ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೋಹ ಮಾಯೆಯ ಬಂಧನಕ್ಕೆ
ನಿಲುಕದು ಆತ್ಮ
ನೆಲೆಸಿರೆ ಪರಮಾತ್ಮ ಹೃದಯದಲಿ
ಬ್ರಹ್ಮ ಸ್ವರೂಪಿ ಜೀವಾತ್ಮ
ಚೈತನ್ಯಪುಂಜವ

ಮಂಥನವದು ಮನದೊಳಗೆ
ಅಸೂಯೆಯ ಕುಂಭವದು
ಹೊರ ಬರಲು , ನುಂಗಬೇಕು
ಉಸಿರ ಬಿಗಿ ಹಿಡಿದು
ನಂತರ ಹರಿಯುವುದು
ಆಮೃತ ಧಾರೆ

ಸಿರಿ ಸಂಪತ್ತದು ಹರಿದು ಪೋಗುವ.
ನದಿಯ ನೀರಂತೆ
ಲೋಭ ಬೇಡ ನಶ್ವರವಾದ
ವಸ್ತುಗಳ ಮೇಲೆ
ತುಂಬೇಕು ಮನವ ಸುವಿಚಾರಗಳ
ಜಲದಿ

ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ
ಅಂತರಾತ್ಮವದು ಪರಮಾತ್ಮನ
ನೆಲೆಯಾಗುವುದು.

——————————————-

About The Author

1 thought on “ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ”

Leave a Reply

You cannot copy content of this page

Scroll to Top