ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ ಕಂಬನಿ ಹನಿಗಳಿಗೆ ಭೇದವಿಲ್ಲ ಹರಿಯುತ್ತವೆ ಗಾಲಿಬ್ಅತಿ ಸಂತಸಕೂ,ಸಂತಾಪಕೂ ಸುರಿಯುತ್ತವೆ ಗಾಲಿಬ್ ತೊಳೆದಷ್ಟೂ ಸ್ವಚ್ಛವಾಗುವಂತೆ ಕಂಬನಿ ಕಣ್ತೊಳೆವುದುಕೆಲ ಹೊತ್ತಿಗೆ ಹನಿಗಳು ಕಣ್ಣ ತೊರೆಯುತ್ತವೆ ಗಾಲಿಬ್ ಸಂತಾಪವು ರಜೆ ಮೇಲಿರಲು ಸಂತಸಗಳದ್ದೇ ಹಾವಳಿಅನಂದದ ಜತೆ ಬಾಷ್ಪಗಳಾಗಿ ಬೆರೆಯುತ್ತವೆ ಗಾಲಿಬ್ ಒಬ್ಬೊಬ್ಬರ ಕಣ್ಣೀರಿನ ಕಥೆ ಒಂದೊಂದು ಥರವೇ ಇದೆಮೊಸಳೆ ಆಶ್ರುಗಳು ಮೋಸದಿ ಕರೆಯುತ್ತವೆ ಗಾಲಿಬ್ ಈ ಕುಂಬಾರನಿಗೂ ಕಂಬನಿಗೂ ಖಾಸಾ ದೋಸ್ತಿಯಿದೆಬೇಕೆಂದಾಗ ಬೊಗಸೆಗಟ್ಟಲೆ ದೊರೆಯುತ್ತವೆ ಗಾಲಿಬ್ ಎಮ್ಮಾರ್ಕೆ

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ​ಕೆಲವುನಂಬಿಕೆಗಳೇ ಹಾಗೆಕಣ್ಣು ಮುಚ್ಚಿನಡೆದಾಗಲೆಲ್ಲಾ..ಜೊತೆಗಿದ್ದೇಹೃದಯದ ಬಡಿತವನ್ನೇಅಡವಿಡುವ ಹಾಗೆ! ​ಕೆಲವುಕಣ್ಣುಗಳೇ ಹಾಗೆನೋಡು-ನೋಡುತ್ತಲೇಆಂತರ್ಯವನು ತಿವಿದುಅಗಿಯುವ ಹಾಗೆ ​ಕೆಲವುಬಂಧಗಳೇ ಹಾಗೆಹೊರಗಿನಿಂದರೇಷ್ಮೆಯ ನೂಲಿನಂತೆ..ಆದರೆಒಳಗೊಳಗೆಉರುಳಾಗಿ ಕಾಡುವ  ಹಾಗೆ! ​ಕೆಲವುನೆರಳುಗಳೇ ಹಾಗೆಬೆಳಕಿದ್ದಾಗಬೆನ್ನಿಗಂಟಿಕೊಂಡಿದ್ದು..ಕತ್ತಲಾಗುತ್ತಿದ್ದಂತೆಯೇಕಾಣದಂತೆ……. ಮಾಯವಾಗುವ ಹಾಗೆ! ​ಕೆಲವುಹಣ್ಣುಗಳೇ ಹಾಗೆಉಣ್ಣು-ಉಣ್ಣುವಾಗಲೇಒಂದು ಬದಿ ಸಿಹಿಮಗದೊಂದು ಬದಿ ಕಹಿಯ ಹಾಗೆ ​ಕೆಲವುಬಣ್ಣಗಳೇ ಹಾಗೆಮನದೊಳಗೆಕೊಳೆಯಿದ್ದರೂ ಹೊರಗೆನಗು-ನಗುತ್ತಲೇಪ್ರಪಾತಕ್ಕೆ ನೂಕುವ ಹಾಗೆ! ​ಕೆಲವುಹೆಣ್ಣುಗಳೇ ಹಾಗೆಮುದ್ದಿಸಿ ಮೈಮರೆಸುತ್ತಲೇನಿದ್ದೆಯಲ್ಲೇ ಮೆಲ್ಲಗೆಉಸಿರುಗಟ್ಟಿಸುವ ಹಾಗೆ! ​ಈ ಮಣ್ಣೂ ಸಹ ಹಾಗೆಯೇ…ತನಗೆ ಬೇಕೆಂದಾಗತಕ್ಷಣವೇ ಕರೆದುಅಪ್ಪಿಕೊಂಡು ಶಾಶ್ವತವಾಗಿಮಲಗಿಸಿಕೊಳ್ಳುವ ಹಾಗೆ! ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು” Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ”

ಕಾವ್ಯ ಸಂಗಾತಿ ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” ನಿನ್ನೆದೆಯ ಹಸಿ ಹಸಿ ಪ್ರೀತಿ ಒರತೆಸಿಂಚನವಾಗಿದೆ ಮನದ ಬುಗ್ಗೆಯಲಿ ಮತ್ತೆ ಕನಸು ಹೊತ್ತು ಸಾಗಿದೆನಿನ್ನಧರ ಮಧುರ ಮುತ್ತಿಗೆ ಮಿಡುಕಿದಂತಾಯಿತು ಎದೆಯ ವೀಣೆಯಾರು ನುಡಿಸಿದರೊ ಪ್ರೇಮ ರಾಗವ ತಲ್ಲಣದ ಮನದಲಿ ಕಡಲ ಭೋರ್ಗರೆತನಿನ್ನ ಬೆರಳ ಸ್ಪರ್ಶದ ಅಪ್ಪುಗೆಯ ಸಾಂತ್ವಾನ ಶೀತ ಗಾಳಿಯ ಪ್ರೀತಿಗೆ ನೆನಪಿನ ಕಂಬಳಿ ಹೊದ್ದು  ಬೆಚ್ಚನೆಯ ಮುತ್ತನಿಟ್ಟು ಮಲಗು ಅಪ್ಪಿಕೊಳ್ಳುವೆ ಕನಸಿನಲಿ  ಬೇಡ ಬಿಡು ಒಸರುವ ತೊರೆ ಪ್ರೀತಿ ಭೂತಗನ್ನಡಿಯ ಹುಸಿ ಪ್ರೇಮ ಎಂದೆಯಾ  ಮೆಚ್ಚಿಕೊಳ್ಳುವ  ಮನಸ್ಸಿಲ್ಲದಿದ್ದರೆ ಕೊಚ್ಚಿ ಹಾಕಿಬಿಡು ಭಾವವನ್ನು ಚುಚ್ಚಬೇಡ ಹಚ್ಚಿಕೊಂಡ ಎದೆಯ ದನಿಗೆಬಿಚ್ಚು ಮನಸ್ಸಿನ ತುಡಿತಕೆ ನಾ ಬರುವ ದಾರಿಗೆ ನಿರೀಕ್ಷೆಯ ಹೂಹಾಸುಬಂದೇ ಬರುವೆನು ಕ್ಷಣದಲ್ಲಿ ನಿನ್ನ ಹೃದಯ ಗೂಡಿಗೆ ಡಾ. ಮೀನಾಕ್ಷಿ ಪಾಟೀಲ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದುಃಸ್ವಪ್ನಗಳಿಗೆ ಹೆದರಿ ನಿದ್ದೆಮಾಡದಿದ್ದರೆ ಹೇಗೆ ಸಖಿಕಲ್ಲು-ಮುಳ್ಳಿಗೆ ಹೆದರಿ ಹೆಜ್ಜೆಯಿಡದಿದ್ದರೆ ಹೇಗೆ ಸಖಿ ಕತ್ತಲಲ್ಲೂ ಬೆಳಕನು ಹೊತ್ತು ಚಂದಿರ ಬರುವನಂತೆಕವಿದ ಇರುಳಿಗೆ ಹೆದರಿ ಕಣ್ತೆರೆಯದಿದ್ದರೆ ಹೇಗೆ ಸಖಿ ಆ ಮರುಭೂಮಿಯಲ್ಲೂ ಬುಗ್ಗೆ ಲಗ್ಗೆಯಿಡುವದಂತೆಬಿರುಬಿಸಿಲಿಗೆ ಹೆದರಿ ಹೊರಬರದಿದ್ದರೆ ಹೇಗೆ ಸಖಿ ಕಲ್ಲು ಉಳಿಯ ಪೆಟ್ಟು ಉಂಡು ಶಿಲೆಯಾಗುವದಂತೆಹಣೆ ಬರಹಕೆ ಹೆದರಿ ತಲೆಯೆತ್ತದಿದ್ದರೆ ಹೇಗೆ ಸಖಿ ಕುಂಬಾರನೆದೆ ಪಾತ್ರೆ ಸುಟ್ಟಷ್ಟೇ ಗಟ್ಟಿಯಾಗುವದಂತೆಕಡುಕಷ್ಟಗಳಿಗೆ ಹೆದರಿ ಎದುರಿಸದಿದ್ದರೆ ಹೇಗೆ ಸಖಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” ಅವಳುದಿನವೂ ಶಿಲುವೆಗೇರುತ್ತಾಳೆಸಂಸಾರ ಬಂಡಿಯ ನೊಗವ ಕತ್ತಿಗೆಬಿಗಿದುಕೊಂಡು. ಕತ್ತು ಬಗ್ಗಿಸಿಒಮ್ಮೆ ದೀರ್ಘ ಉಸಿರೆಳೆದು ಸುಧಾರಿಸಿಕೊಳ್ಳಲಾಗದಭಾರ ಹೊತ್ತು ಎಳೆಯುತ್ತಲೇ ಇದ್ದಾಳೆ ಬಂಡಿಯ ಅವಳಿಗೆಮೈ ತುಂಬಾ ಕೈಗಳು, ಕೈಗೊಂದರಂತೆ ಜವಬ್ಧಾರಿಯಮೊಳೆ ಹೊಡೆಯಲಾಗಿದೆ ಅದಕವಳ ತಕರಾರಿಲ್ಲ ಶತಮಾನಗಳಿಂದಅವಳ ದೇಹ ಮನಸ್ಸುಗಳ ಮೇಲೆಕ್ರೌರ್ಯ ಮೆರೆದವರನವಳು ಶಿಲುಬೆಗೇರಿಸುವಕಾಲ ಈಗ ಸನ್ನಿಹಿತವಾಗಿದೆ. ಭಾರತಿ ಅಶೋಕ್

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ “ನಾರಿ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಾರಿ” ನೀನೇಷ್ಟುಸಾಧಿಸಿದರೆನು ,ತಪ್ಪುತ್ತಿಲ್ಲವಲ್ಲ  ನಿನ್ನ ಮೇಲಿನ ದೌರ್ಜನ್ಯ . ನೀನೇಷ್ಟು ಓದಿದರೆನು , ನಿನ್ನ ಪಾಲಿನನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ. ನೀನ್ಯಾವ  ಅಧಿಕಾರ ಪಡೆದರೇನು ,ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ . ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ . ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,ನಿನಾಗಿರುವೆ ಮತ್ತೊಬ್ಬರ ಅಡಿಯಾಳು . ನೀ ಛಾಪು ಮೂಡಿಸಿದರೆನು ,ಅನ್ಯ ಗೃಹದಲ್ಲಿ ಕಾಲೂರಿ ,ನಿನಗೇ  ನೆಲೆ ಇಲ್ಲ  , ನೀ ಇರುವಲ್ಲಿ . ನೀನಾಗಿರುವೆ ಯಾವಾಗಲೂ ದ್ವಿತೀಯಳು ,ಆದರೆ  , ಆದ್ವಿತೀಯಳಾಗುವ ದಿನ ಬಂದೆ ಬರುವುದು ,  ಒಂದು ದಿನ ….. ——————— ಪರವೀನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ ಅವರ “ನಾರಿ” Read Post »

ಕಾವ್ಯಯಾನ

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ”

ಕಾವ್ಯ ಸಂಗಾತಿ ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” ಸನಿಹ ಬಾ ಮೌನವೆಲ್ಲ ತೊರೆದುಭಾವಗಳ ಪಥವನ್ನು ತುಳಿದುಒಲವಲ್ಲಿ ನಗುವನ್ನು ಕರೆದುಒಡಲನ್ನು ಸೇರು ಬಂಧ ಬೆಸೆದು ಬದುಕೊಳಗೆ ನೀನಿರಬೇಕು ಒಲವೆಹೃದಯದ ಕದ ತಟ್ಟು ಬೇಗ ಚೆಲುವೆತವಕಿಸುತಿಹುದು ಈ ನನ್ನ ಮನವೆಬಾಗಿಲಲ್ಲಿ ಕಾದು ನಿಂತಿಹೆನು ನೀ ನನ್ನ ಜಗವೆ ಕಣ್ಣ ಅಪ್ಪುವ ಕನಸುಗಳು ಬಳಿಯಿರಲುಆಸೆ ಬಯಕೆ ನಿತ್ಯ ಜೊತೆಯಿರಲುಇನ್ನೂ ಎಷ್ಟು ದಿನ ನೀನೊಂದು ತೀರದೇವರೇ ಗೀಚಿದ ಸಂಬಂಧವೇ ಸುಮಧುರ ನಮ್ಮಿಬ್ಬರ ಬಾಳ ಪಯಣ ಹೊರಡಲಿಸಂತೋಷ ತುಂಬಿರೋ ದಾರಿಯಲಿನನಸಿನ ರಥ ಮುಂದೆ ಮುಂದೆ ಸಾಗಲಿಎಡವದಿರುವ ಜೀವನದ ಪಥದಲಿ ಸತೀಶ್ ಬಿಳಿಯೂರು

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ”

ಕಾವ್ಯ ಸಂಗಾತಿ ಪೂರ್ಣಿಮಾ ಸಾಲೆತ್ತೂರು ” ದೀಪ”  ಹಬ್ಬದಲಿ ಹಚ್ಚೋಣ ಸಾಲು ದೀಪವ ಕವಿದ ಕತ್ತಲೆಯ ಓಡಿಸುವ ಜಗದ ರೂಪವ ದ್ವೇಷ ಅಸೂಯೆಯ ಉರಿಸುತ ತೋರಿಸೋಣ ಸಹಸ್ಪಂದನದ ಸಹಮತ  ಆಗಲಿ ನಿರಾಸೆಯ ಬಾಳಿಗೆ ಆಶಾದೀಪ ಬೆಳಗಿಸೋಣ ಬಾಳಲಿ ಸದ್ಗುಣಗಳ ಹೊಳಪ ಬಾಳ ಬಾಂದಳದಿ ಬೆಸೆಯಲಿ ಸೌಹಾರ್ದ ಭಾವ ಹೆಗಲಿಗೆ ಹೆಗಲು ಕೊಟ್ಟು ಮರೆಯೋಣ ನೋವ  ಅಜ್ಞಾನದ ಕತ್ತಲು ಕಳೆಯಲಿ ಮನದ ಕೊಳೆಯು ತೊಳೆದು ಹೋಗಲಿ ದೀಪವಾಗಿ ಹೊಳೆವ ಬೆಳಕಿನ ರೂಪ ಪ್ರತಿದಿನ ಹಚ್ಚೋಣ ನಂದಾದೀಪ ಪೂರ್ಣಿಮಾ ಸಾಲೆತ್ತೂರು

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್ (ಮಧುಸೂದನ್ ಸರ್ ಅವರ “ಖಾಲಿ ಮಾತಿನ ಜೋಳಿಗೆ” ಸಾಲಿನಿಂದ ಪ್ರೇರಿತ)ಭಾವನೆಗಳಿಲ್ಲದ ಮಾತಿನ ಜೋಳಿಗೆಜೊಳ್ಳಾದ ನಿನ್ನ ಮನಸಿನ ಜೋಳಿಗೆ ಪ್ರೀತಿಯೂ ನೀಡದ ಬಡತನ ನಿನಗೆಕರಗದೆದೆಯು ಕಡುಗಪ್ಪಿನ ಜೋಳಿಗೆ ಸಿರಿತನವಿಲ್ಲದ ಮನೆಗೆ ನೀ ಒಡೆಯನಗುವೂ ನೀಡದ ನಿನ್ನೆನಪಿನ ಜೋಳಿಗೆ ಅದೆಂತಹ ಬರಡು ಭೂಮಿ ನೀನುತೃಷೆಗೂ ಬರಗಾಲ ನಿನ್ನಿಲುವಿನ ಜೋಳಿಗೆ  ಬಾಳು ಬರಿದಾಗಿಸಿಕೊಂಡಳು ನಿನಗಾಗಿ ವಾಣಿಆದರೂ ಜಿನುಗದ ನಿನ್ನೊಲವಿನ ಜೋಳಿಗೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!”

ಕಾವ್ಯ ಸಂಗಾತಿ ಸುಮಾ ಗಾಜರೆ “ತಿಳಿಯಬೇಕಿದೆ  ಇನ್ನೂನು!”     ಹೇಳಬೇಕಿದೆ ಮನಕೆ ಇನ್ನೇನೋ ತಿಳಿಯಬೇಕಿದೆ ನನಗೆ ಇನ್ನೂನು ll ಕಾಪಿಟ್ಟ ಕನಸುಗಳಲಿಕರಗಿ ಹೋಗುವ ಮುನ್ನಬರುವ ನಾಳೆಗಳಲಿಕಳೆದು ಜಾರುವ ಮುನ್ನಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಉಸಿರಿಗೆ ಹಸಿರಾಗಿಹಚ್ಚ ಹಸಿರಾಗುವಂತೆಜೀವಕ್ಕೆ ಸೆಲೆಯಾಗಿಒಲವ ಒರತೆಯಂತೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಎಲ್ಲ ಇಲ್ಲಗಳ ಸರಿಸಿಇರುವುದನ್ನೇ ಸಂಭ್ರಮಿಸಿನೋವು ನೀಗಿಸಿ ನಲಿವ ಸುರಿಸಿಅಡಿಗಡಿಗು ದುಡಿವ ಮನಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಬೇಕುಗಳ ಬೆನ್ನೇರಿ ಭ್ರಮೆಯಲಿಬಂಧಿಯಾಗಿ ಇರುವನ್ನೆ ಮರೆತುನೆಮ್ಮದಿಗಾಗಿ ನಗುವ ತೊರೆದುಹೆಜ್ಜೆಗುರುತು ಹುಡುಕುವ ಹೃದಯಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಆಂತರ್ಯವರಿತ ಮನಕೆ ಗೊತ್ತುಪ್ರೀತಿಯೊಂದು ಹವಳದಾ ಮುತ್ತುಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತುಒಲವೆಂದು ಪೂಜಿಸಿದವರಿಗದು ದಕ್ಕೀತುಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll      ಸುಮಾ ಗಾಜರೆ     

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!” Read Post »

You cannot copy content of this page

Scroll to Top