ಹಾ ಮ ಸತೀಶ-ಗಝಲ್

ಕಾವ್ಯ ಸಂಗಾತಿ

ಗಜಲ್

ಹಾ ಮ ಸತೀ

ನಾದವಿರದ ಕೊಳಲಿಂದ ಏನು ಪ್ರಯೋಜನ
ಪ್ರೀತಿಯಿರದ ಸವಿಯಿಂದ ಏನು ಪ್ರಯೋಜನ

ಕಚ್ಛೆಯನ್ನು ಕಟ್ಟಿದರೂ ಹುಚ್ಚರಿಹರಿಲ್ಲಿ ಏಕಿಂದು
ಸ್ವಂತಿಕೆಯಿಲ್ಲದ ಮಡಿಯಿಂದ ಏನು ಪ್ರಯೋಜನ

ಮನವಿದ್ದರೂ ಹತ್ತುತಲೆ ರಾವಣರೇ ತುಂಬಿಹರು
ಚೈತ್ರವಿರದಿಹ ನೆಲೆಯಿಂದ ಏನು ಪ್ರಯೋಜನ

ಒಬ್ಬರನೊಬ್ಬರು ತುಳಿಯಲು ಹೊರಟಿದ್ದು ಏತಕೊ
ವಿಚಿತ್ರವೆನಿಪ ನುಡಿಯಿಂದ ಏನು ಪ್ರಯೋಜನ

ಸಾರವಿಲ್ಲದ ಬದುಕದುವೇ ಕಾಣುತಿದೆ ಈಶಾ
ತೃಪ್ತಿಯಿಲ್ಲದ ನಡೆಯಿಂದ ಏನು ಪ್ರಯೋಜನ


ಹಾ ಮ ಸತೀಶ ಬೆಂಗಳೂರು

Leave a Reply

Back To Top