ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶರಣರು

ಆಶಾ ಯಮಕನಮರಡಿ

ನೂರು ತೊರಗಳಂತೆ ಬಂದರು
ದೂರದೂರಿನಿಂದ ಶರಣರು
ಕಲ್ಯಾಣವೆಂಬ ಕಡಲ ಕೂಡಲು
ಅನುಭಮಂಟಪವ ಸೇರಲು

ನಾಡ ಗಡಿಗಳನು ದಾಟಿ
ದೊರೆತನವ ತೊರೆದು
ತಾನೆ ಶ್ರೇಷ್ಠನೆಂಬುದ ಮರೆತು
ಬೆರೆತರಿಲ್ಲಿ ಮೇಲುಕೀಳಿಲ್ಲದೆ

ದುಡಿಯದೆ ಪಡೆಯಲಿಲ್ಲ
ದಾಸೋಹ ಮಾಡದೆ ಉಣಲಿಲ್ಲ
ಗುರು ಲಿಂಗ ಜಂಗಮಕ್ಕೆ ಅರ್ಪಿಸಿದರು
ತನು ಮನ ವಧನವನೆಲ್ಲ

ಅಂಬಲಿಯನುಂಡ ಅನುಭಾವಿಗಳು
ದುಂಡು ದೌಲತ್ತನು ಕಡೆಗಣಿಸಿ
ಹೊನ್ನಿನೊಳಗೊಂದೊರೆಯ
ಬಯಸದಾ ಭಕ್ತರಿವರು ನಮ್ಮ
ಕಲ್ಯಾಣದ ಶರಣರು


About The Author

1 thought on “ಆಶಾ ಯಮಕನಮರಡಿ ಕವಿತೆ-ಶರಣರು”

Leave a Reply

You cannot copy content of this page

Scroll to Top