ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಡಿದರೂ ಮತ್ತೆ ಚಿಗುರಿ ನಿಂತಾದರೂ
ಹೆಮ್ಮರವಾಗಿ ಬೆಳೆಯುವಂತ ಕನಸು..!
ಗಿಡಕ್ಕೆ ಮನುಜನ ದುರಾಸೆ ಅರಿತರೂ
ಕ್ರೂರಿಗೆ ಉಸಿರು ಕೊಡುವಂತ ಮನಸು.!!

ಬುಡಸಮೇತವಾಗಿ ಅಳಿದು ಹೋದರೂ
ಬದುಕು ಉಳಿಯಲು ಅದೇನು ತಪಸ್ಸು?
ಬಡಪಾಯಿ ಜೀವವು ಇಲ್ಲಿ ಬರಡಾದರೂ
ಬದುಕಿ ತೋರಿಸಬೇಕೆನ್ನುವ ಹುಮ್ಮಸ್ಸು.!!

ಮರು ಜನ್ಮ ಪಡೆದ ಸಸ್ಯವ ನೋಡಿ ಕಲಿ
ಮರವಾಗಿ ಬೆಳೆದು ನಿಲ್ಲಲ್ಲೆಂದು ಆಶಿಸು.!
ವರುಣ ದೇವನ ಕೋಪಕ್ಕೆ ಆಗದೇ ಬಲಿ
ವರವಾಗಿ ಸಿಗುವಂತೆ ವೃಕ್ಷವ ಪೋಷಿಸು.!!


About The Author

Leave a Reply

You cannot copy content of this page

Scroll to Top