ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯ ದರ್ಪಣ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯಸಂಗಾತಿ ಡಾ.ಅನ್ನಪೂರ್ಣ ಹಿರೇಮಠ ಗಜಲ್ ನೀನಿರದ ಏಕಾಂತ ಕೊಲ್ಲುತಿದೆಯೋ ಕಾಂತನೀನಿಲ್ಲದ ಬೇಸರವೇ ಸುಡುತಿದೆಯೋ ಕಾಂತ ಹೇಳಲಾಗದ ದುಃಖ ತಾನೇ ಬಿಕ್ಕಳಿಸುತಿದೆ ಅಲ್ಲೇಕಕ್ಕುಲತೆಯ ಒಲವು ಸೋರಗುತಿದೆಯೋ ಕಾಂತ ಒಡಲಾಳದೆ ಕೋಲಾಹಲವೆದ್ದು ವಿರಹದ ಗಾಳಿಮುತ್ತುಗಳಿಲ್ಲದ ಗಲ್ಲ ನಿಲ್ಲದಾಗಿದೆಯೋ ಕಾಂತ ನೋವು ಸುಡುಗಾಡನೇ ಮೆದ್ದು ಪೆದ್ದಾಗಿದೆ ಬಿದ್ದುಸರಸವಿಲ್ಲದ ಸೊಲ್ಲು ಅಡಗೋಗಿದೆಯೋ ಕಾಂತ ಅದೇನೋ ತಳಮಳ ತಾಪದೆ ಒದ್ದಾಡುತಿದೆ ನೆನಪಅಪ್ಪುಗೆಗಾಗಿ ತನು ತೊಳಲಾಡುತಿದೆಯೋ ಕಾಂತ ಜೀವಕುಸುಮದಂಬಲ ಹಲುಬಿ ಹಿಂಡುತಿದೆ ಹಿಸುಕಿಹಸಿದ ಕಣ್ಣಂಚಿನ ಕಾತುರ ಕಂಗೆಟ್ಟಿದೆಯೋ ಕಾಂತ ಅನುಳ ವೇದನೆ ಒಂದೇ ಸವನೆ ಕತ್ತು ಕೊಯ್ಯುತಿದೆಭರವಸೆಯೇ ಮಣ್ಣಾಗಿ ಕೊಳೆಯುತಿದೆಯೋ ಕಾಂತ ಡಾ ಅನ್ನಪೂರ್ಣ ಹಿರೇಮಠ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯ ದರ್ಪಣ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ”

ಕಾವ್ಯ ಸಂಗಾತಿ ನಾಗರತ್ನ.ಹೆಚ್ ಗಂಗಾವತಿ “ಗೆಲ್ಲುವೆ ಮನ” ಬೇಕು ಬೇಡಿಕೆಗಳ ನಡುವೆ ಸಾಗಿದೆ ಜೀವನಅರಿಯದ ಮನಗಳ ನಡುವೆ ಮೌನದ ತಲ್ಲಣಕೋಪ ಮುನಿಸುಗಳ ನಡುವೆ ಜೀವನ ಪಯಣಮತ್ತೇರಿದ ಗುಂಗಿನಲ್ಲಿ ಕೆಲವರ ಮಾತಿನ ಔತಣಇರಲು ನಿನ್ನಲ್ಲಿ ತಾಳ್ಮೆಯ ಗುಣ ಗೆಲ್ಲುವೆ ನೀ ಎಲ್ಲರ ಮನ.ಅಪರೂಪದ ಮಾತಿನ ಬಗೆಗಳ ಆಲಿಸುವ ತಾಳ್ಮೆಯ ಸೌಜನ್ಯಸ್ವಾರ್ಥದ ಬೇಗೆಯಲ್ಲಿ ಬಂಧಗಳ ಬಿರುಕಿನ ಕಂಪನ .ಆಡಿದವರ ಮಾತಿಗೆ ಹಾಕಬೇಕಿದೆ ವಿರಾಮ.ನಿನ್ನ ನಡೆ-ನುಡಿಯಲ್ಲಿ ಇರಲಿ ಸದಾ ಚೇತನಭಗವಂತನ ದಯೆ ಇರಲು ನಿನ್ನ ಮೇಲೆ ಸದಾ ಗೆಲುವಿನ ಪಯಣ. ನಾಗರತ್ನ.ಹೆಚ್. ಗಂಗಾವತಿ

ನಾಗರತ್ನ.ಹೆಚ್ ಗಂಗಾವತಿ ಅವರ “ಗೆಲ್ಲುವೆ ಮನ” Read Post »

ಕಾವ್ಯ ದರ್ಪಣ, ಗಝಲ್

ಗಜಲ್ ಜುಗಲ್ ಬಂದಿ

ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.
ವಿಜಯಪ್ರಕಾಶ್. ಕೆ

ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top