ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಪ್ರೀತಿಯೆಂದರೆ
ಪ್ರೀತಿಯೆಂದರೆ
ಅದು ಬರಿ ಶಬ್ದವಲ್ಲ
ಭಾವ ಹಸುರಿನ ತೋರಣ
ನೊಂದ ಮನಕೆ
ಮುದವ ನೀಡುವ
ಸ್ನೇಹ ಕರುಣೆ ಕಾರಣ
ಪ್ರೀತಿಯೆಂದರೆ
ಕವನ ಕಾವ್ಯವಲ್ಲ
ಗುಡ್ಡ ಬೆಟ್ಟದ ಚಾರಣ
ನೋವ ಮರೆಸಿ
ನಗೆಯ ಬೀರುವ
ಹೃದಯ ಭಾಷೆಯ ಹೂರಣ
ಪ್ರೀತಿಯೆಂದರೆ
ಮಳಿಗೆ ಸಂತೆಯಲ್ಲ
ತನು ಮನ ಧಾರಣ
ಹೊಸ ಭರವಸೆ
ಹೊಸ ಕನಸಿಗೆ
ಪ್ರೀತಿಯೊಂದೆ ಪ್ರೇರಣಾ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Excellent poem Sir
ಸುಂದರ ಭಾವಗಳ ಲಾಲಿತ್ಯ
ಅನುಬಂಧಗಳ ಸರಮಾಲೆ
ಪ್ರೇರಣೆಯ ಪಯಣ
ಸುತೇಜ
ಹೃದಯ ಭಾಷೆಯ ಹೂರಣ
ಸೂಪರ ಕವನ
A. M.T