ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಶೂನ್ಯದ ಸವಿ” ನಿದ್ದೆ ಸುಲಭದಿ ಒಲಿದರೆ ವರಕಳೆವುದು ಬಾಳಿನ ದಿನದ ಭಾರಕನಸ ಕಂಗಳಿಗೆ ಈತ ಸರದಾರಮಂಜಿನಷ್ಟು ಈಗ ಮನ ಹಗುರ. ಕುಳಿತಲ್ಲೇ ತೂಕಡಿಕೆಯ ತಡವರಿಕೆಬೇಸರ ತೀರದ ಬವಣೆಯ ಹರಕೆತಂಗಾಳಿಯ ಸವಿಯ ಬೀಸಣಿಕೆಇರದು ಸಂಕೋಲೆಗಳ ಎಣಿಕೆ. ಜಗವ ಮರೆತು ಶೂನ್ಯವಾಗಿಕಂಡ ಕಲ್ಪನೆಯ ಮಗುವಾಗಿಹಿತವಾಗಿ ಉಸಿರನೇರಿ ಸಾಗಿರೋಗಿಯೂ ಆಗುವನು ಭೋಗಿ. ಕಾಯಕ್ಕಿರಲಿ ವಿರಾಮದ ಜಾಗನಿರಂತರತೆ ತರುವುದು ರೋಗಅಲ್ಪಕಾಲದ ಈ ವೈಭೋಗಸಿಗದಿದ್ದರೆ ಇರದು ಸುಯೋಗ. ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ”

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಜಗದ ಕವಿ” ಓ ಕವಿ ನಾಯಕ ಕುವೆಂಪುನೀವ ಬರೆದ ಕವನಗಳ ಇಂಪುನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪುಪಸರಿಸಿದೆ ಹಾವ ಭಾವಗಳ ಕಂಪು| ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|ಪದಪುಂಜ ನಾದದ ‘ಕೊಳಲು’ಗೆಮೊಳಗಿತು ‘ಪಾಂಚಜನ್ಯ’|ಕನ್ನಡವಾಯಿತು ಧನ್ಯ| ಕನ್ನಡ ನಿಸರ್ಗದಲ್ಲಿಮೂಡಿಬಂದ ‘ಪಕ್ಷಿ ಕಾಶಿ’|ಕನ್ನಡ ಮಾತೆಯ ಮಡಿಲಲ್ಲಿಬೆಳದ  ‘ಷೋಡಶಿ’ ಕನ್ನಡ ಸಾಗರದ ಆಳದಿಂದಹೊರಬಂದ ಮುತ್ತು|ನೀಡಿದ್ದು ನಮ್ಮಗೆಲ್ಲಶಾಶ್ವತ ಸಾಹಿತ್ಯ ಸೊತ್ತು| ಅಮೋಘ ಸೇವೆಯ ಫಲದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|ತಾವು ಎಂದೆಂದು ಮರೆಯಾಲಗದಕನ್ನಡ ಕುಲಕೋಟಿಯ ಆಸ್ತಿ |        ಶ್ರೀದೇವಿ ಗುಮ್ಮಗೋಳ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ” Read Post »

You cannot copy content of this page

Scroll to Top