ಸಾಧನೆ/ಸಾಧಕರು ಎಂಬೆಲ್ಲ ವಿಚಾರಗಳು ಈಗೀಗ ಹೊಸ ಅಲೆಯ ರೂಪದಲ್ಲಿ ಹೊರಹೊಮ್ಮುತ್ತಿರುವುದು ನವೋಲ್ಲಾಸದ ಪ್ರತಿರೂಪವೆಂದರೆ ತಪ್ಪಾಗದು.ಒಂದು ಸೂಜಿಯು ಬದುಕಿಗೆ ಅಷ್ಟೇ ಮಹತ್ವ,ಒಂದು ಒಳಕಲ್ಲು ಕೂಡ ಅಷ್ಟೇ ಮುಖ್ಯ… ಹಾಗಾದರೆ ಇಂದು ನಾವು ಧರಿಸುವ ಉಡುಪುಗಳು‌ ಎಷ್ಟು ಮಹತ್ವ ಹಾಗೂ ಅದರ ಇತಿಹಾಸ ಕೂಡ ವಿಸ್ಮಯ!. ಹಸಿ ಮಾಂಸದಿಂದ ಬೆಂದ ಮಾಂಸಕ್ಕೆ ಒಂದು ಕಿಡಿ ಬೆಂಕಿ ಇಡೀ ಬದುಕಿನ ರೂಪರೇಷೆಯನ್ನೆ ಬದಲಿಸಿದ್ದು ನಮಗೆಲ್ಲ ತಿಳಿದಿರುವ ಸಂಗತಿ.ಆದರೂ,ಜಗತ್ತು ಇನ್ನೂ ಹೊಸದನ್ನು ಕಂಡುಕೊಳ್ಳುವತ್ತ ದಾಪುಗಾಲು ಹಾಕುತ್ತ ಇರುವ ಸಮುದಾಯದ ದಂಡು ಒಂದೆಡೆ!.ಇಂತಹುದೇ ವಿಷಯ ಬೇಕಂದಿಲ್ಲ,ಯಾವ ವಿಷಯವನ್ನು ಹೇಗೆ ನೋಡುತ್ತೆವೆ ಅದರ ಒಳರಹಸ್ಯವನ್ನು ಭೇದಿಸಲು ಹಗಲು ರಾತ್ರಿ ಹೆಣಗಾಡುವ ಜ್ಞಾನಿಗಳ ಗುಂಪು ಒಂದೆಡೆ.ಅದಕ್ಕೆ ಅಲ್ಲವಾ,ಕಣ್ಣ ರೆಪ್ಪೆಯ ಒಳಾಂಚು ಸರಿಸುವ ಕ್ಷಣಗಳು ವಿಚಿತ್ರವಾದರೂ ವಿಸ್ಮಯದ ಮೊದಲ ಹೆಜ್ಜೆಯದು.

೯೯% ಅಂಕ ಪಡೆದ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಯತ್ನ ಮಾಡಿರುವುದು ಆಘಾತಕಾರಿ,೧೦೦% ಪ್ರತಿಶತ ಪಡೆದರೂ ತೃಪ್ತಿ ಇಲ್ಲ ಅಂದ ಮೇಲೆ ಇನ್ನೇನು ಸಾಧನೆಮಾಡಿಯಾರು? ಅತೃಪ್ತ ಮನಸ್ಸಿನ ತಂದೆ ತಾಯಿಗಳು ಮಕ್ಕಳ ಮನೋಬಲವನ್ನು ರ್ಯಾಂಕಿಗೆ ನಿಲ್ಲಿಸಿದ್ದು,Rank ಬರದಿದ್ದರೆ ಆ ಮಗು ಮೊದಲು ತಂದೆತಾಯಿ ಮುಂದೆ ಸೋತಂತೆ,ಭಯದಿಂದ ಸಾವಿನತ್ತ ಮುಖ ಮಾಡುತ್ತಿರುವುದಕ್ಕೆ ಯಾರು ಹೊಣೆ?.ನಾವೆಲ್ಲರೂ ಕಲಿಯುವಾಗ ೩೫% ಪ್ರತಿಶತ ಬಿದ್ದರೆ ಸಾಕು,ಒಟ್ನಲ್ಲಿ ಪಾಸಾದರೆ ಸಾಕೆಂದು ಕಂಡ ಕಂಡ ದೇವರಿಗೆ ಕೈಮುಗಿದು ಹರಕೆ ಹೊತ್ತ‌ ಸಮಯವದು.ಫೇಲಾದರೆ ಎರಡು ಒದಿಕೆ ಅಷ್ಟೇ  ಮಾಮೂಲು, ಮಾನಸಿಕ ಹಿಂಸೆ ಇಲ್ಲ.ಮತ್ತೆ ಪರೀಕ್ಷೆ ಕಟ್ಟಿ ಪಾಸು ಮಾಡಿಕೊಳ್ಳಲು ತಾಕೀತು.ಆದರೆ ಈಗ ಸಮಯ ಬದಲಾಗಿದೆ.ಮಕ್ಕಳು ಮಿಷನ್ ಅಥವಾ ರೋಬೋಟ್ ತರ.ಯಾವುದರಲ್ಲೂ ತೃಪ್ತಿ ಇಲ್ಲ..ಅತೃಪ್ತ ಮನಸ್ಸುಗಳು.ತಾವು ಜೀವನದಲ್ಲಿ ನಂಬರ ಬರದಿದ್ದರೂ ಮಕ್ಕಳು ಬರಬೇಕು…ಬರದಿದ್ದರೆ ? ಧರ್ಮ ಸಂಕಟ.ಜಗತ್ತಿನ ಓಟದಲ್ಲಿ ತಮ್ಮನ್ನು ತಾವು ಸಿದ್ದಪಡಿಸುವ ಭರದಲ್ಲಿ ಮಗುವಿನ ತಾರ್ಕಿಕ ಚಿಂತನೆಯನ್ನು ಕೊನೆಗಾಣಿಸಲು ಹೊರಟರೆ ಭಾವಿ ಭವಿಷ್ಯದ ಮುಂದಿನ ನಡೆ ಏನು ಎಂಬ ಪ್ರಶ್ನೆ ಕಾಡದಿರದು.ಎಷ್ಟೋ ಮಕ್ಕಳು ಪರೀಕ್ಷೆಯ ಫಲಿತಾಂಶಕ್ಕೆ ಹೆದರಿ ಮನೆಬಿಟ್ಟು ಹೋದ ಉದಾ.ಸಾಕಷ್ಟಿವೆ.

ಒಂದು ಹೆಣ್ಣು ಮಗು ೨೪ ಕಿ.ಮೀ ಸೈಕಲ್ ತುಳಿದು ಶಾಲೆಗೆ ಹೋಗುವಂತಹುದು,ಒಂದು ಮಗುವಿನ ಸಲುವಾಗಿ ರೈಲು ಓಡುತ್ತಿರುವುದು.ಒಬ್ಬ ತಂದೆ ತನ್ನ ಮೂವರು ಮಕ್ಕಳನ್ನು ಶಾಲೆಗೆ ೩೦ ಕಿ.ಮೀ ಕರೆತಂದು ಪುನಃ ಶಾಲೆ ಮುಗಿದ ಮೇಲೆ ಮನೆಗೆ ಕರೆತರುವ ಕಾಯಕ…ತಂದೆಯ ದುಡಿಮೆ ಏನು? ಶಿಕ್ಷಣದ ಮಹತ್ವ ಬಲ್ಲವನೆ ಬಲ್ಲ.
ಕಲಿಕೆ ಜೀವನದ ದಿಕ್ಕನ್ನೇ ಬದಲಿಸುವುದು.ಮಗುವಿನ ಸಾಮರ್ಥ್ಯದ ಮೇಲೆ ಅವಲಂಬನೆ.ಮನೆಯ ವಾತಾವರಣ ಬಡತನವಿದ್ದರೂ,ಕಲಿಗೆ ಪ್ರೋತ್ಸಾಹ ಇದ್ದರೆ ಸಾಕು ಪ್ರತಿಭೆ ಅರಳಲು ಸಾಧ್ಯ!. ಮಗು ಕೀ ಕೊಟ್ಟ ಕೀಲು ಗೊಂಬೆಯಲ್ಲ.ಅದಕ್ಕೂ ಮನಸ್ಸಿದೆಯೆಂಬುದನ್ನು ಪೇರೆಂಟ್ಸ್ ಅರ್ಥೈಸಿಕೊಳ್ಳಬೇಕು.ಎಲ್ಲ ಮಕ್ಕಳು ಎಲ್ಲವನ್ನೂ ಸಾಧಿಸಲು ಅಸಮರ್ಥರು.ಅವರ ಇಚ್ಛಾಶಕ್ತಿ ಅನುಸರಿಸಿ ಫಲ ನಿರ್ಧಾರ!.
ಪುಟ್ಟ ಮಗು ಮೊಬೈಲ್ ಕೊಡಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಷಾದನೀಯ;. ಮಕ್ಕಳ ಹಠಕ್ಕೆ ಮಣಿದು ಅಥವಾ ತಮ್ಮ ಕೆಲಸಕ್ಕೆ ತೊಂದರೆಯಾಗದಿರಲೆಂದು ಸುಮ್ಮಸುಮ್ಮನೆ ರೂಢಿ ಮಾಡಿದ ಗೀಳು ಪ್ರಾಣವನ್ನೇ ಬೀಡುವಷ್ಟರ ಮಟ್ಟಿಗೆ ಪರಿಣಾಮ ಬೀರಿದೆಯೆಂದರೆ ಎಚ್ಚೆತ್ರುಕೊಳ್ಳಬೇಕಾಗಿದ್ದು ಯಾರು? ಎಲ್ಲವೂ ಒಳ್ಳೆಯದು ಆದರೆ ಎಷ್ಟು ಬೇಕು ಅಷ್ಟನ್ನು ಮಾತ್ರ ಬಳಸಿದರೆ ಮಾತ್ರ ಸೂಕ್ತ.. ಅದನ್ನು ತಿಳಿಹೇಳುವವರಾರು? ಬಡತನ ಕಷ್ಟ ಸಹಿಷ್ಣುತೆಯನ್ನು ಕಲಿಸುತ್ತೆ ಅಂತಾರೆ…ಬಡತನ ಜೀವನ ರೂಪಿಸಲು ಪೂರಕವಾಗಿರಬೇಕೆ ಹೊರತು ಮಾರಕವಾಗಿರಬಾರದು.ಸಾಧಕ ಎಂದಿಗೂ ಸಮಾಜದ ಘಾತುಕನಾಗಬಾರದು.ದೇಶದ ಗೌರವಕ್ಕೆ ಚ್ಯುತಿ ತರುವಂತಹ ಸಾಧನೆ ಯಾವುದಕ್ಕೆ ಸಮ?. ಸಮಾಜದ ಒಳಿತಿಗೆ ದಾರಿದೀಪವಾಗುವ ಸಾಧನೆ ಗೌರವಿಸುವಂತಹುದು.ಮಕ್ಕಳಲ್ಲಿ ಇಂತಹ ಭಕ್ತಿ ಭಾವ ಗೌರವ ಬಿತ್ತುವುದು ಅನಿವಾರ್ಯತೆ ಹಿಂದಿಗಿಂತ ಹೆಚ್ಚು ಪ್ರಸ್ತುತವಿದೆ.

“ಯು.ಪಿ.ಎಸ್.ಸಿ ಫಲಿತಾಂಶ ಪ್ರಕಟ”. ಊಹೆಗೂ ಮೀರಿದ ಸಾಧಕರು ನಮ್ಮ ಮುಂದೆ!. ಅವರ ಛಲ ಹಾಗೂ ಹಠ ಕನಸನ್ನು ನನಸು ಮಾಡಲು ಸಾಧ್ಯವಾಯಿತು. ಪ್ರತಿಯೊಬ್ಬ ಸಾಧಕರ ಹಿಂದೆ ರೋಚಕ ಕತೆ,ಮನೆಯ ಸ್ಥಿತಿ ಗತಿ ಎಲ್ಲವೂ ಅವರ ಸಾಧನೆಯ ಮೆಟ್ಟಿಲನ್ನು ಹತ್ತಿ ಇತರರಿಗೆ ಮಾದರಿಯಂತೆ ಕಂಡುಬಂದಿರುವುದು ಸತ್ಯ ಕೂಡ!. ಅಂತಹುದೇ ಒಂದು ಹಿನ್ನೆಲೆ ನನಗೆ ಆಶ್ಚರ್ಯ ಹಾಗೂ ಹಠ ಇಷ್ಟವಾಗಿದ್ದು.’ಕಳೆದು ಹೋದ ಮೊಬೈಲ್‌ ಬಗ್ಗೆ ಪ್ರಕರಣ ದಾಖಲಿಸಲು;,ದೂರು ನೀಡಲು ಪೋಲಿಸ್ ಠಾಣೆ ಹೋದ ಒಬ್ಬ ಸಾಮಾನ್ಯ ಯುವಕನಿಗೆ ದೂರು ದಾಖಲಿಸಲು ಸಹಕರಿಸದ ಪ್ರಸಂಗ ಕಳೆದುಕೊಂಡವರ ದುಃಖಕ್ಕೆ ಬೆಲೆ ಕೊಡದವರ ಬಗ್ಗೆ ಅಸಹನೆ ಹೊಂದಿದ್ದ ಯುವಕ ಛಲಹೊತ್ತು,ಶಪತ ಮಾಡಿ,ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ  ಐ ಎ.ಎಸ್ ಆಫೀಸರ್ ಹುದ್ದೆ ಅಲಂಕರಿಸುವ ಹಂತಕ್ಕೆ ಬೆಳೆದು ನಿಂತಿರುವುದು ಮತ್ತು  ಕುರಿಕಾಯುವ ಕುಟುಂಬದಲ್ಲಿ ಹುಟ್ಟಿ ಒಂದ ಚೂರು ಅಹಂ ಇಲ್ಲದೆ, ಸರಳ ವ್ಯಕ್ತಿ ನಿಗರ್ವಿಯುವಕ ಆಯ್ಕೆ ಎಲ್ಲರಿಗೂ ಒಂದು ನಿದರ್ಶನ!.”ಬೀರಪ್ಪ ಡೋಣಿ”ಯು.ಪಿ.ಎಸ್.ಸಿ.೫೫೧ ನೇ ಸ್ಥಾನ “ಪಡೆದ
ಫಲಿತಾಂಶ ಬಂದಾಗ ಆತ ಕುರಿಕಾಯತ್ತಿರುವುದು ಅಲ್ಲಿಗೆ ಬಂದು ಎಲ್ಲರೂ ಸಂಭ್ರಮಿಸಿದ್ದು  ಅದಕ್ಕಿಂತ ಮತ್ತೇನು ಬೇಕು ಬದುಕಿಗೆ!.” ವಿದ್ಯೆ ಯಾರ ಸೊತ್ತಲ್ಲ”,ಜ್ಞಾನ ಪಡೆದಷ್ಡು ಅದರ ಸುಗಂಧ ಎಲ್ಲೆಡೆಯೂ ಪಸರಿಸುವುದು….ಪ್ರತಿಯೊಬ್ಬ ಯುವಕನು ಅಥವಾ ಯುವ ಸಮುದಾಯ ಸರ್ವೇಸಾಮಾನ್ಯ ವ್ಯಕ್ತಿ  ಸಮಾಜದಲ್ಲಿ ಹೇಗೆ ಬದುಕಬೇಕೆಂಬುದುನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಒಬ್ಬ ಯುವಕ ಹತ್ತು ಸಲ ಐಪಿಎಸ್ ಪರೀಕ್ಷೆ ಎದುರಿಸಿ ಸೋತಿದ್ದ,ಫಲಿತಾಂಶ ನೋಡಲು ಕಂಪ್ಯೂಟರ್ ಮುಂದೆ ಇಡೀ ಕುಟುಂಬ ಕುಳಿತಿದೆ..ಅವನಿಗೆ ಈ ಬಾರಿಯೂ ನಾನು ಸೋತೆ ಎಂದು ಹತಾಶನಾಗಿದ್ದಾಗ ಫಲಿತಾಂಶ ಪಾಸಾಗಿದ್ದನ್ನು ಕಂಡು ಅವನ ಕಣ್ಣಲ್ಲಿ ನೀರು ಜಿನುಗುತ್ತಿದ್ದರೆ,ಕುಟುಂಬ ಸಂತಸ ಪಡುತ್ತಿತ್ತು.ತಂದೆ ಮಗನನ್ನು ಅಪ್ಪಿ ಮುದ್ದಾಡುವಾಗ ಆ ತಂದೆತಾಯಿ,ಕುಟುಂಬದವರು ಅವನ ಮೇಲೆ ಭರವಸೆಯನ್ನು ಇಟ್ಟ ಪರಿಣಾಮ‌..ಸೋತರು ಧೃತಿಗೆಡದೆ ಪ್ರೋತ್ಸಾಹ ನೀಡಿದ್ದು ಎಲ್ಲರಿಗೂ ಮಾದರಿ..ಸೋತು ಹತಾಶರಾದಾಗ ಎಲ್ಲರೂ ಚುಚ್ಚು ಮಾತುಗಳಿಂದ ಚುಚ್ಚಿ ಮನಸ್ಸನ್ನು ನೋಯಿಸಿದ್ದರೆ ಅದರ ಫಲ ಎನಾಗುತ್ತಿತ್ತು? ಯಶಸ್ವು ಸುಲಭವಾಗಿ ಲಭಿಸುವುದಿಲ್ಲ.ಪ್ರಯತ್ನವಾದಿಗೆ ಮಾತ್ರ ಫಲ ನೀಡುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಧಕ,ಸಾಧನೆ ಇವು ಅಭ್ಯರ್ಥಿಯ ಮನದಿಚ್ಛೆಗೆ ಸಂಬಂಧಿಸಿದ್ದು!. ವಾತಾವರಣ ಸಾಧಕನಿಗೆ ಪೂರಕವಾಗಿದ್ದರೆ ಮಾತ್ರ ಸಾಧನೆ ಸಾಧ್ಯ!. ಸಾಧಿಸುವ ಛಲ ಸಾಧಕನ ಮೂಲ ಮಂತ್ರ ಮನದಿಂಗಿತವಾದರೆ ಮಾತ್ರ ಏಳುಬೀಳುಗಳ ನಡುವೆ ಮುನ್ನುಡಿ ಬರೆಯಲು ಸಾಧ್ಯ!. ಮಕ್ಕಳು ಅತಿಯಾಗಿ ಯಾವುದಾದರೂ ಒಂದು ದುರಭ್ಯಾಸಕ್ಕೆ ಒಳಗಾಗಿದ್ದರೆ,ಅವರ ಪ್ರಗತಿ ಕುಂಠಿತ.ನಾವು ಎಲ್ಲ ಸಾಧಕರ ಹಿನ್ನಲೆ‌ನೊಡುತ್ತೆವೆ,ಅವರ ನೋವು ನಲಿವುಗಳು‌ ನಮ್ಮ ಜೀವನದಲ್ಲಿ ಹಾಗೆ ಆಗಿರಬೇಕಂದಿಲ್ಲ.ಭಿನ್ನಾಗಿಯೂ ಇರಬಹುದು.ಗುರಿ‌ ತಲುಪುವ ದಾರಿಗಳು ಸನ್ಮಾರ್ಗ ಹಾಗೂ ಪರಿಶ್ರಮದಿಂದ ಕೂಡಿದ್ದರೆ ಯಶಸ್ಸು ಸಾಧಕನ ಸೊತ್ತಾಗುವುದು.ಪ್ರತಿದಿನ ಇಂತಹ ಅಮೂಲ್ಯ ಸೇವೆ ಸಲ್ಲಿಸಿದವರು ನಮ್ಮ ಮುಂದೆ ಹಾದು ಹೋದಾಗ ನಾವಿನ್ನು ಯಾವ ಸಾಧನೆ ಮಾಡಬೇಕಿತ್ತು? ಬರೀ ನೋಡಿ ಕಳೆದೆವಲ್ಲ ನಮ್ಮ ಸಮಯವೆನ್ನಬಾರದು‌..ಸಾಧಕನಿಗೆ ವಯಸ್ಸಿನ ಅಂತರವಿಲ್ಲ… ಸಾಧಿಸುವ ಛಲ ಇರಬೇಕು…ಇನ್ನೊಬ್ಬರನ್ನು ತುಳಿದು,ವಂಚಿಸಿ, ಅನ್ಯಮಾರ್ಗದಿಂದ ಸಾಧಿಸಿದ ಸಾಧನೆ ಕಸಕ್ಕೆ ಸಮಾನ!. ಗೌರವವಿರದ ಸಾಧನೆ ಸಾಧನೆಯಲ್ಲ!. “ಕುಖ್ಯಾತರು ಗಲ್ಲಿಗಲ್ಲಿಗೆ ಸಿಗುತ್ತಾರೆ”. ಅವರನ್ನೆಲ್ಲ ನಾವು ಹಾರ ಹಾಕಿ ಸನ್ಮಾನ ಮಾಡಿ ಮೆರೆಸುವ ಪದ್ದತಿಯನ್ನು ರೂಢಿಸಿಕೊಂಡಿದ್ದೆವೆ.ಅದು ಅವರ ಸಾಧನೆ!. ನಮ್ಮ ಚಿಂತನೆಗೆ ಒರೆಹಚ್ಚಬೇಕು ಅಷ್ಟೇ .


8 thoughts on “

  1. ತುಂಬಾ ಮಾರ್ಮಿಕವಾದ ಲೇಖನ
    ಪರವಿನ್ ದರ್ಗಾ ಧಾರವಾಡ

  2. ಇವತ್ತಿನ ಮಕ್ಕಳ, ಪಾಲಕರ ಮನಸ್ಥಿತಿ ಶಿಕ್ಷಣ ವ್ಯವಸ್ಥೆ, ಗೆಲುವನ್ನು ಸೋಲಾಗಿ, ಸೋಲನ್ನು ಗೆಲುವಾಗಿ ಕಾಣುವವರ ಮನಸ್ಥಿತಿ ಅರ್ಥಗರ್ಭಿತವಾಗಿ ಪ್ರಸ್ತುತಪಡಿಸಿದ್ದೀರಿ.
    ಎಲ್ಲರೂ ಯೋಚಿಸಬೇಕಾದ ಲೇಖನ,

Leave a Reply

Back To Top