ಮಹಿಳೆಯರ ಸಬಲೀಕರಣದಲ್ಲಿ ಮಹಿಳಾಪರ ಸಂಘ, ಸಂಸ್ಥೆಗಳ ಪಾತ್ರ.ಹೆಚ್.ಎಸ್.ಪ್ರತಿಮಾ ಹಾಸನ್.

 ಇಂದಿನ ಪ್ರಸ್ತುತ ದಿನಮಾನಗಳಲ್ಲಿ  ಮಹಿಳೆಯರು ಬಹಳಷ್ಟು ಶ್ರಮಜೀವಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ತಮ್ಮದೇ ಆದಂತಹ ಹಲವಾರು ಸಂಘ-ಸಂಸ್ಥೆಗಳನ್ನು ಮಾಡಿಕೊಂಡು ಸಮಾಜದಲ್ಲಿ ಮಹಿಳಾಪರ ಹೋರಾಟಗಾರರಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಮಹಿಳೆಯರು ಅಪಾರವಾದ  ಕಾರ್ಯ ತತ್ಪರತೆಗಳು  ನಮ್ಮ ಸಮಾಜದ ಏಳಿಗೆಗೆ ಸಹಕಾರಿಯಾಗಿದೆ. ಅದರಲ್ಲೂ ನಮ್ಮ ಸಮಾಜದಲ್ಲಿ ಸಂಘ-ಸಂಸ್ಥೆಗಳನ್ನು ಮಹಿಳೆಯರು ಮಾಡಿಕೊಂಡು ಕಾರ್ಯವನ್ನು ಮಾಡುತ್ತಿರುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಮಹಿಳಾಪರ  ಕಾರ್ಯಗಳು ಶ್ಲಾಘನೀಯವಾದದ್ದು. ಯಾವುದೇ ಕೆಲಸದಲ್ಲೂ ಯಾವುದೇ ಕ್ಷೇತ್ರದಲ್ಲೂ ಯಾರಿಗೂ ಹೆದರದಂತೆ ಸರಿ ಸಮಾನರಾಗಿ  ಎಲ್ಲರಂತೆ ಕಾರ್ಯನಿರ್ವಹಿಸುವಲ್ಲಿ ಯಶಸ್ವಿಯನ್ನು ಪಡೆದವರು ನಮ್ಮ ಮಹಿಳಾ  ಸಂಘ, ಸಂಸ್ಥೆಯವರು. ಪ್ರತಿಯೊಂದರಲ್ಲೂ ಸಮಾನತೆಯನ್ನು  ಬೇಡುತ್ತಲೇ ಎಲ್ಲರೊಂದಿಗೆ ಕೆಲಸವನ್ನು ಮಾಡಿ ಕಾರ್ಯಗಳಲ್ಲಿ ಯಶಸ್ವಿಯನ್ನು ಪಡೆದು ಸೈ ಎಂದು  ತೋರಿಸಿಕೊಂಡಿದ್ದಾರೆ. ಅಂತಹ ಮಹಿಳೆಯನ್ನು ಎಲ್ಲಿಯೂ ಸಹ  ಶಕ್ತಿ ಹೀನಳಾಗಿ ಮಾಡದಂತೆ  ಆಕೆಗೆ ಬೆಂಬಲವನ್ನ ನೀಡುವ ಕಾರ್ಯಗಳನ್ನು ಮಾಡಬೇಕು.


.     ಮಹಿಳೆಯು ಎಲ್ಲರಂತೆ ಕಾರ್ಯವನ್ನು ನಿರ್ವಹಿಸ ಬಲ್ಲಳು ಎಂಬುದನ್ನು ಪ್ರಸ್ತುತ ದಿನಮಾನದಲ್ಲಿ ತೋರಿಸಿಕೊಟ್ಟಿದ್ದಾಳೆ. ಸ್ತ್ರೀಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಕಾರ್ಯಗಳಲ್ಲಿ ಸಾಬೀತು ಮಾಡಿ ತೋರಿಸಿದ್ದಾರೆ.
ಮಹಿಳೆಯರ ಸಬಲೀಕರಣ ಧ್ಯೇಯದೊಂದಿಗೆ ಸೇವೆಯಲ್ಲಿ  ಮಹಿಳಾ ಸಾಧಕೀಯರ  ಕಾರ್ಯ ಅಪಾರವಾದದ್ದು. ತನ್ನದೇ ಆದಂತಹ ಚಾಪನ್ನು  ಎಲ್ಲಡೆಯೂ ಮೂಡಿಸುತ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹದಕರಾಗಿದ್ದಾರೆ. ಇಂತಹ ಕಾರ್ಯಗಳನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸಬೇಕಾದದ್ದು ನಮ್ಮ ಸರ್ಕಾರದ ಕೆಲಸ.
ಹೆಣ್ಣೆಂದೆರೆ ಜಗದ ಕಣ್ಣು.ಅನಾದಿ ಕಾಲದಿಂದಲೂ ಸ್ತ್ರೀಯನ್ನು ದೇವರೆಂದು ಪೂಜಿಸುತ್ತೇವೆ.ಆದರೆ ಇತ್ತಿಚಿನ‌ ದಿನಗಳಲ್ಲಿ ಸಾಮಾಜಿಕ ವಲಯದಲ್ಲಿ ಬೆರೆತು ಸಮಾಜಮುಖಿ ಕೆಲಸ ಮಾಡುವಲ್ಲಿ ಹೆಣ್ಣುಮಕ್ಕಳು ಹಿಂಜರಿಯುತ್ತಾರೆ. ಅವರಲ್ಲಿ ಯಾವುದೇ ಪ್ರತಿಭೆ, ಆಶಯ ಇದ್ದರೂ ಕೂಡ ಕಮರಿ ಹೋಗುವುದೇ ಹೆಚ್ಚು. ಹಾಗಾಗಿ ಹಿಂಜರಿಕೆಯಿಂದ ದೂರವಿದ್ದು, ನಿರ್ಭಯವನ್ನು ನೀಡಲು ಗ್ರಾಮೀಣ ಭಾಗದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸವನ್ನು ಹಲವಾರು  ಸಂಸ್ಥೆ ಮಾಡುತ್ತಿದೆ. ತಮ್ಮದೇ ಆದಂತಹ ಚಿಕ್ಕ ಪುಟ್ಟ ದೊಡ್ಡದಾದ ಸಂಘ ಸಂಸ್ಥೆಗಳನ್ನು ನಮ್ಮ ಮಹಿಳೆಯರು ಸ್ಥಾಪಿಸಿದ್ದಾರೆ. ಬಡತನದ ಬೇಗೆಯಿಂದ ನೋವುಂಡು ಬೆಂದಿರುವುದೇ ಹಲವರಿಗೆ  ಸಂಸ್ಥೆ ಹುಟ್ಟು ಹಾಕಲು ಪ್ರೇರಣೆ. ಮಹಿಳೆಯರ ಅಪಾರ ಕಾಳಜಿಯಿಂದ ಮಾರ್ಗದರ್ಶಕರು, ಸ್ನೇಹಿತರು ಹಾಗೂ ಕುಟುಂಬಸ್ಥರ ಸಹಕಾರದೊಂದಿಗೆ ಮಹಿಳಾ ಪರ ಸಂಸ್ಥೆಯನ್ನು  ಸ್ಥಾಪಿಸಿ, ದುಡಿದ ಸ್ವಂತ ಹಣದಲ್ಲೇ ಹಲವಾರು ಕಾರ್ಯಕ್ರಮ ಆಯೋಜನೆ ಮಾಡುತ್ತಾ ನಿಸ್ವಾರ್ಥ ಸೇವೆ ಸಲ್ಲಿಸಿ ಗ್ರಾಮೀಣ ಜನರ ಪ್ರೀತಿ ಗೆದ್ದಿದ್ದಾರೆ. ಅಂತಹ ಉದಾಹರಣೆಗಳನ್ನು ನಾವು ದಿನನಿತ್ಯ ದೂರದರ್ಶನಗಳಲ್ಲಿ ಹಲವಾರು ರೇಡಿಯೋ ಕಾರ್ಯಕ್ರಮಗಳಲ್ಲಿ ಅವರ ಸಂದರ್ಶನ ಮಾಡುತ್ತಿರುವುದನ್ನು ಗಮನಿಸಬಹುದು. ಇವು ನಮ್ಮ ಮಹಿಳಾಪರ ಕಾರ್ಯಕ್ರಮಗಳನ್ನ ಮಾಡುತ್ತಿರುವುದನ್ನು ತೋರಿಸುತ್ತಾ ಇತರರಿಗೆ ಸಾಕ್ಷಿಯಾಗಿ ಸ್ಪೂರ್ತಿಯಾಗಿ ನಿಂತಿದೆ.
ಗ್ರಾಮೀಣ ಭಾಗದ ಕಲೆ, ಕ್ರೀಡೆ, ಸಂಸ್ಕೃತಿ ಉಳಿವಿಗಾಗಿ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ. ಮನೆಯಲ್ಲಿ  ಮಾಡುವಂತ ಕೆಲಸ  ಅಂದರೆ ಟೈಲರಿಂಗ್, ತೋರಣಗಳನ್ನು ಮಾಡುವ  ವಿನೂತನ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಒದಗಿಸಿ ಮಹಿಳೆಯಲ್ಲಿರುವ ಪ್ರತಿಭೆಯನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಅವರಲ್ಲಿರುವ ಕಲೆಗೆ ಪ್ರೋತ್ಸಾಹ ನೀಡಿ ಮುಖ್ಯ ವಾಹಿನಿಗೆ ಪರಿಚಯಿಸುತ್ತಿದೆ. ಈ ರೀತಿ ಕಾರ್ಯಗಳನ್ನು ಮಾಡುವುದರಿಂದ ಎಲೆಮರೆಕಾಯಿ ಅಂತಹ ಪ್ರತಿಭೆಗಳನ್ನು ಜಗತ್ತಿಗೆ ತೋರಿಸುವ ಕೆಲಸವಾಗುವುದರ ಜೊತೆಗೆ ಇತರರಿಗೆ ಪ್ರೇರಣೆಯಾಗುತ್ತದೆ.
ಹಲವು  ಜಿಲ್ಲೆಯಾದ್ಯಂತ ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮ, ಶ್ರಮದಾನ, ಯುವಕ ಯುವತಿಯರಿಗೆ ಸಂಘ ಸಂಸ್ಥೆಗಳ ರಚನಾ ಕಾರ್ಯ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಿ ಯುವ ಸಮೂಹವನ್ನು ಸಮಾಜದೊಡನೆ ಬೆರೆಸುತ್ತಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾ ಪುರಸ್ಕಾರ, ಪ್ರಬಂಧ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸದಂತ ಕಾರ್ಯಕ್ರಮ ಆಯೋಜಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮೂಹವನ್ನು ಒಗ್ಗೂಡಿಸುತ್ತಿದೆ.


ನೊಂದವರಿಗೆ ಆಸರೆಯಾಗಿ ಮಹಿಳೆಯರ  ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರು ಬರೀ ಅಡುಗೆ ಮನೆಗೆ ಸೀಮಿತವಾಗಬಾರದು. ಸಮಾಜದೊಡನೆ ಅರಿತು ಬೆರೆತು ಮುಖ್ಯ ವೇದಿಕೆಯಲ್ಲಿ ಪರಿಚಯವಾಗಬೇಕೆಂಬ ತುಡಿತದಿಂದ ಮಹಿಳೆಯರಿಗೆ ತರಬೇತಿ ಶಿಬಿರ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಾಗೂ ಆರ್ಥಿಕ ಉಳಿತಾಯದ ಹಲವು ಕಾರ್ಯಕ್ರಮ ಆಯೋಜಿಸಿದೆ. ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ನೀಡಿ ಗೌರವಿಸುತ್ತಿದೆ. ಸರಕಾರಿಯ ಅದೆಷ್ಟೋ ಯೋಜನೆಗಳು ಗ್ರಾಮೀಣ ಭಾಗದ ಜನತೆಗೆ ಇನ್ನೂ ತಲುಪಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಸಿಗುವ ಸೌಲಭ್ಯಗಳು ಹಾಗೂ ಶಿಕ್ಷಣದಿಂದ ವಂಚಿತರಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಕ್ಷರತೆಯ ಅರಿವು ಮೂಡಿಸುತ್ತಿದೆ. ಅಲೆಮಾರಿ, ಬುಡಕಟ್ಟು ಹಾಗೂ ವಲಸೆ ಕಾರ್ಮಿಕರರಿಗೆ ಮತ್ತು ಮಕ್ಕಳಿಗೆ ಸ್ವಚ್ಚತೆ, ಶಿಕ್ಷಣಕ್ಕೆ ಪೂರಕವಾದ ಅನೇಕ ಕಾರ್ಯಕ್ರಮವನ್ನು ಹಲವಾರು  ಭಾಗದಲ್ಲಿ ಆಯೋಜಿಸಲಾಗಿದೆ. ಮಹಿಳೆಯರಿಗೆ ಇರುವ ಆರೋಗ್ಯ ತೊಂದರೆಯನ್ನು ವಿಚಾರಿಸಿ ಸ್ಯಾನಿಟರಿ ಪ್ಯಾಡ್ ಮತ್ತು ಬಟ್ಟೆಗಳನ್ನು ವಿತರಿಸುತ್ತಿದ್ದಾರೆ. ಮಕ್ಕಳಿಗೆ ಪೆನ್ನು, ಪಾಠಿ, ಪೆನ್ಸಿಲ್, ನೋಟ್‌ಬುಕ್ ನೀಡಿ ಅಕ್ಷರ ಜ್ಞಾನಕ್ಕೆ ಒತ್ತು ನೀಡುತ್ತಿದೆ ಈ ಸಂಸ್ಥೆ. ಅಷ್ಟೇ ಅಲ್ಲದೆ ಗ್ರಾಮೀಣ ಭಾಗದ ಮಹಿಳೆಯರು ಸಣ್ಣ ಉಳಿತಾಯದ ಮೂಲಕ ಜೀವನ ಭದ್ರತೆ ಹಾಗೂ ಮಕ್ಕಳ ಭವಿಷ್ಯಕ್ಕೆ ಯೋಜನೆಯನ್ನು ರೂಪಿಸುತ್ತಿದೆ.
ಅಂಗವಿಕಲರು ಹಾಗೂ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಚೇತನರನ್ನು ಗುರುತಿಸಿ ಅವರಲ್ಲಿನ ಕೌಶಲ್ಯಗಳನ್ನು ಹುಡುಕಿ  ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಮಕ್ಕಳ ಭವಿಷ್ಯಕ್ಕೆ ಪೂರಕವಾಗಿ ಉಪನ್ಯಾಸ ಕಾರ್ಯಕ್ರಮ ಕಾನೂನು ಅರಿವು, ವ್ಯವಹಾರ ಜ್ಞಾನ ತಿಳಿಸಲು ಮಕ್ಕಳ ಸಂತೆಗಳನ್ನು ನಡೆಸಲಾಗುತ್ತಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯ ಕುರಿತಂತೆ ಮನೆಮದ್ದು ಕಾರ್ಯಕ್ರಮವನ್ನು ಹಮ್ಮಿಕೊಂಡು ಆರೋಗ್ಯ ಕಡೆ ಗಮನ ಹರಿಸುವಂತೆ ಮಾಡಿದೆ.
ಮಹಿಳೆಯರಿಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿ,ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಪ್ರಧಾನಿಯವರ ಕನಸಿನಂತೆ ಸ್ವಚ್ಛ ಭಾರತ ನಿರ್ಮಾಣ ಮಾಡುವಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅನೇಕ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡು ಯುವಕರಿಗೆ ಶ್ರಮದಾನದ ಮಹತ್ವ ಸಾರುತ್ತಾ, ಪ್ಲಾಸ್ಟಿಕ್ ಬಳಕೆ ಹಾಗೂ ಮರು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಭಾಗದ ದೇವಾಲಯ, ಸ್ಮಾರಕಗಳ ಸ್ವಚ್ಚತಾ ಕಾರ್ಯ ಮಾಡಿ ಸೈ ಎನಿಸಿಕೊಂಡಿದೆ. ಇದು ನಮ್ಮ ಮಹಿಳಾಪರಾ ಸಂಘ ಸಂಸ್ಥೆಗಳ ಕೊಡುಗೆಯಾಗಿದೆ.ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ನಿಟ್ಟಿನಲ್ಲಿ ಈಚೆಗೆ ದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ಆಯೋಜಿಸಿ ಅನೇಕ ಸಾಧಕರ ಯಶೋಗಾಥೆಯನ್ನು ತಿಳಿಸುವ ಪ್ರಯತ್ನ ಮಾಡಿದೆ. ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಗುರಿಯನ್ನು ಹೊಂದಿದ್ದು, ರಾಷ್ಟ್ರ ಮಟ್ಟದಲ್ಲೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿ ‘ಮಹಿಳೆಯರು ಅಬಲೆಯರಲ್ಲ ಸಬಲೆಯರು’ ಎನ್ನುವ ಸಂದೇಶವನ್ನು ಸಾರಿದೆ.
ನಾಡು, ನುಡಿ, ನೆಲ, ಜಲದ ರಕ್ಷಣೆಯಲ್ಲೂ ಕೂಡ ಸಂಸ್ಥೆ ಅನೇಕ ಅಭಿಯಾನ, ಕಾರ್ಯಕ್ರಮ ಆಯೋಜಿಸಿದೆ. ಕನ್ನಡ ರಾಜ್ಯೋತ್ಸವ, ನೀರು ನೈರ್ಮಲ್ಯ, ನೈಸರ್ಗಿಕ ಸದ್ಬಳಕೆ ಜತೆ ನಾನಾ ವಿಚಾರಗಳನ್ನು ಜನರಿಗೆ ತಲುಪಿಸುತ್ತಿದೆ. ನಾಡು ನುಡಿಗಾಗಿ ದುಡಿದವರನ್ನು ಸ್ಮರಿಸಿ ಗೌರವಿಸಿದೆ. ಯೋಧರು, ರೈತರು, ಸ್ವಾತಂತ್ರ‍್ಯ ಹೋರಾಟಗಾರರನ್ನು ಗೌರವಿಸಿ ಅವರ ದೇಶಾಭಿಮಾನದ ಪ್ರೀತಿಯನ್ನು ಯುವ ಸಮೂಹಕ್ಕೆ ಪರಿಚಯಿಸುತ್ತಿದೆ.
 ನಮ್ಮ ಸಮಾಜದಲ್ಲಿ ಇಂದು ಮಹಿಳೆಯರು ಪ್ರಬಲವಾಗಿ ಬೆಳೆಯುತ್ತಿದ್ದಾರೆ. ತಮ್ಮದೇ ಆದಂತಹ ಪ್ರತಿಭೆಗಳನ್ನು ತೋರಿಸುತ್ತಾ ದಿಟ್ಟ ನಾರಿಯರಾಗಿ ಹೊರಹೊಮ್ಮುತ್ತಿದ್ದಾರೆ. ಅಂತವರಿಗೆ ಸಮಾಜದ ಮತ್ತು ಸರ್ಕಾರದ ಸಹಕಾರ ಬೇಕಾಗಿದೆ
ಸಮಾಜದಲ್ಲಿ ತುಳಿತಕ್ಕೊಳಗಾದ ಮಂಗಳಮುಖಿ ಸಮುದಾಯದ ನೋವನ್ನಾಲಿಸಿ ಅವರಿಗೂ ಸಮಾಜ ಗೌರವಿಸಬೇಕೆಂಬ ಉದ್ದೇಶದಿಂದ ಉಡಿ ತುಂಬಿ ಗೌರವಿಸಿದೆ. ಬಟ್ಟೆಗಳನ್ನು ನೀಡಿ ಪ್ರೋತ್ಸಾಹ ನೀಡಿದೆ. ಅವರಲ್ಲಿರುವ ಕಲೆಗೆ ವೇದಿಕೆಯನ್ನು ಒದಗಿಸಿದೆ. ಒಟ್ಟಾರೆಯಾಗಿ ಸರಕಾರದ ಅದೆಷ್ಟೋ ಯೋಜನೆಗಳು ಅರ್ಹರ ಕೈಸೇರದೆ ದಾರಿತಪ್ಪಿವೆ. ಇಂತಹ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ಸಮಾಜ ಮತ್ತಷ್ಟು ಸುಧಾರಣೆಯಾಗುತ್ತದೆ ಎಂಬುದು “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ” ದ ಆಶಯ.
ಮಹಿಳೆ  ಸಹ ಪುರಷರಷ್ಟೆ ಸಮಾನರು. ಅವರು ಕೂಡ ಮುಖ್ಯ ವಾಹಿನಿಗೆ ಪರಿಚಯವಾಗಿ ಸಮಾಜದೊಟ್ಟಿಗೆ ಬೆರೆತು ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಬೇಕೆಂಬುದೆ ನಮ್ಮ ಆಶಯ .


Leave a Reply

Back To Top