ಗಾಯತ್ರಿ ಎಸ್ ಕೆ ಅವರಕವಿತೆ-ಗುರು

.ನಮಗೆ ದೀಪ
ದಾರಿ ತೋರುವ
ಸದ್ಗುರು..

ಅವಲಂಬನೆ ಇಲ್ಲದೆ
ಸ್ವಾವಲಂಬನೆ ತೋರುವ
ಹಾದಿಯವರು..

ಸದ್ಭಾವನೆ ನಮ್ಮಲ್ಲಿ
ನಿರಂತರ ಸಾಗುವ
ಪಯಣವದು..

ಸರಿದಾರಿ ನಮ್ಮದು
ಗುರು ಪಡಿನುಡಿಯ
ನೆನಪದು..

ಕಲಿಸಿದ ಗುರು ಪಾಠ
ಹೆಮ್ಮರವು ಬದುಕಿನ
ಸ್ಥಿತಿ ಗತಿಯ ಪ್ರಭುತ್ವ

ಯಾಚನೆಯಿಲ್ಲದೆ
ಯೋಚಿಸಿ ನಡೆಯುವ
ಚಿಂತನೆಯು..

ತಾಳ್ಮೆಯೆಂಬ ಭಕ್ತಿ
ಸಾಧನೆಯ ಶಕ್ತಿ
ತುಂಬಿರುವ ಕೀರ್ತಿ..

ಧನ್ಯವಾದ ಸಮರ್ಪಣೆ
ಗುರುಗಳಿಗೆ ಪ್ರೀತಿಯ
ನಮನ ಅವರಿಗೆ..


Leave a Reply

Back To Top