ಕಾವ್ಯ ಸಂಗಾತಿ
ಕಳಕಪ್ಪ ಜಲ್ಲಿಗೇರಿ
ʼಭಾವದ ಕುಲುಮೆಯ ಕನಸುʼ

ಕವಿತೆ ಹುಟ್ಟುತಿದೆ ನನ್ನೊಳಗ
ದಟ್ಟ ಅಡವಿಯ ಅಂಗಳದೊಳಗ
ಕಣ್ಣು ಮುಚ್ಚಿ ಕಣ್ಣು ತೆರೆಯದ್ರೊಳಗ
ಸಣ್ಣ ಮಳೆ ಹನಿಯಂತ್ತೆ ಹಿಡಿಯಿತು ಜರಡಿಯೊಳಗ…//
ಕವಿತೆ ತಟ್ಟುತಿದೆ ನನ್ನೆದೆಯೊಳಗ
ದಟ್ಟ ಜನ ಸಾಗರದ ಮಧ್ಯೆದೊಳಗ
ಕಿವಿ ಮುಚ್ಚಿ ಕಿವಿ ತೆರೆಯದ್ರೊಳಗ
ಸಣ್ಣ ಮಳೆ ಹನಿಯಂತ್ತೆ ಹಿಡಿಯಿತು ಝಂಕಾರದೊಳಗ…//
ಕವಿತೆ ಕಟ್ಟುತಿದೆ ನನ್ನ ಮನೆಯೊಳಗ
ದಿಟ್ಟ ಮಾತುಗಳನಾಡುವ ಹೆಂಡತಿಯ ಮಾತಿನೊಳಗ..
ಈ ಕವಿಯನ್ನ ಮೆಚ್ಚಿ ಕವಿತೆಯನ್ನ ಓದುವದ್ರೊಳಗ…
ಸಣ್ಣ ಮಳೆ ಹನಿಯಂತ್ತೆ ಸಿಡಿಯುತ್ತಿವೆ ಪದಗಳೊಳಗ…//
ಕವಿತೆ ಕರೆಯುತಿದೆ ನನ್ನನ್ನ ಇಂತ್ತ ಮಳೆಯೊಳಗ..
ದಟ್ಟವಾಗಿ ಕವಿದ ಮಳೆ ಮೋಡ ಗಾಳಿಯೊಳಗ..
ಈ ಕವಿಯು ಕಚ್ಚಿ ಹಿಡಿದ ಕಾವ್ಯದ ನೂವಿನೊಳಗ…
ಸಣ್ಣ ಮಳೆ ಹನಿಯನೆಲ್ಲಾ ತಡೆದು ನಿಲ್ಲಿಸುವದ್ರೊಳಗ…
ಜೋರಾಗಿ ಸುರಿಯಿತು ಕವಿದಂತ್ತ ಕಾರ್ಮೊಡವು ಮಳೆಯಾಗಿ…
ಈ ಕವಿಯ ಮನಸು ತಿಳಿಯಾಗಲೆಂದು
ಈ ಕವಿಯ ಕನಸು ಸಿಹಿಯಾಗಲೆಂದು
ಈ ಕವಿಯ ಸೊಗಸು ಹೂವಾಗಲೆಂದು
ಆ ಹೂವಿಗೆ ನೂವಾಗದಿರಲೆಂದು..
ಈ ಕವಿತೆ ಹುಟ್ಟುತಿದೆ ನನ್ನೊಳಗ
ಕಳಕಪ್ಪ ಜಲ್ಲಿಗೇರಿ

ಇಂದಿನ ದಿನ ಸಂಗಾತಿ ಸಾಹಿತ್ಯ ಪತ್ರಿಕೆಯೊಳಗ ನನ್ನ #ಭಾವದ #ಕುಲುಮೆಯ #ಕನಸು ಎಂಬ ಕವನವನ್ನ ಪ್ರಕಟಿಸಿದಕ್ಕೆ ಹೃದಯ ಪೂರ್ವಕ ಧನ್ಯವಾದಗಳ್ಳನ್ನ ಅರ್ಪಿಸುತ್ತೆನೆ….!!
ಸಂಪಾದಕರಿಗೆ ಧನ್ಯವಾದಗಳು