ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಕೃತಿ ಮುನಿದಾಗ ಭೂಮಿ ನಾಶವಾಗುವುದು
ಜನರ ಜೀವನ ಅಸ್ತವ್ಯಸ್ತವಾಗುವುದು
ಹಸಿವನಿಗಿಸಿಕೊಳ್ಳಲು ಅನ್ನವಿಲ್ಲದಾಗುವುದು
ಕುಡಿಯಲು ಸ್ವಚ್ಛವಾದ ನೀರು ಸಿಗಲಾಗದು//

ಹರಿವ ನೀರು ಹೊಲಗದ್ದೆಗಳ ಸೇರುವುದು
ರೈತ ಬೆಳೆದ ಬೆಳೆಯು ನಾಶವಾಗುವುದು
ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಬದುಕ ನಡೆಸಲಾಗದು
ಪ್ರಕೃತಿ ವಿನಾಶಕ್ಕೆ ಜನರೇ ಕಾರಣರಾಗಿರುವುದು//

ತನಗೆ ಬೇಕಾದ ಜೀವನ ಕಟ್ಟಿಕೊಳ್ಳುವುದು
ಪ್ರಕೃತಿಯ ನಡುವೆ ಅಸಾಧ್ಯವಾಗುವುದು
ಪ್ರಕೃತಿಯ ಮುನಿಸನ್ನು ತಣಿಸುವುದು
ಮರ-ಗಿಡಗಳನ್ನು ನೆಟ್ಟು ಬೆಳೆಸುವುದು//

ಸಕಲ ಜೀವ ರಾಶಿ ಹುಟ್ಟುವ  ಧರೆಯಿದು
ಋಣಿಯಾಗಿರಬೇಕು ನಾಶಕ್ಕೆ ಮುಂದಾಗಬಾರದು
ಉಳಿಸಲು ಮುಂದಾಗಬೇಕು ವನಸಿರಿಗಳನ್ನು
ಬೆಳೆಸಲು ಪಣ ತೊಡಬೇಕು ಮರ-ಗಿಡಗಳನ್ನು//

ಮುಂದಿನ ಪೀಳಿಗೆಯ ಏಳಿಗೆಗೆ ಕೈಜೋಡಿಸಬೇಕು
ಎಲ್ಲರು ಒಂದಾಗಿ ಪ್ರಕೃತಿ ಮುನಿಸ ತೊರೆಯಬೇಕು
ಕಾಡುಗಳ ಕಡಿಯುವುದನ್ನು ಶೀಘ್ರ  ನಿಲ್ಲಿಸಬೇಕು
ಬೆಟ್ಟಗುಡ್ಡಗಳ ನಾಶ ಮಾಡುವುದ ತಡೆಯಬೇಕು//


About The Author

Leave a Reply

You cannot copy content of this page

Scroll to Top