ಸವಿತಾ ದೇಶಮುಖ ರತನ್ ಟಾಟಾ ನೆನಪಿನಲ್ಲೊಂದು ಕವಿತೆ

ಟಾಟಾ ನಿನ್ನ ಅಗಲಿಕೆಯು
ಕಂಬನಿಯ ಕಂದರಕ್ಕೆ ನೂಕಿತು
ನಿನ್ನ ಸೌಜನ್ಯದ -ಸದ್ರುಪವು
ಕಣ್ಮುಂದೆ ಮಿಂಚಿತು
ಐಶ್ವರ್ಯದ ಒಡೆಯನೇ….
ನಿನ್ನ ಸರಳ- ಸಜ್ಜನಿಕೆಯ
ವಾತ್ಸಲ್ಯದ ಸೋತ್ತಾದವರು
ಅಸಂಖ್ಯ ದೀನ- ಅನಾಥರು
ನಿನ್ನ ರಕ್ಷಣೆಯ ಕವಚದಲ್ಲಿ
ಬೆಳೆದು ಬಂದ ಪ್ರತಿಮರು…
ನಿನ್ನ ಕರುಣಾಮೃತವು ಇನ್ನಿಲ್ಲ..
ದೇಶದ ಸಕಲ ಜನಾಂಗವೆ
ನಿನ್ನ ವಾರಸದಾರರು….
ಇಡೀ ಜಗದ ಜನರ
ಕಣ್ಣಲ್ಲಿ ಉಕ್ಕಿ ಕಂಬನಿಯು
ಕಾಯುತಿರು ಪರಿಶುದ್ಧ ದರುಶನಕ್ಕೆ
ನಿಸೀಮದ ಸೀಮೆ ದಾಟಿ ನಿಂತ
ನಿನ್ನ ಅಗಲಿಕೆಯು ಕರಳು
ಕೊರೆವ ಸುದ್ದಿಯು …ಮತ್ತೆ
ಮರಳಿ ಬಾ ಭಾರತಾಂಬೆಯ
ಪುಣ್ಯ ಗರ್ಭದಿ ಹೊಸ
ಉದಯ ಹೊಮ್ಮಿದಂತೆ
ನಿರ್ವಂಚನೆಯ ಕಾಯಕಕ್ಕೆ……


One thought on “ಸವಿತಾ ದೇಶಮುಖ ರತನ್ ಟಾಟಾ ನೆನಪಿನಲ್ಲೊಂದು ಕವಿತೆ

Leave a Reply

Back To Top