ಎ.ಎನ್.ರಮೇಶ್. ಗುಬ್ಬಿ.ಅವರ ಕವಿತೆ,ಬರಡು.

ನನ್ನೆದೆಯ ನೆಲಕೆಲ್ಲ
ಡಾಂಬರು ಬಳಿದು
ಬರಡಾಗಿಸಿರುವೆ ಗೆಳೆಯ.!

ಅದೆಷ್ಟೇ ಒಲವಧಾರೆ
ಸುರಿದರೂ ಎದೆಯ
ಆಳಕಿಳಿಯದಂತೆ.!

ಮತ್ತೆಂದೂ ಹೃದಯ
ಹಸಿರಾಗದಂತೆ…
ಭಾವ ಬಸಿರಾಗದಂತೆ.!

ಸುರಿವ ಪ್ರೇಮಧಾರೆ
ಆವಿಯಾಗಿ ನಿಟ್ಟುಸಿರಾಗಿ
ಹೊರಬರಬೇಕಷ್ಟೆ.!!


Leave a Reply

Back To Top