ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ”

ಕಾವ್ಯ ಸಂಗಾತಿ ಮೀನಾಕ್ಷಿ ಪಾಟೀಲ “ಅವಳಿಲ್ಲದ ಊರಲ್ಲಿ” ಅವಳಿಲ್ಲದ ಊರಲ್ಲಿತಂಗಾಳಿ ಬಿಸಿಯಾಗಿಬೆಂದು ಹೋಗಿದೆ ಜೀವ ಅವಳಿಲ್ಲದ ಊರಲ್ಲಿಬೆಳದಿಂಗಳು ಬಿಸಿಲಾಗಿಚಂದ್ರನೇ ಬೆವರಿದ ಅವಳಿಲ್ಲದ ಊರಲ್ಲಿನೆನಪು ಮರುಕಳಿಸಿಊರಲಾರದೆ ಹೆಜ್ಜೆ ಭಾರವಾಗಿದೆ ಅವಳಿಲ್ಲದ ಊರಲ್ಲಿಸುತ್ತಲೂ ಕಡೆಗಣ್ಣುಹುಡುಕಾಡಿದೆ ಮನ ಅವಳ ನೆರಳನ್ನು ಅವಳಿಲ್ಲದ ಊರಲ್ಲಿನಿದ್ದೆ ಕಾಣದು ಜೀವಕನಸಿನಲ್ಲಿ ಅವಳದೇ ಚೆಲುವು ಅವಳಿಲ್ಲದ ಊರಲ್ಲಿಗೂಡು ಕಟ್ಟಿವೆ ಕನಸುಗಳುಹೇಳಲು ಬಾರದೆ ನಡುಗಿವೆ ತುಟಿಯಂಚುಗಳು ಅವಳಿಲ್ಲದ ಊರಲ್ಲಿನೋವಿನ ಬಿರುಗಾಳಿಗೆನಲುಗಿದೆ ಅವಳು ನೆಟ್ಟ ಗುಲಾಬಿ ಅವಳಿಲ್ಲದ ಊರಲ್ಲಿನಿಟ್ಟುಸಿರೊಂದು ಹಾಡಾಗಿಮಗುವಿನ ಕಿರುನಗೆಯೊಂದು ಸುಳಿದಿದೆ ಮೊಗದಿ ಮೀನಾಕ್ಷಿ ಪಾಟೀಲ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ” Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” ಮುಟ್ಟಿದರೆ ಮುನಿಯಾರು ಹೆಸರ ಇಟ್ಟರುನಿನಗೆ  ,ಲಜ್ಜಾವತಿಯಲ್ಲವೆ ನೀನು?ಹೆಜ್ಜೆ ಸಪ್ಪಳಕೆ ನಾಚುತ್ತಾಮುದುಡುವ ನೀನುಲಜ್ಜಾವತಿ ಎಂದರೆತಪ್ಪೇನು…?ಮುಂಜಾನೆಯ ರವಿಕಿರಣಕ್ಕೆ ಹೊಳೆಯುವನಿನ್ನ ಹೂವಿನಂದವನೋಡುವುದೇ ಸೊಗಸು ,ಸುಗಂಧ ಇಲ್ಲದಿದ್ದರೂಚೆಲುವಿಗಿಲ್ಲ ಬರ ,ಆದರೂ ದೇವರಮುಡಿಗೇರಲಿಲ್ಲ ,ಮಾನಿನಿಯರೂ ದೂರಬಲು ದೂರ ,ಯಾಕಿಷ್ಟು ಕೋಪ ನಿನ್ನಲ್ಲಿ  ?ನೀರು,ಗೊಬ್ಬರ ನೀಡದಿದ್ದರೂನೀ ಬೆಳೆವೆ ಹುಲುಸಾಗಿಯಾರ ಹಂಗಿಲ್ಲದೆ ,ಮದ್ದಿನರಮನೆ ನೀನುಕಿತ್ತೊಗೆಯುವರುಉಪಕಾರ ಸ್ಮರಣೆಇಲ್ಲದ ಜನರು,ನಿನ್ನ ನಿಜಗುಣವಮರೆತಿಹರು ಎಪ್ಟಾದರೂತಾಮಸಿಗರಲ್ಲವೇ..? ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” Read Post »

ಕಾವ್ಯಯಾನ

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ

ಕಾವ್ಯ ಸಂಗಾತಿ ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ ಅಕ್ಷರದವ್ವ ನೀವು ಮಾತೆ ಸಾವಿತ್ರಿಬಾಯಿˌˌˌಎಲೆ ಮರೆಯ ಗಿಣಿಯಂತಿದ್ದ ತ್ಯಾಗಮಯಿˌˌ ನಿನ್ನ ಸೇವೆಗೆ ಸಾಟಿ ಬೇರಿಲ್ಲ ಯಾರು ˌˌˌಬೇಡುವೆವು ನಿನಗೆ ಬರಲಿ ಜನ್ಮ ನೂರುˌˌ ಬಾಲೆಯರ ಶಿಕ್ಷಣದ ಆಶಾಜ್ಯೋತಿ ನೀವುˌˌˌಅಕ್ಷರದ ದೀಪ ಬೆಳಗಿದಿರಿ ಸಮಾಜದಿ ತಾವುˌˌ ಮೌಢ್ಯತೆಯ ಮೆಟ್ಟಿನಿಂತ ಧೀಮಂತ ನಾರಿˌˌˌಸಹಿಸಿದಿರಿ ನೂರೆಂಟು ಅಪಮಾನದ ದಳ್ಳುರಿˌˌˌ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದಿರಿ ಅಂದುˌˌˌನೀವು ಹೊತ್ತಿಸಿದ ಹಣತೆಗೆ ತೈಲವೆರೆವೆವು ಇಂದುˌˌ ಪತಿ ಫುಲೆಯ ಪ್ರೋತ್ಸಾಹವೇ ನಿಮ್ಮ ಶಕ್ತಿಯುˌˌˌಆದರ್ಶ ಶಿಕ್ಷಕಿ ನಿಮ್ಮ ಜೀವನವೆ ಸ್ಫೂರ್ತಿಯುˌˌˌ ನಿಮ್ಮ ನಿಸ್ವಾರ್ಥ ಸೇವೆಗೆ ಲೋಕವೇ ಬೆರಗುˌˌಧನ್ಯತಾಭಾವ “ಪ್ರಥಮ ಶಿಕ್ಷಕಿ” ಎಂಬ ಬಿರುದಿಗೂˌˌˌˌ ನಿಮ್ಮ ಪಡೆದ ಭಾರತಾಂಬೆ ತಾನೆಂದೂ ಮಾನ್ಯಳುˌˌಅಮರವೇ ಎಂದಿಗೂ ನಿಮ್ಮ ಆದರ್ಶಗಳುˌˌˌ ———– ಮಧುಮಾಲತಿ ರುದ್ರೇಶ್

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ Read Post »

ಕಾವ್ಯಯಾನ

“ಹೊಸ ಹೊತ್ತಿ-ಗೆ” ಕವಿತೆ, ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ಹೊಸ ಹೊತ್ತಿ-ಗೆ” ಕವಿತೆ, ಇಷ್ಟು ಬೇಗ ಮುಗಿಯಿತೇಈ ಹೊತ್ತಿಗೆ?ದಿನಕೊಂದು ಪುಟವೆಂದುಪಟಪಟನೆ ಹಾರಿ ಹೋದವುಕೇಳಬಹುದೇ ಎಲ್ಲೆಂದು ?ಓದಲಾದೀತೇ ಎಲ್ಲವನು ?ಮುದುಡಿದ ನಾಯಿಕಿವಿಗಳುಖಾಲಿ ಕೆಲವು ಹಾಳೆಗಳುಕೆಲವು ಕಪ್ಪು ಕ್ಷಣಗಳುಕಣ್ಣೀರ ಕಲೆಗಳು ಕೆಲವುಕಸ್ತೂರಿ ಕಣಗಳು.. ಕಣಕ ಒಂದೇ ಎಲ್ಲರಿಗು ಆದರೆಹೂರಣವೆ ಬೇರೆ ಬೇರೆಬೇರೆ ಪರಿವಿಡಿ ಬೇರೆ ವಿಷಯಬೇರೆಯೇ ಆದಿ ಬೇರೆಯೇ ಅಂತ್ಯ!ತಿರುವಿ ಹಾಕಲಿಕ್ಕಿಲ್ಲ ಮತ್ತೊಮ್ಮೆಈ ರೂಲು ಮಾತ್ರ ಎಲ್ಲರಿಗು ಒಂದೇ !ಹೊತ್ತಿಗೆಯ ಕೊನೆಗೆಹಾಕಲೇಬೇಕು ರದ್ದಿಗೆ…ಹೊರುವವರು ಯಾರೆಸತ್ತ ಪುಸ್ತಕದ ಹೊರೆ ? ತುಸುವೆ ತೆರೆದಿದೆ ಕದವುಹಾರಿ ಬರಲಿವೆ ಇತ್ತಗರಿಗೆದರಿ ಪುಟಗಳುಗರಿಗರಿ ಹೊಸ ಘಮಲುಹೊತ್ತು, ಏನಿದೆ, ಏನಿಲ್ಲಹೊತ್ತಿಗೆಯ ಒಳಗೆ ?ಏನು ಬರೆದಿದೆಯೋಯಾರು ಬರೆದಿಹರೋಉಳಿದಿಹುದೇ ನನಗಾಗಿಒಂದಿಷ್ಟು ಖಾಲಿ ಜಾಗಗೀಚಿ ಪುಟಗಳ ಮಧ್ಯೆಇಡುವೆನೊಂದು ನವಿಲುಗರಿನೋಡಬೇಡವೇ ಇಡುವುದೆ ಮರಿ ? ಸುಮತಿ ನಿರಂಜನ

“ಹೊಸ ಹೊತ್ತಿ-ಗೆ” ಕವಿತೆ, ಸುಮತಿ ನಿರಂಜನ Read Post »

ಕಾವ್ಯಯಾನ

“ವರುಷ ತಂದಿತ್ತೇ ಹರುಷ?”ಹಮೀದ್ ಹಸನ್ ಮಾಡೂರು.

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. “ವರುಷ ತಂದಿತ್ತೇ ಹರುಷ?” ಹೊಸತಾದರೇನು-ಬರುವ ಹೊಸ ವರುಷ,ಹಳೇತಾದರೇನು-ಕಳೆದೋದ ಪ್ರತಿ ನಿಮಿಷ,ಹೊತ್ತು ತರಲಾರದೆಂದು-ನಿಮಗದು,ಹೊಸ ಹೊಸ ಹರುಷ,! ಬೇವರ ಇಳಿಸಿ ಮೈ ಬಗ್ಗಿಸಿ-ದುಡಿಯಲಾಗದವನೇ ಮಹಾ ದಡ್ಡಬಡಿಸಲಾರದವನು ಅನ್ನ-ಹಸಿವು ನೀಗಿಸಲಾರದ ಶತ ಹೆಡ್ಡ,ಮಸ್ತಕದೊಳು ಏನಿಲ್ಲ ಖಾಲಿ-ಬೆಳೆಸಿದರೇನು ದೇಹ ಗಾತ್ರ ದೊಡ್ಡ.!? ಹಮೀದ್ ಹಸನ್ ಮಾಡೂರು.

“ವರುಷ ತಂದಿತ್ತೇ ಹರುಷ?”ಹಮೀದ್ ಹಸನ್ ಮಾಡೂರು. Read Post »

ಕಾವ್ಯಯಾನ

“ಮುಲಾಮು” ಕವಿತೆ ವಾಣಿ ಯಡಹಳ್ಳಿ ಮಠ

ಕಾವ್ಯ ಸಂಗಾತಿ ವಾಣಿ ಯಡಹಳ್ಳಿ ಮಠ “ಮುಲಾಮು” ಕವಿತೆ ಕೆಲ ನೋವುಗಳ ಗಾಯ ಕಾಣಿಸುವುದಿಲ್ಲಕೆಲ ಶಿಕ್ಷೆಗಳಿಗೆ ಕಾರಣಗಳಿರುವುದಿಲ್ಲಪ್ರೀತಿ ಹುಟ್ಟಲು ನೆಪವು ಬೇಕಿಲ್ಲದ ಹಾಗೆಯೇಅಗಲಿಕೆಗೆ ಯಾವ ತಪ್ಪುಗಳೂ ಕಾರಣವಾಗುವುದಿಲ್ಲ ಕೆಲವರು ಜೀವನ ಪರ್ಯಂತ ಜೊತೆಗುಳಿಯುವುದಿಲ್ಲವಷ್ಟೇಅವರ ನೆನಹು ಮುಲಾಮಿನಂತಿರುತ್ತದೆಯಷ್ಟೇ ವಾಣಿ ಯಡಹಳ್ಳಿ ಮಠ

“ಮುಲಾಮು” ಕವಿತೆ ವಾಣಿ ಯಡಹಳ್ಳಿ ಮಠ Read Post »

ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ”

ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಬಟ್ಟಕಂಗಳ ನಿರೋಷೆ” ಅವಳು ಅವನಿಯೊಳಗಿನಅಪರೂಪದ ಅನುರೂಪೆ,ನುಡಿಗಂಪಿನ ಇಳೆತಂಪಿನಎಳೆಗಣ್ಣಿನ ಕೆಂಬಣ್ಣದ ಆಲಾಪೆ. ತನ್ನೋಟದಲಿ ನುಂಗುವಳುಅನಂತಲೋಕದ ಇಳೆಯನು,ವಾವ್ ವಾರೇ ನೋಟದ ಹುಡುಗಿನಾಚುವಳು ಕಣ್ಣಂಚಿನಲ್ಲಿ,ಲಾಸ್ಯಬಿಂಬದ ಬೆಡಗಿಕಣ್ಣು ಚುಮುಕಿಸುವ ಹುಡುಗಿಬಳಕುವಳು ತುಟಿಯಂಚಿನಲಿ. ಅವಳ ಕಣ್ಣಂಗಳದ  ಕಾಂತಿಯಹೊಳಪು,ಸಾವಿರದ ಸಹಸ್ರ ನೆನಪುಗಳ ಬುತ್ತಿ .ಗಾಢ ಪ್ರೇಮದ,ಕಡುದುಃಖಯಾನದ ಅನುರುಕ್ತಿ,ಸುಮಧುರ ಸಮ್ಮೋಹನದಸಾತ್ವಿಕ ಸರಸದ ಕಾಂತಿಯುಕ್ತಿ. ಕಣ್ಣೋಟದ ಬೆಸುಗೆಯಲಿನಂಬಿಗೆ ಧೈರ್ಯದ ವಿಶ್ವಾಸ,ಅವಳೆದುರಿನ  ಕಪಟತನದ  ಮನಕ್ಕೆನಿಂತು ಕುಂತು ಆಯಾಸದಿ ಭೋರ್ಗರೆಯುವಉಸಿರೋಟದ ಶ್ವಾಸ.ದ್ವಂದ್ವ ವಿಚಲಿತ ವಿರಹದವಿರಸದ  ನಯನನೋಟದಿಂದಮುಷ್ಕರದ ಅವಿಶ್ವಾಸ . ಚಂದ್ರಮುಖಿ ನೀಲಸಖಿಯಕಂಗಳಲಿ, ಒಮ್ಮೊಮ್ಮೆಸದ್ದಿಲ್ಲದೆ ಸುಡುವ ಅಗ್ನಿಜ್ವಾಲೆ,ಮತ್ತೊಮ್ಮೆ ಮಗದೊಮ್ಮೆಸಾಮರಸ್ಯದ ಸಂಪ್ರೀತಿಯಶಾಂತತನ್ಮಯದ ಪ್ರೇಮಲೀಲೆ. ಕಣ್ಣಲ್ಲೇ, ಕ್ರಾಂತಿಯಿಂದ  ಕಣ್ ಬಾಣದಿಂದ ಕೊಲ್ಲುವವಳುಕಂಗಳಲ್ಲೇ ಕಳಿತು ಮಿಳಿತು  ಕಾಡದೇ ಕುಂತವಳುನಯನಗಳಲ್ಲೇ ನಾಚಿನೀರಾಗಿ ನಿಂತವಳುಅಕ್ಷಿಗಳಲ್ಲೇ ಸಾಕ್ಷಿಯಾಗಿಸೋಲು ಗೆಲುವಿನದರ್ಶನಿಯಾದವಳುನೇತ್ರದಲ್ಲೇ ತಣಿದು ಮಣಿದು ಮಧುರಯಾತ್ರೆ ಹೊಂಟವಳು. ಬಟ್ಟಕಂಗಳ ಚೆಲುವೆಯಪ್ರೇಮಕಂಗಳ ಭಾಷೆ,ಹುಬ್ಬಕೆಳಗಿನ ಕಪ್ಪಂಗಳದಪಸರಿಕೆಯ ಪಕ್ವ ಪರಿಭಾಷೆ.ಭಾವಗಳು ಎದೆಯುಕ್ಕಿದಾಗ ಮಾತಿಲ್ಲದ ,ಸದ್ದಿಲ್ಲದ,ಮೌನದ  ಕಣ್ಸನ್ನೆಯ ಪರೀಷೆ.ಕತ್ತಲಲ್ಲಿಯೂ ಮಿನುಗಿಹೃದಯದಲಿ ಗುನುಗುವಹೊಳೆವ ಅಕ್ಷಿಗಳ ನಿರೋಷೆ. ತಾತಪ್ಪ.ಕೆ.ಉತ್ತಂಗಿ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ” Read Post »

ಕಾವ್ಯಯಾನ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?”

ಕಾವ್ಯ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ” ಹೊಸತೇನಿದೆ?” ಹೊಸತೇನಿದೆಏನಿದೆ ಹೊಸತು ಈಮುಂಜಾವಿನಲ್ಲಿಅದೇ ಹಳೆಯಬಗೆಹರಿಯದ ನೂರುಕಂಟಕ ಆತಂಕಗಳುರಾತ್ರಿ ಕಚ್ಚಿದ ಕಹಿ ಸುದ್ದಿನಿನ್ನೆಯನೇ ಮತ್ತೆ ಮತ್ತೆಬಿಚ್ಚಿಡುವ ಆ ನಾಳೆಯಲ್ಲಿ…?ಹೊಸತೇನಿದೆ ಹೊಸತೇನಿದೆಮುಂದುವರೆದ ಈ ನಿನ್ನೆಯಲ್ಲಿ?ಯುದ್ಧ ಸಾವು ನೋವುಬಡತನ ಹಸಿವಿಗೆತತ್ತರಿಸಿದವರ ನಡುವೆಕುಡಿದು ತೂರಾಡುವವರ ಸಂಭ್ರಮ ಹೊಸತೇನಿದೆ ?ಬುದ್ಧ ಬಸವರ ಬೇಸಾಯವೇಮರೆತು ನಿತ್ಯ ಕೊಲೆ ಸುಲಿಗೆಯಲಿಸತ್ಯ ಹುಡುಕುವ ನಾಟಕಮತದಾನ ಮಾಡಲು ಜನರುಹೊರಗೆ ಟಿವಿ ಪತ್ರಿಕೆನೆಲದ ಭವಿಷ್ಯ ಬರೆಯುತ್ತಿವೆ ಹೊಸತೇನಿದೆ?ಶಾಂತಿ ಸಮತೆ ಸಮಾಧಿಯಾಗಿದಮನಗಳು ಹಿಂಸೆಯೇ ಧರ್ಮವಾಗಿರುವಾಗಕರುಳ ಪ್ರೀತಿಯ ಕೊಯ್ದುಎಳೆ ಹಸುಗಳ ಮಾರಣ ಹೋಮಇನ್ನೂ ನಿಂತಿಲ್ಲ ಹೊಸತೇನಿದೆ ?ಅದೇ ಜಾತಿ ಮತ ಧರ್ಮಗಳದ್ವೇಷ ಬೀಜ ಬಿತ್ತನೆನಿರುದ್ಯೋಗಿಗಳು ರೀಲ್ಮಾಡುತ್ತಿದ್ದಾರೆಭಜಿ ಮಾರುತ್ತಿದ್ದಾರೆ ಸೂರ್ಯನ ದಿನಚರಿಯೇಇರುಳ ಉಸ್ತುವಾರಿಯಲ್ಲಿರುವಾಗ..ಮುಂಜಾನೆಯ ಮುಂಗೋಳಿಗಳುಹೊರಡಿಸುತ್ತವೆ ಫರ್ಮಾನುಅವರ ಹೇಳಿಕೆಯಂತೆ ಬದುಕ ಬೇಕು ಹೊಸತೇನಿದೆ?ಮುಂದುವರೆದ ಆ ನಿನ್ನೆಯಲ್ಲಿ…?ವಿಶ್ವ ನಾಯಕನಾಗುವ ಬಯಕೆಸತ್ತ ಹೆಣಗಳ ಗೋರಿಯ ಮೇಲೆಸಾಮ್ರಾಟನ ಸಮೃದ್ಧಿ ಅಟ್ಟಹಾಸ ಹೊಸತೇನಿದೆ?ಕರಾಳ ಮುಖ ಸವರಿಕದ್ದು ಮುಚ್ಚಿಡುವಕನ್ನಡಿಗಳು ಇರುವತನಕನಂಜಿನ ಕೀವು ನೆತ್ತಿಗೇರಿಕಣ್ಣು ಮಂಜಾಗಿರುವ ತನಕ..ವಿಶ್ವಾಸ ಮೂಡಿಸದಸಾಹಿತ್ಯವಿರುವ ತನಕಸುತ್ತುತ್ತಲೇ ಇರುವಗಂಡು ಜೋಗುತಿಯರ ಮೆರವಣಿಗೆಚಕ್ರವ್ಯೂಹ ಬೇಧಿಸದ ತನಕ..ಏನಿದೆ ಹೊಸತು? ಹೊಸತೇನಿದೆ?ನಾಳೆಯಾಗದ ಈ ನಿನ್ನೆಯಲ್ಲಿ ?ಮಂದಿರ ಮಸೀದಿ ಚರ್ಚಬಸದಿ ವಿಹಾರಗಳು ಬೆಪ್ಪನೆ ಮಲಗಿವೆಕಾವಿ ಬುರ್ಖಾಗಳ ಕಾದಾಟಹಲಾಲ್ ಬಾಡೂಟಹತ್ತಿ ಉರಿಯುತ್ತಿದೆ ದೇಶ ಹೊಸತೇನಿದೆ ?ಮತ್ತೆ ಹೊರಗೆ ಸಜ್ಜಾಗಿವೆಮೊಹಲ್ಲಾಗಳ ಮುಂದೆಭುಸುಗುಟ್ಟುತ್ತಿರುವಬುಲ್ದೊಜರ್ ಭೀತಿಯಮತ್ತೊಂದು ಕ್ರೂರ ದಿನದಲ್ಲಿ .. ಹೊಸತೇನಿದೆ?ಕೇರಿಯಲೆಂದೂ ಕಾಲಿಡದಗ್ರಹಣ ಸೂರ್ಯನ ನಡಿಗೆಯಲ್ಲಿ..ಭಾನುವಾರಗಳೇ ಇರದತಾಯಂದಿರರ ಕ್ಯಾಲೆಂಡಿರಿನಲ್ಲಿ … ಹೊಸತೇನಿದೆ?ಮುಂದುವರೆದನಿನ್ನೆಯ ಆ ಹಳೆಯ ಕಥೆಯಲ್ಲಿ ?ಮನೆ ಚಾವಡಿಯಲ್ಲಿ ಮಾತುಒಳಗೆ ಒಲೆಗೆ ತೂತುನಡುಮನೆಯಲ್ಲಿಮನು ಸಂತಾನಸೈತಾನನ ಹಿರಿತನದಲಿಮಂತ್ರ ಪೂಜೆ ಘೋಷಣೆ ಹೊಸತೇನಿದೆ ?ಈ ಬೆಳಗಲ್ಲಿ ಮತ್ತೆಅದೇ ಹಳೆಯ ಪುಸ್ತಕದಹೊಸ ಭರವಸೆ ಹಳಸಲುಕನಸು ಕುಣಿಯುತಿವೆಮತ್ತೊಂದು ಅಧ್ಯಾಯದಲಿ.ಮಂಕಾಗಿವೆ ವಚನ ಹೊಸತೇನಿದೆ ಇಂದು ಮತ್ತೆ?ಇರುಳ ಮರುಳಿಲ್ಲದ ಹೊಸಬೆಳಕು ಬೇಕೀಗ ನಮ್ಮ ನಡುವೆಕರಾಳ ಕತ್ತಲ ಜೊತೆಒಳಒಪ್ಪಂದವಲ್ಲದರ್ಪಿಗೆ ಬೆದರಿ ಮುದುರಿಕುಳಿತುಕೊಳ್ಳುವುದಲ್ಲ. ಹೊಸತೇನಿದೆ?ಹತ್ತಿಕ್ಕುವ ತುಳಿಯುವದಮನಗಳ ಯುಗಯುಗಾಂತವಾಗಬೇಕೀಗವೇಷ ಮರೆಸಿದ ವರ್ಷಾಂತವಲ್ಲರಾತ್ರಿ ಕಂಠ ಪೂರ್ತಿ ಕುಡಿದುತೂರಾಡುವದಲ್ಲ ಹೊಸ ಸೂರ್ಯನ ಸಂಕ್ರಮಣಕ್ಕೆಸಿದ್ಧಾವಾಗ ಬೇಕುಸಮತೆ ಮಮತೆಗಳ ಹಣತೆಹಚ್ಚ ಬೇಕುತ್ಯಾಗ ಬಲಿದಾನಗಳ ತೈಲ ಸುರಿದುಬೆಳಗ ಬೇಕು ಭಾರತ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?” Read Post »

ಕಾವ್ಯಯಾನ

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!”

ಕಾವ್ಯ ಸಂಗಾತಿ ಪ್ರಶಾಂತ್‌ ಬೆಳತೂರು “ಪ್ರೇಮ ಪ್ರಕರಣದ ತಪ್ಪಿತಸ್ಥರು..!” ಪ್ರೇಮದಲ್ಲಿನಾನು ತಪ್ಪು ಮಾಡಿದ್ದು ನಿಜಆದರೆನೀನು ನನ್ನನ್ನು ತಿದ್ದಬಹುದಿತ್ತು..!ಹಾಗೂಆ ಎಲ್ಲಾ ಅಧಿಕಾರವೂನಿನ್ನ ಬಳಿಯೇ ಇದ್ದವು..! ನೀನೋ ತಿದ್ದುವ ಭರದಲ್ಲಿಸ್ವತಃ ತಪ್ಪು ಮಾಡಿಬಿಟ್ಟೆಈಗ ನೀನು ಕೂಡ ನನ್ನಷ್ಟೇತಪ್ಪಿತಸ್ಥಳು..! ಪ್ರೇಮದ ಕೋರ್ಟಿನಲ್ಲಿಆತ್ಮಸಾಕ್ಷಿಯನ್ನು ಮುಂದಿರಿಸಿಕೊಂಡುಖಾಲಿ ಮಾತುಗಳ ವಕೀಲಿಕೆಯನ್ನುನಿನ್ನ ವಿರುದ್ಧ ನಡೆಸಲಾರೆಆಗಾಗಿನನ್ನ ತಪ್ಪುಗಳನ್ನು ಒಪ್ಪಿಕೊಂಡುಪ್ರಾಯಶ್ಚಿತ್ತವೆಂಬಂತೆಪ್ರೇಮದ ಸೆರಮನೆಯೊಳಗೆನಗುತ್ತಲೇಜೀವಾವಧಿ ಶಿಕ್ಷೆಗೆ ಒಳಗಾಗಿದ್ದೇನೆ..! ನೀನೋಮತ್ತೊಬ್ಬರ ಜಾಮೀನಿನಡಿಯಲ್ಲಿಹಳೆಯ ಪ್ರೇಮ ಪ್ರಕರಣವೊಂದರಆರೋಪಗಳೆಲ್ಲಾವನ್ನುತಳ್ಳಿ ಹಾಕುತ್ತಾನಿರಪರಾಧಿಯ ಸೋಗಿನಲ್ಲಿಬಿಡುಗಡೆಗೊಂಡಶಹರವೊಂದರ ಹಳೆಯ ಖೈದಿಯಂತೆಎಲ್ಲೆಲ್ಲೋ ಓಡಾಡುತ್ತಿರುವೆ..! ವಾಸ್ತವವೇನೆಂದರೆಪ್ರೇಮದ ಅಸಲಿಯತ್ತಿನಲ್ಲಿದಾವೆ ಹೂಡಲುಮೇಲ್ಮನವಿಯನ್ನು ಸಲ್ಲಿಸಲುಯಾವ ಕೋರ್ಟುಗಳೂ ಇಲ್ಲಒಮ್ಮೆ ತಪ್ಪು ಮಾಡಿದರೆ ಮುಗಿಯಿತುಸಾಯಬೇಕು ಅಥವಾಸಾಯುವ ತನಕ ಅದೇ ನೆನಪುಗಳನ್ನುಎದೆಯಲ್ಲಿಟ್ಟುಕೊಂಡು ನರಳಬೇಕು..! ಏಕೆಂದರೆಈ ಹಾಳು ಪ್ರೇಮ ಗ್ರಂಥಗಳಲ್ಲಿಯಾವ ಪ್ರಕರಣಗಳಿಗೂಆತ್ಮಸಾಕ್ಷಿಗಳ ಹೊರತಾಗಿಯಾವ ಕಾಯ್ದೆಗಳಾಗಲೀಕಲಮ್ಮುಗಳನ್ನಾಗಲೀಯಾರೊಬ್ಬರೂ ಕೂಡ ಇಲ್ಲಿಯವರೆಗೆ ಬರೆಯಲಾಗಿಲ್ಲವೆಂಬುದೆಇಲ್ಲಿನ ಒಂದು ಸೋಜಿಗ..! ಪ್ರಶಾಂತ್ ಬೆಳತೂರು

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ನಿತ್ಯನೂತನ” ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವೀನ ಜನನ”ದರಾ ಬೇಂದ್ರೆಯವರಅದ್ಭುತ ಕವನಗಳ ಸಾಲುನೆನೆಯುತ್ತ ಅಡಿ ಇಡೋಣಆಗಲಿ  ನಿತ್ಯ ನೂತನ… ದಿನ ತಿಂಗಳು ವರ್ಷಗಳುಮತ್ತೆ ಮತ್ತೆ ಮರಳಲಿಪರಿವರ್ತನೆ ಜಗದ ನಿಯಮಹೊಸ ಮೆಟ್ಟಿಲು, ಹೊಸ ಸಂಕಲ್ಪ ನಮ್ಮದಾಗಲಿ ನವ ನವೀನಹೊಸ ಬದುಕು ನಿತ್ಯ ನೂತನ… ಸಮಸ್ಟಿ ಇರಲಿ ಚಿಂತನಸಮನ್ವತೆ ಇರಲಿ ಮಂಥನಪ್ರಶಾಂತತೆ ಕಾಪಾಡಿ ಪ್ರಮಾಣಿಕಸಬ್ಯತೆ ಸೌಜನ್ಯತೆ ಕೂಡಿರಲಿಅರಿವಿನ ಪ್ರಯತ್ನ ಮಾಡಿರಿದಿನವೂ ಸಾಗಲಿ ನಿತ್ಯ ನೂತನ… ಪ್ರಕೃತಿಯ ಮಡಿಲಿನ ಪ್ರೀತಿದಿನವು ನಿತ್ಯ ನೂತನವಾಗಲಿಸೃಷ್ಟಿಯ ಚೈತ್ರ ಆರಂಭಇಬ್ಬನಿಯ ಜೊತೆಗೂಡಿಪ್ರತಿಫಲನ ನೀಡಿ ನೇಸರಬೆಟ್ಟದ ಮಧ್ಯೆ ಇರುವ ರವಿ ಬೆಳಗಲಿ… ಹೊಂಬಣ್ಣದ ನೇಸರ ಜಗಕೆಲ್ಲಸ್ವಾಗತ ಹೊಸ ಉತ್ಸಾಹ  ಹೊಸ ಚಿಲುಮೆಂತಿರಲಿಅದ್ಭುತ ಪ್ರಪಂಚ ಜ್ಞಾನ ದೀವಿಗೆಸಮಾನತೆ ಸಹಕಾರ ಇರಲಿಹೊಸ ವರುಷದ ಸಂಭ್ರಮ ನಿತ್ಯ ನೂತನವಾಗಲಿ…  ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ” Read Post »

You cannot copy content of this page

Scroll to Top