ಎಂ.ಆರ್. ಅನಸೂಯ ಅವರ ಕವಿತೆ-ಹೀಗಿದ್ದ ಬುದ್ಧ

ಬುದ್ಧ ಬದ್ಧನಾಗಿದ್ದು
ತಾನು ಕಂಡ ಇಹಕ್ಕೆ
ಪ್ರೀತಿ ಜಗದ ಚೈತನ್ಯವೆಂದ
ಪ್ರೀತಿಯ ಶಕ್ತಿಯನರಿತಿದ್ದ.
ಸತ್ಯದ ನಿಷ್ಟುರತೆಯನರಿತವ
ಕಹಿಸತ್ಯವನರಗಿಸಿದ್ದ ತಾಯಂತೆ
ಕ್ಷಮೆಯ ಬಗ್ಗೆ ನಂಬಿಕೆಯಿಟ್ಟಿದ್ದ
ಕ್ಷಮಿಸಿ ದ್ವೇಷವ ಮಣಿಸಿದ್ದ
ಧರ್ಮದ ಬಗ್ಗೆ ಮಾತಾಡಲಿಲ್ಲ
ಒಳಿತಿನ ದಾರಿಯ ತೋರಿದ
ದುರಾಸೆಯ ಗೀಳನ್ನು ಕಂಡಿದ್ದ
ಸರಳ ಬದುಕು ಬದುಕಿದ
ತನ್ನ ತಾನು ಗೆದ್ದವ
ನಿಮ್ಮನ್ನು ನೀವು ಗೆಲ್ಲಿರೆಂದ
ನಾ ಹೇಳುವೆ ನೀವು ಮಾಡಿರೆನಲಿಲ್ಲ
ನನ್ನೊಡನೆ ಕೈಜೋಡಿಸಿರೆಂದ


Leave a Reply

Back To Top