ಸೆಳೆಯುತ್ತವೆ . “ಕಾಶಿಗೆ ಹೋಗಿ ಪರಶಿವನ ಕಾಣದೆ ಬರಲಾದೀತೇ” ಅಂತೆಯೇ ತಲಕಾಡಿಗೆ ಹೋಗಿ ಪಂಚಲಿಂಗೇಶ್ವರನ ದರ್ಶನ ಮಾಡಿದರೆ  ಮುಕ್ತಿ ಎನ್ನುತ್ತಾರೆ.ಮುಂದುವರೆದು ಗುಂಜ ನರಸಿಂಹನನ್ನು ಕೂಡ ತಮ್ಮ ಕೃತಿಯಲ್ಲಿ ನಮಗೆ ದರ್ಶನ ಭಾಗ್ಯ ಕೊಡಿಸಿರುತ್ತಾರೆ. ಬಿಳಿಗಿರಿರಂಗನ ಬೆಟ್ಟದ ಸೌಂದರ್ಯವನ್ನೆಲ್ಲ ತಮ್ಮ ಅನುಭವದ ಈ ಕೃತಿಯಲ್ಲಿ ಹಿಡಿದಿಟ್ಟಿರುವುದು ಚಾರಣ ಪ್ರಿಯರಿಗೆ ರಸದೌತಣವನ್ನೇ ನೀಡುತ್ತದೆ .ಉದ್ಭವ ಗಂಗೆಯಿಂದೇ ಪ್ರಸಿದ್ಧಿ ಪಡೆದಿರುವ  ಹಾಲುರಾಮೇಶ್ವರ ಸನ್ನಿಧಾನದ ಗಂಗಾ ಕೊಳವೆಂದೇ ಪ್ರಸಿದ್ಧಿಯಾದ ಹಾಲು ರಾಮೇಶ್ವರ ಜನಸಾಮಾನ್ಯರಿಂದ ಹಿಡಿದು ಜನ ಪ್ರತಿನಿಧಿಗಳವರೆಗೂ ಇಲ್ಲಿನ  ಕೊಳದ ಪ್ರಸಾದವೇ ಬೇಡಿಕೆ ಈಡೇರಿಕೆಯ ಸಂಕೇತ. ಮುಂದೆ ತಮ್ಮ ಹುಟ್ಟೂರಾದ ಗೊರೂರಿನ ತ್ರಿಕೂಟೇಶ್ವರ ದೇವಾಲಯಕ್ಕೆ ನಮ್ಮನ್ನು ಸೆಳೆಯುತ್ತಾರೆ .ಹೊಯ್ಸಳರ ಕಾಲದ ಈ ತ್ರಿಕೂಟಲಿಂಗೇಶ್ವರ ದೇವಾಲಯ ಒಂದಷ್ಟು ಅಭಿವೃದ್ಧಿಯತ್ತ ಸಾಗಬೇಕಿದೆ. ಹೀಗೆ ಸಾಗುತ್ತಾ ಸಾಗುತ್ತಾ ಲೇಖಕರು  ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಗೆ ಕರೆದೊಯ್ಯುತ್ತಾರೆ .ಚುಂಚ ಚುಂಚಿ ಎಂಬ ಬೇಡ ದಂಪತಿಗಳ ವಧೆಯಿಂದಾಗಿ ಬಂದ ಹೆಸರು ಚುಂಚಾರಣ್ಯವೆಂಬ ಐತಿಹಾಸ ಪಡೆದ ಇತಿಹಾಸವಿದೆ.  ತೇರು ಹರಿದಾವೋ ತಾನಕ್ಕೆ ನಿಂತಾವೋ ತಾರೋ ಚನ್ನಯ್ಯ ಜವನವಾ ತಾರೋ ಚೆನ್ನಯ್ಯ ಜವನವಾ ಬಾಳೆಹಣ್ಣುಬೇಡಿ ಕೊಳ್ಳೆ ಮಗಳೇ ಸೆರಗೊಡ್ಡಿ ಎನ್ನುತ್ತಾ ಗೊರೂರು ಶ್ರೀ ಯೋಗಾನರಸಿಂಹಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ .ಹೀಗೆ ಲೇಖಕರು ಬಸವನಹಳ್ಳಿ ಆಂಜನೇಯˌ ಹೊಳೆನರಸೀಪುರದ ಬನಶಂಕರಿ  ಮುಂತಾದ ದೇವಾಲಯಗಳ ಇತಿಹಾಸಗಳನ್ನು ಓದುಗರೆದುರು ಆಳವಾಗಿ ತೆರೆದಿಡುತ್ತಾರೆ .ನಂತರ ಲೇಖಕರು ತಮ್ಮ ಪದಗಳ ಚಮತ್ಕಾರದಿಂದ ಅರಸಿಕಟ್ಟೆ ಅಮ್ಮನ ನಕ್ಷತ್ರವನ, ಕಪ್ಪಡಿ ಕ್ಷೇತ್ರ ˌಉಮಾ ಮಹೇಶ್ವರನ ಕ್ಷೇತ್ರ ಎಲ್ಲವನ್ನು ದರ್ಶನ ಮಾಡಿಸಿ ಮಂತ್ರಮುಗ್ದರನ್ನಾಗಿಸುತ್ತಾರೆ. ಜೊತೆ ಜೊತೆಗೆ ಸಂಕಲಾಪುರದ ಮಠ, ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಸ್ಥಾನ, ಅಡಿ ಬೈಲು ರಂಗನಾಥ ಸ್ವಾಮಿ ಬೆಟ್ಟˌಗಳನ್ನು ಸುತ್ತಿಸುತ್ತ  ರಂಗನಾಥ ಸ್ವಾಮಿಯ ಮದುವೆಗೆ ಭೂಮಿ ಚಪ್ಪರ ಮಾಡಿದಾಳಿಂಬೆ ಹಣ್ಣು ಹಸೆ ಮಾಡಿ ರಂಗಯ್ಯಸ್ವಾಮಿ ನಿನ್ನ ಮದುವೆ ಶನಿವಾರಎಂದು ಹಾಡಿ ಹೊಗಳುತ್ತಾರೆ.  ರಂಗಾನ ತೇಜಿಗೆ ಹೊಂಬಾಳೆ ಒಡ್ಯಾಣದುಂಡು ಮಲ್ಲಿಗೆ ಮಕರಂದಬೇಟ್ಗಾರರಂಗನೇರ್ಯಾನೆ  ಹೊಸ ತೇರು  ಹೀಗೆ ಹೇಳುತ್ತಾ ಕೆಂಡಗಣ್ಣೇಶ್ವರˌ ಮಂಟೆರಾಯಸ್ವಾಮಿ ˌಗೌಡಗೆರೆ ಚಾಮುಂಡೇಶ್ವರಿˌ ಕೊಂಡಜ್ಜಿ ˌಪುರದಮ್ಮˌ ಹೇಮಾವತಿ ತೀರದ ಹೇಮಗಿರಿ  ಹೀಗೆ ಹಲವಾರು ಕ್ಷೇತ್ರಗಳನ್ನು ಸುತ್ತಿಸಿ 48 ಪುಣ್ಯಕ್ಷೇತ್ರಗಳ ಮಾಹಿತಿ ನೀಡುತ್ತಾ ನೀಡುತ್ತಾ ನಾವು ಅದರೊಳಗೊಂದಾಗಿ  ಬಿಟ್ಟು ಬಿಡದಂತೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ .ಓದುತ್ತಾ ಓದುತ್ತಾ ಓದುಗ ಪ್ರಭು ಪ್ರವಾಸವನ್ನು ಸ್ವತಃ ಅನುಭವಿಸಿ ಸಂತಸಗೊಳ್ಳುತ್ತಾನೆ .ಈ ನಿಟ್ಟಿನಲ್ಲಿ ಇಂದು ಸಮಾಜಕ್ಕೆ ಅತ್ಯವಶ್ಯಕವಾದ ಕೃತಿಯೊಂದನ್ನು ಸಾರಸ್ವತ ಲೋಕಕ್ಕೆ ಕೊಡುಗೆ ಇತ್ತ ಶ್ರೀ  ಗೊರೂರು ಅನಂತರಾಜುರವರ ಈ ಕೃತಿ  ಸಾರಸ್ಪತಲೋಕ  ಉಪಯೋಗಪಡಿಸಿಕೊಳ್ಳಲ್ಲಿ ಎಂದು ಆಶಿಸುವೆ.  ಮಧುಮಾಲತಿ ರುದ್ರೇಶ್

ಗೊರೂರು ಅನಂತರಾಜು ಅವರ “ತಲಕಾಡು ಪಂಚಲಿಂಗ ದರ್ಶನ ಮತ್ತುಇತರೆ ಪ್ರವಾಸಿ ಲೇಖನಗಳು” ಅವಲೋಕನ ಮಧು ಮಾಲತಿ. Read Post »

ಪುಸ್ತಕ ಸಂಗಾತಿ

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ

ಪುಸ್ತಕ ಸಂಗಾತಿ ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ ಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಪ್ರೀತಿ‌ಪ್ರೇಮದಾಚೆ ಲಂಘನ‌ ಮಾಡುವ ಶಾಯಿರಿ‌ಲೋಕಡಾ.ಮಂಜುನಾಥ .ಬಮ್ಮನಕಟ್ಟಿಯವರ ನೂರಾರು ಶಾಯಿರಿಗಳುಕನ್ನಡಕ್ಕೆ ಶಾಹಿರಿ ಪ್ರಕಾರವನ್ನು ಪರಿಚಯಿಸಿದವರು ಇಟಗಿಈರಣ್ಣನವರು‌.ಗಜಲ ನ ಹಾಗೆ ಉರ್ದು ಸಾಹಿತ್ಯದಿಂದ ಕನ್ನಡಕ್ಕೆ ಬಂದ ಈ‌ ಕಾವ್ಯ‌ ಪ್ರಕಾರವನ್ನು , ಪ್ರೊ  ಭಿಕ್ಷಾವರ್ತಿಮಠ , ಶ್ರೀ ಅಸಾದುಲ್ ಬೇಗ್ ಮೊದಲಾದವರು ಬೆಳೆಸಿದರು .೧೯೭೬ರಲ್ಲಿ ಇಟಗಿ ಈರಣ್ಣನವರ  ಕನ್ನಡ ಶಾಹಿರಿ ಸಂಕಲನ‌ ಪ್ರಕಟವಾಯಿತು. ತದನಂತರದಲ್ಲಿ ಅವರ ಸ್ನೇಹಿತರೇ ಆದ ಪ್ರೊ. ಎಚ್.ಎ.ಭಿಕ್ಷಾವರ್ತಿ‌ಮಠ ಅವರು ೧೯೮೧ ರಲ್ಲಿ ತಮ್ಮ ಕನ್ನಡ ಶಾಯಿರಿ‌ಲೋಕ ಎಂಬ ಸಂಕಲನ ಪ್ರಕಟಿಸುವ ಮೂಲಕ ಈತನ ಕಾವ್ಯ ಪ್ರಕಾರದ ಬೆಳವಣಿಗೆಗೆ ಕಾರಣರಾದರು. ಈಗ ಹಲವರು ಶಾಯಿರಿ ಗಳನ್ನು  ಬರೆಯುತ್ತಿದ್ದಾರೆ. ಗದಗ,ಮತ್ತು‌ಕೊಪ್ಪಳ ಭಾಗದಲಿ ಇದು ವಿಶೇಷವಾಗಿ ರಚನೆಯಾಗುತ್ತಿದ್ದು  ಪರಮೇಶ್ವರಪ್ಪ‌ ಕುದರಿ, ಮರುಳಸಿದ್ದಪ್ಪ ದೊಡಮನಿ.ಯಲ್ಲಪ್ಪ ಹರ್ನಾಳಗಿ, ಕೊಟ್ರೇಶ ಜವಳಿ ,ಕಸ್ತೂರಿ ಡಿ.ಪತ್ತಾರ, ಡಾ ಸಿದ್ರಾಮ ಹೊನ್ಕಲ್ ಮೊದಲಾದವರು ಶಾಹಿರಿಗಳನ್ನು ಬರೆಯುತ್ತಿದ್ದಾರೆ‌.ಎಲ್ಲರಿಗೂ  ಇಟಗಿ ಈರಣ್ಣನವರ  , ಪ್ರೊ. ಭಿಕ್ಷಾವರ್ತಿಮಠ  ಅವರ ಶಾಹಿರಿಗಳೇ ಪ್ರೇರಣೆ ಎಂಬ ಮಾತನ್ನು ಮರೆಯಲಾಗದು. ಪತ್ರಕರ್ತರೂ,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾಗಿ ಚಿಕ್ಕ ಮಗಳೂರಿನಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ ಎಂ. ಬಮ್ಮನಕಟ್ಟಿ ಯವರು  ಪ್ರವೃತ್ತಿ ಯಿಂದ ಕವಿಗಳೂ ಪ್ರಬಂಧಕಾರರೂ, ಸಾಮಾಜಿಕ ಕ್ಷೇತ್ರ ದ ಸಂಶೋಧಕರೂ  ಆಗಿ ತುಂಬ ಚಟುವಟಿಕೆಯಿಂದ ಕೂಡಿರುವ ಬರಹಗಾರರು ಈವರೆಗೆ ಹನಿಗವನ, ಕವಿತೆ,  ಜೀವನ ಚರಿತ್ರೆ, ಪ್ರಬಂಧ ಸಂಕಲನ, ಮತ್ತು ಸಂಶೋಧನ ಕೃತಿಗಳು ಸೇರಿದಙತೆ ೧೮   ಕೃತಿಗಳನ್ನುರಚಿಸಿದ್ದಾರೆ. ಬಹಳ ವಿಶೇಷವಾದದ್ದು ಕರ್ನಾಟಕ ದ ಮಹಿಳಾ ಪೋಲಿಸ್  ಇಲಾಖೆಯ ಮೇಲೆ ಸಂಶೋಧನೆ ಮಾಡಿ ಅವರು ಬರೆದ ಕೃತಿ. ಹಾಗೆಯೆ ಬಹಳ ವಿಶಿಷ್ಟವಾದ ” ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ದಿ” ಎಂಬ ಅಧ್ಯನ ಕೈಕೊಂಡು‌ ಪಿಎಚ್. ಡಿ‌ ಪದವಿ‌ ಪಡೆದ ಪ್ರತಿಭಾವಂತರು ಅವರು. ಈಗ  “ಕತ್ತಲು  ಬೆಳಕು” ಎಂಬ ನೂರಾರು ಶಾಯಿರಿಗಳ ಚಂದದ ಸಂಕಲನವನ್ನು ಪ್ರಕಟಿಸುವ ಮೂಲಕ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ಇದಕ್ಕೆ ಹಿರಿಯರಾದ ಪ್ರೊ‌ಭಿಕ್ಷಾವರ್ತಿಮಠ ಅವರ ಮುನ್ನುಡಿ ,ಇನ್ನೋರ್ವ ಖ್ಯಾತ‌, ಕವಿ  ,  ಕಾದಂಬರಿಕಾರ , ಪತ್ರಕರ್ತರಾದ ಡಾ . ಸರಜೂ ಕಾಟ್ಕರ್ ಅವರ ನಲ್ನುಡಿ ಇವೆ. ಶಾಯಿರಿ ಕ್ಷಣವೊಂದರ ಸ್ಮಾರಕ.ಹನಿಗವನ, ಚುಟುಕು, ತನಗ, ಹಾಯಕು ಇವುಗಳ ಹಾಗೆ ಓದಿದೊಡನೆ ಮನಸ್ಸು ಪ್ರಪುಲ್ಲಿತವಾಗಿ ವಾವ್ ಎಂಬ ಬೆರಗು ಹೊರಡಿಸಿವ ಚತುರತೆ ಅದರ ಗುಣ.ಈ ಕಾವ್ಯದ ಲಕ್ಷಣಗಳನ್ನು ನಲ್ನುಡಿಯಲ್ಲಿ ಹಿರಿಯರಾದ ಡಾ ಕಾಟ್ಕರ್ ಅವರು ವಿವರಿಸುತ್ತ ” ಶಾಯಿರಿಯ ಮುಖ್ಯ ಲಕ್ಷಣ ಕೆಲವೇ ಕೆಲವು ಸಾಲುಗಳಲ್ಲಿ ಬ್ರಹ್ಮಾಂಡವನ್ನು ಹೇಳುವದು.ನೋಡಿದ, ಕೇಳಿದ ಅನುಭವಿಸಿದ ಪ್ರಸಂಗಗಳಿಗೆ  ಕವಿಯಾದವನು ಕಾವ್ಯದ ಅಮರತ್ವವನ್ನು ನೀಡಬೇಕಾಗುತ್ತದೆ.ಆ ಶಬ್ದಗಳ ಜಾಲವು ಓದುಗನನ್ನು ಕೊನೆಯಲ್ಲಿ  ಥಕ್ಕಾಗಿಸುವಂತೆ ಮಾಡಿದರೆ  ಆ ಕಾವ್ಯವು ಸಾರ್ಥಕತೆಯನ್ನು ಪಡೆಯುತ್ತದೆ”  ಎನ್ನುತ್ತಾರೆ. ಅದು ಸಾಮಾನ್ಯವಾಗಿ ಪ್ರೇಮದ ಮುಗುಳು ಚಿಗುರಿಸುವ ಹೂವಿನ  ತೋಟ. ಶಾಯಿರಿ ರಚಿಸುವಾಗ ಪ್ರೇಮ ,ವಿರಹದಾಚೆಗೆ ಬಹಳ ಜನ ಕವಿಗಳು ದಾಟುವುದೆ ಇಲ್ಲ.ಆದರೆ ಡಾ ಬೊಮ್ಮನಕಟ್ಟಿಯವರ. ಓದಿನ ಮತ್ತು ಸೇವೆಯ ಹರಿವು ವಿಸ್ತಾರವಾದ್ದರಿಂದ ಬದುಕಿನ ಬೇರ ಬೇರೆ ಸಂಗತಿಗಳು ಇಲ್ಲಿ ಶಾಯಿರಿಗಳಾಗಿವೆ. ಡಾ ಸರಜೂ ಕಾಟ್ಕರ್ ಸರ್ ಹೇಳಿದಂತೆ ಇಲ್ಲಿನ ಶಾಯಿರಿಗಳಿಗೆ ಅಮರತ್ವದ ಗುಣ ಪ್ರಾಪ್ತವಾಗಿದೆ. ಶಾಯಿರಿಗಳೂ ಕೂಡ ತನಗ ಹೈಕು ಗಜಲ್ ಗಳ ಹಾಗೆ ಶೀರ್ಷಿಕೆಯಿಲ್ಲದ ಹೆಸರೊಲ್ಲದ ಚಿತ್ರಗಳೇ ಆಗಿವೆಇಲ್ಲಿನ ನೂರಾರು (೧೦೬) ಶಾಯಿರಿಗಳಲ್ಲಿ ಬದುಕಿನ ತಾತ್ವಿಕ ಚಿಂತನೆ ಪ್ರೀತಿ ಪ್ರೇಮಗಳ ಅನಂತ ನೋಟ ಎಲ್ಲವೂ ಇವೆ. ಮೊದಲ ಶಾಯಿರಿಯಲ್ಲಿಯೆ ಅದು ಕಾಣುತ್ತದೆ. ಮನುಷ್ಯ ಇರುವದರೊಳಗೆ ನಾಲ್ಕು ಮಂದಿಗೆ ಬೇಕಾಗುವಂಗ ಬದುಕಬೇಕು  ಎನ್ನುವದನ್ನು ಸಂಖ್ಯೆಗಳ ಚಮತ್ಕಾರದಲ್ಲಿ ಹಿಡಿದಿಡುವ ರೀತಿ ವಿಶಿಷ್ಟವಾಗಿದೆ . ಒಂದು ಎರಡು ಬಂದ ಬರತೈತಿಮೂರು ಆರುನಾಕ ಜನಕ್ಕ ಬೇಕ ಬೇಕು.ಅಷ್ಟರೋಳಗ ಈ ಬದುಕಬೆಳಗಬೇಕು ಬೆಳಗಸಬೇಕುಹತ್ತರ ಕೂಟ ಹನ್ನೊಂದು ಯಾಕ‌ ಆಗಬೇಕುಮನುಷ್ಯರಾಗಿ ಸುಮ್ಮನೆ ಬಂದವರಲ್ಲ, ಸಾಯುವದರೊಳಗೇ ಏನಾದರೂ  ಸಾಧಿಸದೆ ಇದ್ರೆ ಬದುಕಿ ಏನು‌ ಲಾಭ ? ಇದು ಕವಿಯ ಪ್ರಶ್ನೆ! ‘ಮೂರು ಆರು’ ಅಡಿ ಜಾಗ ಅಂತಿಮವಾಗಿ ಎಲ್ಲರಿಗೂ ಬೇಕೇ ಬೇಕು‌.ಮತ್ತು ಕೊನೆಯಲ್ಲಿ ಹೊತ್ತ ಒಯ್ಯಲು ನಾಲ್ಕು ಜನರ ಅಗತ್ಯನೂ ಇದೆ. ಇದಂತೂ ಪರಮ  ಸತ್ಯ.ಅಷ್ಟರೊಳಗೆ ನಮ್ಮ ಬದುಕು ಬೆಳಗಬೇಕು ,ಇತರರ ಬದುಕನ್ನು ಬೆಳಗಿಸಬೇಕು ಎನ್ನುವದನ್ನು ಶಾಯಿರಿ ಸಾರುತ್ತದೆ. ಜೀವನದ ತಾತ್ವಿಕತೆಯನ್ನು ಚಿಂತಿಸು ವ ಶಾಯಿರಿಗಳು ಗಮನ ಸೆಳೆಯುತ್ತವೆ. ಬದುಕನ್ನು‌ಬೇರೆ ಬೇರೆ ಮಾತುಗಳಲ್ಲಿ ವತ್ಣಿಸುವದಕ್ಕಿಂತ ,  ಬದುಕಿನ ನಿಜವಾದ ಅರ್ಥ ಎಂದರೆ ಅದನ್ನು ಸರಿಯಾಗಿ‌ ಬದುಕಿ ತೋರಿಸುವುದೆ ಆಗಿದೆ. ಅದನ್ನೇ ಬೊಮ್ಮನಕಟ್ಟಿಯವರ ಶಾಯಿರಿ ಬದುಕಂದ್ರಹಂಗಲ್ಲ, ಹಿಂಗಲ್ಲಬದುಕೊದಂದರ ಸಾಮಾನ್ಯ ಅಲ್ಲಬದುಕು ಬಳ ದೊಡ್ಡದುಅದಕ$ ನೀ ಬದುಕುಈ ಬದುಕು ಬದುಕು ಎನ್ನುವ ಪದ ಮತ್ತೆ ಮತ್ತೆ ಬಂದು‌ ಕೊಡುವ ಅರ್ಥ ವಿಶೇಷವಾದದ್ದು.ಈ ಬದುಕಿನಲ್ಲಿ ಕಪ್ಪೂ ಇದೆ . ಬಿಳಿಯೂ ಇದೆ.ಅಂದರೆ ಪಾಸಿಟಿವ್ ,ನೆಗೆಟಿವ್ ಎರಡೂ ಇವೆ. ಛಾಯಾಚಿತ್ರದ ರೂಪಕವನ್ನು ಬಳಸುವ ಕವಿ “ಪೊಸಿಟಿವ್, ನೆಗೆಟಿವ್   ಎರಡೂ ಸೇರಿದ್ರನ ಪೋಟೊ ಆಗತೈತಿ” ಎನ್ಜುವದು ಸರಿಯಾಗಿಯೆ ಇದೆ.ಅದನ್ನೆ ಒಂದು ಶಾಯಿರಿಯ ಭಾಗ ವಿವರಿಸುತ್ತಾ ಬೆಳಕು ಕತ್ತಲು ಹಗಲ ರಾತ್ರಿ ಇದ್ದಂಗಜೀವನದಾಗ ಸುಖ ದುಃಖ ಬಂದಾಂಗಇವು ಬ್ಯಾರೆ ಬ್ಯಾರೆ ಅಲ್ಲಒಂದಕ್ಕೊಂದು ಬಿಟ್ಟ ಇರೊದು ಹೆಂಗಎನ್ನುತ್ತಾರೆ. ಕತ್ತಲು ಬೆಳಕು ಎರಡೂ ಸೇರಿಯೇ ಬದುಕಾಗುತ್ತದೆ ಎನ್ನುವದನ್ನು ಅವರ ಶಾಯಿರಿ ಸಾರುತ್ತವೆ.ಈ ಮನಸ್ಸು ಬೇಲಿ ಹಾಕದಿದ್ದರೆ ಅದುವೆತ್ತ ಬೇಕು ಅತ್ತ ಓಡುತ್ತದೆ.ಅದಕ್ಕೆ ಬೇಲಿಹಾಕಬೇಕು ಎನ್ನುವ ಕವಿ ಕಾವಲು ಇರದೆ ಮನಸ್ಸು ಓಡಾಡಿದರೆ ಕಷ್ಟ ಎನ್ನುತ್ತಾರೆ.ಮನುಷ್ಯನ ಎದೆಎನ್ನುವದು ಬೆಳಗುವ ದೀಪವೂ ಹೌದು.ನಿಗಿ ನಿಗಿ ಉರಿವ ಕುಲಮೆಯೂ ಹೌದು‌‌. ಅದರಿಂದ ದೀಪವನ್ನು ಹಚ್ಚಬಹುದು.ಎದೆಯನ್ನು ಸುಡಬಹುದು . ಎರಡೂ ನಮ್ಮ‌ ಕೈಯಲ್ಲಿವೆ.ವಿವೇಚನೆ ಅಗತ್ಯ ಎಂದು ಒಂದು ಶಾಯಿರಿ ಸಾರುತ್ತದೆ. ಈ ಜಗತ್ತಿನಲ್ಲಿ ಎಲ್ಲವೂ ನನ್ನದೆ ಎಂದು ಸಾರಿದವರಾರೂ ಉಳಿದೆ ಇಲ್ಲ.  ಭೂಮಿಯನ್ನು ಗೆದ್ದು ಭೂಮಿಪ ಎನಿಸಿಕೊಂಡ ಅರಸರೆಲ್ಲ ಸತ್ತಿದ್ದಾರೆ.ಭೂಮಿ‌ ಮಾತ್ರ ಶಾಸ್ವತ ಎನ್ನುತ್ತಾನೆ ಕವಿ ಕುಮಾರವ್ಯಾಸ.ಕವಿ‌ಪಂಪನಲ್ಲಿ  ಜಗತ್ತು ಗೆದ್ದೆನೆಂದು ಮೆರೆವ ಭರತ ಚಕ್ರಿಯ ಅಹಂಕಾರ ರಸ ಕೊಳೆಗೊಂಡು ಸೋರುತ್ತದೆ ಎಂಬ‌ ಮಾತು ಬರುತ್ತದೆ.ಯಾವಬಕಾಲದ ಕಾವ್ಯ ವಾಗಲಿ ಸಾರುವದು ಇದನ್ನೇ .ಶಾಯಿರಿಯಂಥ ಸದ್ಯಕಾಲದಲ್ಲಿ ಬದುಕುವ ವರ್ತಮಾನದ ಕವಿತೆ ಕೂಡ ಸಾರ್ವತ್ರಿಕ ವಾದುದನ್ನು ಸಾರುತ್ತದೆ ಎನ್ನುವದಕ್ಕೆ ಸಾಕ್ಷಿ ಈ‌ ಮೂರೇ  ಸಾಲಿನ ಶಾಯಿರಿ.ಕವಿ ನಂದು ನಂದೂನಾನು‌ ನಾನೂಅಂದವರು ಯಾರೂ  ಉಳದೇ ಇಲ್ಲ ಎನ್ನುತ್ತಾನೆ.ಇಷ್ಟೇ ಕವಿತೆ .ಹೆಚ್ಚಿಗೆ ಹೇಳುವದಿಲ್ಲ. ಅದರಲ್ಲಿಯೆ ನೂರು ಸಾಲಿನ ಅರ್ಥ ಅಡಗಿದೆ. ಇಂಥ‌ ಪದ್ಯಗಳೇ ಈ ಕವಿಯ  ಸಂಕಲನವನ್ನು  ಬಹುಕಾಲ ನಿಲ್ಲಿಸುತ್ತವೆ. ಜಾತಿ ಇಲ್ಲವಾಗಿದೆ ಎಂಬ‌ ಮಾತನ್ನು‌ ಕೆಲವರು ವೇದಿಕೆಯ‌ ಮೇಲಿಂದ ಮುತ್ತಿನಂತೆ ಉದುರಿಸುತ್ತಾರೆ.ಆದರೆ ನಿಜವಾಗಿಯೂ ಜಾತಿ ವ್ಯವಸ್ತೆ ಹೋಗಿದೆಯೇ? ಎಂದು ಪ್ರಶ್ನಿಸುವ ಕವಿ  ನಿಜಕ್ಕೂ ಜಾತಿ ವ್ಯವಸ್ಥೆ ಇಲ್ಲವಾಗಿದೆ ಎಂಬುದನ್ನು ಒಪ್ಪುವದಿಲ್ಲ‌. ಏಕೆಂದರೆ‌ ಇಂದು‌ ಬದುಕಿನ ರೀತಿ ಅದಕ್ಕೆ ಪೂರಕವಾಗಿಲ್ಲ.ನಾವು ಜಾತಿ ಎಂಬ ಪಿಡುಗನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡೇ ಬಂದಿದ್ದೇವೆ ಈ ಸತ್ಯವನ್ನು ಅವರ ಶಾಯಿರಿ ಸಾರುತ್ತದೆ. ಜಾತಿ ಇಲ್ಲದಂಗಾತು ಅಂತ ಕೇಳಿಎದಿಯಾಗಿನ ಬೆಂಕಿ ದೀಪ  ಆತುದೀಪ ಬೆಳ ಚಲ್ಲುದರೊಳಗಹುಟ್ಟಿದ ಈ ಜಾತಿ ಸಾಯೊವಲ್ಕದುಅಂತ ಮೈಯೆಲ್ಲ ಧಗಧಗ ಹೊತ್ತಿ ಉರಿತುಕಡೆಯ ಸಾಲೇ ಸತ್ಯವಾಗಿ ಪ್ರಾಮಾಣಿಕ‌ ಪ್ರಜ್ಞಾವಂತರ ಎದೆ ಹೊತ್ತಿ ಉರಿಯುವ ಸ್ಥಿತಿ ಬಂದಿರುವದನ್ನು ಕವಿತೆ ಸಾರುತ್ತದೆ. ಇಡೀ ಸಂಕಲನವೇ ಬೆಳಕು‌ ಕತ್ತಲೆಯ ನಡುವಿನ ಜಿಜ್ಞಾಸೆ ನಡೆಸುತ್ತದೆ.ಇಲ್ಲಿ ಬೆಳಕು ಮತ್ತು ಕತ್ತಲೆ ಮತ್ತೆ ಮತ್ತೆ ಮುಖಾಮುಖಿಯಾಗುತ್ತವೆ..ಆದರೆ ಕವಿ ಯಾವುದೆ ಒಂದರ ಪರ ನಿಲ್ಲುವದಿಲ್ಲ ಕತ್ತಲೆ ಮತ್ತು ಬೆಳಕಿನ ಹಿತವಾದ ಹೊಂದಿಕೊಳ್ಳುವದರಲ್ಲಿಯೆ ನಿಜವಾದ ಬದುಕಿದೆ ಎಂಬುದು‌ ಕವಿಗೆ ಗೊತ್ತಿದೆ. ಕತ್ತಲೆ ಬೆಳಕು ಇಲ್ಲಾಂದ್ರೆಬದುಕು ಇರಾಂಗಿಲ್ಲ ಎಂದು ಒಂದು ಶಾಯಿರಿ ಹೇಳಿದರೆ ಇನ್ನೊಂದು ಶಾಯಿರಿ ಬೆಳಕಿಗೆ ಅದರ ಕೂಡಹಿಟ್ಟಿದ ಕತ್ತಲುಶಡ್ಡು ಹೊಡದೈತಿನನ್ನ‌ ಜನಕ ನೀನ ..ನೀನ ಅಂತಎನ್ನುತ್ತದೆ .ಆದರೆ ಇಲ್ಲಿ ಬೆಳಕು ಮತ್ತು‌ ಕತ್ತಲೆ ಒಂದರ ಕೂಡ ಒಂದು ಹುಟ್ಟಿದರೂ ಅವುಗಳ‌ ನಡುವೆ ಸ್ಪರ್ದೆ ಇರುವದನ್ನು ಹೇಳುವ ಕವಿ ಅವು ತಂದೆ‌ ಮಗನ‌ ಸಂಬಂಧ ಹೊಂದಿದವು ಎನ್ನುವಂತೆ ಚಿತ್ರಿಸುತ್ತಾನೆ.ಅಂದರೆ ಬೆಳಕಿನಲ್ಲಿ ಕತ್ತಲೆ ಹುಟ್ಟಿದೆ ಎನ್ನುವಲ್ಲಿ ಹೊಂದಾಣಿಕೆ ಇರಬೇಕಾಗಿತ್ತು .ಆದರೆ ಶಡ್ಡು ಹೊಡೆದಿದೆ ಎನ್ನುವ ನುಡಿಗಟ್ಟು ಯಾಕೊ ಅಷ್ಟು ಸರಿಯಲ್ಲವೇನೋ ಎಂದು ಅನಿಸುತ್ತದೆ. ಇದು ಜಿಜ್ಞಾಸೆಯ ವಿಷಯ. ಕವಿ ಲೌಕಿಕದಲ್ಲಿ  ಚಿಂತಿಸುತ್ತಲೇ ಅಲೌಕಿಕದತ್ತ ,ಅನುಭವ ದಿಂದ ಅನುಭಾವದತ್ತ ಸಾಗುವ‌ ಪರಿ ಅನನ್ಯವಾದುದು.ಉದಾಹರಣೆಗೆ ಆಕಿ ಎರಡಕ್ಕ ಕರಿತಾಳಬಲದಿಂದ ಆವರಿಸಿಕೊಳ್ಳಾಕಆಕಿ ಕರದಾಗೆಲ್ಲಈ ಬಲಾ ಎಡಕಾಡತಾವುಇವುಗಳದ್ದೂ ಬಿಡದ ಹಟಸಾಮಾನ್ಯರಿಗೆ ತಿಳಿಯದ ಗಂಟು  ಇಲ್ಲಿ ಬಳಸಿದ ನುಡಿಗಟ್ಟುಗಳು ಸಾಮಾನ್ಯ ಬದುಕಿನವೇ ಆದರೆ ಕಡೆಯಲ್ಲಿ ಧ್ವನಿಸುವ ಅರ್ಥ ಮಾತ್ರ ಕೈ ಗೆಟುಕದ್ದು. ಹೀಗೆ‌ ಲೌಕಿಕದ ಈ‌ ಕಾವ್ಯ ಅಲೌಕಿಕದ ಚಿಂತನೆ ಮಾಡುವದು ವಿಶೇಷವಾಗಿದೆ. ಕವಿ ಸಂಕಲನಕ್ಕೆ “ಕತ್ತಲು ಬೆಳಕು” ಎಂಬ ಹೆಸರಿರಿಸಿದ್ದಾರೆ. ಜೀವನವೇ ಕತ್ತಲು ಬೆಳಕಿನ ಸಂಗಮ ಒಂದಾದ‌ ಮೇಲೊಂದು ,ಒಂದರೊಳಗೊಂದು ಸೇರಿಕೊಂಡು ಬದುಕಿಗೆ ಅರ್ಥ ಕಲ್ಪಿಸುವ ಕಾರ್ಯ‌ಮಾಡುತ್ತವೆ. ಅವರಿಗೆ ಅವಳ ಪ್ರೀತಿ ಅಂದರೇನೆ ಬೆಳಕು,ಅವರಡೂ ನೇರೆ ಬೇರೆ ಅಲ್ಲವೇ ಅಲ್ಲ ಅದನ್ನೇ  ಶಾಯಿರಿ ೯೬ ರಲ್ಲಿ ಕತ್ತಲ ಬೆಳಕಿನ ಒಡಕ ಬ್ಯಾಡಈ ಒಂದ ಬದುಕಿಗೆ ಎರಡೂ ಬೇಕಎಂದರೆ೯೫ ರಲ್ಲಿ ಬೆಳಕಿನೊಳಗ ಕತ್ತಲುಕತ್ತಲಿನೊಳಗ ಬೆಳಕುತಮ್ಮ ತಮ್ಮ ಹೊಳಪು ತೋರಸ್ತಾವಎನ್ನುವ ಸಾಲಿವೆ . ಶಾಹಿರಿ ೮೮ ರಲ್ಲಿ ಬೆಳಕು ಬರಿ‌ಬೆಳಕಲ್ಲಕತ್ತಲು ಹೊತ್ತು ತರೋ ವ್ಯಾಪಾರಿಕತ್ತಲು ಬರಿ‌ಕತ್ತಲಲ್ಲಬೆಳಕಿಗೆ ಬೆಲೆ ತರೋ ಸರಕು  ಎನ್ನುತ್ತಾರೆ. ಇಂಥ ಸಾಲುಗಳು‌ ಇಲ್ಲಿ‌ ಮತ್ತೆ ಮತ್ತೆ ಎದುರಾಗುತ್ತವೆ.ಕವಿಗೆ ಅವರ ಪ್ರೀತಿ‌ ಕೂಡ ಕತ್ತಲ ಬೆಳಕಿನ ಆಟವೇ..ಬೆಳಕು ಕತ್ತಲಿನೊಡನೆ ತಮ್ಮ ಪ್ರೇಮ ಸಮೀಕರಣ ಮಾಡುವ ಕವಿ ಬೆಳಕ ನೋಡಿಕತ್ತಲು ಯಾವತ್ತೂ ಸಿಟ್ಟಾಗಿಲ್ಲಕತ್ತಲ ನೋಡಿಬೆಳಕು ಯಾವತ್ತೂ ಸಿಟ್ಟ ಮಾಡಿಕೊಂಡಿಲ್ಲನಾನು-ನೀನು ಹೀಂಗ ಇದ್ದರನಮ್ಮ ಪ್ರೀತಿ ಹಾಲು ಬೆಲ್ಲ ಎಂದು ಎರಡಕ್ಕೂ ಹೊಂದಾಣಿಕೆ ಇರುವದನ್ನು ಸಾರುತ್ತಾರೆ.ಈ  ಸಾಲು ಬರೆದ ಕವಿಯೆ ಇನ್ನೊಂದು ಕಡೆ ಕತ್ತಲೆ ಬೆಳಕಿನ ನಡುವೆ ಸವತಿ ಮಾತ್ಸರ್ಯ ಇದೆ ಎನ್ನುವದು ಅಷ್ಟೇನೂ ಹಿತಕರವಾಗಿ ಕಾಣಿಸುವದಿಲ್ಲ  (ಶಾಯಿರಿ ೮೯) ಎನ್ನಿಸದೆ ಇರದು. ಇಲ್ಲಿನ ಒಂದೆರಡು ಶಾಯಿರಿ ಗಳು ಬಹಳ ವಿಶೇಷ ವಸ್ತುವನ್ನು ಒಳಗೊಂಡಿವೆ ಎನಿಸುತ್ತದೆ.ಅವೆಂದರೆ ಕನ್ನಡದ ಸ್ವಾಮಿಜಿಗಳೆಂದೇ ಹೆಸರಾದ ಲಿಂ.ತೋಟದ ಸಿದ್ದಲಿಂಗ ಮಹಾಸ್ವಾಮಿಗಳವರ ಕುರಿತಾದ ಶಾಯಿರಿಗಳು. ಒಂದು ಶಾಯಿರಿ ಅವರು “ನಡೆದದ್ದೆಲ್ಲಾ ಬೆಳಕು”  ಎಂದು ಅವರನ್ನು ಬಹಳ ಸುಂದರವಾಗಿ‌ ಬಣ್ಣಿಸಿದೆ.ಶಾಯಿರಿ ಎಂದರೆ ಬಹುತೇಕ ಗಂಡು ಹೆಣ್ಣಿನ ನಡುವಿನ‌ ಪ್ರೇಮದ ಮಧುರ ಭಾವಗಳನ್ನೊ ,ಅವರು ಅಗಲಿದ ವಿರಹದ ನೋವನ್ನೋ ವ್ಯಕ್ತ‌ ಮಾಡುವ ಕಾವ್ಯ ಎಂಬುದು ಸಾಮಾನ್ಯ ಸಂಗತಿ ಯಾಗಿತ್ತು. ಆದರೆ ಡಾ. ಬಮ್ಮನಕಟ್ಟಿಯವರ  ಶಾಯಿರಿ ಕತ್ತಲೆ ಬೆಳಕಿನ ಸಂದರ್ಭವನ್ನು ಪೂಜ್ಯರ ವ್ಯಕ್ತಿತ್ವ ಕಟ್ಟಿಕೊಡಲು ಬಳಸಿಕೊಂಡಿರುವದು  ವಿಶೇಷವಾಗಿದೆ. ದೀಪದ ಬುಡಕ ಕತ್ತಲುದೀಪದ ಬುಡದಾಗ‌ ಕತ್ತಲು ಅನ್ನೋದುಅಜ್ಜಾ ನಿನ್ನ‌ ನೋಡಿದಾಗsಮರೆತುs ಹೋಗಿತ್ತುಆದರ ಅಜ್ಜಾ ನೀ ಹೋದ ಮ್ಯಾಲೆಈ ಕತ್ತಲು ಮತ್ ಮತ್ ಕಾಡೇತಿ ಬೆಳಕೇ ತಾವಾಗಿದ್ದ  ಪೂಜ್ಯರು ಹೋದ ಮೇಲೆ ಇಲ್ಲೀಗ ಕತ್ತಲು ಮತ್ತೆ ಮತ್ತೆ ಕಾಡುವದು ಕವಿಯನ್ನು

ಡಾ.ಮಂಜುನಾಥ್‌ ಬಮ್ಮನಕಟ್ಟಿಯವರ ಶಾಯರಿ ಸಂಕಲನ “ಕತ್ತಲು ಬೆಳಕು” ಅವಲೋಕನ ಡಾ.ವೈ ಎಂ ಯಾಕೊಳ್ಳಿ Read Post »

ಪುಸ್ತಕ ಸಂಗಾತಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ

ಪುಸ್ತಕ ಸಂಗಾತಿ ಡಾ.ಬಸವರಾಜ ಗೌಡನಬಾವಿ “ಬರಗೂರು ರಾಮಚಂದ್ರಪ್ಪನವರ  ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,   ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯೂ ಮನುಷ್ಯ ಸಂಬಂಧಗಳ ಬೆಸೆಯುವ ಕನಸನ್ನು ಹೊತ್ತು ಬರುತ್ತಿದೆ. ಬರಗೂರು ರಾಮಚಂದ್ರಪ್ಪನವರು ತಮ್ಮ ಕೃತಿಯ ಮೂಲಕ ದೇಶದಲ್ಲಿರುವ ತಾರತಮ್ಯ, ಅಸಮಾನತೆ, ಮೂಲಭೂತವಾದಿತನ, ದ್ವೇಷ, ಈರ್ಷ್ಯೆಗಳು ಸಮಾನತೆ, ಸೌಹಾರ್ದತೆಯ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು  ವಿಷಾದಿಸುತ್ತಾರೆ. ಬರಗೂರು ರಾಮಚಂದ್ರಪ್ಪನವರು ವಿವಿಧ ಸಂದರ್ಭದಲ್ಲಿ ಬರೆದ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ಜೊಡಿಸಿಕೊಟ್ಟಿದ್ದಾರೆ. ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಎನ್ನುವ ಈ ಕೃತಿ ಒಟ್ಟು ಹತ್ತು ಲೇಖನಗಳನ್ನು ಒಳಗೊಂಡಿದೆ. ಸೌಹಾರ್ದತೆ ಮತ್ತು ಸಮಾನತೆ ಭಾರತದ ಎರಡು ಕಣ್ಣುಗಳು. ಸೌಹಾರ್ದತೆ ಎಂದರೆ ಪಕ್ಷಪಾತವಲ್ಲ, ಪೂರ್ವಗ್ರಹವಲ್ಲ, ಯಾವುದರ ಪರವೂ, ವಿರೋಧವೂ ಅಲ್ಲ. ಎಲ್ಲ ಅವಿವೇಕಗಳನ್ನು ಮೀರಿದ ವಿವೇಕ ಹಾದಿ. ಇಲ್ಲಿ ನಾವು ವಿವೇಕಾನಂದರ ಧೀರೋದಾತ್ತ ನಿಲುವನ್ನು ಕಾಣುತ್ತವೆ. ಅವರ ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ, ದಲಿತರ ಉದ್ಧಾರವೇ ಧರ್ಮದ ಮೂಲತತ್ವ ಎನ್ನುವಲ್ಲಿ ಅವರ ವೈಚಾರಿಕತೆ ಸತ್ಯದ ಅನಾವರಣವಾಗುತ್ತದೆ. ಗಾಂಧೀಜಿಯು ಪರಧರ್ಮ ಸಹಿಷ್ಣುತೆಯ ಪ್ರತೀಕ. ಧರ್ಮವು ರಾಷ್ಟ್ರೀಯತೆಯ ಮಾನದಂಡವಲ್ಲ. ಅದೇನಿದ್ದರೂ ಮನುಷ್ಯ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ ಎಂದು ಹೇಳುವ ಮೂಲಕ ಪರಧರ್ಮ ಸಹಿಷ್ಣುತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿಯ ವಿಚಾರಧಾರೆ ರಾಷ್ಟ್ರೀಯತೆಗೂ ಧರ್ಮನಿಷ್ಠೆಗೂ ಸಂಬಂಧವನ್ನು ಕಲ್ಪಿಸುತ್ತಿರುವ ಈ ಸಂದರ್ಭದಲ್ಲಿ ತುಂಬಾ ಅಗತ್ಯವೆಂದು ತಿಳಿಸುತ್ತದೆ. ಅವರ ಸತ್ಯನಿಷ್ಠೆ, ಪರಧರ್ಮ ಸಹಿಷ್ಣುತೆ, ಪ್ರಾಮಾಣಿಕತೆ ಯಾರಿಗೂ, ಯಾವತ್ತಿಗೂ ಆದರ್ಶವೇ, ಅನುಕರಣೀಯವೇ ಆಗಿದೆ. ಗಾಂಧಿ ಎಲ್ಲಾ ಧರ್ಮಿಯರಿಗೂ ಪರಧರ್ಮ ಸಹಿಷ್ಣುತೆ ಉಳ್ಳವರಿಗೂ ಸಾಂಕೇತಿಕ ದಾರಿದೀಪವಾಗಿದ್ದಾರೆ.  ಸಾಮಾಜಿಕ ಪ್ರಜಾಪ್ರಭುತ್ವವನ್ನು ಕುರಿತಂತೆ ಅಂಬೇಡ್ಕರರ ವಿಚಾರಗಳನ್ನು ಕೃತಿ ದಾಖಲಿಸುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು ಎನ್ನುವ ಪ್ರಶ್ನೆಗೆ ಅದೊಂದು ಜೀವ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಜೀವನ ತತ್ವವನ್ನಾಗಿಸಿಕೊಂಡ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೂಲತತ್ವಗಳಿಗೆ ಧರ್ಮವು ಮನ್ನಣೆ ನೀಡಲೇಬೇಕು. ಇಲ್ಲದಿದ್ದರೆ ಧರ್ಮವು ನಾಶವಾಗುತ್ತದೆ. ನಿಜವಾದ ಧರ್ಮವಿರುವುದು ಮಾನವನ ಹೃದಯದಲ್ಲೇ ಹೊರತು ಶಾಸ್ತ್ರಗಳಲ್ಲಿ ಅಲ್ಲ ಎನ್ನುವುದು ಮನುಷ್ಯ ಬದುಕಿನ ವಾಸ್ತವದ ಮಾತು. ಈ ಮಾತು ಕುವೆಂಪು ಅವರ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು? ಎಂಬ ಸಾಲನ್ನು ನೆನಪಿಸುವುದಲ್ಲದೇ ಬದುಕಿನ ವಾಸ್ತವ ಮತ್ತು ಭಾವನಾತ್ಮಕತೆಯ ವೈರುಧ್ಯಗಳನ್ನು ತೆರೆದಿಡುತ್ತದೆ.  ಮನುಷ್ಯರನ್ನು ಹುಡುಕುತ್ತಾ ಹೊರಡುವ ಕೃತಿ ಮನುಷ್ಯರ ಬದಲು ಜಾತಿ ಧರ್ಮಗಳ ಲೆಕ್ಕ ಕೊಡುವ ಸಮಾಜವನ್ನು ಕಂಡು ವ್ಯಥೆಪಡುತ್ತದೆ. ಕನ್ನಡತ್ವದಲ್ಲಿ ಮನುಷ್ಯತ್ವದ ಪರಂಪರೆಯನ್ನು ಕಂಡುಕೊಂಡು ಭವಿಷತ್ತಿನ ಆಶಾವಾದವನ್ನು ಪ್ರಕಟಿಸುತ್ತದೆ. ಅದೇ ಸಮಯದಲ್ಲಿ ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜದ ಬಗ್ಗೆಯೂ ಮರುಕಪಡುತ್ತದೆ. ಈ ಕೃತಿಯನ್ನು ಸ್ವೀಕರಿಸುವ ಜನಕ್ಕೆ ತಾಯ್ತನದ ಕರುಳು ಇಲ್ಲದೇ ಹೋದರೂ ಕನಿಷ್ಠ ತಾಯ್ತನದ ಹಂಬಲವಾದರೂ ಹುಟ್ಟಲಿ ಎನ್ನುವ ಆಶಯವನ್ನು ಕೃತಿ ವ್ಯಕ್ತಪಡಿಸುತ್ತದೆ. ಡಾ.ಬಸವರಾಜ ಗೌಡನಬಾವಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ Read Post »

ಪುಸ್ತಕ ಸಂಗಾತಿ

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ

ಪುಸ್ತಕ ಸಂಗಾತಿ ಸುಮತಿ ನಿರಂಜನ್ ಚಂದಕಚರ್ಲ ರಮೇಶ್ ಬಾಬು ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು” “ಮಧ್ಯಮಗತಿಯ ಸುಗಮ ಗದ್ಯ” ಮೂಲತಃ ಬಳ್ಳಾರಿಯವರಾದ ಚಂದಕಚರ್ಲ ರಮೇಶ್ ಬಾಬು ಅವರು ಹೈದರಾಬಾದ್ ಕನ್ನಡಿಗರು. ಹೊರನಾಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ನಾಟ್ಯ ರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್, ತೆಲಂಗಾಣ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವರು. ಇವರು ತೆಲುಗು, ಕನ್ನಡ ಎರಡರಲ್ಲೂ ಪ್ರವೀಣರು. ಕವಿತೆ, ಲಘು ಬರಹಗಳು, ಅಂಕಣಗಳು, ಅನುವಾದ ಕೃತಿಗಳು (ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ)- ಹೀಗೆ ಒಟ್ಟು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ. ಆಚೀಚಿನ ಆಯಾಮಗಳು ಸಂಕಲನದಲ್ಲಿ ಒಟ್ಟು ಮೂವತ್ತನಾಲ್ಕು ಲೇಖನಗಳಿವೆ. ಈ ಅಂಕಣ ಗೊಂಚಲಿನಲ್ಲಿ ಬಗೆಬಗೆಯ ಹೂವುಗಳು. ಎಲ್ಲವೂ ದಿನ ನಿತ್ಯ ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವಂತಹವು. ಅವುಗಳ ಮೇಲೆ ತುಂತುರು ಹನಿ ಚೆಲ್ಲಿದಂತೆ ತೆಳು ಹಾಸ್ಯ. ಕೆಲವಕ್ಕೆ ವೈಚಾರಿಕತೆಯ ಘಮವಿದ್ದರೆ, ಕೆಲವಕ್ಕೆ ಅಧ್ಯಾತ್ಮದ ಅಗರುಬತ್ತಿಯ ಪರಿಮಳ, ಸಣ್ಣಕ್ಕೆ- ಯಾವುದೂ ಮೂಗಿಗೆ ಬಡಿಯುವಂತದಲ್ಲ. ಹಿತ ಮಿತ, ನವಿರು. ಶ್ರೀಸಾಮಾನ್ಯನ ದೈನಂದಿನ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ಸವಾಲುಗಳು, ಅನಿವಾರ್ಯತೆಗಳ ಮೇಲೆ ಬರೆದ ಕಿರು ವ್ಯಾಖ್ಯಾನಗಳು- ಮನೆಯನ್ನು ಹೊಕ್ಕ ಇಲಿಯಿಂದ ಹಿಡಿದು ನೆರೆ ಹೊರೆ, ಗತಕಾಲದ ಟೂ ಇನ್ ಒನ್, ಗಾಂಧಿವಾದದ ಪ್ರಸ್ತುತತೆ ವರೆಗೆ – ಇಲ್ಲಿಯ ಬರಹದ ವಸ್ತುಗಳ ಹರವು ವಿಶಾಲ. ದಿಟ್ಟತನದಿಂದ ತನ್ನದೇ ಆದ ಧೋರಣೆಯನ್ನು ಅಭಿವ್ಯಕ್ತಿಸುತ್ತದೆ- “ಮೇರಾ ಭಾರತ್ ಮಹಾನ್”. ಬಯೋಪಿಕ್ ಬಗ್ಗೆ ಹೇಳುವಾಗ- ಚಲನಚಿತ್ರಗಳಲ್ಲಿ ಪುರಾಣ ಪುರುಷರ ಚಿತ್ರಣದಿಂದ ಹಿಡಿದು, ಕ್ರೀಡಾಪಟುಗಳ ರಾಜಕಾರಣಿಗಳ ಮೇಲಣ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗೆ ಇವರ ಅಧ್ಯಯನಶೀಲತೆಗೆ ಕನ್ನಡಿ. ಭಾಷೆ, ಅದರಲ್ಲೂ ಕನ್ನಡದ ಮೇಲಿನ ಲೇಖನಗಳಲ್ಲಿ ಕನ್ನಡಾಭಿಮಾನ ತುಂಬಿ ತುಳುಕುವುದು ಮಾತ್ರವಲ್ಲ ಉತ್ತಮ ಸಲಹೆಗಳೂ ಕಾಣುವುವು. ಸ್ವಂತ ಅನುಭವದ ಕುರಿತಾದ “ಆಕಾಶಯಾನವೂ…”, “ನಾವು ಇಲಿಯನ್ನು ಹೊರಗಟ್ಟಿದೆವು…”, “ನೋ ಪಾರ್ಕಿಂಗ್”- ಇತ್ಯಾದಿಗಳು ನಮ್ಮೆಲ್ಲರ ಅನುಭವವನ್ನು ಪ್ರತಿಫಲಿಸುವ ಆಪ್ತತೆ ಹೊಂದಿವೆ. ನನ್ನ ಮೆಚ್ಚಿನವು- ಶ್ವಾನೋಪಾಖ್ಯಾನ, (ಗ್ರೇಟ್ ಡೇನ್ ಗೆ “ಕಾಲಭೈರವ”, ಪೊಮರೇನಿಯನ್- ಭೂಮಿಗೆ ಸಮಾನಾಂತರವಾಗಿರುವ “ಕುಳ್ಳ ಕುನ್ನಿ” !), ಫೇಸ್ಬುಕ್ ಪ್ರಭಂಜನ, ಬೀಗರು (ಗಟ್ಟಿತನವಿರುವುದರಿಂದ ಬೀಗ ಎಂಬ ಹೆಸರು ಬಂದಿರಬಹುದು ಎಂಬ ಊಹೆ !), ನಿರೂಪಕರ ಪಾತ್ರ – ಕಬಡ್ಡಿ ಆಟಗಾರರಂತೆ ನಿರ್ದಿಷ್ಟ ಮಿತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ, ಮನೆಕೆಲಸದ ಸಾಮ್ರಾಜ್ಞಿ -(ಮನೆಯೊಡೆಯನನ್ನೆ ರೂಮಿನಿಂದ ಹೊರಗೋಡಿಸಲು ಕೋಲುಧಾರಿಣಿಯಾಗಿ ಒರೆಸಲು ನಿಂತ ಮಹಿಷಾಸುರ ಮರ್ದಿನಿ!), ವಜ್ರದಂತಕ್ಕೊಂದು ಕ್ಷತಿ ( ದಂತಸ್ಥ- ಹಲ್ಕಟ್ ಡಾಕ್ಟರ್!) – ಚಿಕ್ಕ ಚಿಕ್ಕ ಕುಂಚಕಾರಿತನದಿಂದ ಮನ ಸೆಳೆದ ಉದಾಹರಣೆಗಳು. ಭಾರವೆನಿಸದ ಈ ಲಲಿತ ಕಿರು ( ಯಾವುದೂ ೩-೪ ಪುಟ ಮೀರಿಲ್ಲ) ಪ್ರಬಂಧಗಳಲ್ಲಿ ಅಬ್ಬರವಿಲ್ಲ, ವ್ಯಂಗ್ಯದಲ್ಲಿ ಮೊನಚಿಲ್ಲ, ಹಾಸ್ಯದಲ್ಲಿ ಕಹಿಯಿಲ್ಲ, ಭಾಷೆಯಲ್ಲಿ ಶಬ್ದ ಪ್ರದರ್ಶನವಿಲ್ಲ. ನನಗೆ ಥಟ್ಟಂತ ನೆನಪಾದದ್ದು ಆರ್ .ಕೆ. ಲಕ್ಷ್ಮಣರ ಶ್ರೀಸಾಮಾನ್ಯನ ವ್ಯಂಗ್ಯ ಚಿತ್ರಗಳು. ಅಷ್ಟೇ ಖುಷಿ ಕೊಡುವಂತಹವು. ಸುಮತಿ ನಿರಂಜನಹೈದರಾಬಾದ್

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ Read Post »

ಪುಸ್ತಕ ಸಂಗಾತಿ

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ

ಪುಸ್ತಕ ಸಂಗಾತಿ ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?” ಒಂದು ಅವಲೋಕನ, ಮಧು ಮಾಲತಿ ಪತ್ರಕರ್ತ ˌ ಸಾಹಿತಿ ಹಾಗೂ ಅಂಕಣಕಾರರಾದ ಶ್ರೀ ವಿಶ್ವಾಸ್  ಡಿ ಗೌಡರ “”ನೆಮ್ಮದಿಯ ವಿಳಾಸವೆಲ್ಲಿದೆ”” ಕೃತಿಯನ್ನು ಖಂಡಿತಾ ಒಂದೊಮ್ಮೆ ಓದಲೇಬೇಕು .ಈ ಕೃತಿಯ ಶೀರ್ಷಿಕೆಯೇ ಬಹಳ ಆಪ್ತವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಸಹ ಎಷ್ಟೇ ಸುಖಿಯಾಗಿದ್ದರೂ ಈ ನೆಮ್ಮದಿಯನ್ನು ಕ್ಷಣವೂ ಅರಸುವವರೇ .ಈ ನೆಮ್ಮದಿಯ ವಿಳಾಸವ ಹುಡುಕಿ ಹುಡುಕಿ ಸೋತವರೇ ಹೆಚ್ಚು. ಅದರ ವಿಳಾಸವನ್ನು ಅರಸುವವರಿಗಾಗಿಯೇ ವಿಶ್ವಾಸ್ ಗೌಡರು ಈ ಕೃತಿಯನ್ನು ಬರೆದಿರಬಹುದು. ಏಕೆಂದರೆ ಇಲ್ಲಿರುವ ಪ್ರತಿ ಕಥೆಯು ಮನಸ್ಸಿಗೆ ತುಂಬಾ ಹತ್ತಿರವಾದಂತೆ ತೋರುತ್ತದೆ .ಪ್ರತೀ ಕಥೆಯಲ್ಲೂ ಓದುಗ ತನ್ನನ್ನೇ ಅಲ್ಲಿ ಬಿಂಬಿಸುತ್ತ ಹೋದಂತಿದೆ. ಇಲ್ಲಿರುವ ಪ್ರಸಂಗಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಘಟಿಸಿಯೇ ಇರುತ್ತದೆ .ಇಂತಹ ಘಟನೆಗಳನ್ನೇ ಕಥೆಯ ಜೀವಾಳವಾಗಿಸಿಕೊಂಡು ಸರಳ ಸುಂದರವಾಗಿ ಹೆಣೆಯುತ್ತಾ ಓದುಗನೆದೆಗೆ ಶಾಶ್ವತವಾಗಿ ಇಳಿಸುವಲ್ಲಿ ವಿಶ್ವಾಸ್ ಗೌಡರ ಪ್ರಭುದ್ಧತೆ ಎದ್ದು ಕಾಣುತ್ತದೆ.ಇಲ್ಲಿ ಬರುವ ಅಪ್ಪ ಮಕ್ಕಳ ಭಾವನಾತ್ಮಕ ಸಂಬಂಧಗಳ ಬರಹಗಳು ಓದುಗನ ಕಣ್ಣೆವೆಗಳನ್ನು ತುಂಬದೇ ಇರಲಾರದು .ಮಗಳಿಗಾಗಿ ಜೀವನವನ್ನೇ ಮುಡಿಪಿಡುವ ಅಪ್ಪ ˌಇಹಲೋಕ ತ್ಯಜಿಸಿಯು ಮಗನ ನೌಕರಿಗಾಗಿ ಅದೃಶ್ಯದಲ್ಲೂ ದೃಶ್ಯದಂತೆ ಗೋಚರಿಸಿ ಕಚೇರಿಗೆ ಅಲೆವ ಅಪ್ಪ ˌಖಾಯಿಲೆಯಿಂದ ಮೂಗನಾದ ಮಗನಿಗಾಗಿ ಮಾತಿದ್ದರೂ ಮೌನಕೋಟೆಯೊಳಗೆ ಬಂಧಿಯಾಗಿ ಜೀವಮಾನವಿಡೀ ಮೂಗನಾಗಿ ಬದುಕಿದ ಅಪ್ಪ ಹೀಗೆ ಅಪ್ಪನ ವ್ಯಕ್ತಿತ್ವ ಪ್ರತೀಕಥೆಯಲ್ಲೂ ಹಿಮಾಲಯಕ್ಕಿಂತ ಎತ್ತರದ ಸ್ಥಾನದಲ್ಲೇ ನಿಲ್ಲುತ್ತದೆ.ಈ ಕಾರಣಗಳಿಗಾಗಿ ಈ ಕೃತಿ ಮತ್ತಷ್ಟು ಆಪ್ತವಾಗುತ್ತಾ ಸಾಗುತ್ತದೆ .ಪ್ರೇಮ ಪ್ರಸಂಗಗಳ ಕಥೆಗಳಿಗೆ ಒಳಹೊಕ್ಕರೆ ಪ್ರೀತಿಯ  ಶರಧಿಯಲ್ಲಿ ಮಿಂದೆದ್ದವರೇ ನಾವೆಲ್ಲರೂ. ಅತೀ ನವಿರಾದ ನಾಜೂಕಾದ ಪದಪುಂಜಗಳು ಮತ್ತೆ ಮತ್ತೆ ಸೆಳೆಯುತ್ತವೆ . ಪ್ರತೀ ಓದುಗನೂ ಓದುತ್ತಿದ್ದಂತೆ ತನ್ನದೇ ಪ್ರೇಮ ಕಥೆ ಎಂಬಷ್ಟು ಅಲ್ಲಿ ಕಳೆದು ಹೋಗುತ್ತಾನೆ. ಇಲ್ಲಿ ಬರುವ ಪ್ರೀತಿಯ ಸೆಳೆತಗಳು ˌ ಮೊದಲ ಪ್ರೇಮ ˌ ಪ್ರೇಮ ನಿವೇದನೆಗೆ ತಲ್ಲಣ ಗೊಳ್ಳುವ ಮನಸ್ಸು ˌಸಿಕ್ಕಿಯೂ ಸಿಗದ ಪ್ರೇಮ ಇವೆಲ್ಲದರ ನಡುವೆ ಒಂದಷ್ಟು ಹೊತ್ತು ಓದುಗ ಪ್ರಭು ತನ್ನ ಜೀವನವನ್ನೇ ಅಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾನೆ. ಓದುತ್ತಾ  ಓದುತ್ತಾ ಆಧ್ರಗೊಳ್ಳುತ್ತಾನೆ . ನೆಮ್ಮದಿಯ ವಿಳಾಸವನ್ನು ಅರಸುತ್ತ ಅರಸುತ್ತ ಮತ್ತೆ ಮತ್ತೆ ಕೃತಿಯ ಮೇಲೆ ಕಣ್ಣಾಡಿಸುವಷ್ಟು ಬರಹಗಳು ಸೆಳೆಯುತ್ತವೆ.ಎಂದೋ ಅನುಭವಿಸಿದ ನೋವು ˌನಲಿವು ˌ ಸಂಕಟಗಳು ˌ ನಮ್ಮವರನ್ನೇ ಅರಿಯಲಾಗದ ಸ್ಥಿತಿ ˌ  ದಕ್ಕಿಯೂ ದಕ್ಕದ ಪ್ರೀತಿ ಇವೆಲ್ಲವುಗಳ ಸುತ್ತ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ .ಇಂತಹ ಘಟನೆಗಳೇ ವಿಶ್ವಾಸ್ ಗೌಡರ ಬರಹದ ಕೇಂದ್ರ ಬಿಂದು.  ಸುಮ್ಮನೇ  ಕೈಗೊತ್ತಿಕೊಂಡರೂ ಕೃತಿಯನ್ನು ಸಂಪೂರ್ಣ ಓದುವವರೆಗೂ ಅದು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರು ಒಮ್ಮೆಯಾದರೂ ಈ ಕೃತಿಯನ್ನು ಪಡೆದು ಓದಲೇಬೇಕೆನ್ನುವಷ್ಟು ಕೃತಿ ಸಿದ್ಧಗೊಂಡಿದೆ .ಈ ಮೂಲಕ ವಿಶ್ವಾಸ ಡಿ ಗೌಡರಿಗೆ ಶುಭಾಶಯಗಳನ್ನು ಕೋರುತ್ತಾ  ಓದುವೆಡೆಗೆ ಸಾಗೋಣ. ಮಧು ಮಾಲತಿ‌ ರುದ್ರೇಶ್

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ Read Post »

ಪುಸ್ತಕ ಸಂಗಾತಿ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ.

ಪುಸ್ತಕ ಸಂಗಾತಿ ಜಗದೀಶ ಹಾದಿಮನಿ “ಅಬುಚಾ ..! ಅಬುಚಾ..!” ಒಂದು ಅವಲೋಕನ ಶಂಕರಾನಂದ ಹೆಬ್ಬಾಳ ಅಬುಚಾ ಅಬುಚಾದ ಬೆನ್ನೇರಿ…. ಪುಸ್ತಕ : ಅಬುಚಾ ..! ಅಬುಚಾ..!ಲೇಖಕರು : ಜಗದೀಶ ಹಾದಿಮನಿಕಥಾ ಸಂಕಲನಪ್ರಕಾಶನ: ಪಂಚಮಿ ಪ್ರಕಾಶನ ನಾಡಿನ ಹೆಮ್ಮೆಯ ಕಥೆಗಾರ ಜಗದೀಶ ಹಾದಿಮನಿ ಅವರ ಅಬುಚಾ ಅಬುಚಾ ಕಥಾ ಸಂಕಲನ ಕಥಾ ಸಾಹಿತ್ಯಕ್ಕೆ ವಿಶೇಷ ಕೊಡುಗೆ. “ಮತಿದರ್ಪಣೆ ಕವಿನಾಂ ವಿಶ್ವಂ ಪ್ರತಿಫಲತಿ” ಎಂಬ ಕವಿವಾಣಿಯಂತೆ ಕವಿಯ ಮತಿಯೆಂಬ ಕನ್ನಡಿಯಲ್ಲಿ ಇಡಿ ವಿಶ್ವವೆ ಗೋಚರಿಸುತ್ತದೆ.ಅಂತಹ ಜ್ಞಾನನಿಧಿಯಾದ ಕಥೆಗಾರ ಸಹೋದರ ಜಗದೀಶ ಹಾದಿಮನಿ ಈ ನಿಟ್ಟಿನಲ್ಲಿ ಒಳ್ಳೆಯ ಹೃದ್ಯಮಯ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ವಾಸ್ತವಿಕತೆಯ ತಲ್ಲಣಗಳನ್ನು, ನಿತ್ಯ ನಡೆಯುವ ಘಟನೆಗಳನ್ನು ಹೃದ್ಯಮಯವಾಗಿ ಹೆಣೆದು ಓದುಗರಿಗೆ ಮುಟ್ಟಿಸುವ ಶೈಲಿ ನಿಜಕ್ಕೂ ಶ್ಲಾಘನೀಯ. ಮೊದಲನೆ ಹೆಜ್ಜೆಯಲ್ಲಿ ಅಬುಚಾ ಅಬುಚಾ….ಕಥೆಯಲ್ಲಿ ಚಿಕ್ಕ ಮಗುವಿನ ಹಠ ಸ್ವಭಾವ ಎಂತೆಂಥಾ ಸಮಸ್ಯೆಗಳನ್ನು ತಂದೊಡ್ಡಿತು ಹಾಗೂ ಇಡಿ ಊರನ್ನೆ ತಲ್ಲಣಗೊಳಿಸಿತು ಎಂಬುದನ್ನು ಸ್ವತಃ ಕಥೆಗಾರರೆ ದಾಖಲಿಸಿದ್ದಾರೆ.ಇದು ಗೋರೂರರ ಕಥೆಯೊಂದನು ನೆನಪಿಸುತ್ತದೆ‌. ಮಗುವಿನ ಹಠಕ್ಕೆ ಕಾರಣವೇನು ಎಂದು ಹುಡುಕುವಲ್ಲಿ ಇಡಿ ಮನೆ ಹಾಗೂ ಊರಿಗೆ ಊರೆ ವಿಫಲವಾಗುತ್ತದೆ. ಮಗುವಿಗೆ ಹೊಟ್ಟೆ ಹಸಿದಿರಬಹುದು ಎಂದು ವೈದ್ಯರ ಹತ್ತಿರ ಕರೆದುಕೊಂಡು ಹೋಗುವಾಗ ಮಗುವಾಗುವ ಬದಲು “ಸಿಡಿಗುಂಡನು ಎತ್ತಿಕೊಂಡು ” ಎಂದು ರೂಪಕವನ್ನು ಬಳಸುತ್ತಾರೆ ಕಾರಣ ಆ ಅತಿರೇಕದ ಅಬುಚಾದ ಹಠಕ್ಕೆ ಬೇಸತ್ತಿತ್ತು.ಕೊನೆಗೆ ಹುಡುಗಿಯ ಅಣ್ಣ ಅದರ ಸಾಂತ್ವನಕ್ಕೆ ಮುಂದಾಗುತ್ತಾನೆ, ಎಲ್ಲೈತಮ್ಮ ತೋರ್ಸು ಎಂದಾಗ ಕಾಟಾದ ಮೂಲೆಯನ್ನು ತೋರಿಸಿತು. ಕೊನೆಯಲ್ಲಿ ಕಸದ ರಾಶಿಯಲ್ಲಿ ಸಿಕ್ಕ ಚಮಚದಿಂದ ನೆಮ್ಮದಿ‌ ಸಿಗುವ ಅಬುಚಮ್ಮಳ ಕಥೆ ಓದುಗರ ಮನ ಗೆಲ್ಲುತ್ತದೆ. ಕಾವೇರಮ್ಮ ಸರಳ ಸುಂದರ ಕಥೆಯಾಗಿದ್ದು ನಿತ್ಯ ಜೀವನದಲ್ಲಿ‌ ನಡೆಯುವ ಘಟನೆಯೆ ಆಗಿದ್ದು ಕಾವೇರಮ್ಮನ ಮಗ ವೃತ್ತಿಯಿಂದ ಪೋಲಿಸ ಅಧಿಕಾರಿಯಾಗಿದ್ದಾನೆ. ಮಗನೆಂದರೆ ಮಮಕಾರ ಆ ತಾಯಿಗೆ. ಆ ಊರಿಗೆ ಅವನೊಬ್ಬನೆ ನೌಕರಸ್ಥ ಎಂಬುದನ್ನು ಕಥೆಗಾರ ಎಚ್ಚರಿಸುವ ಸಂದೇಶ ಹಳ್ಳಿಗಳಲ್ಲಿಯೂ ಕೂಡಾ ವಿದ್ಯಾವಂತರಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ.ಕಾವೇರಮ್ಮನ ಮಗನಿಗೆ ಮದುವೆಯಾಗಿ ನಂತರ ಆತ ಊರನ್ನೆ ಮರೆಯುತ್ತಾನೆ.ತಾಯಿಯು ಆಗಾಗ ಹೋಗಿ ಬರುವುದು ,ಮಗನ ಅಕ್ಕರೆಯಿಂದ ತಾಯಿ ವಂಚಿತಳಾಗಿ ಕೊನೆಗೆ ಮಗನ ಹತ್ತಿರ ಹೋಗಲೆ ಬಾರದೆಂಬ ಧೃಡನಿರ್ಧಾರಕ್ಕೆ ಬಂದರೂ ಮೊಮ್ಮಕ್ಕಳ ಬಾಂಧವ್ಯ ಆ ಕಡೆ ಎಳೆಯುತ್ತದೆ.ಅತ್ತೆಯನ್ನು ಮನೆಯ ಕೆಲಸದವಳಂತೆ ನೋಡಿಕೊಂಡ ಸೊಸೆಯು ಕೊನೆಯಲ್ಲಿ ಊರು ಸುತ್ತುವ ನೆಪದಲ್ಲಿ ಅತ್ತೆಯನ್ನು ನಂಬಿಸಿ ಧನ್ನೂರು ಹೊಳೆಯಲ್ಲಿ ತಳ್ಳಿ ಜಾರಿ ಬಿದ್ದಳೆಂದು ನಂಬಿಸುವ ಕಪಟತನವನ್ನು ಮಗುವಿನ ಮಾತಿನಲ್ಲಿ ಎತ್ತಿ ತೋರಿಸುವ ಜಾಣ್ಮೆ ಅಸಾಮಾನ್ಯ ಕಥೆಗಾರರಿಗೆ ಮಾತ್ರ ಸಾಧ್ಯವಾಗುತ್ತದೆ. ಮಾತಿನ‌ಬೆನ್ನು ಹತ್ತಿ ಕಥೆಯಲ್ಲಿ ಹೆರಿಗೆಗಾಗಿ ತವರಿನಲ್ಲಿ ರೇವತಿ ಗಂಡನಿಗಾಗಿ ಕಾಯುವ ಹಪಾಹಪಿ,ಹೊಲದ ಕೆಲಸದಲ್ಲಿ ಮಗ್ನನಾಗಿ ಕೊನೆಗೆ ಬರುತ್ತೆನೆ,ಬರುತ್ತೆನೆ ಎಂದು ದಿನ ತಳ್ಳಿ ಬರುವಾಗ ಆಕಸ್ಮಾತ ಅಪಘಾತವಾಗಿ ಸಾಯುವ ದುಃಸ್ಥಿತಿ ಎದುರಾಯಿತು. ಇತ್ತ ಅವಳಿಗೆ ಪ್ರಸವ, ಸೂಲಗಿತ್ತಿಯ ನಂಜಮ್ಮನ ನಗೆಚಾಟಿಕೆಯಲ್ಲಿ ತೇಲುತ್ತ ತನ್ನನ್ನೆ ತಾ ಮರೆತಿದ್ದಾಳೆ.ಗಂಡ ಅವಸರದಲ್ಲಿ ಬರುವಾಗ ಇಹಲೋಕ ತ್ಯೆಜಿಸಿದ್ದು ಆಕಗೆ ಗೊತ್ತಿಲ್ಲದೆ ಹೋದದ್ದು ಎಂತಹ ವಿಪರ್ಯಾಸ. ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತ್ತಿದ್ದವು ಕಥೆ ಪ್ರೇಮದ ಪರಿಯನ್ನು ಬಿಚ್ಚಿಡುತ್ತದೆ. ಕಥೆಯಲ್ಲಿ ನಾಯಕಿ ಐಎಎಸ್ ಅಧಿಕಾರಿ ನಾಯಕ ಅರೆಹುಚ್ಚ, ಹೈಸ್ಕೂಲ ಟೀಚರ ಆದಾಗಿನಿಂದ ಆಕೆಯನ್ನು ಮನಸಾರೆ ಪ್ರೀತಿಸಿ ಕೊನೆಗೆ ಕೈಗೆ ಸಿಗದೆ ಆಕೆ ಬೇರೊಬ್ಬನನ್ನು ಇಷ್ಟಪಟ್ಟು ಮದುವೆಯಾಗಿ ಕೊನೆಗೆ ಇತನೆ ಅವಳನ್ನು ಹುಡುಕಿಕೊಂಡು‌ ಮಾತನಾಡಿಸಿ ಹೋಗುವ ಸ್ಥಿತಿ ಓದುಗರಿಗೆ ಕಂಬನಿ ಉಕ್ಕಿಸುತ್ತದೆ. ಅಲ್ಲಿಂದ ಏನು ಕೊಟ್ಟರೂ ಬೇಡವೆನ್ನುವ ಆತ ಹಾಗೆ ನಿರ್ಗಮಿಸುತ್ತಾನೆ.ಹೊರಗಡೆ ದಾರಿಯಲ್ಲಿ ಗಿಡದ ಹತ್ತಿರ ಕುಳಿತಾಗ ಪೋಲಿಸರ ಈತನ ಬಳಿಗೆ ಬಂದು ಇನ್ನೊಬ್ಬ ಎಲ್ಲಿ…? ಎಂಬ ಪ್ರಶ್ನೆ ಕೇಳಿ ಶೂಟ್ ಮಾಡುವ ದೃಶ್ಯ ಎದೆ ಝಲ್ಲೆನಿಸುತ್ತದೆ.ಆಗಲೂ ಕಣ್ಣುಗಳು ಅವಳನ್ನೆ ತುಂಬಿಕೊಳ್ಳುತಿದ್ದವೆಂಬ ಅಸಹನೀಯ ದನಿಯಲ್ಲಿಅಮಾಯಕನ ಮನಸಿನ ನುಡಿಗಳನ್ನು ವರ್ಣಿಸುವ ಪರಿ ಅದ್ಬುತ. ಭೂಮಿ ಇದೊಂದು ಮಹಿಳಾಪರ ಕಥೆಯಾಗಿದ್ದು ಗಂಡು ಸಂತಾನಕ್ಕಾಗಿ ಸಿದ್ದಮ್ಮ ಮತ್ತು ಗಿರೆಪ್ಪ ಹುಟ್ಟಿದ ಹೆಣ್ಣು ಮಕ್ಕಳನೆಲ್ಲ ಒಂದೊಂದಾಗಿ ಕರುಣೆಯಿಲ್ಲದೆ ಕೊಲ್ಲುವುದು ಒಂದು ಪ್ರವೃತ್ತಿಯಂತೆ, ಮೊದಮೊದಲು ನಿಧಿ ಹುಡುಕುವ ನೆಪದಲ್ಲಿ ಮಗಳನ್ನು ಕರೆದೊಯ್ವ ತಂದೆ ಕೊನೆಗೆ ತೋಡಿದ ಗುಂಡಿಯಲ್ಲಿ‌ ಮಗಳನ್ನೆ ಮುಚ್ಚುವ ಕ್ರೂರವೃತ್ತಿಗೆ ಇಳಿವಲ್ಲಿಓದುಗನಿಗೆ ಛೇ…ಹೀಗಾಗಬಾರದಿತ್ತು? ಎನ್ನುವ ಭಾವ ಮೂಡುತ್ತದೆ. ಗಂಡು ಮಗುವಿಗಾಗಿ ಈ ಸಮಾಜ ಏನೆಲ್ಲ ಮಾಡಿಸುತ್ತದೆ ಎನ್ನುವುದನ್ನು ಸುಂದರ ಕಥೆಯ ಮೂಲಕ ಹೆಣೆದು ಕೊಟ್ಟಿದ್ದಾರೆ. ನಿಮ್ಮೊಳಗಿನ ಕಥೆಯಲ್ಲಿ ಮೋಹನ ಎಂಬ ಕಥಾಕಾರರ ಅಭಿಮಾನಿಯಾಗಿದ್ದ ರೂಪಾ ಹುಡುಕಿ ಹೊರಡುವ ಕಥೆ ಮುಂದೆ ಸಂಭಾಷಣೆಗಿಳಿದು ತನ್ನ ಸಾಹಿತ್ಯ ಜೀವನದ ಬಿಚ್ಚುತ್ತ ಕೊನೆಗೆ ಅವಳನ್ನು ಕೈಸವರುವ ಜಾಯಮಾನಕ್ಕಿಳಿವ ಸಂಗತಿ ಎದುರಾಗುತ್ತದೆ. ರೂಪಾ ” ನಾನಂತ ಹೆಣ್ಣಲ್ಲ ” ಎನ್ನುತ್ತ ಹೊರಡುತ್ತಾಳೆ.  ನೀನಿನ್ನು ನನ್ನ ಮರೆತಿಲ್ಲ ಎನ್ನುವಲ್ಲಿ ರೂಪಾಳಿಗೆ ನನ್ನ ಮಗನ ಹಾಗೂ ಮನೆಯ ಹೆಸರು ಮೋಹನ ಎಂದಿಟ್ಟಿರುವೆ ನಿನ್ನೊಳಗಿನ ಕಾಮುಕನನ್ನು ನಾ ಮರೆಯಲು ಅಸಾಧ್ಯವೆಂದು,ಹೇಳುವ ಕಥೆಗಾರರು ಒಂಟಿಯಾಗಿ ಸಿಕ್ಕ ಸಮಯದಲ್ಲಿ ಮನಸು ಕೈಜಾರಬಾರದೆನ್ನುವ ಸಂದೇಶ ಕೊನೆಯಲ್ಲಿ ಕೊಟ್ಟಿದ್ದಾರೆ. ಸೇಡು ಕಥೆಯಲ್ಲಿ ಸಿದ್ದವ್ವ ಮತ್ತು ಬೈರನ ಸುಂದರ ಸಂಸಾರದಲ್ಲಿ ಬೈರನನ್ನು ತೊರೆದು ಎಮ್ಮಿಯನ್ನು  ಸಾಕಿ ಹಾಲು‌,ಮೊಸರು, ತುಪ್ಪ ಮಾರಿ ಗಟ್ಟಿಗಿತ್ತಿಯಂತೆ ಬದುಕಿದ ಸಿದ್ದವ್ವಳನ್ನು ಬಲಾತ್ಕಾರ ಮಾಡಿದ ಸಂಗಪ್ಪಗೌಡನನ್ನು ಕುಡಗೋಲಿಂದ ಕೊಚ್ಚಿ ಕೊಲ್ಲುವ ಪ್ರಸಂಗವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ, ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಚಿತ್ರಣವನ್ನು ಸೇಡು ಕಥೆಯಲ್ಲಿ ಬಿತ್ತರಿಸಿದ್ದಾರೆ. ಜೀವನ್ಮುಕ್ತಿ ಕಥೆಯಲ್ಲಿ ಪ್ರೀತಿಯನ್ನು‌ನಂಬಿ ಹೊರಟವಳಿಗೆ ಸಿಕ್ಕಿದ್ದು ವೇಶ್ಯೆಯಂಬ ಪಟ್ಟ ಅಲ್ಲಿಂದ ಹೊರಗೆ ಬರಲು ಮಾಡಿದ ಪ್ರಯತ್ನ ಕೊನೆಗೆ ಹರಿಚಂದನಯೆಂಬ ವ್ಯೆಕ್ತಿಯಿಂದ ಹೊರಬಂದು ತಾನಿದ್ದ ಸ್ಥಳಕ್ಕೆ ಹೋದಾಗ ಆಕೆ ಪಡುವ ವ್ಯಥೆ, ಒಳಗಿನ ಹೇಳತೀರದ ಸಂಕಟ , ಕರುಳು ಹಿಚುಕುತ್ತವೆ ಸ್ವತಃ ತಮ್ಮನಾದವನೆ ಅವಳ ನೇಣು ಹಾಕುವ ಸಂದರ್ಬವೆದುರಾಗಿ ಕೊನೆಗೆ ಜೀವ ಕಳೆದುಕೊಳ್ಳುವ ಕ್ಷಣದಲ್ಲಿ ಮತ್ತೆ ಜೀವ ಚಿಗುರಿತು ಅದು ಕೇವಲ ಕ್ಷಣಿಕ ಅಷ್ಟೆಯೆಂಬ ನಿದರ್ಶನದೊಂದಿಗೆ ಮನೆಬಿಟ್ಟು ಹೋದವಳ ದುರಂತ ಕಥೆಯನ್ನು ಜೀವನ್ಮುಕ್ತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಉಯಿಲು ಕಥೆಯು ಇದಕ್ಕೆ ಹೊರತಾಗಿಲ್ಲ ಹಣ ,ಆಸ್ತಿ, ಸಂಪತ್ತು ಎಲ್ಲರನ್ನೂ ಏನು ಬೇಕಾದರೂ ಮಾಡಿಸುವ ಜಗತ್ತು. ಶಿವಶಂಕರಗೌಡರ ಕಾಲದಿಂದಲೂ ತಿಮ್ಮಣ್ಣ ಆಳಾಗಿ ದುಡಿಯುತ್ತಿದ್ದವನು, ಅವನ ಹೆಸರಿಗೆ ಎಂಟು‌ನೂರು ಕೋಟಿ ಆಸ್ತಿ ಉಯಿಲು ಬರೆದದ್ದು ಗೌಡರ ಮಗನಿಗೆ ಒಳಗೊಳಗೆ ಖೇದವಿತ್ತು, ಇದಕ್ಕಾಗಿ ತಿಮ್ಮಣ್ಣ ಅದರ ಮೇಲೆ ಎಳ್ಳಷ್ಟು ಆಸೆಯಿರದೆ ಅವನಿಗೆ ಒಪ್ಪಿಸಿ, ನಮ್ಮ ಕುಟುಂಬವನ್ನೆ ನಾಶಮಾಡಿದ ಈ ಆಸ್ತಿ ನಮಗೆ ಬೇಡವೆಂದು ಮರಳಿ ನೀಡುವ ನಾವು ಹೀಗೆ ಇರುತ್ತೇವೆ ಎನ್ನುವ ಉದಾರತನ ಎತ್ತಿ ತೋರುತ್ತಾನೆ. ಬದುಕು ಕಥೆಯಲ್ಲಿ ದಿನನಿತ್ಯ ಸೂಜಿ,ಪಿನ್ನು ,ಡಬ್ಬಣ ಮಾರುವವರ ಕಥೆಯನ್ನು ತುತ್ತು ಅನ್ನಕ್ಕಾಗಿ, ಪುಡಿಗಾಸಿಗಾಗಿ ಪರದಾಡುವ ಸ್ಥಿತಿ ಅವರ ನೋವು ನಲಿವುಗಳನ್ನು ಬಿಚ್ಚಿಡುತ್ತಾರೆ. ಕೊನೆಗೆ ಅವರ ಹದಿನಾರು ವರ್ಷದ ಮಗನ ಕಿಡ್ನಿ ಆಪರೇಶನಗೆ ಹಣ ಹೊಂದಿಸಲಾಗದೆ ಕಳೆದುಕೊಳ್ಳುವ ಹೃದಯ ಹಿಂಡುವ ಚಿತ್ರಣ ಎದುರಾಗುವ ಸನ್ನಿವೇಶ ಕಣ್ಣಲ್ಲಿ ನೀರು ತುಂಬಿಸುತ್ತದೆ. ಹತ್ತಿಪ್ಪತ್ತು ದುಡಿವವರಿಗೆ ದೊಡ್ಡ ರೋಗ ಬಂದರೆ ಏನಾಗುತ್ತದೆನ್ನುವ  ವಾಸ್ತವತೆಯಲ್ಲಿ ಕವಿ ಕಥೆ ಹೆಣೆದಿದ್ದಾರೆ. ವಿಧಿ ಕಥೆಯಲ್ಲಿ ಹೊಯ್ಸಳೇಶ್ವರನ ಚರ್ಮ ಸುಲಿಯುವ ಘಟನೆ ಸುಲ್ತಾನನ ಕರಾಳ ಮುಖವನ್ನು ಓದುಗನಿಗೆ ಬಿಚ್ಚಿಡುತ್ತದೆ. ಪರಸ್ಪರ ಸಂಧಾನ ಮಾಡಿಕೊಂಡು ಕೊನೆಗೆ ದೊಪ್ಪನೆ ಎರಗಿ ಹೊಯ್ಸಳರ  ಸೈನ್ಯವನ್ನೆ ದಿಕ್ಕಾಪಾಲು ಮಾಡುವ ಸಂಚು ಬಲ್ಲಾಳನಿಗೆ ಗೊತ್ತಾಗದೆ ಕೊನೆಗೆ ಸುಲ್ತಾನನ ಕ್ರೌರ್ಯವೆ ವಿಜೃಂಭಿಸುತ್ತದೆ. ಬಹುಶಃ ಇದು ವಿಧಿಲಿಖಿತ ಎನ್ನುವಷ್ಟರ ಮಟ್ಟಿಗೆ ಕವಿ ಕಥೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಒಟ್ಟಿನಲ್ಲಿ ಅಬುಜಾ ಅಬುಜಾ ಕಥೆ ಓದುಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಇಲ್ಲಿನ, ಸಿದ್ದಮ್ಮ, ಕೌಶಲ್ಯಬಾಯಿ, ತಿಮ್ಮಣ್ಣ,ದೇವಪ್ಪ, ಗಿರೆಪ್ಪ,ಧರಣೀಶ, ಹರಿಚಂದನ್ ಇವರೆಲ್ಲ ಜೀವಂತ ಪಾತ್ರಗಳಾಗಿ ಕಣ್ಮುಂದೆ ನಿತ್ಯವೂ ಓಡಾಡುವಂತೆ ಭಾಸವಾಗುತ್ತದೆ. ಈ ಕಥಾಸಂಕಲನ ನಾಡಿನ ಇನ್ನಷ್ಟು ಓದುಗರ ಮನಗೆಲ್ಲಲಿ ಎಂದು ಆಶಿಸುತ್ತೇನೆ… ಶಂಕರಾನಂದ ಹೆಬ್ಬಾಳ

ಜಗದೀಶ ಹಾದಿಮನಿ ಅವರ ಕಥಾ ಸಂಕಲನ “ಅಬುಚಾ ..! ಅಬುಚಾ..!”ದ ಬೆನ್ನೇರಿ. Read Post »

ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

ಪುಸ್ತಕ ಸಂಗಾತಿ

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ.

ಸರಸ್ವತಿ ಕೆ. ನಾಗರಾಜ್ ಹಿರಿಯೂರು ಅವರ ಕಥಾ ಸಂಕಲನ “ಸಪ್ತ ಸಾಗರದಾಚೆ” ಒಂದು ಅವಲೋಕನ ಡಾ.ಓ .ನಾಗರಾಜ್‌ ಅವರಿಂದ. Read Post »

ಪುಸ್ತಕ ಸಂಗಾತಿ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು
ಅವಲೋಕನ ಬಿ.ಹೆಚ್. ತಿಮ್ಮಣ್ಣ
ಕೃತಿ: *ಬಾಳೊಂದು ಚೈತ್ರಾ ಮಯ*
ಲೇಖಕರು: ವಿಶ್ವಾಸ್.ಡಿ. ಗೌಡ
ಪ್ರಕಾಶನ: ಬೊಂಬೆ ಎಂಟರ್ಪ್ರೈಸಸ್ , ಮೈಸೂರು
ಬೆಲೆ:158 /-
ದೊರೆಯುವ ಸ್ಥಳ: ಅಕ್ಷರ ಬುಕ್ ಡಿಪೋ, ಸಪ್ನಾ ಬುಕ್ ಹೌಸ್, ಹಾಸನ ಜಿಲ್ಲೆ.
ಸಂಪರ್ಕಿಸುವ ಮೊಬೈಲ್ ನಂ:9743636831

ವಿಶ್ವಾಸ್.ಡಿ. ಗೌಡ ಅವರ ಕೃತಿ “ಬಾಳೊಂದು ಚೈತ್ರಾ ಮಯ” ಒಂದು ಅವಲೋಕನ ಬಿ.ಹೆಚ್. ತಿಮ್ಮಣ್ಣ Read Post »

You cannot copy content of this page

Scroll to Top