ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓ ಕವಿ ನಾಯಕ ಕುವೆಂಪು
ನೀವ ಬರೆದ ಕವನಗಳ ಇಂಪು
ನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪು
ಪಸರಿಸಿದೆ ಹಾವ ಭಾವಗಳ ಕಂಪು|

ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|
ಪದಪುಂಜ ನಾದದ ‘ಕೊಳಲು’ಗೆ
ಮೊಳಗಿತು ‘ಪಾಂಚಜನ್ಯ’|
ಕನ್ನಡವಾಯಿತು ಧನ್ಯ|

ಕನ್ನಡ ನಿಸರ್ಗದಲ್ಲಿ
ಮೂಡಿಬಂದ ‘ಪಕ್ಷಿ ಕಾಶಿ’|
ಕನ್ನಡ ಮಾತೆಯ ಮಡಿಲಲ್ಲಿ
ಬೆಳದ  ‘ಷೋಡಶಿ’

ಕನ್ನಡ ಸಾಗರದ ಆಳದಿಂದ
ಹೊರಬಂದ ಮುತ್ತು|
ನೀಡಿದ್ದು ನಮ್ಮಗೆಲ್ಲ
ಶಾಶ್ವತ ಸಾಹಿತ್ಯ ಸೊತ್ತು|

ಅಮೋಘ ಸೇವೆಯ ಫಲ
ದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|
ತಾವು ಎಂದೆಂದು ಮರೆಯಾಲಗದ
ಕನ್ನಡ ಕುಲಕೋಟಿಯ ಆಸ್ತಿ |  


About The Author

Leave a Reply

You cannot copy content of this page

Scroll to Top