ರಾಶೇ ಬೆಂಗಳೂರು ಅವರಕವಿತೆ ʼಬದುಕಿನುಯ್ಯಾಲೆʼ

ತೂಗುಯ್ಯಾಲೆಯ
ಹಂಸಕಲ್ಪದಲಿ
ಶಿರವನೊಲಿಕೆ ಬೇಡುವೆ
ಓ ಮಹಾ ಶಿವನೆ..

ಪ್ರಭಾತ ಲೀಲೆಯ
ದಿವ್ಯ ಸನ್ನಿದಾನದಲಿ
ನನ್ನ ಮರೆತು ಬಿಡುವೆ
ಹರಹರ ಮಹಾದೇವನೆ..

ಬದುಕುಯ್ಯಾಲೆಯ
ಚದುರಂಗದಾಟದಲಿ
ಸೋತು ಹೋಗಿರುವೆ
ದೇವ ಮಹಾ ಮಹಿಮನೆ..

ನೈಜ ಕಲ್ಪನೆಯ
ಆವಾಹನೆಯಲಿ
ಸಿಲುಕಿ ಒದ್ದಾಡುತ್ತಿರುವೆ
ಎಲ್ಲಿರುವೆ ಓ ದೇವರ ದೇವನೆ..

Leave a Reply