ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆರುತ್ತಿದೆ ಜೀವ ಜಲ
ಕುಗ್ಗುತ್ತಿದೆ ಹಸಿರಬಲ
ಬಾಯಿ ತೆರೆಯುತ್ತಿದೆ ನೆಲ
ಒಣಗುತ್ತಿದೆ ರೈತನ ಹೊಲ

ಗುಟುಕು ನೀರು ಸಿಗುತ್ತಿಲ್ಲ
ಬಾಯಾರಿಕೆ ನೀಗುತ್ತಿಲ್ಲ
ಪಶು ಪಕ್ಷಿಗಳ ಗೋಳು ಕೇಳುವವರಿಲ್ಲ
ಬಿಸಿಲ ಬೇಗೆಗೆ ನರಳುವಿಕೆ ನಿಲ್ಲುತ್ತಿಲ್ಲ

ಒಣಗುತ್ತಿವೆ ಹಸಿರ ಗಿಡಮರಗಳು
ಬರಿದಾಗುತ್ತಿವೆ ಬಾವಿಗಳು ಮಾಯವಾಗುತ್ತಿದೆ ನದಿ ತೊರೆಗಳು
ವಿಲವಿಲ ಒದ್ದಾಡುತ್ತಿವೆ ಮತ್ಸ್ಯ ಸಂಕುಲಗಳು

ಹಗಲು ಎಲ್ಲೆಡೆ ಸುಡುವ ಬಿಸಿಲು ಮನೆಯಿಂದ ಹೊರಬರಲು ದಿಗಿಲು
ಮನೆಯ ಒಳಗೆ ಕುದಿಯುವ ಒಡಲು ಆಗುತ್ತಿಲ್ಲ ಜೀವಿಗಳ ಸಂಕಟ ನೋಡಲು

ನಿದ್ದೆ ಬಾರದು ಎಂದಿನಂತೆ ರಾತ್ರಿ
ಜಾಗರಣೆ ಮಾತ್ರ ಖಾತ್ರಿ ಖಾತ್ರಿ
ಜೊತೆಗಿರಲಿ ಯಾವುದಕ್ಕೂ
ನಿಮ್ಮ ಜೊತೆಯಾಗಿ ಒಂದು ಛತ್ರಿ
ನಿಮ್ಮ ಬದುಕನ್ನ ತಂಪಾಗಿಸಿಕೊಳ್ಳಿ
ಏನಂತ್ರಿ..?

ಸುಡದಿರು ನೀ ಅರುಣ
ತಂಪಾಗಿಸು ನಿನ್ನ ಕಿರಣ

ಬಾರೋ ಬಾರೋ ವರುಣ
ತೋರು ನೀ ಸ್ವಲ್ಪ ಕರುಣ
ಸುರಿಸು ನೀ ಮಳೆಯ ಹನಿಯ
ತೊಡಿಸು ನೀ ಜೀವಕಳೆಯ

ಕಳೆದುಬಿಡು ನೀ ಈ ಜಗದ ಕೊಳೆಯ ತುಂಬಿಸು ಹೊಳೆ ಕೆರೆಯ
ತಂಪಾಗಿಸು ಈ ಧರೆಯ
ಕೇಳಲಾರೆಯ ಈ ನನ್ನ ಕರೆಯ


About The Author

1 thought on “ನಾಗರಾಜ ಜಿ. ಎನ್. ಬಾಡ ಕವಿತೆ-ಬಾರೋ ವರುಣ”

Leave a Reply

You cannot copy content of this page

Scroll to Top