ಕಾವ್ಯಯಾನ

ಬಡವರ ಆಕರ

ರಾಹು ಅಲಂದಾರ

ಓ ಬಡವರ ಆಕಾರ
ದೀನ ದಲಿತರ ಸಾಹುಕಾರ
ಜಗಜ್ಯೋತಿ ಅಂಬೇಡ್ಕರ್
ಹಾಕುವೆ ನಿಮಗೆ ನಮಸ್ಕಾರ

ಬಡವರ ಉತ್ತರಕ್ಕಾಗಿ ದುಡಿದೆ
ದೀನ ದಲಿತರ ಹಿತಕ್ಕಾಗಿ ನಡೆದೆ ಸಮಾನತೆಯನ್ನೇ ನುಡಿದೆ
ಜನತೆಯ ಏಳಿಗೆಗಾಗಿ ಮಡಿದೆ

ರಚಿಸಿದೆ ನೀ ಸಂವಿಧಾನ
ಆಯಿತು ಸರ್ವರಿಗೂ ಅನುದಾನ
ಕನಸಿಟ್ಟೆ ನೀ ಎಲ್ಲರಲ್ಲೂ ಸಮಾನ
ನಮಗೆಲ್ಲಾ ನೀ ಆಶಾಕಿರಣ

ಉಳಿದೆ ಎಲ್ಲರ ಮನದಲ್ಲಿ
ಸಮಾನತೆಯನ್ನೋ ಬೆಳಕು ಚೆಲ್ಲಿ ನೆನಪಿಸುವರು ಜನತೆ ಬಾಳಲ್ಲಿ
ಹುಟ್ಟಿ ಬಾ ಇನ್ನೊಮ್ಮೆ ಜಗದಲ್ಲಿ

**********

Leave a Reply

Back To Top