ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” ಹಸಿರ ಉಸಿರ ಹೊತ್ತ  ಭೂದೇವಿ ನೀನು,ನಮ್ಮ ಬಾಳ ಹಾದಿಗೆ ದಿವ್ಯ ಬೆಳಕು ನೀನು.ಕೋಟಿ ಜೀವ ರಾಶಿಗೆ ಆಸರೆಯ ಮಡಿಲು,ನಿನ್ನ ಪ್ರೀತಿಗೆ ಸಾಟಿಯಿಲ್ಲ, ಕರುಣೆ  ಕಡಲು. ಬೆಟ್ಟ ಸಾಲುಗಳು ನಿನ್ನ  ಮುಡಿಗೆ ಹೂವು,ಹರಿಯುವ ನದಿಗಳು ನಿನ್ನ ಜೀವ ಸೆಲೆಯು.ಗಾಳಿ, ಮಣ್ಣು, ನೀರು ಮರ ನಿನ್ನ ಕೊಡುಗೆ,ಮರೆತ ಮಾನವನ ಎಂತ ಉಡುಗೆ ತೊಡುಗೆ   ನಮ್ಮ ಭೂಮಿ ನಾವು ಉಳಿಸ ಬೇಕು,ಕಲುಷಿತವ ತೆಗೆದು ಹಸಿರ ಬೆಳೆಸ ಬೇಕು.ಮರಗಿಡಗಳ ನಟ್ಟು ತಂಪ ಹರಡ ಬೇಕು,ಭೂ ಮಾತೆಯ ಋಣ ತೀರಿಸಬೇಕು. ಭೂಮಿ ದಿನ  ಅಲ್ಲ ಬರಿ ಆಚರಣೆ,ಧರೆಯ ಉಳಿಸುವ ಸಂಕಲ್ಪ  ರಕ್ಷಣೆ.ಇರುವುದೊಂದೇ  ಭೂಮಿ,  ಉಳಿಸ ಬನ್ನಿ,ಭವ್ಯ ಭವಿಷ್ಯಕೆ  ಹೆಜ್ಜೆ ಹಾಕ ಬನ್ನಿ. ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ” Read Post »

ಕಾವ್ಯಯಾನ, ಗಝಲ್

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್

ಕಾವ್ಯಸಂಗಾತಿ ಡಾ. ರೇಣುಕಾತಾಯಿ. ಸಂತಬಾ ಗಜಲ್ ನುಡಿಗೆ ಬೆರಗು ಮೂಡಿಸಿ ವಚನ ಬರೆದನು ನಮ್ಮ ಬಸವಣ್ಣದಯವಿಲ್ಲದ ಧರ್ಮವೆ ಇಲ್ಲವೆಂದು ಸಾರಿದನು ನಮ್ಮ ಬಸವಣ್ಣ.ll ಆಚಾರ ಸ್ವರ್ಗ ಅನಾಚಾರವೇ ನರಕವೆಂದ ನಮ್ಮ ಭಕ್ತಿ ಭಂಡಾರಿ,ಜಾತಿ ಮತ ಸರಿಸಿ ಸಮಾನತೆ ಬಿತ್ತಿದವನು ನಮ್ಮ ಬಸವಣ್ಣ.ll ಕಳಬೇಡ ಕೊಲ್ಲಬೇಡ ಹುಸಿ ನುಡಿಬೇಡವೆಂಬ ಮೌಲ್ಯ ಹೇಳಿಕೊಟ್ಟಮಾತಿನಲ್ಲಿಯೇ ಮುತ್ತುರತ್ನ ಜೋಡಿಸಿ ಇಟ್ಟವನು ನಮ್ಮ ಬಸವಣ್ಣ ll ಮೌಢ್ಯತೆಯ ದೊಡ್ಡ ಗೋಡೆ ದಾಟಿಸಿ ಹೊಸ ಬಾಗಿಲನು ತೆರೆದುಬಿಟ್ಟ,ಎಲ್ಲರನು ಇವ ನಮ್ಮವನೆಂದು ಹೇಳಿದವನು ನಮ್ಮ ಬಸವಣ್ಣ ll ತಾಯಿ ಅಕ್ಕಮ್ಮ ನೀಲಮ್ಮ ಶರಣೆಯರೆಲ್ಲರ ವಚನ ಗೌರವಿಸಿದ.ಶ್ರಮದಲಿ ಶಿವ ಕೈಲಾಸ ತೋರಿದ ಶರಣನು ನಮ್ಮ ಬಸವಣ್ಣ l ಡಾ. ರೇಣುಕಾತಾಯಿ. ಸಂತಬಾ. “ರೇಮಾಸಂತ”

ಡಾ. ರೇಣುಕಾತಾಯಿ. ಸಂತಬಾ ಅವರ ಗಜಲ್ Read Post »

ಕಾವ್ಯಯಾನ

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಸಂಗಮ” ತೆಲುಗು ಕವಿತೆ, ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು  ಒಂದೊಂದು ಪದವನ್ನೇ ಆಯ್ದುಕೊಳ್ಳುತ್ತಾ  ಆಯ್ದುಕೊಳ್ಳುತ್ತಾ ಪುಟ್ಟಮಗು ಬೆಂಕಿಪೆಟ್ಟಿಗೆಯ ರೈಲುಗಾಡಿಯನ್ನು ತಯಾರುಮಾಡಿದಂತೆ ನಾನೊಂದುಬ ವಾಕ್ಯವನ್ನು ತಯಾರುಮಾಡುತ್ತೇನೆ ವಿಚಿತ್ರ?  ಅದು ತಯಾರಾದಕೂಡಲೇ ದ್ರವರೂಪವನ್ನು ಅಳವಡಿಸಿಕೊಳ್ಳುತ್ತದೆ ಅಷ್ಟೇಅಲ್ಲ, ಪ್ರವಾಹವೇಗದಿಂದ ಸಾಗುತ್ತದೆ ಅದರಜೊತೆಗೆ  ನಾನೋ, ನನ್ನಜೊತೆಗೆ ಅದೋ ತಿಳಿಯದಂತೆ ನಾವಿಬ್ಬರೂ ಕವನ ಸಮುದ್ರದಲ್ಲಿ   ಭೇಟಿ ಆಗುತ್ತೇವೆ ಮನಸ್ಸಿನಲ್ಲಿ ಸುಳಿಗಳು ತಿರುಗಿ ತಿರುಗಿ, ಕಟ್ಟೆ  ಒಡೆದು ಹಾಳೆಯ ಮೇಲೆ ಪ್ರವಹಿಸಿದ ನದಿ ಕವನ ಸಮುದ್ರದಲ್ಲಿ ಸೇರದೆ ಏನಾಗುತ್ತದೆ?  ವೈಯಕ್ತಿಕ ಭಾವನಗಳೆಲ್ಲವೂ ಕಳೆದುಕೊಂಡಿರುವೆನೆಂದು ನನ್ನವು ನನ್ನವಾಗದೆ ಹೋಗಿವೆ ಎಂದು ಯಾವುದೋ ಕೊರೆತೆಯಿಂದ , ಯಾವುದೊ ದಿಗಿಲಿನಿಂದ ಬೆಪ್ಪುಮೂರೇ ಹಾಕಿಕೊಂಡು  ಮುಗ್ಧವಾಗಿ ಗುಕ್ಕುಹಿಡಿಯುತ್ತೇನೆ ಆಗ ಕವನ ಸಮುದ್ರದಲ್ಲಿ  ಕದುಲುತ್ತಿರುವ ಒಬ್ಬ ಓದುಗ ಋಷಿ ನನ್ನನ್ನು  ಅಪ್ಪಿಕೊಂಡು ಸಂತೈಸುತ್ತಾನೆನೀನೀಗ ಕವಿ-ಎನ್ನುತ್ತಾನೆ ರಚನೆಯ – ರವಿಎನ್ನುತ್ತಾನೆ ನಿನ್ನದೆಂದುಕೊಳ್ಳುವುದು ನಿನ್ನದಲ್ಲ,  ಅದು ಸಾಮಾಜಿಕ- ಎನ್ನುತ್ತಾನೆ ನಿನ್ನ ಒಣ ಭಾವನೆಗಳು ಈಗ ಆಳಗಳನ್ನು ಅಳವಡಿಸಿಕೊಂಡು ವಿಸ್ತಾರಗೊಂಡು  ವಿಶ್ವವವೆಲ್ಲಾ ವ್ಯಾಪಿಸಿದ ಕವನವು – ಎನ್ನುತ್ತಾನೆ ಇಲ್ಲಿನೋಡು, ಈ ನೆಗೆಯುತ್ತಿರುವ ಅಲೆಗಳ ಆರ್ಭಟ? ನಿನ್ನ ಅಮೃತಮಯ ಸೃಜನಶೀಲತೆಯಲ್ಲಿ  ನಾನೀಗ ಅನಂತತ್ವವನ್ನು, ಅಮರತ್ವವನ್ನು ಪಡೆಯುತ್ತಿದ್ದೇನೆ- ಎನ್ನುತ್ತಾನೆ ಎನ್ನುತ್ತಲೇ- ಕರುಣೆಯಿಂದ ನನ್ನನ್ನು ದಡಕ್ಕೆ ಸೇರಿಸುತ್ತಾನೇ  ನಾನೊಂದು ಮೌನ ಸಮುದ್ರಯಾಗುತ್ತೇನೆ ಕವನದ ಸಮುದ್ರದ ಅಲೆಗಳು ನನ್ನಲ್ಲಿ ಎದ್ದು ಬೀಳುತ್ತಿರುತ್ತವೆ! ತೆಲುಗು ಮೂಲ : ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು

“ಸಂಗಮ”ತೆಲುಗು ಕವಿತೆ,ಮೂಲ ಡಾ. ದೇವರಾಜು ಮಹಾರಾಜು ಕನ್ನಡಕ್ಕೆ ರಂಗನಾಥ ರಾಮಚಂದ್ರರಾವು Read Post »

ಕಾವ್ಯಯಾನ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ”

ಕಾವ್ಯ ಸಂಗಾತಿ ಬೆಂಶ್ರೀ ರವೀಂದ್ರ “ಹೆಡೆ ಬಿಚ್ಚಿ ಹೊಡೆ” ನೀನು ಮನೆ ಬಿಟ್ಟು ಹೋದ ರಾತ್ರಿಯೇ ರಾಹುಲ ಹುಟ್ಟಿದಹೆರಿಗೆಯ ನೋವಲಿದ್ದವಳಕೈ ಹಿಡಿದು ಯಶೋಧರಾಸಹಿಸಿಕೊ ನಾನಿದ್ದೇನೆಅಂತೇಕೆ ಅಂದು ಹೋಗಲಿಲ್ಲ ನಾನೇನು ಕಡಿಮೆ ಮಾಡಿದ್ದೆಅಂತಃಪುರದ ತುಂಬಾ ಸೀತೆಗೂಮಿಗಿಲು ಸುಂದರಿಯರು ಇದ್ದರಲ್ಲಬೇಡವೆಂದನೇಅವಳೊಬ್ಬಳನ್ನು ಬಿಡೆಂದುಗೋಗರೆದರೂ ಧಿಕ್ಕರಿಸಿದೆಯಲ್ಲ. ಬೇಕಿತ್ತೆ ಅಗ್ನಿಗಿಂತ ಬೇರೆ ಸಾಕ್ಷಿಕಾಡಾಡಿಯಾಗಿ ಮಾಡಿದೆಯಲ್ಲತುಂಬು ಬಸುರಿಗೆಅವನಿಯೇ ಗತಿಯಾಯ್ತಲ್ಲ ಹೇಳಿ ಹೋಗಬಹುದಿತ್ತು ಮಧುರೆಗೆನಾ ಬರುವುದರಲ್ಲೇ ಮತ್ತೆಂದೂಸಿಗದಂತೆ ಹೊರಟೆಯಲ್ಲಅಷ್ಟು ಅವಸರವಿತ್ತೇಎದೆ ಮಿಡಿತಕೆ ಸದೆಬಡಿತವೇ ಹೀಗೆ ಬರೆಯಲುಂಟು ನೂರಾರುಕಥೆಗಳು ಇತಿಹಾಸ ಚರಿತ್ರೆಇಲ್ಲಿ ಮಾತ್ರವಲ್ಲ ಎಲ್ಲೆಲ್ಲೂ ಜಗದಗಲ‌ ಮುಗಿಲಗಲಮತ ಧರ್ಮ ಜಾತಿ ವರ್ಗ ವರ್ಣಗಳ ಭೇದವಿಲ್ಲದೆಹೆಬ್ಬೆಟ್ಟಿನಡಿಯಲೇ ಇಟ್ಟುನಡೆದಿದೆ ನುಡಿ ಸಾಂತ್ವನನಡೆ ಗೊಸುಂಬೆ ಅಯ್ಯೋಮತ್ತೆ ನೀನಿವರ ಕೈಗೊಂಬೆ ಅವರ ಮೇಲಿವರುಇವರ ಮೇಲವರುಎಡ ಬಲ‌ ಮಧ್ಯದಮುಖವಿಲ್ಲದ ಕೂಗುಮಾರಿಗಳುಭಾಷಣ ಭೂಷಣರುಇವರೇ ಅವರು ಅವರೇ ಇವರು ಬಿಲ್ಲುಗಳ ಹೆಣೆಯುತ್ತಾರೆಹಾರುವುದಿಲ್ಲ ಬಾಣನುಡಿ ನೇವರಿಕೆಗೆತಣಿವುದೇ ಬಾಯಾರಿಕೆನೀನಿಲ್ಲದೆ ಅವರಿಲ್ಲಎಂಬರಿವಿದ್ದರೂಅರಿವುಗೆಟ್ಟ ಅರಿಗಳುಮಂಗಮಾಡುವ ನರಿಗಳುಮತಕಾಗಿ ಹಾರಿಸುವ ಹುಸಿಮತಾಪುಕೋರರು ಹುಡುಗಿನೀನಿನ್ನು ಇರಬಾರದು ಸುಮ್ಮನೆಬಯಲಿಗೆಳೆದು ಬಿಮ್ಮನೆಕಳಚಿ ಮುಖವಾಡಗಳಪೂತ್ಕರಿಸಿ ಈ ಬೇಮಾನರಪಡೆ ಕಟ್ಟಿ ಪಡೆ ನಿನ್ನ ಪಾಲುಹೆಡೆ ಬಿಚ್ಚಿ ಹೊಡೆಇಲ್ಲವಾದರೆ ಏಳಲ್ಲಎಪ್ಪತ್ತು ದಶಕವಾದರೂನಿನಗಿಷ್ಟೂ ಕೂಳು ಸಿಕ್ಕುವುದಿಲ್ಲ. ಬೆಂಶ್ರೀ ರವೀಂದ್ರ

ಬೆಂಶ್ರೀ ರವೀಂದ್ರ ಅವರ ಕವಿತೆ “ಹೆಡೆ ಬಿಚ್ಚಿ ಹೊಡೆ” Read Post »

ಕಾವ್ಯಯಾನ

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು”

ಕಾವ್ಯ ಸಂಗಾತಿ ಪ್ರೊ.ರಾಜಕುಮಾರ ಬಿ ಟಿ. “ಮಾನವೀಯತೆ ಹರಿಕಾರರು” ಅವಿಭಕ್ತ ಕುಟುಂಬದಲಿ ಜನಿಸಿಅಸ್ಪೃಶ್ಯತಾ ಅಂಧಕಾರವನು ಅಳಿಸಿಜಾತೀಯತೆ ಹೊಡೆದೊಡಿಸಲುಜಾತ್ಯತೀತ ಭಾವ ಮೂಡಿಸಲು ಮೂಡಿಹರು ದಲಿತ ಸೂರ್ಯ’ರು -೧- ಅಸ್ಪೃಶ್ಯತೆಯ ಕಹಿಯನು ಉಂಡುಅವಮಾನದಿಕುಲುಮೆಯಲಿ ಬೆಂದುಬದುಕಿನ ಬವಣೆಗಳಲಿ ನೊಂದುಅಸಹಾಯಕತೆಯ ಕಣ್ಣಿರಲಿ ಮಿಂದುದೀನ-ದುರ್ಬಲರ ಧ್ವನಿಯಾಗಿಹರು  -೨- ಸಮಾನತೆಯ ಲೇಖನಿ ಹಿಡಿದುಸಮ ಸಮಾಜಕೆ ಸಂವಿಧಾನ’ವ ಬರೆದುಸರ್ವರಲೂ ಸಮಭಾವ ತಂದು  ಸಾಮಾಜಿಕ ನ್ಯಾಯವೆಂದು ಸಾರಿಹರು ಮಾನವತಾವಾದಿಆಗಿಹರು  -೩- ಅಕ್ಷರಗಳನು ಆಯುಧವಾಗಿರಿಸಿಅಂಧಶ್ರದ್ಧೆಗಳನು ಬೇಧಿಸಿಲೇಖನಿಯ ಮಸಿಕೋಟಿ-ಕೋಟಿ ಜನಗಳಿಗೆ ಬಿಸಿಎಂದಬ್ಬರಿಸಿ ಘರ್ಜಿಸಿದ ಭೀಮ’ರಿವರು -೪- ಅನಿಷ್ಟಗಳ ನಡುವಿಂದ ಸಿಡಿದುಅಜ್ಞಾನವ ದೈರ್ಯದಿ ತುಳಿದು ದೇಶ-ಕೋಶಗಳಿಗೆ ಮಿಡಿದುಜ್ಞಾನಕ್ಷೀರವನು ಕುಡಿದುಘರ್ಜಿಸಿಹರು ಮಹಾ ನಾಯಕರಿವರುಅಂಬೇಡ್ಕರರು -೫- ಪ್ರೊ.ರಾಜಕುಮಾರ ಬಿ ಟಿ.

ಪ್ರೊ.ರಾಜಕುಮಾರ ಬಿ ಟಿ. ಅವರ ಕವಿತೆ “ಮಾನವೀಯತೆ ಹರಿಕಾರರು” Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ   ಸುಮ್ಮನಿದ್ದುಬಿಡುಹೊರಟು ಬಿಡುಬುದ್ಧನಂತೆ ಎದ್ದು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು ಕೊಡವಿಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರು ಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುಇರಬಹುದು ನೂರೆಂಟು ಮಂದಿಬಿಟ್ಟು ಬಿಡು ಅವರಿವರ ಮಾತುಗಳಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೆ ಕರುಗುವರಿಲ್ಲಕರಗಲೆಂದು ಕಾಯುತ್ತ ಬೇಡಿಕೊಳ್ಳಬೇಡಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಚಲಿಸುತ್ತಲಿರುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ನೀನೇ ಹೆಗಲಿಗೆರಿಸಿಕೊಳ್ಳಬೇಕುಪಾಲುದಾರರಿಲ್ಲ ಪಾಪಗಳಿಗೆನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ಅಂಬೇಡ್ಕರ್ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

ಕಾವ್ಯಯಾನ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ”

ಕಾವ್ಯಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ನಾನು ಅಪೂರ್ಣಳಲ್ಲ” pic:gemini ನಾನು ಪರಿಪೂರ್ಣ ತಾಯಿ ಅಲ್ಲಈ ಒಪ್ಪಿಗೆನನ್ನ ಸೋಲಿನ ದನಿಯಂತು ಅಲ್ಲ!, ಬದುಕಿನ ಸತ್ಯದ ನಿಸ್ಸಂಶಯ ಮೌನದಿನವೆಲ್ಲಾ ಹರಿದಾಡುವಕ್ಷಣಗಳ ನಡುವೆ,ನನ್ನ ಉಸಿರು ಕೂಡಾ ಕೆಲಸದಲಯಗತಿಯಲ್ಲೆ ಸಾಗುತ್ತದೆ,ಕೈಗಳಲ್ಲಿ ಮನೆಯ ಒಪ್ಪ ಓರಣ,ಮನಸ್ಸಿನಲ್ಲಿ ನಿನ್ನ ನಾಳೆಗಳು!, ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ ನೆರಳು,ಕೆಲವೊಮ್ಮೆಧ್ವನಿ ಎತ್ತರವಾಗುತ್ತದೆ,ಅದು ಕೋಪದ ಭಾಷೆಯಲ್ಲ,ದಣಿವಿನ ಅನುವಾದ, ಸಹನೆಯ ಹೂವಲ್ಲುಮುಳ್ಳಿನ ಕೊನೆ,ಆದರೂ, ಅದರ ಬೇರುಪ್ರೀತಿಯಲ್ಲೇ ನಾಟಿದೆ, ನನ್ನೊಳಗೆಒಂದು ನಿರಂತರ ಸಂಭಾಷಣೆ,“ಸಾಕ ನಾನು ?”“ಸಾಕ್ಷಮಳಾ ನಾನು?”ಈ ಪ್ರಶ್ನೆಗಳೇನನ್ನ ತಾಯಿತನದ ಪ್ರತಿದಿನದ ಪರೀಕ್ಷೆ.ಕೆಲ ಕ್ಷಣಗಳಲ್ಲಿನಾನು ಕಳೆದುಹೋಗುವೆ,ಪಾತ್ರಗಳ ನಡುವೆ,ನೀರೀಕ್ಷೆಗಳ ಗೋಡೆ ಬಿರುಕಿನಲಿ,ಜವಾಬ್ದಾರಿಗಳ ಗದ್ದಲದಲ್ಲಿ,ನನ್ನನ್ನೇ ಹುಡುಕುವ ಪ್ರಯತ್ನದಲ್ಲಿ ಕಡೆಗೆ,ಆದರೂ!ತಾಯಿಯಾಗಿರುವುದುಪರಿಪೂರ್ಣತೆಯ ಮಾನದಂಡವಲ್ಲ ಅಲ್ವಾ?,ಅದು ಅಪೂರ್ಣತೆಯನ್ನುಸ್ವೀಕರಿಸುವ ಧೈರ್ಯ.ನಾನು ಸಂಪೂರ್ಣಳಲ್ಲ,ಆದರೆ ನಿನಗಾಗಿ ನಾನುಪ್ರತಿ ದಿನ ಪುನಃ ಹುಟ್ಟುತ್ತೇನೆ,ಸೂರ್ಯನಂತೆ, ನನ್ನ ಪ್ರೀತಿ,ಅದು ನಿಯಮಗಳಿಗೆಸಿಕ್ಕದ ಒಂದು ನದಿ,ತಪ್ಪುಗಳನ್ನೂ ತೊಳೆದುಮತ್ತೆ ಮತ್ತೆ ನಿನ್ನತ್ತ ಹರಿಯುವನಿಷ್ಕಳಂಕ ಸತ್ಯ ಹರಿವು,ನಾನು ಪರಿಪೂರ್ಣ ತಾಯಿ ಅಲ್ಲ,ಆದರೆನಿನ್ನನ್ನು ಪ್ರೀತಿಸುವ ನನ್ನ ಹೃದಯಅದು ಎಂದಿಗೂ ಅಪೂರ್ಣವಾಗುವುದಿಲ್ಲ… ಶಾಲಿನಿ ರುದ್ರಮುನಿ ಹುಬ್ಬಳ್ಳಿ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ” Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಕೆಂಡದಂತೆ ಕಾದಿದೆಪಲ್ಲಂಗವಿಂದು ನಲ್ಲಕಾರಣ ಈ ವಿರಹಗ್ರೀಷ್ಮ ಋತುವು ಅಲ್ಲ ಕದಪು ಕೆಂಪಾಗಿದೆಬಿಸಿ ಉಸಿರು ತಾಗಿನಲ್ಲ ಬಳಿ ಬರಲುತೋಳಲಿ ಬಳಸಲು ನಿನ್ನ ಅನುಪಸ್ಥಿತಿನಿತ್ಯವೂ ಕಾಡುತಿದೆಅತಿಯಾದ ಪ್ರೀತಿಯೇನನ್ನನ್ನು ಕೊಲ್ಲುತಿದೆ ಒಮ್ಮೊಮ್ಮೆ ಬಿಸಿಗಾಳಿಮಗದೊಮ್ಮೆ ತಂಗಾಳಿಹವೆ ಬಲು ಚಂಚಲಬಂಡೆ ಮಾತ್ರ ಅಚಲ ಮೈ ಶಾಖ ಹೆಚ್ಚಿಸಿದೆವೈಶಾಖದ ಬಿಸಿಲುಒಣಗಿ ಉದುರಿದೆಮರಗಳ ಟಿಸಿಲು ಊಟದಲಿ ಕೊಂಚವೂತಿಳಿಯುತ್ತಿಲ್ಲ ಸ್ವಾದಬಿಸಿಲ ತಾಪದಿಂದಮೊಗದ ತುಂಬ ಸ್ವೇದ ಬದುಕೀಗ ನರಕಹೆಚ್ಚಿದೆ ತಾಪಮಾನಕಾದ ಕಾವಲಿ ಭೂಮಿಕಾಣದಾದ ವರುಣ ತಡೆಯಬಲ್ಲೆ ನಾನುಬೇಸಿಗೆಯ ಈ ಧಗೆಸಹಿಸಲಾರೆ ಎಂದೂನಲ್ಲನಾದರೆ ಹಗೆ ಕೆರೆ ಕುಂಟೆಗಳೀಗನೀರಿಲ್ಲದೇ ಬರಡುನಿನ್ನ ಸ್ಪರ್ಶವಿರದೇತನುವಿಂದು ಕೊರಡು ಅಪರೂಪದ ಮಳೆರಸ್ತೆ ಗುಂಡಿ ತುಂಬಿತುಹರುಷದಿಂದ ಮಗುಅಲ್ಲಿ ಕುಪ್ಪಳಿಸಿತು ಎ.ಹೇಮಗಂಗಾ

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ “ಮೌನದ ಆಲಾಪನೆ” ಒಲವು ಬಾಡಿತೇಕೆ ಹೇಳು ಮನವೇಬತ್ತಿ ಹೋದವೇ ಭಾವಗಳುನಲಿವ ಹೃದಯದ ಬಡಿತ ನಿಂತಿತೇಸೋತು ಸೊರಗಿದೆ  ಬಂಧಗಳು ಕಣ್ಣು ಕಣ್ಣಲಿ ಬೆಸೆದು ನೋಟವುಹೊಸತು ಲೋಕವ ಕಟ್ಟಿದೆಮಣ್ಣು ಮಾಡಿದೆ ಎದೆಯ ಕನಸನುಪ್ರೇಮದರಮನೆ ಕುಸಿದಿದೆ ಮಾತು ಬಾರದ ಮೂಕ ಹಕ್ಕಿಯತೆರದಿ ಜೀವನವಾಗಿದೆತಂತಿ ಹರಿದ ಜೀವ ನಾದದಲಿಮೌನದ ಆಲಾಪನೆ ಕೇಳಿದೆ ಬಾಳ ಪಯಣದಿ ಆಸರೆ ಇಲ್ಲದೆಬಾಡಿ ಹೋಗಿದೆ ಬಯಕೆಯುಓಡಿ ಬರುವೆಯಾ ಒಮ್ಮೆಯಾದರೂಕೊನೆಗೆ ನೋಡುವಾಸೆಯು ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಅಪ್ಪನ ಶವ ನಕ್ಕಿತಲ್ಲ.!” ಅಪ್ಪನಿಗೆ ತನ್ನ ಮಕ್ಕಳು ಎಂದಿಗೂಭಾರ ಅನಿಸಲೆ ಇಲ್ಲ.ಅದ್ಯಾಕೋ ಅಪ್ಪ ಮಕ್ಕಳಿಗೆಭಾರವಾಗಿ ಬಿಟ್ಟ………… ಆರು ಹೆತ್ತರೂ ತನ್ನ ಮಕ್ಕಳಿಗೆ ಏನುಕೊರತೆಯಾಗದಂತೆ ಸಾಕಿದನಲ್ಲಅದ್ಯಾಕೋ ಅಪ್ಪನ ಸಾಕೋಕೆಮಕ್ಕಳಿಗೆ ಹಣದ ಕೊರತೆ ಆಯಿತಲ್ಲ………. ಎರಡೆರಡು ತಿಂಗಳಿಗೊಮ್ಮೆ ಒಬ್ಬೊಬ್ಬರುಜೋಪಾನ ಮಾಡುವರಲ್ಲಆಸ್ತಿಯ ಹಂಚಿಕೊಂಡಂತೆ ಅಪ್ಪನನ್ನೂಸಹ ಹಂಚಿಕೊಂಡು ಬಿಟ್ಚರಲ್ಲ………….. ಅಪ್ಪನ ಮಾನಸಿಕ ಸ್ಥಿತಿಯ ಪರಿವೆಅವರಿಗೆ ಆಗಲೆ ಇಲ್ಲಆದರೂ ಅಪ್ಪ ಎಲ್ಲ ಒಳಗೊಳಗೆನುಂಗಿದನಲ್ಲ…………… ಹೆಂಡತಿ ಇದ್ದಾಗ ನೋಡು ನನ್ನಮಕ್ಕಳನ್ನ ಅಂತಿದ್ದ ಬೀಗತಿದ್ದಅವಳಿಲ್ಲದಾಗ ಆತನೆ ಕುಗ್ಗಿದ್ದಹಾಸಿಗೆ ಹಿಡಿದ ದಿನದಿಂದಲೆ ನಗುವದನ್ನೆನಿಲ್ಲಿಸಿದ………… ಈಗೀಗ ನೀನ್ಯಾಕ ನನ್ನ ಒಬ್ಬಂಟಿ ಮಾಡಿಹೋದೆ ಅಂತಿದ್ದಎಲ್ಲದರಲ್ಲೂ ಮೊದಲೆನ್ನುವವಳುಸಾವಲ್ಲೂ ಮೊದಲೆ ಆದೆ………… ನನ್ನ ಮಾತ್ರ ಎಲ್ಲವ ಅನುಭವಿಸಿಬಾ ಎಂದೆ ಎನುತಿದ್ದಆಗಾಗ ಹಲಬುತ್ತಿದ್ದ ಮಕ್ಕಳಿಗೆ ಇದ್ಯಾವುದರಪರಿವೆ ಆಗದಂತೆ ಇದ್ದ …….. ಇನ್ನೂ ಯಾವಾಗ ಸಾಯತಾನೋ?ಎನ್ನುವರೆಲ್ಲಅದೇನಾಸೆಯ ಇಟ್ಟುಕೊಂಡಿದ್ದ ಗೊತ್ತಿಲ್ಲಅಂತು ಇಂತು ಕೊನೆಯ ಕ್ಷಣ ಬಂದಿತಲ್ಲ …….. ಇಷ್ಟು ದಿನ ನಗದ ಅಪ್ಪ ಆದ್ರೂ ಇಂದುಅಪ್ಪನ ಶವ ನಕ್ಕಿತಲ್ಲಮಕ್ಕಳು ಮಕ್ಕಳು ಅಂತಿದ್ದೆ ಮಕ್ಕಳಿಗಾಗಿಮನೆ ಮಾಡಿದೆ……….. ಅವರಿಷ್ಟದ ಗಾಡಿ ಕೊಡಿಸಿದೆನೀನೆ ಕಟ್ಟಿಸಿಕೊಟ್ಟ ಮನೆಯಲ್ಲಿ ಜಾಗವಿಲ್ಲನಿನ್ನ ಅಂತಿಮ ಯಾತ್ರೆಗೆದೊಡ್ಡ ದೊಡ್ಡ ಗಾಡಿಗಳಿದ್ದರೂ ಮುಕ್ತಿರಥವೆಗತಿಯಾಗಿತ್ತು ನಿನ್ನ  ಬಾಡಿಗೆಎನ್ನುತಲೆ ಅಪ್ಪನ ಶವ ನಗತಿತ್ತು……… ಅಪ್ಪನಿಗಾಗಿ ಬಡಿದಾಡಲೆ ಇಲ್ಲಅಪ್ಪನ ಹಣಕ್ಕಾಗಿ ಹೆಣದ ಮುಂದೆಬಡಿದಾಡಿದರಲ್ಲಆಗಲೂ ಅಪ್ಪನ ಶವ ನಗತಿತ್ತು …….. ನನ್ನವರೆಂದವರು ಯಾರೂನನ್ನವರಾಗಿರಲೆ ಇಲ್ಲಅಪ್ಪನ ಜೋಪಾನ ನಾ ಮಾಡಿದೆನಾ ಮಾಡಿದೆ ಎನ್ನುವರೆ ಎಲ್ಲ ………. ಎಲ್ಲವೂ ಅಪ್ಪನ ಶವದ ಮುಂದೆ ನಡೆದಿತ್ತಲ್ಲಅದೆಷ್ಟಂತ ಬಡದಾಡತಿರಿ ಅಂತಕೇಳೋಕ ಆತ ಇಲ್ಲಆತನ ಶವ ಮಾತ್ರ ನಗತಿತ್ತಲ್ಲ……. ಇವರ ಕಣ್ಣೀರ ಕೂಗು ಕೇಳದಷ್ಟುದೂರ ಹಂಗಿನ ಮಾತು ಮನಸಿಗೆಮುಟ್ಟದಂತೆ ಮಲಗಿ ಬಿಟ್ಟಿದ್ದಅಪ್ಪನ ಶವ ಈಗಂತೂ ಜೋರಾಗಿ ನಗತಿತ್ತು…… ಇನ್ನ್ಯಾರ ಅಪ್ಪ ಎನ್ನುವಿರಿ? ಎರಡೆರಡುತಿಂಗಳಿಗೊಮ್ಮೆ ಮನೆಯಿಂದ ಮನೆಗೆಊರಿಂದ ಊರಿಗೆ ಅದಾರನ್ನತಂದಿರಿಸಿಕೊಳ್ಳುವಿರಿ?ಎಂದುಕೇಳುತಲೆ ಇತ್ತು. ಅಪ್ಪ ಶವ ನಗತಾನೆ ಇತ್ತು………. ಬದುಕಿದ್ದಾಗಲೆ ಯಾವ ಮಾತು ಮನಸಮುಟ್ಟಲೆ ಇಲ್ಲ, ತಟ್ಟಲೆ ಇಲ್ಲಈಗೆಲ್ಲಿ ಮುಟ್ಟುವವು? ಯಾರಮನಸ್ಸ ತಟ್ಟುವವು…………. ಕಲಹ,ಕದನ,ರೋದನ,ಸಿಟ್ಟುಎಲ್ಲವ ಎಲ್ಲರೂ ಶವದ ಮುಂದೆಹೊರ ಹಾಕುವವರೆ ಬಿಕ್ಕಿ ಬಿಕ್ಕಿಅದಾವುದಕ್ಕೋ ಅಳುವರೆಲ್ಲ………….. ಅದ ಕೇಳೋಕೆ ಯಾರಿಗೂ ಪುರಸೊತ್ತಿಲ್ಲಯಾಕಂದ್ರ ಅಲ್ಲಿದ್ದವರೆಲ್ಲ ಹೇಳತಿದ್ರಲ್ಲಲಗೂಣ ಹೆಣ ಎತ್ತರಲ್ಲ, ಇವರೆಲ್ಲ ಅತ್ತರೆಊರ ಜನ ನೋಡಿ ಅಯ್ಯೋ ಪಾಪ ಅಂದರಲ್ಲ….. ಪಾಪ! ಅವರಿಗೇನ ಗೊತ್ತು, ಮಕ್ಕಳ ಸ್ವಾರ್ಥದುರಾಸೆ ಅಪ್ಪನಿಗಷ್ಟೆ ಗೊತ್ತಿತ್ತಲ್ಲಆತನ ಶವ ನಕ್ಕಿದ್ದು ಅವರಾರಿಗೂ ಗೊತ್ತೆಆಗಲೆ ಇಲ್ಲ ……… ಅಂತು-ಇಂತು ಅಪ್ಪನ ಅಂತಿಮಯಾತ್ರೆಮುಗಸಿದ್ರಲ್ಲ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!” Read Post »

You cannot copy content of this page

Scroll to Top