ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್

ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ವಿಶಾಲವಾದ ಬಟಾಬಯಲು ನಡುವಲ್ಲೊಂದು ಮನೆಆ ಮನೆಯ ಮೂಲೆಯಲ್ಲೊಂದು ಕೋಣೆತಿರುಗುತ್ತಿದೆ ಕೋಣೆಯಲ್ಲಿ ತಣ್ಣನೆಯ ಫ್ಯಾನುಅವನ ಉದ್ವೇಗಕ್ಕಾಗಿಯೋ ಅವಳ ಆವೇಗಾಕ್ಕಾಗಿಯೋ ಪ್ರೇಮ ಕಾಮಗಳ ಪರಾಕಾಷ್ಠೆಗೆನೆರೆಹೊರೆಗೆ ಸದ್ದು ಕೇಳಿಸದಿರಲೆಂದುಮೈ ಜುಮ್ಮೆನ್ನುವ ಗಡುವಿಗೆಕಿವಿಗಡಚುವಂತೆ ಏರಿಸಿದಗಮನಿಸದ ಹಾಡು ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರಕಳಚಿಟ್ಟ ಬಟ್ಟೆಯೂ ನೆನಪಿಸುತ್ತಿಲ್ಲಬಂಧಿಸಿದ ಭಾವನೆಗಳ ತಳಮಳದಲ್ಲಿಅವರಿಬ್ಬರೂ ತನ್ಮಯರುಲೋಕದ ರೂಢಿಯಲ್ಲಿ ಅವ್ಯಕ್ತಮೂಕ ವಿಸ್ಮಿತರು ಬೆವರ ಹನಿ ಘಮಗುಡಲೆಂದುಮೈ ತುಂಬಾ ತಣ್ಣಗೆ ಚುಮುಕಿಸಿದಸುಗಂಧ ದ್ರವ್ಯಬೆಚ್ಚನೆಯ ಬೆವರ ಹನಿಗೆ ಬಣ್ಣ ಕಳೆದುಕೊಂಡಿತೆನ್ನುವ ಭಯ ಕಳೆದುಕೊಂಡದ್ದೋ, ದಕ್ಕಿಸಿಕೊಂಡದ್ದೋಎಲ್ಲವನ್ನೂ ಒಮ್ಮೆಲೆ ಸುಖಿಸಿಕೊಂಡಸ್ಖಲನದ ರಾತ್ರಿಯೋಅರಿವಿಲ್ಲದ ಖಾತ್ರಿಯೋ ತಿಳಿಯದು ರವಿಗೆ ಇಬ್ಬನಿ ಕರಗುವಂತೆಮಳೆಗೆ ಮಣ್ಣ ತಣುವಾದಂತೆಸ್ಪರ್ಶದೊಳಗಿನ ಹಣ್ಣುರುಚಿ ನೀಡಿದ ಹೊತ್ತಿಗೆಈಗೆಲ್ಲವೂ ಆ ಕೋಣೆಯಮೂಲೆಯಲ್ಲಿಅದೇ ಕಡುಗಪ್ಪಿನ ಮೂಲೆಯಲ್ಲಿಬೆಳದಿಂಗಳ ಬಯಕೆಗೆ ಲೀನವಾಗಿದೆ ಬಟಾಬಯಲಿನ ನಡುಮನೆಯಲ್ಲೊಂದುಫ್ಯಾನೂ ಇನ್ನೂ ತಣ್ಣಗೆ ತಿರುಗುತ್ತಿದೆಇನ್ನೂ ತಣ್ಣಗೆ ತಿರುಗುತ್ತಿದೆ ನಾಗೊಂಡಹಳ್ಳಿ ಸುನಿಲ್         

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್ Read Post »

ನಿಮ್ಮೊಂದಿಗೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ”

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು “ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎ ಸ್ ಆರ್ ಕಂಠಿ” ಕರ್ನಾಟಕವು ಕಂಡ ಶ್ರೇಷ್ಠ ಆಡಳಿತಗಾರರು ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಂದು ಎನಿಸಿಕೊಂಡ  ಎಸ್ ಆರ್ ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ )ಯವರು ಬಾಗಲಕೋಟ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ನಗರದವರು. 1962ರಲ್ಲಿ ಅಲ್ಪ ಕಾಲ ಕರ್ನಾಟಕ (ಆಗಿನ ಮೈಸೂರು) ರಾಜ್ಯದ ಮುಖ್ಯಮಂತ್ರಿಯಾಗಿದ್ದರು. *ವೈಯಕ್ತಿಕ ಮಾಹಿತಿ* ಜನನ 21 ಡಿಸೆಂಬರ್ 1908 ಕೆರೂರ, ಬದಾಮಿ, ಬಾಗಲಕೋಟೆ ಜಿಲ್ಲೆ ರಾಜಕೀಯ ಪಕ್ಷ ಕಾಂಗ್ರೆಸ್ ಜನನ ಹಾಗೂ ವಿದ್ಯಾಭ್ಯಾಸ ಬಾಗಲಕೋಟೆ(ಹಳೆಯ ಬಿಜಾಪುರ) ಜಿಲ್ಲೆಯ ಬದಾಮಿ ತಾಲ್ಲೂಕಿನ ಕೆರೂರನಲ್ಲಿ 1908 ಡಿಸೆಂಬರ್ 21ರಂದು ಜನಿಸಿದರು. *ಶಿಕ್ಷಣ* ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಇವರು ಬಾಗಲಕೋಟೆಯಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. *ಸಮಾಜ ಸೇವೆ* ಹರಿಜನರ, ರೈತರ ಮತ್ತು ನೇಕಾರರ ಏಳ್ಗೆಗಾಗಿ ಶ್ರಮಿಸಿದರು. 1939ರಲ್ಲಿ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿಗಳಿಗೆ ಸದಸ್ಯರಾಗಿ ಆಯ್ಕೆಯಾದರು. 1940-41ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಸತ್ಯಾಗ್ರಹ ವ್ಯವಸ್ಥೆ ಮಾಡಿ 10 ತಿಂಗಳ ಸೆರೆಮನೆವಾಸ ಅನುಭವಿಸಿದರು. 1942ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮತ್ತೊಮ್ಮೆ ಸೆರೆಯಾಗಿ ಅದೇ ವರ್ಷ ಬಿಡುಗಡೆ ಹೊಂದಿದರು. ಅನಂತರ ಮುಂಬಯಿ ಸ್ಥಳೀಯ ಆಹಾರ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿದ್ದುಕೊಂಡು ಕ್ಷಾಮ ಪರಿಹಾರ ಸಮಿತಿಯ ಪರವಾಗಿ ಕ್ಷಾಮಪೀಡಿತ ಪ್ರದೇಶಗಳಿಗೆ ಊಟ, ಬಟ್ಟೆ ಇತ್ಯಾದಿ ಸರಬರಾಜು ಮಾಡುವ ಸಾರ್ವಜನಿಕ ಸೇವೆಯಲ್ಲಿ ಪ್ರವೃತ್ತರಾದರು. *ಹೋರಾಟ* 1946ರಲ್ಲಿ ಬಿಜಾಪುರ ಜಿಲ್ಲೆಯ ರೈತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ಅಂದಿನ ಮುಂಬಯಿ ಮಂತ್ರಿ ಮಂಡಲದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು 6 ವರ್ಷಗಳ ಕಾಲ ಸೇವೆಸಲ್ಲಿಸಿದರು (1946-52). ಆಗ ಸುಮಾರು ಎರಡು ವರ್ಷಗಳ ಕಾಲ ಹಣಕಾಸಿನ ಶಾಖೆಯನ್ನು ಹಾಗೂ ಮೂರು ವರ್ಷಗಳ ಕಾಲ ವ್ಯವಸಾಯ, ಅರಣ್ಯ ಮತ್ತು ಸಹಕಾರ ಇಲಾಖೆಗಳ ಅಧಿಕಾರವನ್ನು ವಹಿಸಿಕೊಂಡಿದ್ದರು. 1952-56ರ ವರೆಗೆ ಮುಂಬಯಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ರಾಜ್ಯದ ನಿರ್ಮಾಣದ ಬಗ್ಗೆ ವಿಷಯ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ರಚಿಸಿದ ಸಮಿತಿಗೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತ್ತು. ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ 1956ರಲ್ಲಿ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾದ ಕಂಠಿಯವರು ಸುಮಾರು 6 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. 1961ರಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂಸದೀಯ ನಿಯೋಗಕ್ಕೆ ಇವರು ಮುಖ್ಯಸ್ಥರಾಗಿದ್ದರು. ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು 1962 ಮಾರ್ಚ್ 9ರಿಂದ 1962 ಜುಲೈ 20ರವರೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನಂತರ 1962 ಜುಲೈ 21ರಂದು ವಿದ್ಯಾಮಂತ್ರಿಯಾಗಿ ನೇಮಕಗೊಂಡರು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಇವರು ವಿದ್ಯಾಮಂತ್ರಿಯಾಗಿದ್ದಾಗ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾಗಿ 1967 ಮಾರ್ಚ್ 14ರಿಂದ 1968 ಏಪ್ರಿಲ್ 29ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು. ಇವರು ಕೆಲಕಾಲ ಕರ್ನಾಟಕ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರೂ ಮೈಸೂರು ಪ್ರದೇಶದ ಭಾರತ ಸೇವಕ ಸಮಾಜದ ಅಧ್ಯಕ್ಷರೂ ಆಗಿದ್ದರು. 1959ರಲ್ಲಿ ಲಂಡನಿನಲ್ಲಿ ನಡೆದ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಇವರನ್ನು ತನ್ನ ಪ್ರತಿನಿಧಿಯನ್ನಾಗಿ ಕಳಿಸಿತ್ತು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಇವರು ನೋಟ್ಸ್‌ ಆನ್ ದಿ ಪಾರ್ಲಿಮೆಂಟರಿ ಕೋರ್ಸ್ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ. *ಮುಖ್ಯಮಂತ್ರಿ* 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು. ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್  ಪಕ್ಷದ  ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಟ್ಟರು.  ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನ್ನು ‘ಆಧುನಿಕ ಕರ್ನಾಟಕದ ನಿರ್ಮಾತೃ’ ಎಂದೂ ಕರೆಯಲಾಗುತ್ತಿತ್ತು.  ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು. *ನಿರ್ವಹಿಸಿದ ಹುದ್ದೆಗಳು* ಕರ್ನಾಟಕ ಸಾಹಿತ್ಯ ಅಕಾಡೆಮೆಯ ಅಧ್ಯಕ್ಷರು (1961-1966) ಕರ್ನಾಟಕ ವಿಧಾನಸಭಾ ಸದಸ್ಯರು (1957 – 1962) ಕರ್ನಾಟಕ ವಿಧಾನಸಭಾ ಸಭಾಪತಿ (19 ಡಿಸೆಂಬರ್ 1956- 9 ಮಾರ್ಚ್ 1962) ಕರ್ನಾಟಕದ ಮುಖ್ಯಮಂತ್ರಿ (1962 ಮಾರ್ಚ್ 9ರಿಂದ 1962 ಜುಲೈ 20) ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ *ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಸ್ಥಾಪಕರು* ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಕಂಠಿ ಅವರ ದೂರದೃಷ್ಟಿಯಿಂದ 1969 ರಲ್ಲಿ ಆರಂಭವಾದ ಈ ಶಾಲೆಯು ಬಾಲಕಿಯರಿಗಾಗಿ ಸೈನಿಕ ಶಿಕ್ಷಣ ನೀಡುವ ಏಕೈಕ ಶಾಲೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರ ಇರುವ ಈ ಶಾಲೆಯಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದ್ದು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. *ನಿಧನ* ಕರ್ನಾಟಕದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಕಂಠಿಯವರು ರಾಜ್ಯ ವಿಧಾನಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ಕಿತ್ತೂರಿನಲಿ ಹೃದಯಾಘಾತಕ್ಕೆ ಒಳಗಾಗಿ  ನಿಧನ ಹೊಂದಿದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಪ್ರೇಮ ಮತ್ತು ವಿಶ್ವಾಸದ ಘನ ವ್ಯಕ್ತಿತ್ವ ಹೊಂದಿದ ಶ್ರೀ ಎಸ್ ಆರ್ ಕಂಠಿ ಅವರುರಾಷ್ಟ್ರ ನಾಡು ಕಂಡ ಅಪರೂಪದ ಪ್ರಬುದ್ಧ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ. ಆರು ದಶಕ ಬದುಕಿ ಆರು ಶತಕದ ನೆರಳನ್ನು ಕೊಟ್ಟ ಶ್ರೇಷ್ಠ ಹೆಮ್ಮರವಾಗಿದೆ. ಇವತ್ತು ಶ್ರೀ ಎಸ್ ಆರ್ ಕಂಠಿ ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ. ಆದರೆ ಅವರು ಮಾಡಿದ ಅತ್ಯಂತ ಜನಪರ ಕೆಲಸಗಳು ಇಂದಿಗೂ ಅವರನ್ನು ನೆನಪಿಡುವಂತೆ ಮಾಡುತ್ತಿವೆ. ವಿದ್ಯಾರ್ಥಿ ನಿಲಯಕ್ಕೆಂದು ತಮ್ಮ ಮನೆಯನ್ನೇ ಮಾರಾಟ ಮಾಡಿದ ಕರ್ಣ ಅಪಾರ ಬಂಧು ಬಳಗವನ್ನು ಬಿಟ್ಟು ಹೋದ ಭರತ. ಎಸ್ ನಿಜಲಿಂಗಪ್ಪನವರ ಪಡಿ ನೆರಳು ಪ್ರಾಮಾಣಿಕತೆಯ ನಿಜ ರೂಪ ಆಗಿದ್ದರು. ಇವರಿಗೆ ಶತ ಕೋಟಿ ನಮನಗಳು __________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ” Read Post »

ನಿಮ್ಮೊಂದಿಗೆ

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ವಿಶೇಷ ಸಂಗಾತಿ “ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ “ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. ಉಕ್ಕಿನ ಮನುಷ್ಯ  2006 ರಲ್ಲಿ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಾನೋತ್ಸವ ಆಚರಣೆ ಸಂದರ್ಭದ ಸಂಸ್ಮರಣ ಗ್ರಂಥಪುಷ್ಪವಿದು.ಡಾ.ಎಂ.ಎಂ.ಕಲಬುರ್ಗಿ,ಡಾ.ಸಿದ್ಧಲಿಂಗಪಟ್ಟಣಶೆಟ್ಟಿ,ಪ್ರೊ.ಆರ್.ವಿ.ಹೊರಡಿ,ಡಾ.ಎಸ್.ಎಚ್.ಪಾಟೀಲ,ಡಾ.ವಿ.ವಿ.ಹೆಬ್ಬಳ್ಳಿ,ಶ್ರೀ.ನಿರಂಜನ ವಾಲಿಶೆಟ್ಟರವರು ಈ ಕ್ರೃತಿಯ ಸಂಪಾದಕರು. “ಗಾಂಧೀಜಿದರ್ಶನದ ರೋಮಾಂಚನವೆ ನಾಂದಿಹಳ್ಳಿ-ಕೇರಿಯ ಮೀರಿ ಹ್ರೃದಯದಲಿ ಪುಟಿದೆದ್ದದೇಶಭಕ್ತಿಯ ಚಿಲುಮೆ!ಹೋರಾಟಕ್ಕೆ ಗುದ್ದ-ಲಿ ಪೂಜೆ,ಸೆರೆಮನೆಯ ವಾಸ,ಖಾದಿಯೆ ಹಾದಿದೀನದಲಿತರಿಗೆ ಸಂವಾದಿ,ಹಗಲೂರಾತ್ರಿ ದುಡಿಮೆ”…… – ಡಾ.ಚನ್ನವೀರ ಕಣವಿ. ಅವರ ಈ ಕವಿವಾಣಿಯಂತೆ  ಅಪೂರ್ವ ಸೇವೆಯಲಿ ಜೀವ ತೇಯ್ದ ಪ್ರಾತಃಸ್ಮರಣೀಯರು, ಪರುಷ ಮಣಿ ಹರುಷದ ಖಣಿ, ರಾಜಕೀಯ ಕ್ಷೇತ್ರದ ರ್ಯಾಂಗ್ಲರ್, ವೀರ ಸ್ವಾತಂತ್ರ್ಯಸೇನಾನಿ, ರಾಷ್ಟ್ರೀಯತೆಯ ಹರಿಕಾರ, ದಿಟ್ಟ ಹೃದಯದ ಗಟ್ಟಿ ಜೀವ, ಚುಂಬಕ ಶಕ್ತಿಯ ವ್ಯಕ್ತಿ, ಅದ್ವಿತೀಯ ಕಾಯಕ ಜೀವಿ, ಗಾಂಧೀಜಿಯವರ ತತ್ವಗಳಂತೆ ಜೀವಿಸಿದ ಅಸಾಮಾನ್ಯ ವ್ಯಕ್ತಿತ್ವವುಳ್ಳವರು, ಕಿಂಗ್ ಮೇಕರ್, ಹಳ್ಳಿ ಹಳ್ಳಿಗೂ ಸ್ವಾತಂತ್ರ್ಯ ಸಮರದ ಕಿಚ್ಚು ಹಚ್ಚಿದವರು,ಕರ್ನಾಟಕದ ಹುಲಿ ಭಾರತದ ಕಲಿ, ಅದಮ್ಯ ಶಕ್ತಿಯ ಚೈತನ್ಯ ಮೂರ್ತಿ, ದೇಶ ಬಂಧು, ಗುಣಗ್ರಾಹಿ ಮುಂದಾಳು, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಜನರಿಂದ ಜನರಿಗಾಗಿ ಜನರ ನಡುವೆ ಬೆಳೆದ ಸುಭಟರು, ಕರ್ನಾಟಕದ ಕೇಸರಿ, ಆದರ್ಶ  ಧೀಮಂತ ಜನನಾಯಕರು, ರಾಷ್ಟ್ರ ಪ್ರೇಮಿ, ಗಾಂಧೀ ತತ್ವ ಅನುಷ್ಠಾನದ ನೆಲೆ ವಿದ್ಯಾರ್ಥಿ ಸ್ಪೂರ್ತಿಯ ಸೆಲೆ,ಸತ್ಯನಿಷ್ಠ ದೇಶಪ್ರೇಮಿ ಹಾಗೂ ಗಾಂಧಿವಾದಿ, ಸಂಘಟನಾ ಚತುರರು, ಕರ್ನಾಟಕದ ಕರ್ಮಯೋಗಿವರ್ಯರು, ಮಾನವೀಯ ಅನುಕಂಪ ಭರಿತ ಜನನಾಯಕರೆಂದೇ ಪ್ರಖ್ಯಾತರಾದ ‘ಉತ್ತರ ಕರ್ನಾಟಕದ ಉಕ್ಕಿನ ಮನುಷ್ಯರೆಂದೆ’ ಚಿರಪರಿಚಿತರಾದವರು ಸನ್ಮಾನ್ಯ ಶ್ರೀ.ಗುದ್ಲೆಪ್ಪ ಹಳ್ಳಿಕೇರಿಯವರು.             ಶ್ರೀ.ವೀರಪ್ಪ-ವೀರಮ್ಮ ದಂಪತಿಗಳ ಪುಣ್ಯಗರ್ಭದಲ್ಲಿ ಕೊನೆಯ ಸುಪುತ್ರರಾಗಿ ದಿ.6-6-1906 ರಲ್ಲಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿರುವ ಗುದ್ಲೆಪ್ಪನವರು ಧಾರವಾಡದ ಶ್ರೀಗುರು ಮೃತ್ಯುಂಜಯಪ್ಪಗಳವರ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ಮೊದಲು ಧಾರವಾಡದ ಕರ್ನಾಟಕ ಹೈಸ್ಕೂಲು, ಆನಂತರ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪಡೆದ ಶ್ರೀಯುತರು ಗಣಿತ ವಿಷಯದಲ್ಲಿ ಅದ್ಭುತ ಸ್ಮರಣ ಮತ್ತು ಮೇಧಾ ಶಕ್ತಿಯಿಂದಾಗಿ ‘ಬೆಳೆವ ಸಿರಿ ಮೊಳಕೆಯಲ್ಲಿ ನೋಡು’ ಎಂಬ ಉಕ್ತಿಯಂತೆ ಪ್ರತಿಭಾವಂತ ವಿದ್ಯಾರ್ಥಿಯೆಂದು ಪ್ರಖ್ಯಾತರಾಗಿದ್ದರು. 1924 ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದರು.ಗಾಂಧೀಜಿಯವರನ್ನು ಕಂಡು ಅವರ ವ್ಯಕ್ತಿತ್ವಕ್ಕೆ ಪ್ರಭಾವಿತರಾದರು. ಗಣಿತಶಾಸ್ತ್ರದಲ್ಲಿ ಇಂಗ್ಲೆಂಡಿನ  ರ್ಯಾಂಗ್ಲರ್ ಪದವಿ ಪಡೆಯುವ ಸದವಕಾಶವನ್ನು ಕಡೆಗಣಿಸಿ ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದರು. ಅಪ್ಪಟ ಗಾಂಧಿವಾದಿಯಾಗಿ,ಕಾಂಗ್ರೆಸ್ಸಿಗರಾಗಿ ರೂಪುಗೊಂಡರು. 1928-1942 ರ ಅವಧಿಯಲ್ಲಿ ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ ಸ್ಥಾಪಿಸಿದರು. ಸಾಬರಮತಿ ಆಶ್ರಮದ ಮಾದರಿಯಲ್ಲಿ ಹೊಸರಿತ್ತಿಯಲ್ಲಿ ಗಾಂಧಿ ಆಶ್ರಮ ಹಾಗೂ ಗ್ರಾಮೀಣ ಮಕ್ಕಳಿಗಾಗಿ ಪ್ರೌಢಶಾಲೆ ಸ್ಥಾಪಿಸಿದರು. ರಾಷ್ಟ್ರೀಯ ವಿದಾಯಕ ಕಾರ್ಯಗಳಲ್ಲಿ ನಿರತರಾಗಿ ದಂಡಿಯಾತ್ರೆ, ಉಪ್ಪಿನ ಸತ್ಯಾಗ್ರಹ ಹಾಗೂ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಲು ಕರ್ನಾಟಕದಿಂದ ಕಾಂಗ್ರೆಸ್ಸಿನ ಏಕೈಕ ಸರ್ವಸ್ವಾಮ್ಯ ವ್ಯಕ್ತಿ ಎಂದು ರಾಷ್ಟ್ರಪಿತ ಮ. ಗಾಂಧೀಜಿಯವರಿಂದ ಆಯ್ಕೆಯಾದರು.ನಂತರ ಸತ್ಯಾಗ್ರಹದ ನಿಷ್ಠ ಅನುಯಾಯಿಯಾಗಿ ಉಪವಾಸ ಅನುಭವಿಸಿ ಜೈಲುವಾಸಿಯಾದರು. 1930 ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಸಲ ಜೈಲುವಾಸಿಯಾದರು. ಆಗ ಪ್ರತಿದಿನ 70 ಪೌಂಡ್ ಜೋಳ ಬೀಸುತ್ತಿದ್ದರು.1932 ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುವಾಸಿಯಾಗಿ ಜೈಲಿನಲ್ಲಿ ಎಲ್ಲರೂ ಭಂಗಿ ಕಾರ್ಯ ಮಾಡಲು ಆಗ್ರಹಿಸಿ 13 ದಿನ ಉಪವಾಸವಿದ್ದರು. 1937 ರಲ್ಲಿ ಅಕ್ಟೋಬರ್ 2 ರಂದು ಗಾಂಧೀ ಜಯಂತಿಯಂದು ಹೊಸರಿತ್ತಿಯ ಹರಿಜನ ಕೇರಿಯಲ್ಲಿ ರಾಷ್ಟ್ರಧ್ವಜದಡಿ ಖಾದಿ ವಸ್ತ್ರಧಾರಣೆ ಮತ್ತು ಖಾದಿ ಮಾಲೆ ವಿನಿಮಯ ಮಾಡುವುದರೊಂದಿಗೆ ಇಟಗಿಯ ಸ್ವಾತಂತ್ರ್ಯಯೋಧ ಶ್ರೀ ಬಸವಣ್ಣೆಪ್ಪ ಸಾಣೆಕೊಪ್ಪ ಅವರ ಭಗಿನಿ ಗಂಗಾದೇವಿಯವರೊಡನೆ ವಿಶಿಷ್ಟ ರೀತಿಯಲ್ಲಿ ವಿವಾಹವಾದರು. 1942 ರಲ್ಲಿ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಮೂರು ವರ್ಷ ಸೆರೆಮನೆ ವಾಸ ಅನುಭವಿಸಿದರು.ಆಗ ಮಹಾತ್ಮ ಗಾಂಧೀಜಿ ಕೈಕೊಂಡ ಉಪವಾಸಕ್ಕೆ ಅನುಗುಣವಾಗಿ 21 ದಿನ ಉಪವಾಸನಿರತರಾದರು.                   1946-1960 ರ ವರೆಗೆ ಅಖಂಡ ಒಂದುವರೆ ದಶಕ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1952 ರಲ್ಲಿ ಹಾವೇರಿ ತಾಲೂಕಿನಿಂದ ಮುಂಬೈ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ಅಖಿಲ ಕರ್ನಾಟಕ ಏಕೀಕರಣ ಚಳುವಳಿಯ ಸಂಘಟಕ ಮತ್ತು ಮುಂಚೂಣಿಯ ನಾಯಕರೆನಿಸಿದ್ದರು.1954 ರಲ್ಲಿ ಚೀನಾ ದೇಶಕ್ಕೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1950-1955 ರ ವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1956-1960 ರ ವರೆಗೆ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು. 1960 ರಲ್ಲಿ ಮೈಸೂರು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಜರ್ಮನಿ ಈಜಿಪ್ತ  ದೇಶಗಳಿಗೆ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಭೇಟಿಯಾಗಿದ್ದರು. 1962-1966 ರ ವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.1967 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದರು. ದಕ್ಷಿಣ ಭಾರತದ ಹಿಂದಿ ಪ್ರಚಾರ ಸಭಾ ಕರ್ನಾಟಕ ಪ್ರಾಂತ್ಯಾಧ್ಯಕ್ಷರಾಗಿದ್ದರು. ದಕ್ಷಿಣ ಮಧ್ಯ ರೈಲ್ವೆ ಹಾಗೂ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿದ್ದರು.1971 ರಲ್ಲಿ ದ್ವಿತೀಯ ಅವಧಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು.             “ನನ್ನ ಕ್ರಿಯಾಶಕ್ತಿ ತನ್ನ ತೀವ್ರತೆಯನ್ನು ಎಂದು ಕಳೆದುಕೊಳ್ಳುವದೋ ಅಂದೇ ನನ್ನ ಕೊನೆಯ ಗಳಿಗೆಯಾಗಲಿ”ಎಂಬ ಶ್ರೀಯುತರ ಹೇಳಿಕೆಯಂತೆ 1971 ರಲ್ಲಿ ಲಿಂಗೖಕ್ಯರಾದ ಶ್ರೀಯುತರು ತಮ್ಮ  ಜೀವಿತಾವಧಿಯಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರಿನ ನಿಜಲಿಂಗಪ್ಪ ಮಹಾವಿದ್ಯಾಲಯ ಮತ್ತು ಕರ್ನಾಟಕದ ಪ್ರಪ್ರಥಮ ಬಿಜಿನೆಸ್ ಮ್ಯಾನೇಜಮೆಂಟ್ ಕಾಲೇಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಠೆಯ ಮ.ಗಾಂಧೀಜಿಯ ವಿಚಾರ ಪ್ರಣಾಳಿಕೆಯ ಜೀವನ ಶಿಕ್ಷಣ ತತ್ವಾಧಾರಿತ ಗಾಂಧೀ ಗ್ರಾಮೀಣ ಗುರುಕುಲ ನಾಡಿಗೆ ಧಾರೆಯೆರೆದ ಕೀರ್ತಿಶಾಲಿಗಳು. ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗಾಗಿ ಶ್ರೀಯುತರು ಹೊಂದಿದ್ದ ಕಳಕಳಿಯ ಪ್ರತೀಕದಂತೆ ಶ್ರೀಯುತರ ಕೊಡುಗೆಗಳು ಕಂಗೊಳಿಸುತ್ತಲಿರುವದು ಅನುಕರಣೀಯವೇ ಸರಿ.            ಹುಬ್ಬಳ್ಳಿ ಧಾರವಾಡ ಪರಿಸರವನ್ನು ಕರ್ಮಭೂಮಿಯನ್ನಾಗಿಸಿಕೊಂಡಿರುವ ಶ್ರೀ.ಹಳ್ಳಿಕೇರಿ ಗುದ್ಲೆಪ್ಪನವರು  ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಹಾಗೂ ರಾಜಕೀಯಕ್ಷೇತ್ರಗಳನ್ನು ತಮ್ಮ ಜೀವನದ ಅವಿಭಾಜ್ಯ ರಾಷ್ಟ್ರೀಯ ಅಂಗಗಳನ್ನಾಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಕೃಷಿ ಮಹಾವಿದ್ಯಾಲಯ, ಕೆಎಲ್ಇ ಶಿಕ್ಷಣ ಸಂಸ್ಥೆಗೆ ಶ್ರೀಯುತರು ಸಲ್ಲಿಸಿದ ಸೇವೆ ಅಪಾರ ಹಾಗೂ ಅನನ್ಯವಾದುದೆಂಬುದಕ್ಕೆ ಶ್ರೀ.ಎಂ.ಎಫ್.ಉಪನಾಳವರ ಕಾವ್ಯ ಸಾಕ್ಷಿಯಂತಿದೆ.ಉದಾ: “ಸ್ವಾತಂತ್ಯಸಂಗ್ರಾಮದ ಹುಲಿಕರ್ನಾಟಕದ ಗಂಡುಗಲಿಹೋರಾಟದ ಶಿಕ್ಷಣ ಸಾಬರಮತಿಯಲಿ ಕಾರ್ಯಕ್ಷೇತ್ರ,ಕರ್ನಾಟಕದಲಿ//ಮಾಡಿದಿರಿ ವಿದೇಶ ಪರ್ಯಟನಪಯಣದಲಿ ರಾಷ್ಟ್ರದ ಚಿಂತನಹೊಸರಿತ್ತಿಯು ಗುರುಕುಲವಾಗಿದೆ ಚಂದನ ಪ್ರಗತಿಗಿಲ್ಲಿಲ್ಲ ಅದಾವ ಬಂಧನ”//. ಈ ಕವನ ಶ್ರೀಯುತರ ಅಪೂರ್ವ ಸೇವೆಗೆ ಹಿಡಿದ ಕೖಗನ್ನಡಿಯಾಗಿರುತ್ತದೆ.            ‘ಕರ್ನಾಟಕದ ಉಕ್ಕಿನ ಮನುಷ್ಯ’ರೆಂದೆ ಜನಜನಿತರಾದ ರಾಷ್ಟ್ರನಾಯಕ ಶ್ರೀ ಹಳ್ಳಿಕೇರಿ ಗುದ್ಲೆಪ್ಪನವರ ಶತಮಿನೋತ್ಸವದ ಸ್ಮರಣಾರ್ಥವಾಗಿ ಪ್ರತಿಷ್ಠಾಪಿಸಿದ ಕಂಚಿನ ಮೂರ್ತಿಯ ಪ್ರತಿಷ್ಠಾಪನೆಯು, ಶ್ರೀ ಹಳ್ಳಿಕೇರಿ ಗುದ್ಲೆಪ್ಪ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಹುಬ್ಬಳ್ಳಿ ಹಾಗೂ ಹುಬ್ಬಳಿ ಧಾರವಾಡ ಮಹಾನಗರ ಸಭೆ ಇವರ ಸಹಯೋಗದಿಂದ ನೆರವೇರಿದ್ದು, ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಯುವ ಜನಾಂಗದ ಅನುಪಮ ಪ್ರಗತಿಯ ಪ್ರತಿರೂಪದಂತಿದ್ದು ಶ್ರೀ.ಗುದ್ಲೆಪ್ಪನವರಿಗೆ ಇರುವ ಕಳಕಳಿಯೇ ಅವರ  ಅವಿಸ್ಮರಣೀಯ  ದ್ಯೋತಕವಾಗಿರುತ್ತದೆ.— ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.ಸಾಹಿತ್ಯ ಚಿಂತಕರು.ಗದಗ. 

“ಕರ್ನಾಟಕದ ಉಕ್ಕಿನಮನುಷ್ಯಗುದ್ಲೆಪ್ಪಹಳ್ಳಿಕೇರಿ”ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ. Read Post »

ಇತರೆ, ನಿಮ್ಮೊಂದಿಗೆ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ.

ಜೀವನ ಸಂಗಾತಿ “ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎಂಬುವುದು ಬಹಳ ಅರ್ಥಪೂರ್ಣವಾದಂತಹ ಮಾತು. ಇದು ಜನಪದರ ಅನುಭವದ ಮೂಸೆಯಿಂದ ಮೂಡಿ ಬಂದ ಮುತ್ತು. ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ ಎನ್ನುವ ಮಾತಿನಲ್ಲಿ ಅಕ್ಕರೆಗೆ ಅಥವಾ ಪ್ರೀತಿಗೆ ಬಹಳ ಪ್ರಮುಖವಾದ ಸ್ಥಾನವನ್ನು ಕೊಡಲಾಗಿದೆ.ಅಕ್ಕರೆ ಎನ್ನುವುದು ಜೀವದ ಸೆಲೆಯಾಗಿದೆ.  ಇಂದು ನಮ್ಮ ಸಮಾಜದಲ್ಲಿ ಅನ್ನದ ಹಸಿವಿನಿಂದ ಬಳಲುವವರಿಗಿಂತ ಪ್ರೀತಿ ಅಥವಾ ಅಕ್ಕರೆಯ ಹಸಿವಿನಿಂದ ಬಳಲುವರೇ ಹೆಚ್ಚಾಗಿದ್ದಾರೆ.ಇಂತಹ ಕಾಲಘಟ್ಟದಲ್ಲಿ ಪ್ರೀತಿಯು ಬಹಳ ದುಬಾರಿಯಾಗಿ ಕಂಡುಬರುವಂತಹ ಸಂದರ್ಭದಲ್ಲಿ, ಈ ಮಾತಿನ ಬಗ್ಗೆ ಚಿಂತನ ಮಂಥನ ಮಾಡಬೇಕಾದದ್ದು ಬಹಳ ಅಗತ್ಯವೆಂದು ನನಗನಿಸುತ್ತದೆ. ಇಂದು  ಯಾಂತ್ರಿಕ ಯುಗ. ಬದುಕು ಕೂಡ ಯಾಂತ್ರಿಕವಾಗಿದೆ.ಮನುಷ ಮನುಷರ ಮನಸ್ಸುಗಳ ನಡುವೆ ದ್ವೇಷದ ಗೋಡೆ ಕಟ್ಟಲ್ಪಟ್ಟಿದೆ.ಎಲ್ಲೆಲ್ಲೂ ಮುಖವಾಡದ ಬದುಕೇ ಕಂಡುಬರುತ್ತಿದೆ.ಇಂತಹ ಬದುಕಿನಲ್ಲಿ ಯಾವುದೇ ರೀತಿಯಲ್ಲಿ ಶಾಂತಿ, ನೆಮ್ಮದಿ ಸಿಗಲಾರದು ಎಷ್ಟೇ ಪ್ರೀತಿ ತೋರಿದರೂ ಆ ಪ್ರೀತಿಯ ಹಿಂದೆ ಅದ್ಯಾವ ಕುತಂತ್ರ ಅಡಗಿದೆಯೋ ಎಂಬ ಹೆದರಿಕೆ ಕಾಡುತ್ತದೆ. ಹೀಗಿರುವಾಗ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತ ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಪ್ರೀತಿ ಇಲ್ಲದೆ ಅಥವಾ ಅಕ್ಕರೆ ಇಲ್ಲದೆ ಊಟ ಹಾಕುವವರು, ಊಟವನ್ನು ಹಾಕಬೇಕಲ್ಲಾ ಎನ್ನುವಂತಹ (ಅನಿವಾರ್ಯತೆ) ಭಾವನೆಯಿಂದ ಮೃಷ್ಟಾನ್ನ ಭೋಜನ ಬಡಿಸಿದರೂ, ಅದು ರುಚಿಸದು. ಮನಸ್ಸಿಗೆ ಹಿತವಾಗದು. ಅದೇ ಪ್ರೀತಿಯಿಂದ ಅಂಬಲಿಯನ್ನು ಬಡಿಸಿದರೂ ಅದರಲ್ಲಿ ಮೃಷ್ಟಾನ್ನ ಭೋಜನ ಮಾಡಿದಷ್ಟು ಸಂತಸವಿರುತ್ತದೆ, ಸವಿಯಿರುತ್ತದೆ.ಪ್ರೀತಿ ತೋರಿಸುವಾಗ ಬಡವ -ಶ್ರೀಮಂತ, ಉಳ್ಳವರು- ಇಲ್ಲದವರು, ಅವರು -ಇವರು ಎಂಬ ಯಾವ ಭೇದ ಭಾವವು ಇರಬಾರದು ಎಂಬ ತತ್ವವೂ ವ್ಯಕ್ತವಾಗುತ್ತದೆ. ಪ್ರೀತಿಯಿಂದ ಯಾರು ಏನೇ ಕೊಟ್ಟರೂ ಅದು ಸ್ವೀಕರಿಸಲು ಯೋಗ್ಯವಾದದ್ದು ಎಂಬ ಅರ್ಥವನ್ನು ನೀಡುತ್ತದೆ.ಇದಕ್ಕೆ ಪೂರಕವಾದ ಉದಾಹರಣೆಯನ್ನು ಮಹಾಭಾರತದಿಂದ ನಾವು ಉಲ್ಲೇಖಿಸಬಹುದು, ಕೃಷ್ಣ ಸುಧಾಮರ ಉದಾರಣೆಯನ್ನೇ ತೆಗೆದುಕೊಂಡರೆ ಸುಧಾಮ ಬಡವನಾದರೂ, ಕೃಷ್ಣನಿಗೆ ಪ್ರೀತಿಯಿಂದ ಹಿಡಿ ಅವಲಕ್ಕಿ ನೀಡಿದ್ದನ್ನು ಕೃಷ್ಣ ಅದೆಷ್ಟು ಸವಿಯಾಗಿ ತಿನ್ನುತ್ತಾನೆ!.ಸಂತಸ ಪಡುತ್ತಾನೆ!. ಹಾಗೆಯೇ ನಮ್ಮನ್ನು ಪ್ರೀತಿಸುವವರು ಅದೇನೇ ನೀಡಿದರೂ ಅದು ನಮಗೆ ಸವಿಯಾಗಿಯೇ ಇರುತ್ತದೆ. ಜೀವನ ನಿಂತಿರುವುದೇ ಪ್ರೀತಿಯ ಮೇಲೆ. ಹಾಗಾಗಿ ಪ್ರತಿಯೊಂದು ಜೀವಿಯು ಕೂಡ ಪ್ರೀತಿಗಾಗಿ ಹಾತೊರೆಯುತ್ತದೆ. ತಾವು ಬಯಸುವ ಪ್ರೀತಿ ತಮಗೆ ಸಿಕ್ಕಿತೆಂದರೆ ಮನಸ್ಸಿಗೆ ಆಗುವ ಆನಂದವನ್ನು ಮಾತಿನಲ್ಲಿ ಹೇಳಲಾಗದು.ಸಂಸಾರದ ಉದಾಹರಣೆಯನ್ನೇ ತೆಗೆದುಕೊಂಡರೆ, ಗಂಡ ಹೆಂಡತಿಯ ನಡುವೆ ಪ್ರೀತಿ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರು ಒಬ್ಬರಿಗೊಬ್ಬರು ಸಹಿಸಿಕೊಂಡು, ಸಮಾಧಾನದಿಂದ ಸಂಸಾರವನ್ನು ಸರಿದೂಗಿಸಿಕೊಂಡು ಮುನ್ನಡೆಯುತ್ತಾರೆ. ಅದೇ ಗಂಡ ಹೆಂಡಿರ ನಡುವೆ ಪ್ರೀತಿ ಇಲ್ಲದೆ ಇದ್ದಲ್ಲಿ  ಆಗರ್ಭ ಶ್ರೀಮಂತರಾದರೂ ಅವರು ಪ್ರೀತಿಯಿಂದ ಬಾಳುವುದಕ್ಕೆ ಸಾಧ್ಯವಿಲ್ಲ. ಅಕ್ಕರೆ ಇದ್ದರೆ ಅಂಬಲಿಯೂ ಸವಿ. ಅದೇ ಮೃಷ್ಟಾನ್ನ, ಅದೇ ಪರಮಾನ್ನ.ಒಂದು ಪ್ರೀತಿಯ ಮಾತು ಎಷ್ಟೋ ದುಃಖ ತಪ್ತ ಮನಸ್ಸುಗಳನ್ನು ಸಾಂತ್ವಾನಗೊಳಿಸಬಲ್ಲದಂತೆ.ಅಂದರೆ ಪ್ರೀತಿಗೆ ಅಷ್ಟು ಶಕ್ತಿ ಇದೆ. ಶಕ್ತಿಯಿಂದ ಮಾಡಲಾಗದ್ದನ್ನು, ಯುಕ್ತಿಯಿಂದ ಸಾಧಿಸಲಾಗದ್ದನ್ನು, ಪ್ರೀತಿಯಿಂದ ಸಾಧಿಸಬಹುದು ಎಂಬಂತೆ. ಪ್ರೀತಿ ಇದ್ದರೆ ಎಲ್ಲವೂ ಸಾಧ್ಯ. ಸಿಹಿಕಹಿ ಎನ್ನುವಂತದ್ದು ನಮ್ಮ ಮನಸ್ಸಿನ ಭಾವನೆಗೆ ಬಿಟ್ಟದ್ದು. ನಮಗೆ ಇಷ್ಟವಾಗುವವರು ಏನಾದರೂ ಮಾಡಿದರೆ ನಮ್ಮ ಮನಸ್ಸು ಅದು ಒಳ್ಳೆಯದೆಂದೇ ಭಾವಿಸುತ್ತದೆ.ನಮಗಾಗದವರು ಒಳ್ಳೆಯದನ್ನೇ ಮಾಡಿದರೂ ನಾವು ಅದರಲ್ಲಿ ಕೆಟ್ಟದ್ದನ್ನು ಕಾಣುತ್ತೇವೆ. ಉದಾಹರಣೆಗೆ ನಮ್ಮ ಅಮ್ಮ ಎಷ್ಟು ಬೈದರೂ ನಾವು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ,ಅಮ್ಮನನ್ನು ಪ್ರೀತಿಯಿಂದ ಕಾಣುತ್ತೇವೆ. ಏಕೆಂದರೆ ಅಮ್ಮ ಎಂದರೆ ನಮಗೆ ಪ್ರೀತಿ. ಅವಳು ಬೈದರೆ ಪ್ರೀತಿಯಿಂದಲೇ ಬಯ್ಯುತ್ತಾಳೆ ಎಂಬ ನಮ್ಮ ಮನಸ್ಥಿತಿ. ಅದೇ ಅತ್ತೆ ಎಲ್ಲಿಯಾದರೂ ಬೈದಳೆಂದರೆ ನಾವು ಸಿಟ್ಟು ಮಾಡಿಕೊಂಡು, ಮುಂದೆ ಏನೇನೋ ಆವಾಂತರಕ್ಕೆ ಕಾರಣವಾಗುತ್ತದೆ.ವಿಷಯ ಇಷ್ಟೇ. ಅತ್ತೆ ಹೇಳಿದ್ದು ಕೂಡ ತಾಯಿ ಹೇಳಿದ್ದನ್ನೇ. ಆದರೆ ತಾಯಿ ಹೇಳಿದಾಗ ಬೇಸರವಾಗದ ನಮಗೆ ಅತ್ತೆ ಅದೇ ಮಾತನ್ನು ಹೇಳಿದಾಗ ಮನಸ್ಸಿಗೆ ನಾಟುತ್ತದೆ, ಅವಮಾನವಾಗುತ್ತದೆ. ಏಕೆ? ಕಾರಣ ಇಷ್ಟೇ .ಅಮ್ಮ ನಮ್ಮವರು,ಅತ್ತೆ ಎರಡನೆಯ ವ್ಯಕ್ತಿ ಎಂಬ ಭಾವ. ಇಲ್ಲಿ ಪ್ರೀತಿಯ ಕೊರತೆ ನಮ್ಮನ್ನು ಹಾಗೆ ಯೋಚಿಸುವಂತೆ ಮಾಡುತ್ತದೆ. ಈಗೀಗ “ಮುಖ ನೋಡಿ ಮಣೆ ಹಾಕು”ಎಂಬಂತೆ ಇತರರ ಶ್ರೀಮಂತಿಕೆ, ಅಧಿಕಾರ, ಹಣ, ಅಂತಸ್ತು ನೋಡಿಯೇ ಅದಕ್ಕೆ ತಕ್ಕಂತೆ ಅವರನ್ನು ಉಪಚರಿಸುತ್ತಾರೆ .ಬಡವರಾದರೆ ಅವರನ್ನು ಉಪಚರಿಸುವ ಗೋಜಿಗೆ ಹೋಗದೆ ಸುಮ್ಮನೆ ಇರುತ್ತಾರೆ. ಇಂತಹ ಜನರಿರುವಾಗ ಅಕ್ಕರೆಗೆ ಬೆಲೆಯಾದರೂ ಎಲ್ಲಿದೆ? ಹಾಗಾಗಿ ಅಕ್ಕರೆ ಇದ್ದರೆ ಅಂಬಲಿಯೂ ಸವಿ ಎನ್ನುವಂತೆ ನಮಗೆ ಪ್ರೀತಿ ಇದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನವು ಯಾಂತ್ರಿಕವಾಗಿಯೇ ನಡೆಯುತ್ತಿದೆ. ಮನುಷ್ಯನಿಗೆ ಒತ್ತಡದ ಜೀವನದಲ್ಲಿ ಪರಸ್ಪರ ಪ್ರೀತಿಯಿಂದ ಮಾತನಾಡುವುದ ಕ್ಕಾಗಲಿ ,ಎಲ್ಲರೂ ಒಟ್ಟು ಸೇರಿ ಪ್ರೀತಿಯಿಂದ ಉಣ್ಣುವುದಕ್ಕಾಗಲಿ, ಸಮಯವೇ ಇಲ್ಲ. ಒಂದೇ ಮನೆಯಲ್ಲಿ ಒಬ್ಬೊಬ್ಬರ ಊಟದ ಸಮಯ ಒಂದೊಂದು ಆಗಿರುವಾಗ, ಇನ್ನು ಪ್ರೀತಿಯಿಂದ ಇತರರಿಗೆ ಊಟ ಹಾಕಲು ಸಮಯವಾದರೂ ಎಲ್ಲಿದೆ? ಜೀವನವಿಡೀ ಒತ್ತಡದಿಂದಲೇ ಕಳೆಯುವ ಪರಿಸ್ಥಿತಿ ಬಂದಿದೆ. ಇದು ಬದಲಾಗಬೇಕು. ಪರಸ್ಪರ ಪ್ರೀತಿ ಸಹನೆಯಿಂದ ಆಗಾಗ ಒಟ್ಟು ಸೇರಿ,  ಕಾಲ ಕಳೆಯುವಂತಾಗಬೇಕು. ಕಷ್ಟವಿದ್ದರೂ, ಸಂಕಷ್ಟಗಳು ಬಂದರೂ ಪ್ರೀತಿಯಿಂದ ಅಂಬಲಿಯಾದರೂ ಸರಿ, ಸವಿದು ಬದುಕೋಣ. ———— ಡಾ.ಸುಮತಿ ಪಿ

“ಅಕ್ಕರೆ ಇದ್ದಲ್ಲಿ ಅಂಬಲಿಯೂ ಸವಿ” ಡಾ.ಸುಮತಿ ಪಿ. Read Post »

ನಿಮ್ಮೊಂದಿಗೆ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ

ಸಂಸ್ಕೃತಿ ಸಂಗಾತಿ ಡಾ. ಮೀನಾಕ್ಷಿ ಪಾಟೀಲ “ಎಳ್ಳು ಅಮಾವಾಸ್ಯೆಯ ಸಡಗರ” “ಎಳ್ಳಮ್ಮಾಸೆ “ ಜನಪದರ ದೇಸಿ ಮಾತಿನಲ್ಲಿ ಕರೆಯಲ್ಪಡುವ ಎಳ್ಳು ಅಮವಾಸೆ ಉತ್ತರ ಕರ್ನಾಟಕದ ರೈತರ ಹಬ್ಬ. “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು” ಎಂಬ ನುಡಿ ಕೃಷಿಯ ಮಹತ್ವವನ್ನು ಕುರಿತು ಹೇಳುತ್ತದೆ. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ರೈತರ ಹಬ್ಬಗಳನ್ನು ಆಚರಿಸಲಾಗುತ್ತದೆ. ವೈವಿಧ್ಯಮಯವಾಗಿ ವಿಭಿನ್ನ ರೀತಿಯಲ್ಲಿ ರೈತರು ಭೂತಾಯಿಯ ಹಬ್ಬವನ್ನು ಮಾಡುತ್ತಾರೆ. ಇದು ಜನಪದರ ಹಬ್ಬ. ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಈ ಹಬ್ಬ ನಮ್ಮ ಪರಂಪರೆ,ಸಂಸ್ಕೃತಿ, ನೆಲ,ಜಲ ಈ ಎಲ್ಲವುಗಳ ಪ್ರಾತಿನಿಧಿಕ ಆಚರಣೆಯಾಗಿದೆ. ಮಾರ್ಗಶಿರ ಮಾಸದ ಅಂದರೆ ಚಳಿಗಾಲದಲ್ಲಿ ಬರುವ ಅಮಾವಾಸ್ಯೆ ಹೊತ್ತಿಗೆ ರೈತರು ಎಳ್ಳಿನ ಸುಗ್ಗಿ ಮಾಡಿರುತ್ತಾರೆ. ಒಕ್ಕಲು ಮಾಡಿದ ಹೊಸ ಎಳ್ಳಿನ ಪದಾರ್ಥವನ್ನು ಮೊದಲು ಭೂತಾಯಿಗೆ ನೈವೇದ್ಯ ಅರ್ಪಿಸುವುದು ವಾಡಿಕೆ.  ರೈತ ಕುಟುಂಬಗಳ ಒಂದು ದೈವ ನಂಬಿಕೆಯು ಆಗಿದೆ. ಆ ಕಾರಣದಿಂದಲೋ ಎನೊ ಈ ಅಮಾವಾಸ್ಯೆಗೆ ಎಳ್ಳುಅಮಾವಾಸ್ಯೆಯೆಂದು ಹೆಸರು ಬಂದಿರಬಹುದು. ನಾವು ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಹೆಣ್ಣು ಫಲವಂತಿಕೆಯ ಒಡಲು ಹೊತ್ತವಳು. ಹಾಗೆ ಪ್ರಕೃತಿ ಕೂಡ ತನ್ನ ಒಡಲಿನಲ್ಲಿ ಸೃಷ್ಟಿಯನ್ನೇ ಹೊತ್ತವಳು. ಭೂಮಿ ಮತ್ತು ಹೆಣ್ಣು ಸೃಷ್ಟಿಕ್ರಿಯೆಯಲ್ಲಿ ಸಮಾನರು. ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು  ಪಾಲನೆ ಪೋಷಣೆ ಮಾಡಿ ಸಲಹುತ್ತಾಳೆ. ಹಾಗೆ ಭೂಮಿ ಕೂಡ ಈ ಪ್ರಕ್ರಿಯೆಗೆ ಹೊರತಲ್ಲ. ತನ್ನ ಒಡಲಿನಲ್ಲಿ ಅಗಾಧವಾದ  ಬೆಳೆಗಳನ್ನು ತುಂಬಿಕೊಂಡು ಜಗಕೆ ಅನ್ನ ನೀಡುತ್ತಾಳೆ. ಭೂತಾಯಿಯನ್ನು ಹೆಣ್ಣೆಂದು ಭಾವಿಸಿಕೊಂಡು ಗರ್ಭ ಧರಿಸಿದ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯವನ್ನು ನೆರವೇರಿಸುವ ಹಾಗೆ ಭೂತಾಯಿಗೆ ಕೂಡ ಮಡಿಲು ತುಂಬುವ ಕಾರ್ಯ ಮಾಡುತ್ತಾರೆ. ಮುಂಗಾರಿನಲ್ಲಿ ಸೀಗೆ ಹುಣ್ಣಿಮೆ ಹಿಂಗಾರಿನಲ್ಲಿ ಎಳ್ಳು ಅಮಾವಾಸ್ಯೆಯನ್ನು ಸಾಂಪ್ರದಾಯಿಕವಾಗಿ ಭೂತಾಯಿಯ  (ಸೀಮಂತ ಕಾರ್ಯ)ಶುಭ ಕಾರ್ಯವನ್ನು ಚರಗದ ಹೆಸರಿನಲ್ಲಿ ಮಾಡುತ್ತಾರೆ..ಹಿಂಗಾರು ಬೆಳೆ ಕಾಳು ಕಟ್ಟುವ ಸಮಯದಲ್ಲಿ ( ಜೋಳ ಕಡಲೆ ಇತರೆ ಬೆಳೆಗಳು) ಬರುವ ಎಳ್ಳು ಅಮಾವಾಸ್ಯೆ ರೈತರ ಪಾಲಿಗೆ ವೈಭವದ ಆಚರಣೆ. ಪ್ರಾದೇಶಿಕ ಸೊಗಡಿನಿಂದ ಕೂಡಿದ ವಿಶಿಷ್ಟ ಪೂರ್ಣವಾದ ಒಂದು ಪರ್ವ. ಹಲವು ನಂಬಿಕೆ ಆಶಯಗಳೊಂದಿಗೆ ರೈತರು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಪ್ರಕೃತಿ ಮತ್ತದರ ಸಂಗತಿಗಳನ್ನು ಅತ್ಯಂತ ಭಾವನಾತ್ಮಕ ಮನಸ್ಸಿನಿಂದ ನೋಡುತ್ತಾರೆ. ಒಕ್ಕಲು ಮಕ್ಕಳು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ವೃತ್ತಿ ಜೀವನದ ಒಂದು ಕ್ರಮವೂ ಹೌದು. ಅನ್ನ ನೀಡುವ ಭೂತಾಯಿಗೆ ಅಪಾರ ಗೌರವ ಪ್ರೀತಿಯನ್ನು ತೋರಿಸುತ್ತಾರೆ. ಭೂತಾಯಿಯ ಸಾಂಗತ್ಯದಲ್ಲಿ ಹತ್ತು ಹಲವು ಬಗೆಯ ಪೂಜಾ ವಿಧಿಗಳನ್ನು ಮಾಡುತ್ತಾರೆ. ಬಿತ್ತುವ ಮುನ್ನ ಕೂರಿಗೆ ಪೂಜೆ ಸಲ್ಲಿಸುವುದಾಗಲಿ , ಬೆಳೆ ಬೆಳೆದು ನಿಂತಾಗ ಚರಗದ ವಿಧಿ, ಮೇಟಿ ಕಂಬಕ್ಕೆ ಹಂತಿ ಹೂಡುವುದಾಗಲಿ, ಕಣದ ಪೂಜೆ ಸಲ್ಲಿಸುವುದಾಗಲಿ, ರಾಶಿಯನ್ನು ಚೀಲಕ್ಕೆ ತುಂಬುವಾಗಿನ ಪೂಜೆಯಾಗಲಿ ಇವೆಲ್ಲವೂ  ಒಕ್ಕಲು ಸಮೃದ್ಧಿಗೆ ಭೂತಾಯಿಯನ್ನು ಬೇಡಿಕೊಳ್ಳುವ ಪರಿಗಳೇ ಆಗಿವೆ. ಇವೆಲ್ಲದರ ಮಧ್ಯೆ ಹಚ್ಚ ಹಸುರಿನ ಬೆಳಗಳ  ಚರಗದ ಸಂಭ್ರಮವಂತು ಮಹಾಪರ್ವದಂತೆ ಕಾಣಿಸುತ್ತದೆ. ಬೆಳೆ ಬೆಳೆದು ನಿಂತ ಹೊಲದಲ್ಲಿ ಭೂತಾಯಿ ಬಯಕೆ ತೀರಿಸಲು ವಿವಿಧ ರೀತಿಯ ಭಕ್ಷ ಭೋಜನಗಳನ್ನು ತಯಾರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ ಹೆಣ್ಣು ಮಕ್ಕಳು ರಾತ್ರಿ ಇಡೀ ಅಡುಗೆ ತಯಾರಿಸುವಲ್ಲಿ ನಿರತರಾಗುತ್ತಾರೆ. ಅಕ್ಕಪಕ್ಕದ ಮನೆಯ ಗೆಳತಿಯರು ಕೈಗೂಡಿಸುತ್ತಾರೆ. ಎಳ್ಳು ಶೇಂಗಾ ಬೆಲ್ಲ ಸೇರಿಸಿ ಮಾಡುವ ಹೋಳಿಗೆಗೆ ಅಗ್ರಸ್ಥಾನ. ಎಳ್ಳು ಅಮಾವಾಸ್ಯೆಗೆ ಎಳ್ಳು ಹೋಳಿಗೆ ಅನ್ವರ್ಥಕವಾಗಿರುತ್ತಿತ್ತು. ಹೂರಣದ ಹೋಳಿಗೆ ಕರಿಗಡಬು, ನೀರುಗಿಯಲ್ಲಿ ಬೇಯಿಸಿದ ಜೋಳ ಇಲ್ಲವೆ ಸಜ್ಜೆ ಕಡಬು.ಮೊಸರುಬಾನ,ಅನ್ನ,ಬೇಳೆ ಕಟ್ಟಿನ ಸಾರು (ಹೋಳಿಗೆ ಸಾರು) ನವಣಕ್ಕಿ ಅನ್ನ , ಮ್ಯಾಣದಂತೆ ಮಗುಚಿದ   ಹುಳಿ ಪುಂಡಿ ಪಲ್ಯ ಕುಚ್ಚಿದ ಹಸಿಮೆಣಸಿನಕಾಯಿ ಪಲ್ಯ,  ಚವಳಿ ಕಾಯಿ ಪಲ್ಯ ಐದು ಬಗೆಯ ದ್ವಿದಳ ಧಾನ್ಯಗಳನ್ನು ಕೂಡಿಸಿ ಮಾಡಿದ ಉದುರು ಕಾಳು ಪಲ್ಯ, ತುಂಬು ಬದನೆಕಾಯಿ, ಕೆನೆ ಮೊಸರು, ಕಾರೆಳ್ಳು, ಅಗಸಿಯ ಕಮ್ಮನೆಯ ಹಿಂಡಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಜೇನಿನಂತ ಕಂಚಿಕಾಯಿ ಉಪ್ಪಿನಕಾಯಿ…. ಲೆಕ್ಕವಿಲ್ಲದಷ್ಟು, ಭೋಜನ ಸಂಗೀತವೆಲ್ಲ, ಚುಮು ಚುಮು ಬೆಳಗಾಗುವುದರೊಳಗೆ ಸಿದ್ಧವಾಗುತ್ತಿತ್ತು. ಅತ್ತ ಗಂಡಸರು ನಸುಕಿನಲ್ಲೇ ಎದ್ದು ಎತ್ತುಗಳ ಮೈ ತೊಳೆದು ಅವುಗಳ ಮೈಗೆ ಒಂದಿಷ್ಟು ಬಣ್ಣ ಬಳಿದು ಕೋಡುಗಳಿಗೆ ಝೂಲಾವನ್ನು ಮತ್ತು ಬಣ್ಣದ ರಿಬ್ಬನ್ನು ಕಟ್ಟಿ ಅಲಂಕಾರ ಮಾಡುತ್ತಾರೆ. ಬಂಡಿಯನ್ನು ಸ್ವಚ್ಛಗೊಳಿಸಿ ಎತ್ತು ಮತ್ತು ಬಂಡಿಗೆ ಪೂಜೆ ನೆರವೇರಿಸುತ್ತಾರೆ.ಇತ್ತ ಹೆಣ್ಣು ಮಕ್ಕಳು ಅಡುಗೆ ಕೆಲಸ ಮುಗಿಸಿ ವಿಶೇಷವಾಗಿ ದೇಸಿ ಉಡುಗೆ ತೊಟ್ಟು (ಇಲಕಲ್ ಸೀರೆ ಉಟ್ಟುಕೊಂಡು) ಸಿಂಗಾರವಾಗುತ್ತಾರೆ. ಮಾಡಿದ ಅಡುಗೆಯನ್ನು ಒಂದೂ ಮರೆಯದೆ ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಇಟ್ಟು ಅಡುಗೆ ಬುಟ್ಟಿಯನ್ನು ಪೂಜಿಸಿ ನಂತರ ಬಿಳಿ ಧೋತರದ ಅರಿವೆಯಲ್ಲಿ ಬುಟ್ಟಿಯನ್ನು ಇಟ್ಟು ಗಟ್ಟಿಯಾಗಿ ಕಟ್ಟಿ ಜೋಪಾನವಾಗಿ ತಂದು ಬಂಡಿಯಲ್ಲಿಡುತ್ತಾರೆ. ಮನೆಯ ಎಲ್ಲಾ ಹೆಣ್ಣು ಮಕ್ಕಳು, ಬಂಧು ಬಾಂಧವರು, ಮಕ್ಕಳು ಬಂಡಿಯಲ್ಲಿ ಹೊರಡುತ್ತಾರೆ. ಗುಡ್ಡಗಳ ದಾರಿ ಹಿಡಿದು ಎರೆ ಹೊಲದ ಕಡೆಗೆ ಎತ್ತುಗಳು ದಾರಿ ತುಳಿಯುತ್ತಿದ್ದಂತೆ ದಿಬ್ಬಣದ ವೈಭವದಂತೆ ಕಾಣುತ್ತದೆ.ಹೊಲದಲ್ಲಿ ದಟ್ಟ ಜೋಳದ ಬೆಳೆಯ ಮಧ್ಯೆ ತೆನೆ ತುಂಬಿದ ಐದು ಜೋಳದ ದಂಟುಗಳನ್ನು ಸೇರಿಸಿ ಕಟ್ಟಿ ಬುಡದಲ್ಲಿ ಐದು ಕಲ್ಲು ಅಥವಾ ಮಣ್ಣಿನ ಹೆಂಟೆಯನ್ನು ಇಟ್ಟು ಪಾಂಡವರ ಪೂಜೆ ಮಾಡುವರು (ಇದು ವನವಾಸದಲ್ಲಿದ್ದ ಪಾಂಡವರು ಕಷ್ಟಪಟ್ಟು ಕೃಷಿಗೈದ ನೆನಪಂತೆ) ಪೂಜೆಯ ನಂತರ ಮಾಡಿದ ಅಡುಗೆಯ ನೈವೇದ್ಯವನ್ನು ಇಡೀ ಹೊಲದ ತುಂಬ ಚರಗ ಚೆಲ್ಲುವ ವಿಧಿಯಾಚರಣೆ ಹುಲ್ಲುಲ್ಲಿಗೋ ……. ಚಲ್ಲಾಂಬರಿಗೋ ಎನ್ನುತ್ತಾ ಎಲ್ಲ ಅಡುಗೆ ಪದಾರ್ಥಗಳನ್ನು ಇಷ್ಟಿಷ್ಟು ಹೊಲದ ತುಂಬ ಚೆಲ್ಲಾಡುತ್ತ ನೀರನ್ನು ಸಿಂಪಡಿಸುತ್ತ ಭೂತಾಯಿ ಬಯಕೆಯನ್ನು ತೀರಿಸುತ್ತಾರೆ . ನಂತರ ಬನ್ನಿ ಗಿಡದ ಬುಡದಲ್ಲಿ ಲಕ್ಷ್ಮಿ ಪೂಜೆ ಮತ್ತು ಬನ್ನಿ ಗಿಡದ ಪೂಜೆ ನಡೆಯುತ್ತದೆ. ಎಲ್ಲ ಪೂಜಾ ವಿಧಿಗಳು ಮುಗಿದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುವರು. ಮಾಡಿದ ಅಡುಗೆಯ ಪದಾರ್ಥಗಳು ತಾಟಿನಲ್ಲಿ (ತಟ್ಟೆ) ಸಾಲಲಾರದಷ್ಟು ಏನೇನು ತಿನ್ನುವುದು ಎಂಬ ಗೊಂದಲವಾಗುತ್ತದೆ. ಊಟದ ನಡುವೆ ಬಾಡಿಸಿಕೊಳ್ಳಲು ಅಲ್ಲೇ ಹೊಲದಲ್ಲಿಯೇ ಇದ್ದ ಹಸಿ ಉಳ್ಳಾಗಡ್ಡಿ, ಮೆಂತ್ಯ ಪಲ್ಯ, ಹತ್ತರಕಿಯನ್ನು ತಂದು ಇಡುವರು. ಹೀಗೆ ಹಿರಿಯರು ಬಂದು ಬಾಂಧವರು ಸ್ನೇಹಿತರು, ಮಕ್ಕಳು ಹರಟುತ್ತ ಸುಖ ದುಃಖ ಮಾತನಾಡುತ್ತಾ ಪರಸ್ಪರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂತೋಷದಿಂದ ನಗುನಗುತ್ತ ಊಟ ಮಾಡುತ್ತಾರೆ. ಊಟದ ನಂತರ ಮಕ್ಕಳೆಲ್ಲ ಸುಲಗಾಯಿ ಎಂದರೆ ಹಸಿ ಕಡಲೆಯನ್ನು ತಿನ್ನಲು ಓಡುವರು. ಮನೆಯ ಹೆಣ್ಣು ಮಕ್ಕಳೆಲ್ಲ ಜೋಳದ ಬೆಳೆಯ ಮಧ್ಯೆ ಬೆಳೆದ ಪುಟ್ಟಿ ಹಣ್ಣನ್ನು (ಸೌತೆ ಹಣ್ಣು) ಹುಡುಕಾಡುವ ನೆಪದಲ್ಲಿ ಇಡೀ ಹೊಲವನ್ನೆಲ್ಲ ಸುತ್ತಾಡಿ ಸುಲಗಾಯಿ ಪುಟ್ಟಿ ಹಣ್ಣು ಕಡಗಾಯಿ(ಕಸುಕಾದ ದೊಡ್ಡ ಸೌತೆಕಾಯಿ ಇದನ್ನು ಉಪ್ಪಿನಕಾಯಿ ಹಾಕಲು ಬಳಸುತ್ತಾರೆ) ಇವನ್ನೆಲ್ಲ ಸಂಗ್ರಹಿಸಿಕೊಂಡು ಬರುತ್ತಾರೆ. ಅಷ್ಟೊತ್ತಿಗೆ ಇಳಿ ಹೊತ್ತು.ಹೊತ್ತು ಜಾರುತ್ತಿದ್ದಂತೆ ಎತ್ತಿನ ಕೊರಳು ಕಟ್ಟುತ್ತಿದ್ದ ಯಜಮಾನನನ್ನ ನೋಡಿ ಎಲ್ಲರೂ ಬಂದು ಬಂಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಚರಗದ ಸಂಭ್ರಮವನ್ನು ಮೆಲುಕು ಹಾಕುತ್ತಾ ಬೆಳೆಯ ಸಮೃದ್ಧಿಯ ನಿರೀಕ್ಷೆಯಲ್ಲಿ ಮತ್ತೊಂದು ಎಳ್ಳು ಅಮಾವಾಸ್ಯೆಯನ್ನು ಎದುರು ನೋಡುತ್ತ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಡಾ. ಮೀನಾಕ್ಷಿ ಪಾಟೀಲ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ Read Post »

ನಿಮ್ಮೊಂದಿಗೆ

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್

ಸ್ಫೂರ್ತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಾದರಿ ನಾಯಕತ್ವ” ಚಿಕ್ಕಂದಿನಲ್ಲಿ ಮೇಲಧಿಕಾರಿ ಮತ್ತು ನಾಯಕ ಇವೆರಡರ ನಡುವಿನ ವ್ಯತ್ಯಾಸವನ್ನು ಓದಿದ್ದೆ. ಅದರಲ್ಲಿನ ಕೆಲ ವಾಕ್ಯಗಳು ನನಗೆ ತುಂಬಾ ಇಷ್ಟವಾಗಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ ಕೂಡ.  ಬಾಸ್ ಅಥವಾ ಮೇಲಧಿಕಾರಿ ಆದವನು ತನ್ನ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಷಯವನ್ನು ಇಲ್ಲವೇ ಕೆಲಸವನ್ನು ಹೇಳಬೇಕಾದರೆ ನಾನು ಎಂದು ಆರಂಭಿಸುತ್ತಾನೆ…. ಆದರೆ ನಿಜವಾದ ಲೀಡರ್ ಅಥವಾ ನಾಯಕನಾದವನು ನಾವು ಎಂದು ಹೇಳುತ್ತಾನೆ ಎಂಬ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದ್ದವು. ಇದಕ್ಕೆ ಪೂರಕವಾಗಿ ನಮ್ಮ ಮಾಜಿ ರಾಷ್ಟ್ರಪತಿ ಆಗಿರುವ ಕ್ಷಿಪಣಿ ತಜ್ಞ ಎಂದೇ ಹೆಸರಾದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್ ಅವರು ಹೇಳಿದ ಒಂದು ವಿಷಯವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕು. ವಿಕ್ರಮ್ ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಅವರ ಸಹೋದ್ಯೋಗಿಗಳ ಅವಿರತ ಪ್ರಯತ್ನದ ಫಲವಾಗಿಪಿಎಸ್ಎಲ್ ವಿ ಉಪಗ್ರಹ  ಉಡಾವಣೆಯಾಯಿತು…. ಆದರೆ ಉಡ್ಡಯನಗೊಂಡ ಕೆಲವೇ ಕ್ಷಣಗಳಲ್ಲಿ ಉಪಗ್ರಹವು ಪತನವಾಯಿತು. ಇದು ದೇಶದ ಜನರ ಬೇಸರಕ್ಕೂ ರಾಜಕೀಯ ವಿರೋಧ ಪಕ್ಷಗಳ ಕೆಂಗಣ್ಣಿಗೂ ಗುರಿಯಾಯಿತು. ಕೋಟ್ಯಾಂತರ ಜನರು ಹೊಟ್ಟೆ ಹಸಿವಿನಿಂದ ಒದ್ದಾಡುತ್ತಿರುವ ಭಾರತದಂತಹ ದೇಶದಲ್ಲಿ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿ ಉಪಗ್ರಹವನ್ನು ಉಡಾಯಿಸುವ ಅವಶ್ಯಕತೆ ಇದೆಯೇ ಎಂಬ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದವು. ಅಂತಹ ಸಮಯದಲ್ಲಿ ಉಪಗ್ರಹವು ಪತನಗೊಂಡದ್ದು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೂ ಮುಂದಿನ ಅರ್ಧ ಗಂಟೆಯಲ್ಲಿ ಜರುಗುವ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಾದದ್ದು ಅವಶ್ಯ ವಾಗಿತ್ತು. ಎಲ್ಲಾ ವಿಜ್ಞಾನಿಗಳು ಪತ್ರಿಕಾಗೋಷ್ಠಿಗೆ ಹೋಗಲು ಹಿಂಜರಿಯುತ್ತಿರುವಾಗ  ಸಂಸ್ಥೆಯ ನಿರ್ದೇಶಕರಾದ ವಿಕ್ರಂ ಸಾರಾಭಾಯಿ ಅವರು ತಾವೇ ಖುದ್ದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಕಾರ್ಯ ವೈಖರಿಯ ಕುರಿತು ಮಾಧ್ಯಮದವರಿಗೆ ಮನದಟ್ಟು ಮಾಡಿಕೊಟ್ಟರು ಮಾತ್ರವಲ್ಲದೇ ಉಪಗ್ರಹ ಪತನದ ಹಿಂದಿನ ಎಲ್ಲಾ ಸೋಲನ್ನು ತಮ್ಮ ಮೇಲೆ ಹಾಕಿಕೊಂಡರು. ಈ ವಿಷಯ ಎಲ್ಲ ಯುವ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತ್ತು. ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಉಪಗ್ರಹವನ್ನು ಉಡಾಯಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು ಕೂಡ ಈ ಹಿಂದಿನ ಸೋಲು ಎಲ್ಲರಲ್ಲೂ ತುಸು ಆತಂಕವನ್ನು ಸೃಷ್ಟಿ ಮಾಡಿತ್ತು. ಉಪಗ್ರಹ ಯಶಸ್ವಿಯಾಗಿ ಉದಾವಣೆಯಾಗಿ ಎಲ್ಲರ ಚಪ್ಪಾಳೆಯ ಝೇಂಕಾರ ವೀಕ್ಷಣಾ ಕೋಣೆಯನ್ನು ತುಂಬಿತ್ತು. ಈ ಯಶಸ್ಸಿನ ಕುರಿತು ಬರೆಯಲು ಪತ್ರಕರ್ತರು ಕಾಯುತ್ತಿದ್ದರು…. ಆಗ ತಮ್ಮ ಸಹೋದ್ಯೋಗಿಗಳನ್ನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಕಳುಹಿಸಿಕೊಟ್ಟ ವಿಕ್ರಂ ಸಾರಾಭಾಯಿ ತಾವು ಹಿಂದೆ ಉಳಿದರು.ಸೋಲಿನ ಎಲ್ಲ ಭಾರವನ್ನು, ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಳ್ಳುವ ಮತ್ತು ಗೆಲುವನ್ನು ಸಂಭ್ರಮಿಸಲು ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟ ವಿಕ್ರಂ ಸಾರಾಭಾಯಿಯವರ ಅಂದಿನ ನಡೆ ನಿಜವಾದ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಕಲಾಂ ಅವರ ಈ ಅನುಭವದಿಂದ ನಾವು ತಿಳಿದುಕೊಳ್ಳಬಹುದು. ಇದೀಗ ನಾವು ಸಣ್ಣಪುಟ್ಟ ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗಿನ ಎಲ್ಲ ಭಾಗಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು, ದೇವಮಾನವರನ್ನು ಕಾಣುತ್ತೇವೆ. ಮತ್ತು ಅವರ ಅಭಿಮಾನಿ ಸಂಘಗಳನ್ನು ಕೂಡ. ನಿಜವಾದ ನಾಯಕತ್ವ ಎಂದರೇನು ಎಂಬುದರ ಪರಿಕಲ್ಪನೆಯೇ ಇಲ್ಲದ ಸಾಕಷ್ಟು ಜನ ತಮ್ಮನ್ನು ತಾವು ನಾಯಕರೆಂದು ಹೇಳಿಕೊಳ್ಳುತ್ತಿರುವುದು ಸ್ವಯಂ ಘೋಷಿತ ನಾಯಕರ ಅಜ್ಞಾನವೋ  ಅಥವಾ ಹಾಗೆ ಹೇಳಿಕೊಳ್ಳುತ್ತಿರುವವರನ್ನು ಅತಿಯಾಗಿ ಪುರಸ್ಕರಿಸುವ ಜನರ ತಪ್ಪೋ ಎಂಬುದು ಗೊತ್ತಾಗುತ್ತಿಲ್ಲ. ಹಾಗಾದರೆ ನಾಯಕ ಎಂದರೇನು? ನಾಯಕತ್ವದ ಲಕ್ಷಣಗಳು ಯಾವುವು ಎಂಬ ಸಂದೇಹ ನಮ್ಮಲ್ಲಿ ಕಾಡಬಹುದು ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಒಳ್ಳೆಯ ನಾಯಕ ಎಂದರೆ ಎಲ್ಲ ವಿಷಯಗಳ ಕುರಿತು ಅರಿವನ್ನು ಹೊಂದಿರುವುದು ಮತ್ತು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿ  ಎಂದಲ್ಲ. ನಾಯಕತ್ವ ಎನ್ನುವುದು ನೀವು ಜನರೊಂದಿಗೆ ಯಾವ ರೀತಿ  ವರ್ತಿಸುತ್ತೀರಿ, ಯಾವ ರೀತಿ ಸಹಾಯ ಮಾಡುತ್ತೀರಿ ಮತ್ತು ನೀವು ಮಾಡುವ ಸಹಾಯ ಅವರ ಬದುಕಿನಲ್ಲಿ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವುದು ನಾಯಕತ್ವ ಎಂದೆನಿಸಿಕೊಳ್ಳುತ್ತದೆ.  ಕೆಳಗಿನ ಏಳು ಸರಳ ವಿಧಾನಗಳು ಉತ್ತಮ ನಾಯಕತ್ವಕ್ಕೆ ಮಾದರಿ *ನಾಯಕನಾದವನು ದಯಾಳುವಾಗಿರಬೇಕು…. ಒಳ್ಳೆಯ ನಾಯಕನಾದ ವ್ಯಕ್ತಿ ಇತರರೊಂದಿಗೆ ಗೌರವ ಮತ್ತು ಕಾಳಜಿಯಿಂದ ವರ್ತಿಸುತ್ತಾನೆ. ದಯಾ ಗುಣವು ನಂಬಿಕೆಯನ್ನು ವೃದ್ಧಿಸುತ್ತದೆ. ವಿಶ್ವಾಸವನ್ನು ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ನಾಯಕನಾದವನು ಅವರು ತನ್ನ ವಿರೋಧಿಯೇ ಇರಲಿ, ತನ್ನನ್ನು ಹೀಯಾಳಿಸುವ ವ್ಯಕ್ತಿಯೇ ಇರಲಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು. * ನಾಯಕ ಮಿತ ಭಾಷಿಯಾಗಿರಬೇಕು…. ಒಳ್ಳೆಯ ನಾಯಕತ್ವ ಗುಣ ಹೊಂದಿರುವವನು ತನ್ನ ಎದುರಿಗಿರುವವರ ಮಾತನ್ನು ಗಮನವಿಟ್ಟು ಆಲಿಸುತ್ತಾನೆ. ತಾನು ಮಿತಭಾಷಿಯಾಗಿದ್ದು ತನ್ನ ಸಂಪೂರ್ಣ ಲಕ್ಷವನ್ನು ಇತರರ ಮಾತುಗಳನ್ನು ಕೇಳುವುದರಲ್ಲಿ ವಿನಿಯೋಗಿಸುವ ವ್ಯಕ್ತಿ ಒಳ್ಳೆಯ ನಾಯಕತ್ವಕ್ಕೆ ಉದಾಹರಣೆ. ಜನರಿಗೆ ನಿಜವಾಗಿಯೂ ಏನು ಬೇಕಾಗಿರುತ್ತದೆ ಎಂಬುದನ್ನು ಅರಿಯುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಿಜವಾದ ನಾಯಕ. * ನಾಯಕ ಎಲ್ಲರಿಗೂ ಸಿಗುವಂತಿರಬೇಕು….. ಮಹಡಿಯ ಮೇಲೆ ನಿಂತು ಕೈ ಬೀಸುವ, ವೇದಿಕೆಗಳಲ್ಲಿ ನಮಸ್ಕರಿಸುವ ವ್ಯಕ್ತಿಗಳಿಗಿಂತ ಜನಸಾಮಾನ್ಯರ ನಡುವೆ ಬೆರೆಯುವ ಜನರ ಕಷ್ಟ ಸುಖಗಳಿಗೆ ಪ್ರತಿ ಸ್ಪಂದಿಸುವ, ಜನರ ನೋವಿಗೆ ಕಿವಿಯಾಗುವ, ಅವರ ತೊಂದರೆಗೆ ದನಿಯಾಗುವ ವ್ಯಕ್ತಿ ನಿಜವಾದ ನಾಯಕ. ಜನರು ತಮ್ಮ ನಾಯಕನ ಬಳಿ ಬಂದು ತಮ್ಮ ತೊಂದರೆಗಳನ್ನು ಮತ್ತು ಯೋಜನೆಗಳನ್ನು ಸರಳವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿ ಕೊಡುವ ವ್ಯಕ್ತಿ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. *ತನ್ನ ಸಹೋದ್ಯೋಗಿಗಳಿಗೆ, ಹಿಂಬಾಲಕರಿಗೆ ವಿಶ್ರಾಂತಿಗೆ ಅವಕಾಶ ನೀಡುವ ವ್ಯಕ್ತಿ ನಿಜವಾದ ನಾಯಕ. *ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರಿಗೆ ತಪ್ಪು ಮಾಡಿದಾಗ ಅವಹೇಳನ ಮಾಡುವುದಿಲ್ಲ… ಆತನಿಗೆ ಗೊತ್ತು ತಪ್ಪುಗಳು ಕಲಿಕೆಗೆ ಮತ್ತು ಬೆಳವಣಿಗೆಗೆ ಸಹಾಯಕ ಎಂದು. ನಾಯಕನಾದವನು ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ. *ನಿಜವಾದ ನಾಯಕತ್ವ ಗುಣವಿರುವ ವ್ಯಕ್ತಿ ಜನರ ಸಾಮರ್ಥ್ಯ ಗಳನ್ನು ಅರಿಯುವ ಶಕ್ತಿಯನ್ನು ಹೊಂದಿರುತ್ತಾನೆ. *ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾನೆ. ಅವರ ಅನುಭವಕ್ಕೆ ಬೆಲೆ ನೀಡುತ್ತಾನೆ. ನಾಯಕತ್ವ ಗುಣವನ್ನು ಹೊಂದಿರುವುದು ದೈವದತ್ತ ಕಲೆ. ಕಲಿಕೆ ಮತ್ತು ಪ್ರಯತ್ನದ ಮೂಲಕ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿ ಮಗುವೂ ಉತ್ತಮ ನಾಯಕರಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ನಿಮ್ಮೊಂದಿಗೆ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಚಳಿ-ಚಳಿ”   ಎಲ್ಲವನು ಕಳೆದುಕೊಂಡೆತನುವು ಮನವುಒಲವು ಬಲವುಈ ಚಳಿಯರಾತ್ರಿಗೆ! ಏಕಾಂತದ ನಡುಕಎದೆಯೊಳಗೆವಿರಹದ ಉರಿಅರಿವು ಜರಿದುಮರೆವು ಮಸೆದು ಹೊರಗೆ-ರಂಧ್ರ ಕೊರೆವ ಚಳಿಒಳಗೆ-ದಹಿಸುವ ನಿನ್ನನೆನಪ ಸುಳಿ ನೀನಿರದ ವೇಳೆಜೀವ ಬಾದಿತನಿದಿರೆ ಬಾರದೆನೆಮ್ಮದಿ ಗದ್ಗದಿತ ಮೆಲ್ಲುವ ವೇದನಕನ್ನಡಿ ನಗುತಕಾಯಿಲೆಗೆ ಕೆಡವಿದಮೇಧಾವಿ ಶಕುನ ಗಡಿಯಾರದ ಮುಳ್ಳುಗಳಶಬ್ಧವು-ಕಿವಿಯೊಳಗೆಸಲಾಕೆ ಬಾರಿಸಿದ ಹಾಗೆಮಿಣುಕು ದೀಪಅಣಕಿಸಿದ ಹಾಗೆ ನೀನಿರದಈ ಚಳಿಯ ರಾತ್ರಿಹಿಂಡುತಿವೆಕರಳು ನರಳಗಳನುಹಿಮದ ಗರ್ಭದೊಳಗೆಮಲಗಿಸಿ ——– ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ” Read Post »

ನಿಮ್ಮೊಂದಿಗೆ

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಿನಿಮಾ ಸಂಗಾತಿ ಶಶಿಕಾಂತ್‌ ಪಟ್ಟಣ ರಾಮದುರ್ಗ “ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ” ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿಗುರು ದತ್ತ  ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ  ವಿ ಶಾಂತಾರಾಮ ರೋಹಿಣಿ ಹಟ್ಟಂಗಡಿ ಇನ್ನೂ ಅನೇಕರುಮತ್ತು ಇತ್ತೀಚಿನ ವರ್ಷಗಳಲ್ಲಿ ನಟಿಸಿದ ಸುನೀಲ್ ಶೆಟ್ಟಿ ಐಶ್ವರ್ಯ ರೈ ಶಿಲ್ಪಾ ಶೆಟ್ಟಿ ಮುಂತಾದವರು ಇಂತವರ ಸಾಲಿನಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಚಲನ ಚಿತ್ರದಲ್ಲಿ ನಾಯಕಿ  ನಟಿಸಿದ್ದವರು ನಮ್ಮ ಕರ್ನಾಟಕ ಮೂಲದವರು. ಅವರೇ ಶಾಂತಾ ಹುಬ್ಳಿಕರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹುಟ್ಟಿದ ರಾಜಮ್ಮ ಎಂಬ ಲಿಂಗಾಯತ ಶೆಟ್ಟರ ಹುಡುಗಿ ಮುಂದೆ ಬಾಲಿವುಡ್ ಬೆಡಗಿಯಾಗಿ ಮೆರೆಯುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ರಾಜಮ್ಮ (1914ಏಪ್ರಿಲ್,  – 17 ಜುಲೈ, 1992), ತಮ್ಮ ತೆರೆಮೇಲಿನ ಶಾಂತಾ ಹುಬ್ಳೀಕರ್ ಎಂಬ ಹೆಸರಿನಿಂದ ಖ್ಯಾತರಾದ ಚಿತ್ರನಟಿ ಮತ್ತು ಗಾಯಕಿ. ಸ್ವಾತಂತ್ರ್ಯಪೂರ್ವದ ಭಾರತೀಯ ಚಿತ್ರರಂಗದ ಅಭಿನೇತ್ರಿಯಾಗಿ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕೂ ಮತ್ತು ಹಾಡುಗಾರಿಕೆಗೂ ಹೆಸರಾದ ಶಾಂತಾ ಕನ್ನಡ ಮೂಲದವರು. ನಟಿಗಾಯಕಿಯಾಗಿ ಪ್ರಸಿದ್ಧಿ ಪಡೆದ ಶ್ರೇಷ್ಠ ಕಲಾವಿದೆ. ಬಾಲ್ಯ ಶಾಂತಾ ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿ ಎಂಬ ಊರಿನಲ್ಲಿ 1914 ಏಪ್ರಿಲ್ 14ರಂದು. ಅವರ ಹುಟ್ಟುಹೆಸರು ರಾಜಮ್ಮ ಬಡ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ಜನಿಸಿದಳು.  ಶಾಂತಾ ಮೂರನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ನಿಧನರಾಗಿ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೂವರು ಅಕ್ಕತಂಗಿಯರಲ್ಲಿ ಮಧ್ಯದವರಾದ ಶಾಂತಾ ಮತ್ತು ಅವರ ತಂಗಿಯನ್ನು ಹುಬ್ಬಳ್ಳಿಯ ಹತ್ತಿರದ, ಮಕ್ಕಳಿಲ್ಲದ ಸಂಬಂಧಿಕರೊಬ್ಬರಿಗೆ ದತ್ತು ಕೊಟ್ಟು ಸಾಕುವ ವ್ಯವಸ್ಥೆಯಾಗಿ, ದತ್ತುತಾಯಿಯ ಕಟ್ಟುನಿಟ್ಟಿನ ಪರಿಸರದ ಮಧ್ಯೆಯೇ ಪ್ರೌಢಶಾಲೆಯ ತನಕ ಶಾಂತಾ ಓದಿದರು. ಸಂಗೀತಾಭ್ಯಾಸ ಎಳವೆಯಿಂದ ಹಾಡುವ ಆಸಕ್ತಿ ಹೊಂದಿದ್ದ ಶಾಂತಾ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಅಬ್ದುಲ್ ಕರೀಂ ಖಾನ್ ಸಾಹೇಬರ ಬಳಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಅಜ್ಜಿಯಿಂದ ಜನಪದ ಗೀತೆ ಮತ್ತು ವಚನಗಳನ್ನು ಕಲಿತಿದ್ದ ಅವರಿಗೆ ಮುಂದೆ ಗಾಯಕಿಯಾಗುವ ಅವಕಾಶಗಳಲ್ಲಿ ಈ ಸಂಗೀತಾಭ್ಯಾಸ ನೆರವಾಯಿತು.ಯೌವನಕ್ಕೆ ಕಾಲಿಡುವ ಸಮಯದಲ್ಲಿ ಯಾರೂ ದಿಕ್ಕಿಲ್ಲದ ಈ ಅನಾಥೆ ಹುಡುಗಿಗೆ ಒಬ್ಬ ವೃದ್ಧನಿಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂಬ ವಿಚಾರ ಪ್ರಸ್ತಾಪವಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿ ರಾಜಮ್ಮ ಮನೆ ಬಿಟ್ಟು ಹೋಗಿ ಶ್ರೀ ಗುಬ್ಬಿ ವೀರಣ್ಣನವರ ಆಶ್ರಯ ಪಡೆದಳು. ನಟಿಯಾಗಿ ರಂಗಭೂಮಿ ನಟಿಯಾಗಿ ಶಾಂತಾ ಮೊದಲು ರಂಗನಟಿಯಾಗಿ ಹುಬ್ಬಳ್ಳಿ ಧಾರವಾಡದಾದ್ಯಂತ ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ಗುಬ್ಬಿ ಕಂಪನಿ ಸೇರಿದ ಶಾಂತ, ರಂಗಲೋಕದಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಮುಖ ಪಾತ್ರಗಳನ್ನು ಪಡೆದರು ಮಾತ್ರವಲ್ಲ, ಒಳ್ಳೆಯ ಗಾಯಕಿ ಎಂದೂ ಹೆಸರಾದರು. ಶಾಂತಾ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಗೆ ಬರುತ್ತಲೇ ಪುಣೆಯ ಚಿತ್ರನಿರ್ಮಾಪಕರಿಂದ ಶಾಂತಾ ಅವರಿಗೆ ಅವಕಾಶಗಳು ಬಂದವು. ತಮ್ಮ 18ನೇ ವಯಸ್ಸಿನಲ್ಲಿ ಕರ್ನಾಟಕ ಬಿಟ್ಟು, ಸಿನಿಮಾ ಅವಕಾಶಗಳಿಗೆ ಪುಣೆಗೆ ಶಾಂತಾ ಬಂದರು. ಸಿನಿಮಾ ನಟಿಯಾಗಿ1934ರಲ್ಲಿ ನಿರ್ಮಾಣಗೊಂಡ, ಮರಾಠಿ ಮತ್ತು ಹಿಂದಿ ಎರಡರಲ್ಲೂ ತೆರೆಕಂಡ ಭೇಡಿ ರಾಜಕುಮಾರ/ತಾಕ್ಸೇನ್ ರಾಜಪುತ್ರ ಶಾಂತಾ ಅವರ ಮೊದಲ ಸಿನಿಮಾ. ಇಲ್ಲಿ ಸಣ್ಣ ಪಾತ್ರ ಮಾಡಿದ್ದ ಅವರಿಗೆ ಸಿಕ್ಕ ಮೊದಲ ಗಮನಾರ್ಹ ಸಿನಿಮಾ ಎಂದರೆ 1937ರಲ್ಲಿ ಬಂದ ಮರಾಠಿ ಚಿತ್ರ ಕನ್ಹೋಪಾತ್ರ. ಇದು ಮರಾಠಿ ಸಂತೆ ಕನ್ಹೋಪಾತ್ರಳ ಮೇಲೆ ಮಾಡಿದ ಸಿನಿಮಾವಾಗಿತ್ತು. ಇಲ್ಲಿ ಶಾಂತಾರ ನಟನೆ ಮತ್ತು ಹಾಡುಗಾರಿಕೆ ಹೆಚ್ಚಿನ ಪ್ರಶಂಸೆ ಗಳಿಸಿತು. ಇದು ಪುಣೆಯ ಅತಿದೊಡ್ಡ ಚಿತ್ರಸಂಸ್ಥೆಯಾಗಿದ್ದ ‘ಪ್ರಭಾತ್ ಫಿಲ್ಮ್ ಕಂಪನಿ’ಯವರ ಗಮನ ಸೆಳೆಯಿತು. ಪ್ರಭಾತ್ ಫಿಲ್ಮ್ ಕಂಪನಿಯ, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ವಿ. ಶಾಂತಾರಾಂ ಅವರು ತಮ್ಮ ಮಾಝಾ ಮೂಲಗಾ /ಮೇರಾ ಲಡ್ಕ (1938) ಚಿತ್ರದ ನಾಯಕಿಯಾಗಿ ಶಾಂತಾರನ್ನು ಆಯ್ಕೆ ಮಾಡಿದರು. ಕಂಪನಿಯ ಒಳಗೆ ಮತ್ತು ಹೊರಗೆ ಶಾಂತಾರಾಂ ಅವರ ಈ ನಿರ್ಧಾರ ಜನರಲ್ಲಿ  ಅಚ್ಚರಿಗೆ, ಚರ್ಚೆಗೆ ಕಾರಣವಾಗಿತ್ತು. ಅದಾಗಲೇ ಕಂಪನಿಯ ಬಹುಪಾಲು ಎಲ್ಲಾ ಚಿತ್ರಗಳ ಯಶಸ್ವೀ ನಾಯಕಿಯಾಗಿ ಹೆಸರು ಮಾಡಿದ್ದ ಖ್ಯಾತ ಮರಾಠಿ ನಟಿ ಶಾಂತಾ ಆಪ್ಟೆ ಇದ್ದರೂ ಸಹಿತ  ಅವರನ್ನು ಬಿಟ್ಟು ಹೊಸ ಮತ್ತು ಮರಾಠಿ ಬಾರದ ಕನ್ನಡದ ಹುಡುಗಿಯನ್ನು ಆರಿಸಿಕೊಂಡಿದ್ದು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ , ಗಮನ ಬರುವಂತಾಯಿತು. ಶಾಂತಾರಾಂ ನೀಡಿದ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಶಾಂತಾ ಒಳ್ಳೆಯ ಅಭಿನಯ ಮತ್ತು ಹಾಡುಗಳನ್ನು ಹಾಡಿ ಶಾಂತಾರಾಂ ಅವರನ್ನೂ ಸೇರಿದಂತೆ ಎಲ್ಲಾ ಮರಾಠಿ ಮತ್ತು ಹಿಂದಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು. 1939 ರಲ್ಲಿ ಶಾಂತಾರಾಂ ನಿರ್ದೇಶಿಸಿದ ಮಹತ್ವಪೂರ್ಣ ಸಿನಿಮಾ ‘ಮನೂಸ್/ಆದ್ಮಿ’. ಇದು ವೇಶ್ಯೆಯೊಬ್ಬಳ ಜೀವನವನ್ನು ಕುರಿತಾದ ಸಿನಿಮಾವಾಗಿದ್ದು, ವಸ್ತು-ವಿಷಯ ಮತ್ತು ನಿರೂಪಣೆಗಳೆರಡೂ ಸವಾಲಿನಿಂದ ಕೂಡಿದ್ದಾಗಿತ್ತು. ಬಿಡುಗಡೆಗೊಂಡ ಆ ಚಿತ್ರ ಶಾಂತಾ ಹುಬ್ಳೀಕರರಿಗೆ  ಭಾರತದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಆ ಚಿತ್ರದಲ್ಲಿ ಶಾಂತಾ ಹಾಡಿದ ಕಶಾಲಾ ಉದ್ಯಾಚಿ ಬಾತ್/ಕಿಸಿಲಿಯೇ ಕಲ್ಕಿ ಬಾತ್ ಹಾಡು ಜನಜನಿತವಾಯಿತು.ಇದಾದ ಬಳಿಕ ಸಾಲು ಸಾಲಾಗಿ ಮರಾಠಿ ಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಶಾಂತಾ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ಭಾರತದಾದ್ಯಂತ ಶಾಂತಾ ಹುಬ್ಳೀಕರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕನ್ನಡದ ಹಲವರು ಶಾಂತಾ ಅವರನ್ನು ಕರೆತರುವ ಯತ್ನ ಮಾಡಿದರಾದರೂ ಬಿಡುವಿಲ್ಲದ ಶಾಂತಾ ಮರಾಠಿಯಲ್ಲೇ ಮಗ್ನರಾದರು. ಆದರೆ ಗುಬ್ಬಿ ವೀರಣ್ಣ ಅವರು ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿದ್ದ ಜೀವನ ನಾಟಕ (1942) ಚಿತ್ರಕ್ಕೆ ಶಾಂತಾ ಅವರನ್ನು ಕರೆತಂದು ಚಿತ್ರ ಮಾಡಿದರು. ಈ ಚಿತ್ರದಲ್ಲಿ ಕೆಂಪರಾಜ ಅರಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಇವರೊಂದಿಗೆ ಎಂ. ವಿ. ರಾಜಮ್ಮ, ಬಿ. ಜಯಮ್ಮ ಮತ್ತು ಶಾಂತಾ ಹುಬ್ಳೀಕರ್ ನಟಿಸಿದರು. ಇದು ಶಾಂತಾ ನಟಿಸಿದ ಏಕೈಕ ಕನ್ನಡ ಚಲನಚಿತ್ರ. ಮರಾಠಿ ಹಿಂದಿಯ ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಾಯಕಿ ನಟಿಯಾಗಿ ಹೆಸರು ದುಡ್ಡು ಪದವಿ ಆಸ್ತಿ ಎಲ್ಲವನ್ನೂ ಪಡೆಯುತ್ತಾ ದಾಪುಗಾಲು ಹಾಕುತ್ತಾ ನಡೆದ ಶಾಂತಾ ಹುಬ್ಳಿಕರ ಅವರಿಗೆ ಅವರೇ ಮಾದರಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಅವರು ತನ್ನ ಪತಿಯನ್ನಾಗಿ ಸಂಗಾತಿಯನ್ನಾಗಿ ಉದ್ಯಮಿಬಾಪುಸಾಹೇಬ್ ಗೀತೆ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಬಹುಶಃ ಶಾಂತಾ ಹುಬ್ಳಿಕರ ಅವರ ಜೀವನದಲ್ಲಿ ಇದು ಮಾಡಿದ ದೊಡ್ಡ ತಪ್ಪು ಎನಿಸಿತು. ಗಂಡ ಬಾಪುಸಾಹೇಬ ನಿರ್ಮಾಪಕರಲ್ಲಿ ಶಾಂತಾ ಹುಬ್ಳಿಕರ ಮಾಡಿದ ಚಲನ ಚಿತ್ರಗಳ ಸಂಭಾವನೆಯನ್ನು ಮುಂಚಿತವಾಗಿ ಪಡೆದು ಕೊಳ್ಳುತ್ತಾ ತನ್ನ ಐಷ್ಯಾರಾಮಿ ಜೀವನವನ್ನು ನಡೆಸ ಹತ್ತಿದನು . ಇದೆ ಹೊತ್ತಿನಲ್ಲಿ ಒಂದು ಗಂಡು ಮಗು ಹುಟ್ಟಿತು.ಅವನೂ  ಕೂಡ ಮುಂದೆ ತನ್ನ ತಾಯಿಯನ್ನು ಮನೆ ಬಿಟ್ಟು ಹೊರ ಹಾಕಿದನು .ಜೀವನದಲ್ಲಿ ರಾಣಿಯಾಗಿ ಮೆರೆಯಬೇಕಾದ ಶಾಂತಾ ಹುಬ್ಳಿಕರ ಎಂಬ ಮರಾಠಿ ಹಿಂದಿಯ ಸಿನಿಮಾಗಳಲ್ಲಿ ನಟಿಸಿದ್ದ ದಂತ ಕಥೆ ಮುಂದೆ ಅನಾಥೆಯಾಗಿ ಬಿಟ್ಟಳು .ಆದರೂ ಧೃತಿಗೆಡಲಿಲ್ಲ ಸಣ್ಣ ಪುಟ್ಟ ಪಾತ್ರ ಮಾಡುತ್ತ ತನ್ನ ಜೀವನ ನಿರ್ವಹಣೆಗೆ ಪುಣೆಯಲ್ಲಿ ಆರಂಭದಲ್ಲಿ ಒಂದು ಪುಟ್ಟ ಬಾಡಿಗೆಯ ಮನೆ ಮಾಡಿ ಕೊಂಡು ಜೀವನ ನಡೆಸಿದಳು .ಇವಳ ಗಂಡ ಮಗ ಇವಳ ಆಸ್ತಿ ಕಡೆದುಕೊಂಡು ಬೀದಿಗೆ ತಳ್ಳಿದರು. ಕೊನೆಗೆ ಪುಣೆಯ ಅನಾಥಾಶ್ರಮದಲ್ಲಿ ತನ್ನ ಜೀವಿತ ಕಾಲದ ಕೊನೆಯವರೆಗೂ ಕಾಲ ಕಲೆಗೂ 1992 ರಲ್ಲಿ ಬಯಲಾದಳು. ಇಡೀ ಮುಂಬೈ ನಗರಿಗೆ ಬೇಕಾದ ಈ ಚೆಲುವೆ ಹೀಗೆ ಮುಂದೆ ಅನಾಥ ಶವವಾಗುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ಅನಾಥಾಶ್ರಮದಲ್ಲಿ ಇರುವಾಗಲೇ ತನ್ನ ಆತ್ಮ ಕಥೆಯನ್ನು ಬರೆದಳು. ನಟನೆ ಗಾಯನ ಒಂದು ತಪಸ್ಸು ಅದು ತನಗೆ ಒಲಿದು ಬಂದಿತ್ತು ಜನರನ್ನು ಪ್ರೇಕ್ಷಕರನ್ನು ರಂಜಿಸಿ ಸಂತೋಷ ತಂದಿರುವೆನು. ನನ್ನ ಕೆಲಸ ಅಷ್ಟೆ. ಜೀವನದಲ್ಲಿ ಬಡತನ ಕಷ್ಟ ಅನುಭವಿಸಿದ ತಾನು ನಟನೆಯಲ್ಲಿ ಎಲ್ಲವನ್ನೂ ಮರೆತೇನು ಎಂದು ಹೇಳುತ್ತಾ ನಾಳೆಯ ಚಿಂತ್ಯಾಕೆ ಎಂಬ ಕನ್ನಡಕ್ಕೆ ಅನುವಾದಗೊಂಡ ಮೂಲ ಕೃತಿ ಕಶಾಲಾ ಉದ್ಯಾಚಿ ಬಾತ್’ ಎಂಬ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿ ಈ ಭೂಮಿಯ ಮೇಲೆ ತಾನು ಬದುಕಿ ಉಳಿದವರಿಗೆ ಸಂತೋಷವನ್ನು ಕೊಟ್ಟು ನಿರ್ಗಮಿಸ ಬೇಕು. ಅಂತಹ ಮಹಾರಾಣಿಯನ್ನು ಗೆಳತಿಯರು ಸಹ ಕಲಾವಿದರು ಮೇಲಿಂದ ಮೇಲೆ ನಿನ್ನ ಪರಿಸ್ಥಿತಿ ಮುಂದೆ ಹೇಗೆ ಏನು ಎಂಬ ಹಲವು ಪ್ರಶ್ನೆಗಳಿಗೆ ಯಾಕೆ ನಾಳೆಯ ಮಾತು ಚಿಂತೆ ಎಂದು ಮುಗುಳು ನಗುತ್ತಾ ಉತ್ತರ ನೀಡಿದ ನಟಿ ಎಲ್ಲಾ ಸಿಹಿ ಕಹಿ ಅನುಭವ ಘಟನೆಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿ ತೆರೆಯ ಮರೆಗೆ ಸರಿದಳು. *ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ* ಶಾಂತಾ ತಮ್ಮ ಆತ್ಮಕಥೆ ‛ *ಕಶಾಲಾ ಉದ್ಯಾಚಿ ಬಾತ್’* ಮರಾಠಿಯಲ್ಲಿ ಬರೆದಿದ್ದಾರೆ. ಇದರ ಕನ್ನಡಾನುವಾದ ‛ನಾಳೀನ ಚಿಂತ್ಯಾಕ ’ ಪುಸ್ತಕವನ್ನು ಅಕ್ಷತಾ ಹುಂಚದಕಟ್ಟೆ ಅವರು ತಮ್ಮ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. *ನಿಧನ*ತಮ್ಮ ಕೊನೆಯ ದಿನಗಳನ್ನು ಪುಣೆಯ ವೃದ್ಧಾಶ್ರಮದಲ್ಲಿ ಕಳೆದ ಶಾಂತಾ ಜುಲೈ 19, 1992ರಂದು ನಿಧನವಾದರು.  *ಶಾಂತಾ ಹುಬ್ಳಿಕರ ಅವರು ನಟಿಸಿದ ಆಯ್ದ ಚಲನ ಚಿತ್ರಗಳ ಪಟ್ಟಿ* ಶಾಂತಾ ನಟಿಸಿದ ಆಯ್ದ ಚಿತ್ರಗಳು: ಭೇಡ್ಕ ರಾಜಕುಮಾರ್ (1934)ಕನ್ಹೋಪಾತ್ರ (1937)ಮೇರಾ ಲಡ್ಕ (1938)ಮನೂಸ್/ಆದ್ಮಿ (1939)ಜೀವನ ನಾಟಕ ಕನ್ನಡ ಚಲನ ಚಿತ್ರ (1942) ಹೀಗೆ ಹಲವಾರು ನಾಟಕ ಚಲನ ಚಿತ್ರಗಳಲ್ಲಿ ನಟಿಸಿದ ಶಾಂತಾ ಹುಬ್ಳಿಕರ ಇವರು ಮಣ್ಣಲ್ಲಿ ಹುಟ್ಟಿ ಮಣ್ಣ ಮೇಲೆ ಬೆಳೆದು ಮಣ್ಣಲ್ಲಿ ಮಣ್ಣಾಗಿ ಹೋದರು. ಕನ್ನಡಿಗರು ಮರೆತ ದೈತ್ಯ ಪ್ರತಿಭೆ ಶಾಂತಾ ಹುಬ್ಳಿಕರ ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ, ಗಝಲ್, ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಮಾತಿನ ಪದಗಳು ತೊದಲುತಿವೆ ಇಂದುಕತ್ತಲೆಗೆ ಕನಸುಗಳು ನಡುಗುತಿವೆ ಇಂದು ಎಷ್ಟು ಹುಡುಕಿದರು ಸಿಗದು ಸಮಾಧಾನಪಡೆದ ಬಯಕೆಗಳು ಬಳಲುತಿವೆ ಇಂದು ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆಹೊಳೆಯುವ ಕಿರಣಗಳು ಕರಗುತಿವೆ ಇಂದು ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾಮಾಯೆ ಮೋಹಗಳು ತೊರೆಯುತಿವೆ ಇಂದು ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಗಜಲ್

ಕಾವ್ಯ ಸಂಗಾತಿ ನಿನ್ನೊಲವಿನಲಿ ನಾನು ಗೆಲುವಾಗಿರುವೆ ಈಗದೃಢ ಧೈರ್ಯದಚಲ ಶಿಖರವಾಗಿರುವೆ ಈಗ ಜಗದ ಜಂಜಾಟಗಳನೆಲ್ಲ ಮರೆಸಿರುವೆ ನೀನುಬದುಕ ಗುರಿಗೆ ನಾನು ನಿಖರವಾಗಿರುವೆ ಈಗ ನೋಡು ನೋಡುತ್ತಲೆ ಕಾಲಚಕ್ರ ಉರುಳಿದೆಸಮಯದ ನಡಿಗೆಯಲಿ ದಿಟವಾಗಿರುವೆ ಈಗ ಊಸರವಳ್ಳಿಯಂತೆ ಬಣ್ಣ ಬದಲಿಸುವ ಜನನೀಲಿಯಾಗಸದ ನಗುವಿನಂತಾಗಿರುವೆ ಈಗ ಎದೆಯೊಳಗಿನ ಕಿಚ್ಚು ಜ್ವಾಲೆಯಾಗಿದೆ ಮಾಜಾಬೂದಿಯಲೆದ್ದ ಫಿನಿಕ್ಸ ಹಕ್ಕಿಯಾಗಿರುವೆ ಈಗ ———————- ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಗಜಲ್ Read Post »

You cannot copy content of this page

Scroll to Top