ಲಲಿತಾ ಪ್ರಭು ಅಂಗಡಿ ಕವಿತೆ-ಕವಿತೆ

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಕವಿತೆ

ಕವಿ ಮನಸಿನ ಕವಿತೆಯ ಕೂಗನು
ಕರಬೀಸಿ ಕರೆದಳು ಮಯೂರವಾಹಿನಿ
ಬೆರಳತಂತಿಗೆ ಅಕ್ಷರ ಮೀಟುವಂತೆ
ನೊಂದಮನಕೆ ಮಧುರಮಿಲನದಂತೆ
ಮುಗ್ಧ ಕಂದನ ನಿದ್ದೆಗೆ
ಜೋಳಿಗೆಯ ಶಬ್ದಗಳು ಜೀಕುವಂತೆ
ಸಂಗೀತದ ಕಲರವಕೆ ಸರಿಗಮದ ಸುಧೆಯಂತೆ
ಹೆಜ್ಜೆ ಹೆಜ್ಜೆಗೂ ಹಿಮ್ಮೆಟ್ಟುವ ಮನಕೆ
ಗೆಜ್ಜೆಯ ಗುಂಗು ಬೆನ್ನಟ್ಟುವಂತೆ
ಶ್ರೃಂಗಾರ ಲಹರಿಗೆ ಸಂಭ್ರಮಿಸುವಂತೆ
ನಿಸರ್ಗದೊಡನೆ ಸಗ್ಗವನೇರುವ ಸಿಂಚನದಂತೆ
ಆತ್ಮೋಲ್ಲಾಸವ ಕಲಿಸಿದ ಕವಿತೆ
ನಿರಾಸೆ ಸೋಲು ದುಃಖದುಮ್ಮಾನಗಳ
ನಿವಾರಿಸುವ ಅಂಗಳಕೆ
ಮಂಗಳ ಹಾಡಿದ ಕವಿತೆ.


ಲಲಿತಾ ಪ್ರಭು ಅಂಗಡಿ

Leave a Reply

Back To Top