ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ ಅವರ ಎರಡುಕವಿತೆಗಳು
![](https://sangaati.in/wp-content/uploads/2024/06/meadow-5648849_640.jpg)
ಒಂದು
ಗರಿಕೆ ಹುಲ್ಲು
ತಿಂದು ಕೊಡುವ
ಪಶು
ಸೊರಗಿದರೂ
ಕೊಡುವುದು
ಕ್ಷೀರ ರಸ
ಹಾಲು ಮೊಸರು
ಹೈನು ತಿಂದ
ಗಟ್ಟಿಯಾದ
ಮನುಜ
ಕಕ್ಕುವನು ವಿಷ.
******
![](https://sangaati.in/wp-content/uploads/2024/06/grass-534873_640.jpg)
ಎರಡು
ಮರವೊಂದು
ಬೆಳೆದರೆ
ಪ್ರಾಣಿ ಪಕ್ಷಿ
ಆಶ್ರಯದ
ಗೂಡು
ಕಾಯಿ ಎಲೆ
ಹೂ ಹಣ್ಣು
ನೆರಳು
ಗಾಳಿ
ಮನುಜ ಕುಲಕೆ
ಉಸಿರಿನ
ಬೀಡು
ನಾಡಿಗೆ
ಹಸಿರಿನ
ಸೊಬಗಿನ
ಐಸಿರಿಯ
ಸೊಗಡು
ಲಲಿತಾ ಪ್ರಭು ಅಂಗಡಿ
![](https://sangaati.in/wp-content/uploads/2024/04/lalithaprabhu-671x1024.jpg)