ಸುಲೋಚನಾ ಮಾಲಿಪಾಟೀಲ ಕವಿತೆ ಬಾಪೂಜಿ

ಜಗದ ಹೃದಯ ಗೆದ್ದ ಮಹಾತ್ಮ
ವಿಶ್ವ ಕಂಡ ಆದರ್ಶ ವ್ಯಕ್ತಿಯ ಆತ್ಮ
ಬೆಳೆದ ಜೈನ ಧರ್ಮವ ಅರಸುತ
ಸತ್ಯ ಶಾಂತಿ ಅಹಿಂಸೆ ಮಂತ್ರ ಸಾರುತ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ ನಾಯಕ
ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ
ಬಹುಮುಖ ವ್ಯಕ್ತಿತ್ವದ ಸಾಧನೆಯ ಸಾಧಕ
ದೇಶದ ಹಿತದೃಷ್ಟಿಯಲ್ಲಿ ಜನ ಸೇವಕ

ಬಾಪೂಜಿ ಒಬ್ಬ ಪ್ರಬುದ್ಧ ಬರಹಗಾರ
ಹಲವಾರು ಪತ್ರಿಕೆಯ ಸಂಪಾದಕ
ಜನಾಂಗೀಯ ತಾರತಮ್ಯದ ಹೋರಾಟಗಾರ
ಎಲ್ಲ ಧರ್ಮವನ್ನು ಪ್ರೀತಿಸುವ ಹರಿಕಾರ

ಉಪವಾಸ ಸತ್ಯಾಗ್ರಹದಿಂದ ಪಡೆದ ಬಲ
ಆತನ ಅಹಿಂಸೆಯ ಮಾರ್ಗದ ನಡೆ ಪ್ರಭಲ
ಮೌಲ್ಯಾಧಾರಿತ ತತ್ವ ಒಳಗೊಂಡ ಜೀವನ
ಖಾದಿ ಬಟ್ಟೆಯಲಿ ಶಾಂತಿಯ ಪಥಚಲನ


Leave a Reply

Back To Top