ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್

ಅವಳ ಸಾವಿನ ಜೊತೆ ಅವನ ಹೆಸರು ಕೆಸರಾಯಿತು
ಪುಟ ಪುಟದಲಿ ಅವರದೇ ಕಥೆ ಸುದ್ದಿಯಾಯಿತು//

ಬರೆದ ಪ್ರೇಮ ಪತ್ರಗಳೆಲ್ಲ ಗಾಳಿಯ ಮಾತಾದವು
ಇಬ್ಬರ ಗುಟ್ಟು ರಟ್ಟಾಗಿ ಬೀದಿ ಬೀದಿಲಿ ಹಾರಾಡಿತು//

ರಂಗಮಂಚವನೇರಿ ನಾಟಕವು ನೂರು ಆಟ ಕಂಡಿತು
ರಿಂಗಣದ ದನಿಗಳೆಲ್ಲ ಅವರದ್ದೇ ಹಾಡಾಗಿ ಹರಿಯಿತು//

ಅವಳ ಒಡಲ ಬಗೆದ ರಕುತ ಹಲವು ಬೀಜಗಳಾದವು
ಬೀಜ ಬಿತ್ತಿದವರೆಲ್ಲರ ಫಸಲು ಬೆಳೆದು ನಿಂತುಬಿಟ್ಟಿತು//

ಚಪಲ ಛಲಗಾರರು ಚಪ್ಪರಿಸಿ ಚಟವ ತೀರಿಸಿಕೊಂಡರು
ತಾಯಿ ನುಡಿದಳು ನಾಲಿಗೆ ಕಚ್ಚುವ ಹಲ್ಲನು ಮರೆಯಿತು//

Leave a Reply

Back To Top