ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ

ಕಾವ್ಯ ಸಂಗಾತಿ “ಗಜಲ್‌ ಜುಗಲ್‌ ಬಂದಿ” ಅರುಣಾ ನರೇಂದ್ರ ವೈ ಎಂ ಯಾಕೊಳ್ಳಿ ಬಾಡದ ಹೂವ ಕಿತ್ತೆಸೆಯಬಹುದೇ ಮುಡಿಯಿಂದ ತೆಗೆದುಜಿಗಿತ ಪ್ರೀತಿ ಚಿವುಟಿ ಒಗೆಯಬಹುದೇ ಎದೆಯಿಂದ ತೆಗೆದು ಹೆಣ್ಣು ಮಣ್ಣು ಹೊನ್ನಿ ಗಾಗಿ ನೆತ್ತರು ಹರಿದಿದೆ ಈ ಭೂಮಿ ಮೇಲೆನೋವಾಯಿತೆಂದು ಕರುಳ ಕಿತ್ತು ಹಾಕಬಹುದೇ ಒಡಲಿಂದ ತೆಗೆದು ಗಿಡದಲ್ಲಿ ಅರಳಿದ ಹೂವಿಗಿಂತ ಕೃತಕ ಹೂಗಳೆ ಚಂದ ತೋರುತ್ತವೆಬೆಂಕಿ ಸುಟ್ಟಿತೆಂದು ದೀಪವನು ಗಾಳಿಗಿಡಬಹುದೇ ಒಳಗಿಂದ ತೆಗೆದು ಇಲ್ಲಿ ಮುಖವಾಡಗಳೇ ಮಾತಾಡುತ್ತಿವೆ ಯಾವುದನ್ನು ನಂಬುವುದು ಸತ್ಯ ಕಹಿಯೆಂದು ಸುಳ್ಳನ್ನೇ ಮೆರೆಸಬಹುದೇ ಪಾಪದಿಂದ ತೆಗೆದು ಅವ ಇಟ್ಟಂತೆ ಇರಬೇಕು ನಾವೆಲ್ಲ ಇರುವಷ್ಟು ದಿನ ನಗು ನಗುತ ಮೌನವಾದ ಅರುಣಾಗೆ ಮೂಗಿ ಅನ್ನಬಹುದೇ ಯಾದಿಯಿಂದ ತೆಗೆದು —- ಎದೆಯ ಮಾತನು ಬಿಚ್ಚಿ ಆಡಬಹುದೇ ಆಳದಿಂದ ತಗೆದುಮೂಡಿದ ಒಲವನು ತೊರೆಯಬಹುದೇ ಎದೆಯಿಂದ ತಗೆದು ಜಾತಿ‌ಮತ ಪಂಥಗಳ ಹೆಸರಲ್ಲಿ ಉಸಿರಾಡುತ್ತಿದೆ ಜಗವುಮನುಜ‌ಮತ ಉಳಿಯಬಹುದೇ ಮೋಸದಿಂದ ತಗೆದು ಒಡಲ ಕೂಸೆ ಒಮ್ಮೊಮ್ಮೆ ದೂರ ವಾಗಬಹುದು ಮರೆತುಕರುಳ ಕುಡಿಯನು ದೂರ ತಳ್ಳಬಹುದೆ ಸಿಟ್ಟಿನಿಂದ ತಗೆದು ತೋರಿಕೆಯ ಮಾತುಗಳು ಆಡಂಬರದ ಆಟಗಳು ಮೆರೆಯುತ್ತಿವೆಕೃತ್ರಿಮತೆಯೆದುರು ನಿಜ ಮರೆಸಬಹುದೆ  ಹುಸಿಯಿಂದ ತಗೆದು ಲೋಕವನಾಳುವ ಮಾಲೀಕನೊಬ್ಬ‌ ಮೇಲಿಹನು ಜೋಗಿಅವನ ತಕ್ಕಡಿಯಲ್ಲಿದೆ ನಮ್ಮ ಆಟ ಗೆಲ್ಲಬಹುದೆ ತಂತ್ರದಿಂದ ತಗೆದು ಡಾ ವೈ ಎಮ್ ಯಾಕೊಳ್ಳಿ

“ಗಜಲ್‌ ಜುಗಲ್‌ ಬಂದಿ”ಅರುಣಾ ನರೇಂದ್ರ ಮತ್ತು ವೈ ಎಂ ಯಾಕೊಳ್ಳಿ Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ನೀಲಿ ಆಕಾಶ – ನೀನೇ ನನ್ನ ಹಾಡು” ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯ ಹೇಳಿದೆನಿನ್ನ ನನ್ನ ಪ್ರೀತಿಯ ಹಾಡು. ನಿನ್ನ ಕಣ್ಣೊಳಗೆನೋಡುವ ಕನಸು,ನನ್ನ ಉಸಿರಲ್ಲೇನಿನ್ನ ಸುಗಂಧದ ಸೊಗಸು. ಎದೆ ಬಡಿತ ಎನ್ನುವಹೃದಯದ ಸದ್ದು,ಪ್ರತಿ ಕ್ಷಣ ಹೇಳುತ್ತದೆಪ್ರೀತಿ ಒಂದು ಮದ್ದು. ಓ ನಲ್ಲೆ, ನೀನುಆ ತೀರದ ನಕ್ಷತ್ರ,ನಾನು ಈ ತೀರದಒಂಟಿ ಯಾತ್ರಿಕ.ನಡುವೆ ನದಿ ಹರಿಯುತ್ತದೆಜುಳು ಜುಳು ಧ್ವನಿ,ನಿನ್ನ ನೆನಪಲ್ಲಿನಿಂತುಹೋಗುತ್ತದೆ ನನ್ನ ಪಯಣ. ಸುಪ್ರಿಯಾ, ನಾನುದೂರದಲ್ಲಿದ್ದರೂ,ನಿನ್ನ ಧ್ವನಿಯಲ್ಲೇಹತ್ತಿರವಾಗುತ್ತೇನೆ ನೋಡು.ನೀನು “ಬಾ ನಲ್ಲ” ಎಂದರೆಹೃದಯ ನಗುತ್ತದೆ,ಕೇಳಿಸದ ಮಾತನ್ನೂಮನಸ್ಸು ಅರಿತುಕೊಳ್ಳುತ್ತದೆ. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ನೀಲಿ ಆಕಾಶದ ಮೋಡಎಲ್ಲಿ ಮಳೆಯಾಗುತ್ತವೋ,ನನ್ನ ಕಣ್ಣಿನ ಮೋಡನಿನ್ನ ನೆನಪಲ್ಲೇ ಕರಗುತ್ತವೋ.ಸ್ವಪ್ನದಲ್ಲಿ ಬಂದವನೇಮೌನದ ಸಂಗೀತ,ನಿನ್ನ ಸ್ಪರ್ಶವೇಮನಸ್ಸಿಗೆ ಸಿಹಿ ಸಂಪ್ರಿತ ಕೋಗಿಲೆ ಕೂಗುವಾಗನಿನ್ನ ನೆನಪು,ನಿನ್ನ ನಗುವೇನನ್ನ ಬದುಕಿನ ಹೊನಪು ನಿನ್ನ ಮಾತು ಕೇಳಿದರೆಮರೆತುಹೋಗುತ್ತದೆ ನೋವು,ನಿನ್ನ ಪ್ರೀತಿ ಸಾಕುನನ್ನ ಜೀವನದ ಔಷಧಿ ಅದು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ಆ ಪ್ರೀತಿಯ ಹಾಡು. ಸಮುದ್ರದ ಮುಂದೆ ನಿಂತುಅಲೆಗಳನ್ನು ನೋಡಿದರೆ,ನಿನ್ನ ಭಾವನೆಗಳುಅಲೆ ಅಲೆಯಾಗಿ ಬರುವುದು ನನಗೆ. ದೂರದಲ್ಲಿದ್ದರೂ ನೀನುಹತ್ತಿರವೇ ಕಾಣಿಸುವೆ,ನನ್ನ ಮನಸ್ಸಿನೊಳಗೆಪ್ರತಿ ಕ್ಷಣ ನಗಿಸುವೆ. ಮರೆಯಲು ನೋಡಿದರೂಮರೆಯಲಾಗದ ಕಮಾನು,ಬಣ್ಣದ ಚಿಟ್ಟೆಗಳಂತೆಮನಸಲ್ಲಿ ಹಾರಾಡು ನೀನು. ಕಾಲ ತಿರುಗಿದರೂಪ್ರೀತಿ ತಿರುಗದು,ಉಸಿರು ಇರುವವರೆಗೆಈ ಬಾಂಧವ್ಯ ಮುರಿಯದು.ಮತ್ತೊಂದು ಜನ್ಮ ಬಂದರೂಮತ್ತೆ ನೀನೇ ಸಾಕು,ಪ್ರೀತಿಯ ಹಾಡಾಗಿಯೇನಮ್ಮ ಕಥೆ ಇರಬೇಕು. ನೀಲಿ ಆಕಾಶದಲ್ಲಿತೇಲುವ ಬಿಳಿ ಮೋಡ,ನನ್ನ ಹೃದಯದಲ್ಲಿನೀನೇ ನನ್ನ ಜೀವದ ಹಾಡು. ಕೊನೆಯ ಉಸಿರಿರುವವರೆಗೆಹೇಳುತ್ತೇನೆ ನಿನ್ನ ಹೆಸರು,ನೀನು ಎಲ್ಲಿದ್ದರೂನನ್ನ ಪ್ರೀತಿ ನಿನ್ನತ್ತಲೇ ಹರಿದು ಹೋಗು. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ”ನೀಲಿ ಆಕಾಶ – ನೀನೇ ನನ್ನ ಹಾಡು” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ ನೀ ನನಗೆ ನಾ ನಿನಗೆ” ದತ್ತ ಪದ :- ಪ್ರಿಯ ನೀ ನನಗಾಗಿ..ಶೀರ್ಷಿಕೆ:- ನೀ ನನಗೆ ನಾ ನಿನಗೆ ನಿನಗೆಂದೆ ಕಾಯ್ದು ಕುಳಿತೆ ಆ ಇರುಳಲಿಮಾಮರವು ಜೊತೆಯಾಗಿ ಮೌನದಲಿಬಂದೆ ಬರುವನೆಂಬ ಭರವಸೆ ಮನದಲಿನೀ ಕೊಟ್ಟ ಮಾತು ನೆನೆದು ನಗುತಲಿ ಪ್ರಿಯ ನೀ ನನಗಾಗಿ ಮೊಳ ಮಲ್ಲಿಗೆಯತಂದೆ ತರವೆ ಎನ್ನುವ ಆಸೆಯತರದೆ ಇದ್ದರೆ ತೋರೆ ನಾ ನಿರಾಸೆಯಬಲ್ಲೆ ನಾ ನಿನ್ನ ಅಂತಃಕರಣದ ಪ್ರೀತಿಯ ತೇಲಿದೆ ಮನ ನಿನ್ನ ನಾಮವ ಆಲಿಸೆಹಾರಿದೆ ಹಕ್ಕಿಯಾಗಿ ಆಗಸ ಚುಂಬಿಸೆಬಲ್ಲೆ ಏನು ಮಿಡಿವ ಹೃದಯದ ಒತ್ತಾಸೆಆಗುವಾಸೆ ನಿನ್ನ ಮಡಿಲೊಳು ನಾ ನಿನ್ನ ಕೂಸೆ ನೀ ನನಗೆ ನಾ ನಿನಗೆ ಜೊತೆಯಾಗುವದುಂಬಿಯಂತಾಗಿ ಮಕರಂದ ಹೀರುವಹೊಸೆದು ಬೆಸೆಯೋಣ ಮಧುರ ಬಂಧವಬೆರೆಯೋಣ ಮರೆತು ಈ ಜಗವ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ್‌ ಅವರ ಕವಿತೆ “ನೀ ನನಗೆ ನಾ ನಿನಗೆ” Read Post »

ಕಾವ್ಯಯಾನ, ಗಝಲ್

ಜಯಂತಿ ಸುನಿಲ್ ಅವರ ಗಜಲ್

ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲ್ ಹೂವೆಂದು ಕೈಗೆತ್ತಿಕೊಂಡೆ ಮುಳ್ಳಾಗಿ ಚುಚ್ಚಿತುಬಳ್ಳಿಯೆಂದು ನೀರೆರೆದೆ ಹಾವಾಗಿ ಮೇಲೆರಗಿತು!! ಹೇಗೆ ತೋರಲಿ? ಹಸಿಯಾದ ಹೃದಯದ ಗಾಯವನುಕರುಣೆಗಾಗಿ ಕೈಮುಗಿದೆ ಕಠೋರವಾಗಿ ಎದೆಗಿರಿಯಿತು!! ನಂಬಿಸಿ ಅನಾಯಾಸವಾಗಿ ಗಿಚ್ಚಬಹುದೇ ಹೀಗೆ ಮುತ್ತಿಟ್ಟು ಕೆನ್ನೆಯನು,ಗಲ್ಲವನು ಜೋರಾಗಿ ಕಿರುಚಿ ಹೇಳಿದೆ..ಕಿವುಡಾಗಿ ಕಚ್ಚಿತು!! ಮಾಯಾವಿ ಮಾತುಗಳು ಮನಸ್ಸಿಗಿಳಿದವು..ಈ ಯುದ್ಧ ಸಾಕು ಬೇಡವೆಂದೇ,ಮೋಹವಾಗಿ ಪಾಶವಾಯ್ತು!! ದೀಪಾವಳಿಯ ರಾತ್ರಿ ಕತ್ತಲೆಯಿತ್ತು..ಬೆಳಕಿನ ಜೊತೆ ಸರಸಬೇಡವೆಂದೇ..ಬೀಜವಾಗಿ  ಸಸಿಯಾಯಿತು!! ಬಾಳ ಕದ್ದವನಿನ್ನೂ ಸಿಕ್ಕಿಬಿದ್ದಿಲ್ಲಾ,,ಬಗಲಲ್ಲಿ ಕಂದ ನಗುತ್ತಿಲ್ಲಾಹುಡುಕಾಡಿದೆ ಬದುಕೇ ಮರಳುಗಾಡಾಗಿ ಭಾಸವಾಯ್ತು!! ಮರುಕವಷ್ಟೇ ಹುಟ್ಟೀತು,ನಷ್ಟವನು ಯಾವುದರಿಂದ ತುಂಬಲಿ ಜಯ?ಅಮೃತವೆಂದು ಸೇವಿಸಿದೆ ವಿಷವಾಗಿ ಕೊಂದಿತು!! ಜಯಂತಿ ಸುನಿಲ್

ಜಯಂತಿ ಸುನಿಲ್ ಅವರ ಗಜಲ್ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಹುಮಾನ” ಸದ್ದು ಗದ್ದಲವಿಲ್ಲದಪ್ರಸಿದ್ಧಿ ಪ್ರಚಾರವಿಲ್ಲದಗಟ್ಟಿ ಜೀವಹಲವು ಕನಸುನಿತ್ಯ ಪಯಣಹೆಜ್ಜೆ ಹಾಕುವುದುನಿಂತಿಲ್ಲ ಸೋಲೋ ಗೆಲುವೋಗೊತ್ತಿಲ್ಲಅಳುಕು ಆತಂಕಆನಂದ ಐಸಿರಿಎಲ್ಲವೂ ವಿಧಿಯಾಟನಡೆದ ದಾರಿಯಶ್ರಮ ದೂರಸಂತೃಪ್ತಿ ಮೌನನನ್ನ ನಿನ್ನಯಪ್ರೀತಿ ಬಹುಮಾನ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಬಹುಮಾನ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಬಚ್ಚಿಟ್ಟ ಬಯಕೆ” ಎದೆಯ ಗೂಡಿನಲ್ಲಿತುಂಬಿ ತುಳುಕುವಬಚ್ಚಿಟ್ಟ ಬಯಕೆಗಳನುಬಿಚ್ಚಿಡುವ ಆತುರ ಮನದ ಆಲಯದಲ್ಲಿಹುದುಗಿದ್ದ ಅದೆಷ್ಟೋಆಕರ್ಷಣೆಗಳ ಸೆಳೆತಕೆತೆರೆದುಕೊಳ್ಳುವ ಕಾತುರ ಮುಗಿಯದಷ್ಟು ಮಾತುಗಳುಮನದಾಳದಲ್ಲಿ ಮೊಳೆತಿವೆಚಿಗುರೊಡೆವ ಬಯಕೆಗೆಕನಸುಗಳು ಸಾವಿರ ಮಾತುಗಳು ಮೌನವಾಗಿಮೌನದಲ್ಲೇ ಹರಿಸಿ ಹಾರೈಸಿಸ್ಪಂದಿಸುವ ಜೀವಕ್ಕೆನೆನಪುಗಳ ನಿರಾಳತೆ ಮಧುರ ಕಾಣದ ಕಡಲನುಸೇರುವ ಕಾತುರಅಬ್ಬರದ ಅಳೆಗಳನ್ನುಅಪ್ಪಿಕೊಳ್ಳುವ ಅವಸರ ಆಕಾಶದ ನೀಲಿಗೆಕಾರ್ಮೋಡಗಳ ತೋರಣಇಳೆಗೆ ಮಳೆಯ ಸಿಂಚನಸೇರಲು ಮಾನಸ ಸರೋವರ ಡಾ.ಗೀತಾ ದಾನಶೆಟ್ಟಿ

ಡಾ.ಗೀತಾ ದಾನಶೆಟ್ಟಿ ಕವಿತೆ “ಬಚ್ಚಿಟ್ಟ ಬಯಕೆ” Read Post »

ಕಾವ್ಯಯಾನ

ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು

ಕಾವ್ಯ ಸಂಗಾತಿ ಸಿದ್ದಲಿಂಗಪ್ಪ ಬೀಳಗಿ ತನಗಗಳು ೧ಸೋತು ಹೋದೆನೆನ್ನುವಪಾಪ ಪ್ರಜ್ಞೆ ಬಿಸಾಕುಗೆಲುವಿನ ಕುದುರೆಹತ್ತಿ ಓಡಿಸು ಸಾಕು೨ಸಾಸಿವೆಯ ತರಲುಸಾಲುಗಟ್ಟಿದ ಜನಸಾವಿಲ್ಲದ ಮನೆಯಹುಡುಕಿ ಕಳಾಹೀನ೩ನನ್ನ ನಿನ್ನ ನಡುವೆಸುಮ್ಮನೇಕೆ ಬಿರುಕುತಣ್ಣನೆಯ ಪ್ರೀತಿಯುನೆಮ್ಮದಿಯ ಸರಕು೪ಮುಡಿ ತುಂಬ ಮಲ್ಲಿಗೆಮೊಗದಿ ನಗು ಹಾರನೋಡುವ ಮನದಲಿಪ್ರೀತಿ ಪೋಣಿಸು ದಾರ೫ಊರ ಮಂದಿಗೆ ಅಂಜಿಊರೂರು ಸುತ್ತಿದಾತದಾರಿ ಸರಿದ ಮೇಲೆವಾಸ್ತವಕೆ ಬಂದಾತ೬ನಗೆ ಬೀರಿದಾಗೊಮ್ಮೆಎದೆಯಲಿ ನಡುಕಹದವಾಗಿ ತಬ್ಬಲುಬಿಸಿ ಗಾಳಿಯ ತಾಪ ಸಿದ್ದಲಿಂಗಪ್ಪ ಬೀಳಗಿ

ಸಿದ್ದಲಿಂಗಪ್ಪ ಬೀಳಗಿ ಅವರ ತನಗಗಳು Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಜೀವನ-ಮರಣ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಜೀವನ-ಮರಣ” ಅಯ್ಯೋ ಪ್ರಾಣವೇ…ನಿನಗಲ್ಲ, ನನಗಾಗಿದೆ ಪ್ರಾಯ,ತ್ರಾಣವಿಲ್ಲದ ಎಲುಬುಗಳ ಮಧ್ಯೆಉಸಿರೊಂದೇ ಈಗ ಉಳಿದಿರಲು,! ಪ್ರಾಣವೆಂಬ ಈ ಜೀವಾತ್ಮವುಜೀವನದಾಟಗಳ ಮುಗಿಸಿ ಕೂತಿದೆ,ಉಸಿರು ಹಾರುವ ತವಕದಲಿಜೀವನದ ಬಯಕೆಗಳ ಮುಗಿಸಲು,! ಬರೀ ಗೋಳು, ಈ ಬದುಕುದೇವನೇ ತೆಗೆದು ಬಿಡು ಪ್ರಾಣವ,ನನ್ನೂಸಿರನು ಈ ದೇಹದಿಂದೊಮ್ಮೆಈ ಜನ್ಮವು ಸಾಕು, ಮುಗಿಸಿ ಬಿಡಲು,! ಯಾರಿಗೂ ಹೊರೆಯಾಗದೆಯಾರಿಂದಲೂ ನನ್ನ ತಿರಸ್ಕರಿಸದೆನೋಯಿಸುವ ಮುನ್ನ, ನನ್ನನ್ನೊಮ್ಮೆಕರೆಸಿ ಬಿಡು ದೇವ, ನಿನ್ನ ಬಳಿ ಸೇರಲು,! ನನ್ನಾತ್ಮವನು ಸ್ವೀಕರಿಸಿನಿನ್ನೊಡನೆ ಸುಖವಾಗಿರಲು ಬಿಡು,ನನ್ನಯ ಸತ್ಕರ್ಮಗಳೊಮ್ಮೆಬೇಗನೆ ತೂಲನೆ ನೀ ಮಾಡಿ ಬಿಡಲು,! ದುಷ್ಟರಿಂದ ತುಂಬಿದ ಜಗತ್ತುಜಗಮಗಿಸುತ್ತಿರಲು,ನಾನಿರಲಾರೆ,ಹಿಂಸಿಸಿ ಕೊಲ್ಲುವ ಜನರೊಳಗಿಂದಸುರಕ್ಷಿತ ಮರಣವನು ದಯಪಾಲಿಸಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಜೀವನ-ಮರಣ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ ಅ “ಚೂರಾದ ಮನ ಗಾಜು” ಹೆಣ್ಣು ಮೃದು ಮನದ ಪಯಣದಲಿಮುಗ್ಧ ಮನದ ಹೂ ತೋಟದಲ್ಲಿನಂಬಿಕೆಯ ಹೂಗಳು ಅರಳಿದಾಗ,ಸಿಹಿ ಮಾತಿನ ಮಳೆ ಸುರಿಸಿಮನ ಕದಡುವ ಕಟುಕರು ನೆರಳಾಗಿ ನಿಲ್ಲಬೇಕಾದವರುಕಟುವಾಗಿ ವರ್ತನೆ ತೋರುವರುನಂಬಿಕೆಗೆ ಅರ್ಹತೆ ಇಲ್ಲದವರುಮೋಸದ  ಮುಖವಾಡದವರು ಕಣ್ಣಿನಲ್ಲಿ ಕನಸು ಕಟ್ಟಿಸಿನಾಳೆಯ ಚಿತ್ರ ಬರೆದವರು,ಅದೇ ಕೈಯಿಂದ ಕನಸು ಕಿತ್ತುಮೌನದ ಗಾಯ ಬಿತ್ತಿದವರು. ಹೃದಯವೆಂಬ ನಾಜೂಕಿನ ಗಾಜಿಗೆಸುಳ್ಳಿನ ಕಲ್ಲು ತೂರಿದವರುಚೂರುಚೂರಾದ ಪ್ರತಿಬಿಂಬದಲ್ಲಿನಗುವೂ ಕಳೆದುಹೋಗಲು ಕಾರಣವಾದವರು ಆದರೂ  ಹೆಣ್ಣು ಮಣ್ಣಲ್ಲಮಳೆ ಬಂದರೂ ಕರಗದ ಶಿಲೆ.ಗಾಯಗಳನ್ನೇ ಗರಿಗರಿಯಾಗಿ ಮಾಡಿಹೊಸ ಬದುಕಿಗೆ ಹೆಜ್ಜೆ ಇಡುವವಳು ಆಕೆಯ ಭಾವನೆಗಳ ಜೊತೆ ಆಟವಾಡುವವರಿಗೆಒಂದು ದಿನ ಅರಿವಾಗುತ್ತದೆಹೆಣ್ಣು ಮನವೆಂಬ ಸಮುದ್ರದ ಆಳವನ್ನು ಅಳೆಯಲು  ಸಾಧ್ಯವಾಗದು ಎಂದು. ಹೆಣ್ಣು ಹೃದಯವನ್ನು ನೋಯಿಸಿದ  ಮನ ,ಕೈಗಳುಒಮ್ಮೆ ಖಾಲಿಯಾಗುವ ಅರಿವಾಗುವುದೇ!ಆದರೆ ಆಕೆಯ ಆತ್ಮಸಮ್ಮಾನಎಂದೆಂದಿಗೂ ಎತ್ತರದಲ್ಲೇ ಇರುವುದು ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಚೂರಾದ ಮನ ಗಾಜು” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ ಅವರ ಕವಿತೆ”ಓ ನಲ್ಲೇ ..”

ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಓ ನಲ್ಲೇ ..” ನನ್ನೆದೆ ಕೋಗಿಲೆ ಕೂಗಿದೆಹೃದಯದ ತುಡಿತವ ಕೇಳದೆಎಲ್ಲಿರುವೆ?  ನೀನೆಲ್ಲಿರುವೆ?ಗೆಳತಿ ನಿನ್ನೇ ಕಾದಿರುವೆ ವಸಂತಕ್ಕೆ ವಸುಂಧರೆಹಸನಾಗಿ ಸೂಸುತ್ತಿದೆಸರಸರನೆ ಕೋಕಿಲೆಸೊಗಸಾಗಿ ಹಾಡುತ್ತಿದೆ ಹಸನಾದ ಸಮಯವುಬೆಸುಗೆಗೆ ಸಮ್ಮತಿಸಿದೆನಲ್ಲೇ ಯಾಕೀಗೆ ಕಸರತ್ತು?ಒಲ್ಲೇ… ಸಾಕಾಗಿದೆ ಬೇಸತ್ತು ಗೆಳತಿಯ ನನ್ನೊಡತಿಯಬರುವಿಕೆ ನೋಡುತ್ತಿರೇನಿನ್ನ ಅರಿವನ್ನು ಅರಿಯದೇಎನ್ನ ಮನವಿಲ್ಲಿ ಸೊರಗಿದೆ ತಂಪಾಗಿ ಇಂಪಾಗಿಬೀಸುವ ಗಾಳಿಯೇಒಮ್ಮೆ ನನ್ನವಳ ಸ್ಪರ್ಶಿಸಿ ನನ್ನೋಲೆಯಾ ತಿಳಿಸುವೆಯಾ? ಕನಸಲ್ಲೂ ಮನಸಲ್ಲೂಇನ್ಯಾರನೂ ನಾನೊಲ್ಲೇನೆಲೆಸಿ ಹರ್ಷಿಸಿ ಪೋಷಿಸಿನಿಲ್ಲೇ ಈ ಕನ್ನಡಿಗನಲ್ಲೇ…. ಚಂದ್ರು ಪಿ ಹಾಸನ್, 

ಚಂದ್ರು ಪಿ ಹಾಸನ್ ಅವರ ಕವಿತೆ”ಓ ನಲ್ಲೇ ..” Read Post »

You cannot copy content of this page

Scroll to Top