ಕಾವ್ಯ ಸಂಗಾತಿ
ಮುಗಿಲ ಮಲ್ಲಿಗೆ…. (ವರಕವಿ ನೆನಪಲ್ಲಿ)
ಅಕ್ಷತಾ ಜಗದೀಶ

ಸಾಧಿಸಲೇಂದೆ ಜನ್ಮತಳೇದ
ಸಾಧನಕೇರಿಯ ಈ ಕುವರ
ವರಕವಿಯಾಗಿ ಕನ್ನಡ ತಾಯಿಯ
ಸೇವೆಗೈದು…
ಮನಮಿಡಿಯುವ ಭಾವಗೀತೆಗೆ
ಸರದಾರನಾದರು….
ಕವನಗಳಲ್ಲೆ ಕುಣಿಯೋಣವೆಂದ
ಅವಧೂತ ಕವಿ…
ಪಾತರಗಿತ್ತಿ ಪಕ್ಕ ಪದರಚಿಸಿದ
ರಸ ಋಷಿ….
ಯುಗಾದಿಯ ಸವಿಉಣಿಸಿದ
ವರಕವಿ…
ಪ್ರೀತಿ.. ಪ್ರೇಮದ ಪರಿತಿಳಿಸಿದ
ಚೇತೋಹಾರಿ ಕವಿ…
ಚಿತ್ತಿಯ ಮಳೆಯ ಸಂಜೆಗೆ
ಕರೆದೊಯ್ದ ದಾರ್ಶನಿಕ ಕವಿ…
ನಾಕುತಂತಿಯ ನಾಡಿಗೆ ನೀಡಿದ
ಸಾಹುಕಾರ…
ಅರಳು ಮರಳು ಎನ್ನುತಲೇ
ಒಲವೇ ನನ್ನ ಬದುಕು ಎಂದ
ಮಹಾನ್ ಚೇತನ…
ಮೇಘಧೂತದ ನಾದಲೀಲೆ ಹೊರಡಿಸಿ
ಮುಗಿಲ ಮಲ್ಲಿಗೆ ಮೇಲೆ
ಕಾಮಕಸ್ತೂರಿಯ ಉಯ್ಯಾಲೆ ತೂಗಿಸಿದ
ವಿನಯವಂತರು..
ಅಂಬಿಕಾತನಯದತ್ತರು…
ಮರೆಯಲಾಗದ ಹಾಡುಗಳ
ಸವಿಯುಣಿಸಿ..
ಹೃದಯ ಸಮುದ್ರದ ಮೇಲೆ
ನೆನಪುಗಳ ಗರಿ ಬಿಡಿಸಿ
ಮುಗಿಲ ಮಲ್ಲಿಗೆಯಾದ
ಬೇಂದ್ರೆಯವರೇ..
ನಿಮಗಿದೋ ಜನುಮ ದಿನದ
ಶುಭಾಶಯಗಳು…..——

Excellent Akshatha