
ಕಾವ್ಯ ಸಂಗಾತಿ
ಗೀತಾ.ಜಿ.ಎಸ್
“ಬರಡಾಗುತಿದೆ ಭೂಮಿ”

ಬರಡಾದಳೇ ಭೂಮಿ ತಾಯಿ
ಪರಿತಪಿಸುತ್ತಿರುವಳು ಕರುನಾಡ ಮಾಯಿ
ಕಣ್ಮರೆಯಾಗುತ್ತಿರುವಳು ವನದೇವಿ
ಮರೆಯಾಗುತ್ತಿರುವವು ಹಣ್ಣು ಕಾಯಿ..
ಗೊಡ್ಡಾದ ಹಸುವಿಗೆ ಕವಡೆ ಕಾಸಿನ ಬೆಲೆ
ನೀರಿಲ್ಲದ ಬಾವಿಗೆ ಎಲ್ಲಿದೆ ಸೆಲೆ
ಕೃಶವಾದ ಕಾಯಕ್ಕೆ ಏನೂ ಇಲ್ಲ ನೆಲೆ
ಬೆಳಕಿರದ ಚಂದ್ರನಿಗೆ ಅಮಾವಾಸ್ಯೆಯ ಕಲೆ
ಹೆಚ್ಚಾಯಿತು ಜನಸಂಖ್ಯಾ ಸ್ಫೋಟ
ಆಹಾರಕ್ಕಾಗಿ ಜನಗಳ ಹೊಯ್ದಾಟ
ವಿಜ್ಞಾನಿಗಳಿಂದ ಸಂಶೋಧನೆಯ ಪಾಠ
ಭುವಿಯ ಮೇಲೆ ನಂಜು ಗೊಬ್ಬರದ ಚೆಲ್ಲಾಟ
ಬಂಜರು ಭೂಮಿಯಲ್ಲಿ ಬೆಳೆಯಿತು ಪೈರು
ಹುಳು ಹುಪ್ಪಟೆಗಳ ಕಾರುಬಾರು
ಪೈರಿನ ಮೇಲೆ ಕ್ರಿಮಿನಾಶಕದ ದರ್ಬಾರು
ಪರಿಸರವಾಯಿತು ವಿಶದ ತವರೂರು
ಮಳೆ ಇಲ್ಲ ಬೆಳೆ ಇಲ್ಲ
ಅತಿವೃಷ್ಟಿ ಅನಾವೃಷ್ಟಿ ಕಾಡುತ್ತಿದೆಯಲ್ಲ
ಪ್ರಳಯದ ನೋಟ ಕಣ್ಣಿಗೆ ಕಾಣುತ್ತಿದೆಯಲ್ಲ
ಭೂಮಿ ಬರಡಾಗಲು ನೀ ಕಾರಣವಾದೆಯಲ್ಲ..
ಗೀತಾ.ಜಿ.ಎಸ್

ಸುಂದರ ಕವನ ಗೀತಾ ಜಿ ಎಸ್
Lovely
ಬುವಿಯ ಪಾಡು- ವಾಸ್ತವದ ಕವನ