ಮಾಲಾ ಚೆಲುವನಹಳ್ಳಿ ಕವಿತೆ- ಬರ

ಬಯಲಿನಲ್ಲಿ ನಲಿದ ಗರಿಕೆ
ಮುದುರಿ ನೆಲವ ಕಚ್ಚಿತು
ಬೀದಿಯಲ್ಲಿ ಬೀಸೋ ಗಾಳಿ
ಬಿಸಿಯ ಉಸಿರ ಕಕ್ಕಿತು

ಬರದ ಛಾಯೆ ಬಡಿದು ರೈತ
ಬದುಕಿಗಂಜಿ ನರಳಿದ
ಎದಿರುಗಾಣ್ವ ಬವಣೆ ಅರಿತು
ವರುಣನನ್ನೇ ಶಪಿಸಿದ

ಕಾಡಗಿಚ್ಚು ವನಕೆಲ್ಲ ಹರಡಿ
ಸರ್ವ ಭಕ್ಷ್ಯ ಮಾಡಿತು
ಖಗ ಮೃಗವು ವನವ ಬಿಟ್ಟು ಚೀರಿ
ದೂರ ದೂರ ಓಡಿತು

ಬೆವರ ಸೆಲೆಗೆ ಸೋತು ಕಾಯ
ಬಳಲಿ ನರಳಿ ನಲುಗಿತು
ಬೇಗೆಯಿಂದ ಸೊರಗಿ ತರುವು
ಜಲದ ತಾಣ ಅರಸಿತು

ಮುಗಿಲಿಗಾತ ಹೊಗೆಯ ಸ್ಪರ್ಶ
ಹಗೆಯ ರೂಪ ತಾಳಿತು
ಮೋಡ ತಾನು ತಡೆದು ವರ್ಷ
ಕುಹಕ ಮಾಡಿ ನಕ್ಕಿತು

5 thoughts on “ಮಾಲಾ ಚೆಲುವನಹಳ್ಳಿ ಕವಿತೆ- ಬರ

    1. ವಾಸ್ತವ ಚಿತ್ರಣ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸಿರುವಿರಿ ಅಕ್ಕ

  1. ಬರದ ಛಾಯೆ ಯ ಕವಿತೆ ಚೆನ್ನಾಗಿದೆ ಮಾಲಾ ಮೇಡಂ..

Leave a Reply

Back To Top