ಕಾವ್ಯಯಾನ

ಡಾ. ಬಿ.ಆರ್ ಅಂಬೇಡ್ಕರ್

B.R. Ambedkar Stock Pictures, Royalty-free Photos & Images - Getty ...

ಸಿಂಧು ಭಾರ್ಗವ್

ಮಹಾರಾಷ್ಟ್ರದ ಅಂಬೇವಾಡದಲಿ
ಅಂಬೆಗಾಲಿಡುತ ನೀ ಬಂದೆ
ಭೀಮಬಾಯಿಯವರ
ಕೊನೆಯ ‌ಮುದ್ದಿನ ಮಗನಾದೆ

ಶೋಷಿತ ಜನರ ನೋವನು
ಮರೆಸಲು ಮುಂದಾದೆ
ಹಕ್ಕುಗಳಿಗಾಗಿ ಹೋರಾಟ‌
ನಡೆಸಿ ದನಿಯಾದೆ

ಮುಗ್ಧ ಜನರಿಗೆ
ದೀನದಯಾಳು ನೀನಾದೆ
ಜ್ಞಾನದ ದೀಪವ ಮನದಲಿ
ನೀ ಬೆಳಗಿಸಿದೆ

ಸಂವಿಧಾನವ ರಚನೆಯ ಮಾಡಿ
ಜನರಿಗೆ ನೀ ನೆಲೆ ನೀಡಿದೆ
ಬುದ್ಧನ ಅನುಯಾಯಿಗಾಗಿ ಧೈರ್ಯದ ಗುಂಡಿಗೆಯ ಹೊಂದಿದೆ

ಅಸ್ಪರ್ಶತೆಯ ಅಂಧಕಾರವ
ನೀ ಹೊಡೆದೋಡಿಸಿದೆ
ಸಮಾನತೆಯ ಸಾರುತ ಜನರ ಒಗ್ಗೂಡಿಸಿದೆ

ಭಾರತಾಂಬೆಯ ಕುವರನಾಗಿ
ದೇಶಕೆ ಹೆಮ್ಮೆಯ ನೀ ತಂದೆ
ಇಂದಿಗೂ ಎಲ್ಲರ ಮನದಲಿ‌
ನೀವು ಅಮರರಾಗಿರುವಿರಿ

*****

Leave a Reply

Back To Top