ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ಬರಡು.

ನನ್ನೆದೆಯ ನೆಲಕೆಲ್ಲ
ಡಾಂಬರು ಬಳಿದು
ಬರಡಾಗಿಸಿರುವೆ ಗೆಳೆಯ.!
ಅದೆಷ್ಟೇ ಒಲವಧಾರೆ
ಸುರಿದರೂ ಎದೆಯ
ಆಳಕಿಳಿಯದಂತೆ.!
ಮತ್ತೆಂದೂ ಹೃದಯ
ಹಸಿರಾಗದಂತೆ…
ಭಾವ ಬಸಿರಾಗದಂತೆ.!
ಸುರಿವ ಪ್ರೇಮಧಾರೆ
ಆವಿಯಾಗಿ ನಿಟ್ಟುಸಿರಾಗಿ
ಹೊರಬರಬೇಕಷ್ಟೆ.!!
ಎ.ಎನ್.ರಮೇಶ್. ಗುಬ್ಬಿ
