ಶಂಕರಾನಂದ ಹೆಬ್ಬಾಳ ಅವರ ಗಜಲ್

ನುಡಿದ ಮಾತಿಗೆ ಉತ್ತರವನು ನೀಡದೆ ಹೋದೆ
ಸುಡುವ ಬಿಸಿಲಲ್ಲೂ ಪ್ರೀತಿಯ ಬರುವಿಕೆಗೆ ಕಾದೆ

ಮಾಡದಿಹ ತಪ್ಪಿಗೆ ಮುನಿಸಿನಲ್ಲೆ ಜುಲ್ಮಾನೆ ಏಕೆ
ಕಾಡುವ ದುಃಸ್ವಪ್ನವೆ ಹೃದಯಕೆ ಆಘಾತದ ಬಾಧೆ

ಮೋಡಿಯಲಿ ಗೆದ್ದು ಒಲವಲ್ಲಿ‌ ಬೀಳಿಸಿದ ರಮಣಿ
ಹೂಡಿದ ಬಾಣದ ತುದಿಯಿಂದ ಎದೆಯ ಕೋದೆ

ನೋಡುವ ಅಕ್ಷಿಯ ನೋಟದಿ ಬೆರಗು ಮೂಡಿಸಿದೆ
ದಡಸೇರದ ನೀನಿಲ್ಲದ ಜೀವನ ಬೆಳಕಿಲ್ಲದ ಪೊದೆ

ಜಡವಾದ ಮನಸಿಗೆ ಸಾಂಗತ್ಯ ಬೇಡವಾದೀತು ಸಖಿ
ಅಡವಿಯ ಅಭಿನವನ ಕಾವ್ಯದಲಿ ನೀನೊಂದು ಗಾದೆ


Leave a Reply

Back To Top