ಗಂಗಾ ಚಕ್ರಸಾಲಿ ಅವರ ತನಗಗಳು

೧. ಬಿಸಿಲಿನ ಝಳಕ್ಕೆ
ಖಗಪ್ರಾಣಿ ತತ್ತರ
ಮನುಜನೀ ಇದಕ್ಕೆ
ಹೇಳಬೇಕು ಉತ್ತರ

೨.ಮುಚ್ಚಿವೆ ಶಾಲೆಗಳು
ಬಂಧಿ ಮನೆಯೊಳಗೆ
ರವಿಮಾಮ ನಮಗೆ
ಬಿಡುತ್ತಿಲ್ಲ ಹೊರಗೆ

೩.ಕೆಂಡದುಂಡೆಯಾಗಿದೆ
ಸೂರ್ಯನ ಈ ಒಡಲು
ಕಾರಣವಿದಕ್ಕೇನೆ…
ಖಾಲಿ ಕಾಡಮಡಿಲು

೪.ಅವನು ಬಿಸಿಕಿರಣ
ಇವಳು ಬೆಂದೊಡಲು
ಒಂದಾಗಲು ಬೇಕೇನು
ಘನಮೋಡ ಮುಗಿಲು

೫.ಮಾವು ಬೇವಿಗೆ ಇಷ್ಟ
ಬೇಸಿಗೆಯ ಈ ಕಾಲ
ಸೂಜಿ ದುಂಡುಮಲ್ಲಿಗೆ
ಘಮಕ್ಕಿದು ಸಕಾಲ

೬.ಮನೇಲಿದ್ದರೂ ದೂರು
ಎಂಥಾದ್ದಿದು ಬೇಸಿಗೆ
ಬಯಲ ಪ್ರಾಣಿಗಳ
ಕಷ್ಟ ಕಾಣದೆಮಗೆ


Leave a Reply

Back To Top