ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

   ಅಪ್ಪನಂತೆ ಹಿರಿಯನಾಗಿ
  ಸಂತೆ ಪೇಟೆ ಮಾಡುವೆ
  ಕಿಸೆಯ ತುಂಬ ನೋಟು ತುಂಬಿ
  ಡೌಲು ಮಾಡಿ ನಡೆಯುವೆ.

ಕಾಯಿಪಲ್ಲೆ ಉಪ್ಪು ಎಣ್ಣೆ
ಬೆಲ್ಲ-ಗಿಲ್ಲ ತರುವೆನು
 ಚೀಲ-ಗೀಲ ಎಲ್ಲ ಕೂಡಿ
 ಹೆಗಲ ಮೇಲೆ ಹೊರುವೆನು..

 ಅಜ್ಜಗೆಂದು ಎಲೆ-ಅಡಿಕೆ
 ಕಟ್ಟಿಕೊಂಡು ಬರುವೆನು
 ಅವ್ವಗೊಂದು ಮಲ್ಲಿಗೆಯ
 ಹೂವ ಮಾಲೆ ತರುವೆನು..

 ಶಾಲೆಗೆ ಹೋಗಲೆಂದು
 ಪಾಟಿ-ಬಳಪ ತರುವೆನು
 ಗುರುಗಳು ಹೇಳಿದಂತೆ
 ರ-ಠ-ಈ-ಕ ಬರೆವೆನು..


About The Author

4 thoughts on “ʼಸಂತೆಗೆ ಹೋಗುವೆʼ ಮಕ್ಕಳ ಪದ್ಯ-ಹಮೀದಾ ಬೇಗಂ ದೇಸಾಯಿ.”

    1. ಸಂತೆಗೆ ಹೋಗುವೆ ಕವನ ಕೃತಿಚೌರ್ಯ ಆಗಿದೆ ಮೂಲ ಗುರುಪಾದ ಸ್ವಾಮಿ ಹಿರೇಮಠ ಅವರ ಹೂದೋಟ ಕವನ ೧೯೬೧ ಸಂಕಲನದ ಪದ್ಯ ಮತ್ತು ಇದು ಸಾಹಿತ್ಯ ಅಕೆಡೆಮಿ ಬಹುಮಾನಿತ ಕೃತಿ ಎರಡು ನುಡಿ ಯಥಾವತ್ತಾಗಿ ಬರೆದು ಮುಂದೆ ಎರಡು ನುಡಿ ಜೋಡಿಸಿ ಕೃತಿಚೌರ್ಯ ಎಸಗಿದ್ದಾರೆ

Leave a Reply

You cannot copy content of this page

Scroll to Top