ಪುಸ್ತಕ ಸಂಗಾತಿ
ಕನ್ನಡದ ಹಿರಿಯ ಸಾಹಿತಿಗಳಾದ ಡಾ. ಸಿದ್ದರಾಮ ಹೊನ್ಕಲ್ ಅವರಪುಸ್ತಕಗಳನ್ನ ಓದುವ ಆಸಕ್ತಿ ಇರುವವರಿಗಾಗಿ ಮಾಹಿತಿ


ಆತ್ಮೀಯರೇ,
ಇದೀಗ ನಮ್ಮ ಪ್ರಕಾಶನಕೆ ಹೊಸ ಹಾಗೂ ಮರು ಮುದ್ರಣಗೊಂಡ ನನ್ನ ಹದಿನಾಲ್ಕು (14) ಕೃತಿಗಳು. ಒಟ್ಟು 3500 ಪುಟಗಳ ಸಮೃದ್ದವಾದ ಓದು ನೀಡಬಲ್ಲವು. ಇವೆಲ್ಲವೂ ಅಪಾರ ಕುತೂಹಲದಿಂದ ಓದಿಸಿಕೊಂಡು ಹೋಗುವ ಆಪ್ತವಾದ ಓದಿನ ಖುಷಿ ನಿಮಗೆ ನೀಡಲಿವೆ.ಆ ಗ್ಯಾರಂಟಿ ನಾನು ನೀಡಲಿರುವೆ.
ಇವುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ (ಇವುಗಳ ಒಟ್ಟು ಬೆಲೆ ರೂ.3500/-) ನಿಮಗೆ ತಲುಪಿಸಿ ಓದಿಸುವ ಹಂಬಲ ನನ್ನದು.ನೀವು ಕೇವಲ ರೂ.2200/- ಫೋನು ಪೇ ಅಥವಾ ಗೂಗಲ್ ಪೇ ಮೂಲಕ 9945922151 ಗೆ ಹಾಕಿ ವಾಟ್ಸಾಪ್ ಮೂಲಕ ಇದೇ ನಂಬರಿಗೆ ನಿಮ್ಮ ವಿಳಾಸ ಕಳಿಸಿದರೆ ರಿಜಿಸ್ಟರ್ ಅಂಚೆ ವೆಚ್ಚ ನಾವೇ ಭರಿಸಿ ಪುಸ್ತಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು. ಹಣಕಾಸಿನ ತೊಂದರೆ ಇದ್ದರೆ ಎರಡು ಮೂರು ಕಂತಿನಲ್ಲಿ ಸಹ ಹಣ ಕಳಿಸಬಹುದು. ಇತ್ತೀಚಿಗೆ ಮುದ್ರಣ ಪುಸ್ತಕ ಕಳಿಸಲು ಮುಂಚೆ ಇದ್ದ ಕಡಿಮೆ ವೆಚ್ಚ ಪದ್ದತಿ ಕೇಂದ್ರ ಸರ್ಕಾರದ ಅಂಚೆ ಇಲಾಖೆ ರದ್ದು ಮಾಡಿ ಲೇಖಕರಿಗೆ ಬಹಳ ಹೊರೆ ಮಾಡಿದೆ.ಒಂದು ಪುಸ್ತಕ ಕಳಿಸಲು ಕನಿಷ್ಠ ರೂ.40/- ರಜಿಸ್ಟರ್ ಅಂಚೆ ವೆಚ್ಚ ಆಗಲಿದೆ.
ಇದರಲ್ಲಿ ಆರು ಪ್ರವಾಸ ಕಥನ ಒಳಗೊಂಡ ಏಳುನೂರು ಪುಟದ “ಲೋಕ ಸಂಚಾರಿ” ಪ್ರವಾಸ ಕಥನ, ಒಂದು ಸಮಗ್ರ ಕಥಾ ಸಂಕಲನ, ಐದು ಗಜಲ್ ಸಂಕಲನ ಒಳಗೊಂಡ ಐದುನೂರು ಪುಟದ ಒಂದು ಚೆಂದನೆಯ ಸಮಗ್ರ ಗಜಲ್ ಸಂಕಲನ “ನಿನ್ನ ಜೊತೆ ಜೊತೆಯಲಿ ..”, ಒಂದು ಶಾಯಿರಿ ಸಂಕಲನ, ಒಂದು ಹೈಕು ಸಂಕಲನ, ಪ್ರೇಮೋನ್ಮಾದದ ಆಯ್ದ ಗಜಲ್ ಸಂಕಲನ,ಒಂದು ನೂರು ಕೃತಿಗಳ ವಿಮರ್ಶೆ ಸಂಕಲನ, ಒಂದು ನನ್ನ ಸಾಹಿತ್ಯ ಸಮೀಕ್ಷೆ ಕೃತಿ, ಆತ್ಮಕಥನ ಮಾದರಿಯ ಎರಡು ಲಲಿತ ಪ್ರಬಂಧ ಕೃತಿಗಳು, ಮರೆಯುವ ಮುನ್ನ ಹಾಗೂ ಎಲ್ಲಾ ಮರೆತಿರುವಾಗ ಹೀಗೆ ಎರಡು ಕೃತಿಗಳು, ಸಾಹಿತ್ಯ ವಾಚಿಕೆ ಕೃತಿ,ಹೊನ್ನುಡಿಗಳ ಕೃತಿ, ಅಕಾಡೆಮಿ ಪುರಸ್ಕೃತ ಪ್ರವಾಸ ಕಥನ ಪಂಚನದಿಗಳ ನಾಡಿನಲ್ಲಿ..ಹೀಗೆ ವೈವಿಧ್ಯಮಯ ಮನೋಜ್ಞತೆಯ ಎಲ್ಲಾ ಪ್ರಕಾರದ ಕೃತಿಗಳು ಲಭ್ಯವಿವೆ.
ಇದರಲ್ಲಿ ಬಹುತೇಕ ಕೃತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಒಳಗೊಂಡು ವಿವಿ ಮಟ್ಟದ, ಕೇಂದ್ರ ಕಸಾಪದ,ಹೀಗೆ ಅನೇಕ ಪ್ರತಿಷ್ಠಿತ ಪುರಸ್ಕಾರ ಸಹ ಪಡೆದಿವೆ.ವಿವಿಗಳಲ್ಲಿ ಪಠ್ಯ ಕೂಡಾ ಆಗಿದಾವೆ.ಈ ಕೃತಿಗಳನು ಓದುವ ಮನಸು ನಿಮಗಿದ್ದರೆ ತಿಳಿಸಿ. ಒತ್ತಾಯವೇನಿಲ್ಲ. ಓದಲಾಗಲಿಲ್ಲವೆಂಬ ಹಳಹಳಿಕೆ ಬೇಡಿ. ಅನೇಕರು ಕೇಳಿದ ಕಾರಣದಿಂದ ಹಲವು ಕೃತಿಗಳು ಮರು ಮುದ್ರಣಗೊಂಡು ಬಂದಿವೆ. ಇದರಲ್ಲಿ ಕೆಲವೇ ಪುಸ್ತಕ ಬೇಕಾದರೂ ಸಹ ಸಂಪರ್ಕಿಸಬಹುದು.ಆರು ಪ್ರವಾಸ ಕಥನಗಳ ಒಂದು ಸಮಗ್ರ ಕೃತಿ ಲೋಕಸಂಚಾರಿ . ಐದು ಗಜಲ್ ಸಂಕಲನ ಸೇರಿದ ನಿನ್ನ ಜೊತೆ ಜೊತೆಯಲಿ ಒಂದು ಸಮಗ್ರ ಗಜಲ್ ಸಂಕಲನ, ಒಂದು ಹೈಕು, ಒಂದು ಶಾಯಿರಿ ಹೀಗೆ 1500 ಪುಟಗಳ ನಾಲ್ಕು ಕೃತಿಗಳ ಸೆಟ್ ಸಹ ಇದೆ.ಅದಕೆ ಕೇವಲ ರೂ.11೦೦/- ಮಾತ್ರ..ನನ್ನ ಪ್ರಕಟಿತ ಒಟ್ಟು 68 ಕೃತಿಗಳಲ್ಲಿ ಈಗ ಇಷ್ಟು ಕೃತಿಗಳು ಮಾತ್ರ ಮಾರಾಟಕ್ಕೆ ಲಭ್ಯವಿವೆ.ತಾವು ನನ್ನ 9945922151 ಫೋನು ಪೇ ಮಾಡಿ ಅಂಚೆ ವಿಳಾಸ ವಾಟ್ಸಾಪ್ ಮೂಲಕ ನೀಡಿದರೆ ರಿಜಿಸ್ಟರ್ ಅಂಚೆ ವೆಚ್ಚ ಪ್ರಕಾಶಕರೇ ಭರಿಸಿ ತಮಗೆ ಪುಸ್ತಕ ಕಳಿಸುವರು.
ಈ ಕೃತಿಗಳು ಓದಿದರೆ ತಮ್ಮ ಈಗಿರುವ ಪ್ರತಿಭೆಗೆ ಇನ್ನಷ್ಟು ಪ್ರಕಾರದ ಬರವಣಿಗೆ ಸಿದ್ಧಿಸೋದು ಗ್ಯಾರಂಟಿ ನಾನು ಕೊಡುವೆ. ಸಾಹಿತ್ಯದ ಓದು ಕಡಿಮೆ ಆಗುವ ಈ ದಿನಗಳಲ್ಲಿ ಸಾಹಿತ್ಯ ಓದಿಸುವ ಹಂಬಲ, ಕಾಳಜಿ ಮಾತ್ರ ಇದರ ಹಿಂದೆ ಇದೆ.ಬೇರೆನೂ ಇಲ್ಲ. ಈಗಾಗಲೇ ಇಲ್ಲಿಯ ಕೆಲವು ಕೃತಿಗಳು ತಮ್ಮ ಕಡೆ ಇದ್ದರೆ ತಿಳಿಸಬಹುದು. ಅವುಗಳ ಬದಲಿಗೆ ನನ್ನ ಇತರ ಬೇರೆ ಕೃತಿಗಳನ್ನು ಕಳಿಸಲಾಗುವುದು.ಯಾವುದಕ್ಕೂ ದಯವಿಟ್ಟು ತಿಳಿಸಿ.ನಮಸ್ಕಾರ.
ಡಾ.ಸಿದ್ಧರಾಮ ಹೊನ್ಕಲ್.
ಶ್ರೀ ಅಲ್ಲಮಪ್ರಭು ಪ್ರಕಾಶನ,ಬುಕ್ ಸ್ಟಾಲ್,
ಮುಖ್ಯ ರಸ್ತೆ,ಅಂಚೆ-ಶಹಾಪುರ-585223, ಯಾದಗಿರಿ ಜಿಲ್ಲೆ

ಡಾ.ಸಿದ್ದರಾಮ ಹೊನ್ಕಲ್
ಅವರ ಪ್ರಕಟಿತ ಕೃತಿಗಳು

ಇವರ ಒಟ್ಟು ಕೃತಿಗಳು: ೭೧ (ಪ್ರಕಟಿತ-೬೧+೧೦ ಅಚ್ಚಿನಲ್ಲಿ)
ಕಥಾ ಸಂಕಲನಗಳು
೧).ಕಥೆ ಕೇಳು ಗೆಳೆಯ : ಕಥಾ ಸಂಕಲನ
೨).ಬಯಲು ಬಿತ್ತನೆ : ಕಥಾ ಸಂಕಲನ
೩).ನೆಲದ ಮರೆಯ ನಿಧಾನ :ಕಥಾ ಸಂಕಲನ
೪). ನೆಲದ ನಿಲುವು :ಸಂ.ಪ್ರಾತಿನಿಧಿಕ ಕಥಾ ಸಂಕಲನ
ಸಂಶೋಧನಾತ್ಮಕ ಜೀವನ ಕಥನಗಳು
೫).ಕಾಯಕ ದಾಸೋಹಿ ಶ್ರೀ ಚರಬಸವ ಶರಣರು (ಗುಲ್ಬರ್ಗ ವಿ.ವಿ.ಪ್ರಸಾರಾಂಗದ ಉಪನ್ಯಾಸ ಮಾಲೆ ಪ್ರಕಟಿತ)
೬) ನಾಡೋಜ ಶ್ರೀ ಶಾಂತರಸರು :
೭). ದಾನ ದೈವಜ್ಞ : ( ಶ್ರೀ ಮುರುಗೆಪ್ಪ ಖೇಣೇದ ಜೀವನ ಕಥನ ಸಂಪಾದನೆ.)
೮). ಸಕಲೇಶ ಮಾದರಸ : (ವಚನಕಾರರ ಕುರಿತು ಕೃತಿ ಜ್ಞಾನ ಗಂಗೋತ್ರಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟಿತ)
೯). ವಿಮೋಚನಾ ಹೋರಾಟಗಾರ:
( ಶ್ರೀಅಚ್ಚಪ್ಪಗೌಡ ಸುಬೇದಾರ ಸಗರ ಅವರ ಕುರಿತು ಕೃತಿ)
೧೦). ಕಾಯಕದ ನಿಜನಾಯಕ:- (ಶ್ರೀಶರಣಬಸಪ್ಪಗೌಡ ದರ್ಶನಾಪುರ ಅವರ ಜೀವನ ಸಂ. ಕೃತಿ)
ಪ್ರವಾಸ ಕಥನಗಳು
೧೧).ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರವಾಸ ಯೋಜನೆಯಡಿಯಲ್ಲಿ)
೧೨).ಕನ್ಯಾಕುಮಾರಿಯಿಂದ ಹಿಮಾಲಯದವೆರೆಗೆ
೧೩).ಕಲ್ಬುರ್ಗಿಯಿಂದ ಕಾಠಮಂಡುವಿನವರೆಗೆ :
೧೪).ಗಾಂಧಿಯ ನಾಡಿನಲ್ಲಿ…ಪ್ರವಾಸ
೧೫).ಪಂಚವಟಿಯ ನೆಲದಲ್ಲಿ.. ಪ್ರವಾಸ
೧೬).ಮೂರು ದೇಶ ನೂರೊಂದು ಅನುಭವ: (ವಿದೇಶಿ ಪ್ರವಾಸ ಕಥನ.)
೧೭) ಲೋಕ ಸಂಚಾರಿ ( ಸಮಗ್ರ ಪ್ರವಾಸ ಕಥನ)
೧೮) ಅಯೋಧ್ಯೆಯ ನೆಲದಲ್ಲಿ.. ಲಕ್ನವಿಯಾನ (ಪ್ರವಾಸ ಕಥನ- ಅಚ್ಚಿನಲ್ಲಿ)
ಕಾವ್ಯ
೧೯).ಅಂತರಂಗದ ಹನಿಗಳು (ಕವನ ಸಂಕಲನ)
೨೦).ಹೊಸ ಹಾಡು ಕಾವ್ಯ ಸಂಕಲನ)
೨೧).ಅಕ್ಕನಿಗೊಂದು ಪ್ರಶ್ನೆ ಮತ್ತು ಇತರ ಕವನಗಳು : (ಸಂ.ಕಾವ್ಯ ಸಂಕಲನ)
೨೨).ನೂರಾರು ಹನಿಗಳು : (ಹನಿಗವನ ಸಂಕಲನ)
೨೩).ಗೀತಗಾಯನ: ಇವರ ಕಾವ್ಯಗಾಯನದ ಸಂಪಾದಿತ ಕೃತಿ ಮತ್ತು ಸಿಡಿ
೨೪).ಸುಖಿಗೀತ :ಆರೋಗ್ಯ ಇಲಾಖೆ ಕವನಗಳು
ಗಜಲ್ ಶಾಯಿರಿ ಹೈಕು ಕಾವ್ಯ
೨೫) ಆಕಾಶಕ್ಕೆ ಹಲವು ಬಣ್ಣಗಳು: (ಗಜಲ್ ಸಂಕಲನ)
೨೬) ಹೊನ್ನ ಮಹಲ್…(ಗಜಲ್ ಸಂಕಲನ)
೨೭) ನಿನ್ನ ಪ್ರೇಮವಿಲ್ಲದೇ ಸಾಕಿ…(ಗಜಲ್ ಸಂಕಲನ)
೨೮) ಆತ್ಮಸಖಿಯ ಧ್ಯಾನದಲಿ..(ಗಜಲ್ ಸಂಕಲನ)
೨೯). ಹೊನ್ಕಲ್ ರ ಶಾಯಿರಿಗಳು (ಶಾಯಿರಿ
ಸಂಕಲನ)
೩೦).ನಿನ್ನ ಜೊತೆ ಜೊತೆಯಲಿ…( ಸಮಗ್ರ ಗಜಲ್ ಸಂಕಲನ)
೩೧) ಇದು ಪ್ರೇಮ ಮಹಲ್ (ಆಯ್ದ ಗಜಲ್ ಗಳು)
೩೨) ಹೊನ್ನಗರಿಯ ಹೈಕುಗಳು (ಹೈಕು ಸಂಕಲನ)
ಲಲಿತ ಪ್ರಬಂಧಗಳು
೩೩).ಹೃದಯ ಗೀತ: (ಲಲಿತ ಪ್ರಬಂಧ ಸಂಕಲನ)
೩೪).ನುಗ್ಗಿ ಬರುವ ನೆನಪುಗಳು: (ಲಲಿತ ಪ್ರಬಂಧ ಸಂಕಲನ)
೩೫) ಎಲ್ಲ ಮರೆತಿರುವಾಗ..:(ಲಲಿತ ಪ್ರಬಂಧ)
೩೬).ಬಿಸಿಲ ನಾಡಿನ ಬುಗ್ಗೆಗಳು:(ಸಂ.ಲಲಿತ ಪ್ರಬಂಧ)
೩೭). ಮರೆಯುವ ಮುನ್ನ ( ಲಲಿತ ಪ್ರಬಂಧ)
ಸಂಪಾದನೆ
೩೮).ಸೃಜನ: ಸಂಪಾದನೆ (ಸ್ಮರಣ ಸಂಚಿಕೆ)
೩೯).ಕಾಯಕ :ಸಂಪಾದನೆ (ಸ್ಮರಣ ಸಂಚಿಕೆ)
೪೦).ಬೆವರು :ಸಂಪಾದನೆ (ಸ್ಮರಣ ಸಂಚಿಕೆ)
೪೧).ಸಗರಾದ್ರಿ : ಸಂಪಾದನೆ (ಸ್ಮರಣ ಸಂಚಿಕೆ)
೪೨).ಹೊಸದಿಕ್ಕು ಸಂಪಾದನೆ)
೪೩).ಮಂದಾಕಿನಿ : (ಇವರು ಸರ್ವಾಧ್ಯಕ್ಷರಾದ ಸಮ್ಮೇಳನದ ಸ್ಮರಣ ಸಂಚಿಕೆ-೨೦೧೭)
೪೪) ಗಿರಿಯ ಸಿರಿ: (ಇವರು ನಾಲ್ಕನೇ ಜಿಲ್ಲಾ ಕಸಾಪ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗಿನ ಸ್ಮರಣೆ ಸಂಚಿಕೆ)
೪೫). ಸೌಹಾರ್ದ ಸಂಸ್ಕೃತಿ (ಸಂಪಾದನೆ-ಸ್ಮರಣ ಸಂಚಿಕೆ)
೪೬) ಅಮರ ಕಲ್ಯಾಣ (ಸ್ಮರಣ ಸಂಚಿಕೆ)
೪೭) ಗಜಲ್ ನಾದಲೋಕ ( ಪ್ರಾತಿನಿಧಿಕ ಗಜಲ್ ಸಂಕಲನ)
೪೮). ಸಗರನಾಡು (ಸಂಪಾದನೆ)
ಹೊನ್ನುಡಿಗಳು
೪೯.ಹೊನ್ಕಲ್ ರ ಹೊನ್ನುಡಿಗಳು : (೨೧೦ ಹೊನ್ನುಡಿಗಳ ಸಂಕಲನ)
೫೦).ಸಮ್ಮೇಳನ ಅಧ್ಯಕ್ಷೀಯ ನುಡಿಗಳು (ಚು.ಸಾ.ಪ. ಅಧ್ಯಕ್ಷೀಯ ನುಡಿ ಸಂಕಲನ ೨೦೧೩)
೫೧). ಹೊನ್ನುಡಿ : (ಸಮೇಳನಾಧ್ಯಕ್ಷರ ನುಡಿ ಪುಸ್ತಕ. ೨ ನೇ ತಾಲೂಕ ಕಸಾಪ ಸಾಹಿತ್ಯ ಸಮ್ಮೇಳನ, ಶಹಾಪುರ -೨೦೧೭ ರಲ್ಲಿ
೫೨) ಹೊನ್ನುಸಿರು: (ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗಿನ ಅಧ್ಯಕ್ಷೀಯ ನುಡಿ ಪುಸ್ತಕ-೨೦೧೮)
೫೩). ಕಲ್ಯಾಣ ಪರ್ವ ..(ಅಖಿಲ ಕರ್ನಾಟಕ ೧೦ ನೇ ಕವಿ ಸಮ್ಮೇಳನ ಹಾಗೂ ೬೫ ನೇ ಪ್ರತಿಭೋತ್ಸವ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ನುಡಿ ಪುಸ್ತಕ.2022,)
೫೪).ಹೊನ್ನಸಿರಿ : ಸದರಿ ಲೇಖಕರ ಕುರಿತು ಸಾಹಿತ್ಯ ವಿಮರ್ಶಾ ಕೃತಿ (ಸಂ: ಶ್ರೀಪ್ರಭುಲಿಂಗ ನೀಲೂರೆ, ಶ್ರೀ ಪ್ರಭಾಕರ ಜೋಶಿ)
೫೫).ಹೊನ್ಕಲ್ ಕಥಾಲೋಕ: ಶ್ರೀ ಮಾನಯ್ಯ ಬಿ ಗೋನಾಲರಿಂದ ಇವರ ಕಥೆಗಳ ಮೇಲಿನ ಎಂ.ಫಿಲ್ ಕೃತಿ
೫೬) ಹೊನ್ನೇಸರ :- (ಇವರ ಬದುಕು ಬರಹದ ಮೇಲಾದ ಪಿಎಚ್ಡಿ ಮಹಾ ಪ್ರಬಂಧದ ಸಾಹಿತ್ಯ ಸಮೀಕ್ಷೆಯ ಕೃತಿ ಡಾ.ರೇವತಿ ಶಿರನಾಳ ಅವರಿಗೆ ಡಾಕ್ಟರೇಟ್ ದೊರೆತ ಕೃತಿ)
ವಿಮರ್ಶೆ
೫೭) ಒಲಿದಂತೆ ಹಾಡಿರುವೆ…: (೧೦೧ ಲೇಖಕರ ಕೃತಿಗಳ ಸಾಹಿತ್ಯ ಅವಲೋಕನ ಕೃತಿ)
೫೮).ನುಡಿ ನೋಟ (ವಿಮರ್ಶೆ, ವ್ಯಕ್ತಿ ಚಿತ್ರಣ,ಮಂಡಿಸಿದ ಬರಹಗಳ ಕೃತಿ)
೫೯). ಪ್ರತಿಬಿಂಬ (ಇವರ ಕೃತಿಗಳಿಗೆ ಬಂದ ವಿಮರ್ಶೆ ಸಂಕಲನ)
೬೦). ಹೊನ್ನುಡಿಯ ಸಾಧಕ ಶ್ರೀ ಸಿದ್ಧರಾಮ ಹೊನ್ಕಲ್ (ಶ್ರೀ ಪ್ರಭುಲಿಂಗ ನೀಲೂರೆ ಅವರ ಸಂಪಾದನೆ ಕೃತಿ)
೬೧). ಜೀವನಾನುಭವಗಳು ( ಅಚ್ಚಿನಲ್ಲಿ)
೬೨). ಕಾಡಿದ ಕವಿತೆಗಳು (ಇತ್ತೀಚಿನ ಕವನಗಳು-ಅಚ್ಚಿನಲ್ಲಿ)
೬೩).ಹೊನ್ನಸಿರಿಯ ಹೊನ್ನುಡಿಗಳು (ಅಚ್ಚಿನಲ್ಲಿ)
೬೪).ಕನ್ನಡಿ (ಇವರ ಕೃತಿಗಳಿಗೆ ಬಂದ ಬರಹಗಳು-ಅಚ್ಚಿನಲ್ಲಿ)
೬೫).ಪ್ರೇಮ ಮಹಲ್ (ಆಯ್ದ ಗಜಲ್ ಗಳು)
೬೬) ಬೆನ್ನುಡಿ ಮುನ್ನುಡಿ ಗಳು( ಅಚ್ಚಿನಲ್ಲಿ)
೬೭).ಹೊಂಗೆಮರ..(ಆತ್ಮ ಚರಿತ್ರೆ ಸಂಕಲನ ಅಚ್ಚಿನಲ್ಲಿ)
೬೮) ಕನ್ನಡಿ (ವಿಮರ್ಶೆ ಕೃತಿ ೩ನೇ ದು)
೬೯) ರಾಣಿ ಈಶ್ವರಮ್ಮ ಕೃತಿ( ಶೀಘ್ರದಲ್ಲೇ ಬರಲಿದೆ)
೭೦) ಸೌಹಾರ್ದತೆಯ ಚರಬಸವ ಶರಣರು (ಶೀಘ್ರದಲ್ಲೇ ಬರಲಿದೆ)
೭೧) ಕಲ್ಯಾಣ ಕರ್ನಾಟಕದ ಪ್ರವಾಸ ಕಥನಗಳು:-ಸಂಪಾದನೆ.( ಶೀಘ್ರದಲ್ಲೇ ಬರಲಿ
ಶ್ರೀ ಅಲ್ಲಮಪ್ರಭು ಪ್ರಕಾಶನ ಹಾಗೂ ಶ್ರೀ ಹೊನ್ಕಲ್ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಶಹಾಪುರ

