ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!

ಆಗ ತೆಳ್ಳನೆ ಬಳ್ಳಿಯಂತೆ
ಬಳುಕುತ್ತಿದ್ದ ಹೆಂಡತಿ..
ಈಗ ಮಹಾವೃಕ್ಷದಂತೆ
ಸಂಪೂರ್ಣ ಬದಲು.!

ಅಂದು ಹಸಿರುಗದ್ಧೆಯಂತೆ
ಕಳೆಗಟ್ಟಿದ್ದ ಗಂಡನ ತಲೆ
ಇಂದು ಕೂದಲುದುರಿ
ಪೂರ್ಣ ಬಟಾಬಯಲು.!

ಈಗ ಪತಿರಾಯನಿಗೆ
ಅದೆಷ್ಟೇ ಪ್ರೀತಿಯುಕ್ಕಿದರೂ
ಕರಗಳ ಚಾಚಿ ಸತಿಯ
ಬಳಸುವುದೇ ಬಲುತ್ರಾಸು.!

ಈಗೀಗ ಸತೀಮಣಿಗೆ
ಅದೆಷ್ಟೇ ಸಿಟ್ಟುಬಂದರೂ
ಪತಿಯ ಜುಟ್ಟು ಕೈಗಳಿಗೇ
ಸಿಗದೆಂಬ ಇರಿಸುಮುರಿಸು.!


Leave a Reply

Back To Top