ಶಿವಾನಂದ ತಗಡೂರು ಅವರ ಅರ್ಥಪೂರ್ಣ ಪತ್ರಿಕಾ ಕೆಲಸಗಳು

ವ್ಯಕ್ತಿ ಚಿತ್ರ

ಶಿವಾನಂದ ತಗಡೂರು ಅವರ ಅರ್ಥಪೂರ್ಣ ಪತ್ರಿಕಾ ಕೆಲಸಗಳು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಅರ್ಥಪೂರ್ಣ ಪತ್ರಿಕಾ ಕೆಲಸಗಳೂ..!
ಮತ್ತು
ಎಲ್ಲಾ ಜಿಲ್ಲಾ ಪತ್ರಿಕಾ ಭವನಗಳ ನಿರ್ವಹಣೆಯನ್ನು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಧ್ಯಕ್ಷರಾದ ಮೇಲೆಯೇ ಮಾಡಿರುವುದೂ..! —

ಈ ಮೊದಲು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ರಾಜ್ಯದಲ್ಲಿ ಇರುವ ಉಳಿದೆಲ್ಲಾ ಜಿಲ್ಲಾ ಪತ್ರಿಕಾ ಭವನಗಳ ನಿರ್ವಹಣೆಯು ಹೇಗಿತ್ತೋ, ಅದು ಈಗ ಬೇಡದ ವಿಷಯವು.
ಶ್ರೀಮಾನ್ಯ ಸಾಹಿತಿ ಮತ್ತು ಪತ್ರಕರ್ತರಾದ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ ಉಳಿದೆಲ್ಲಾ ‘ಜಿಲ್ಲಾ ಪತ್ರಕರ್ತರ ಪತ್ರಿಕಾ ಭವನ’ಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು, ಮತ್ತು ಮಾಡುತ್ತಿರುವುದು..!

ಅಲ್ಲದೇ ಈ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ಕೊಂದು ಅರ್ಥ ಬಂದದ್ದು ಈ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ.

ಇವರು ನಡೆಸಿಕೊಂಡು ಬರುತ್ತಿರುವ ಹಿರಿಯ ಅದೂ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಪತ್ರಕರ್ತರನ್ನು ಗುರುತಿಸಿ, ‘ಮನೆಯಂಗಳದಲ್ಲಿ ಮನದುಂಬಿ ನಮನ’ ಎಂಬ ಆ ಹಿರಿಯ ವಿಶ್ರಾಂತ ಸ್ಥಿತಿಯಲ್ಲಿರುವ ಪತ್ರಕರ್ತರಿಗೆ ಗೌರವ ಪೂರ್ವಕ ಸನ್ಮಾನವನ್ನು ಅವರ ಮನೆಯಂಗಳಕ್ಕೇ ಹೋಗಿ ಅವರಿಗೆ ಒಂದಷ್ಟು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತಿರುವುದು ಏನಿದೆಯಲ್ಲ, ಅದು ನಿಜಕ್ಕೂ ಅಭಿನಂದನಾರ್ಹವಾದ ವಿಷಯವಾಗಿದೆ..!

ಅಲ್ಲದೇ ಸಂಕಷ್ಟದಲ್ಲಿರುವ ರಾಜ್ಯದ ಪತ್ರಕರ್ತರಿಗೆ ಒಂದಷ್ಟು ಸಾಂತ್ವನದ ಸಹಾಯವನ್ನು ಮಾಡಿಸುತ್ತಿರುವುದು. ರಾಜ್ಯ ಸರ್ಕಾರದಿಂದ ನಿಜವಾದ ಪತ್ರಕರ್ತರ ಗೋಳುಗಳಿಗೆ ಸಹಕಾರಿಯಾಗಿ ನಿಂತಿರುವುದು ನಿಜಕ್ಕೂ ಅನನ್ಯ..!
ಇಷ್ಟೇ ಅಲ್ಲದೇ ಪತ್ರಿಕಾ ವೃತ್ತಿಯಲ್ಲಿಯೇ ಯಾವ್ಯಾವದೋ‌ ಕಾರಣದಿಂದ ಮೃತರಾದ ಪತ್ರಕರ್ತರ ಕುಟುಂಬಗಳಿಗೆ ಒಂದಷ್ಟು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಂದ ಸಹಾಯವನ್ನು ಮಾಡಿಸುತ್ತಿರುವುದೂ ನಿಜವಾಗಿಯೂ ‘ಮಾನವೀಯ ಮೌಲ್ಯ’ಗಳನ್ನು ಎತ್ತಿಹಿಡಿಯುವ ಕೆಲಸಗಳೇ ಆಗಿವೆ..!

ಹೀಗೆಯೇ ‘ಅತ್ಯಮೂಲ್ಯ ಮಾನವೀಯ ಮೌಲ್ಯಗಳ’ ಕೆಲಸಗಳು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ ನಡೆಯುತ್ತಿರುವುದು..!

ಇಷ್ಟೇ ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ‘ಪತ್ರಿಕಾ ಭವನ’ಗಳಾದದ್ದು ಈ ಶಿವಾನಂದ ತಗಡೂರು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೇಲೆಯೇ..!

ಹಾಗೆಯೇ ರಾಜ್ಯದ ಎಲ್ಲಾ ಜಿಲ್ಲೆಗಳ ‘ಪತ್ರಿಕಾ ಭವನ’ ನಿರ್ಮಾಣವಾದ ಬಗೆಯನ್ನು ಒಮ್ಮೆ ಹಾಗೆಯೇ ನೋಡಿರಿ. ಅದು ಹೀಗಿದೆ..!

ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಿಕಾ ಭವನ ನಿರ್ವಹಣೆಯನ್ನು ಕೇವಲ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು ಮಾಡುತ್ತಿದೆ. ಅದೂ ಸಾಹಿತಿ ಮತ್ತು ಪತ್ರಕರ್ತ ಶಿವಾನಂದ ತಗಡೂರು ಅವರು ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಮೇಲೆಯೇ..!

1932 ರಲ್ಲಿ ಡಿ.ವಿ.ಗುಂಡಪ್ಪ ಅವರಿಂದ ಸ್ಥಾಪನೆಯಾದ ಸಂಘವು ರಾಜ್ಯದಾದ್ಯಂತ ಇನ್ನೂರಕ್ಕೂ ಹೆಚ್ಚು ಶಾಖೆಗಳನ್ನು ಈಗ ಹೊಂದಿದೆ. ಎಂಟು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸಂಘದ ಸದಸ್ಯರಾಗಿದ್ದಾರೆ..!
ಪತ್ರಕರ್ತರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ರಾಜ್ಯದ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ವು. ಅದೂ ಶಿವಾನಂದ ತಗಡೂರು ಅವರ ಪತ್ರಿಕೋದ್ಯಮದ ಒಳತಿನ ಕಾರಣಕ್ಕೆ..!

ಬಿ.ಎಸ್.ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಆ ಸಮಯದಲ್ಲಿ ರಾಜ್ಯದ 25 ಜಿಲ್ಲಾ ಪತ್ರಿಕಾ ಭವನಗಳಿಗೆ ತಲಾ 25 ಲಕ್ಷ ಅನುದಾನ ಬಿಡುಗಡೆ ಮಾಡಿದ್ದರು. ಬೀದರ್ ಜಿಲ್ಲೆಯ ಪತ್ರಿಕಾ ಭವನಕ್ಕೂ ಅದೇ ಸಮಯದಲ್ಲಿ 25 ಲಕ್ಷ ಅನುದಾನ ಬಂದಿತ್ತು. ಇಲ್ಲಿಯ ಜನಪ್ರತಿನಿಧಿಗಳ ಉದಾರ ಮನೋಭಾವದಿಂದ ಬೀದರ್ ಜಿಲ್ಲಾ ಕೇಂದ್ರದಲ್ಲಿ ಅತ್ಯುತ್ತಮ ಕಟ್ಟಡ ನಿರ್ಮಾಣವಾಗಲು ಕಾರಣವಾಗಿತ್ತು. ಈ ಉದಾರತೆಗೆ ‘ಕಾರ್ಯನಿರತ ಪತ್ರಕರ್ತರ ಸಂಘ’ವು ಕೃತಜ್ಞತೆ ಸಲ್ಲಿಸುತ್ತದೆ.

‘ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಕೋವಿಡ್ ಅವಧಿಯಲ್ಲಿ ಪ್ರಾಣ ಕಳೆದುಕೊಂಡ ಬೀದರ್ ನ ಫೋಟೊ ಗ್ರಾಫರ್ ಕುಟುಂಬಕ್ಕೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಮನವಿ ಮೇರೆಗೆ 5 ಲಕ್ಷ ರೂಪಾಯಿ ಹಣದ ಆರ್ಥಿಕ ನೆರವು ಕೊಡಿಸಿದ್ದಾರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು..!

ಪ್ರಸ್ತುತವಾಗಿ ‘ವಿಜಿಟಿಂಗ್ ಕಾರ್ಡ್’ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ತರಬೇತಿ ಹಾಗೂ ಅನುಭವ ಇಲ್ಲದವರೂ ಬರೀ ‘ಲೊಗೊ’ವನ್ನು ಹಿಡಿದುಕೊಂಡು ಬಂದು ಪತ್ರಿಕಾ ರಂಗದ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಅದನ್ನು ಪ್ರತಿಯೊಬ್ಬರೂ ತಡೆಯಬೇಕು’ ಮೊದಲು..!

ಪತ್ರಕರ್ತರ ವೃತ್ತಿ ಪವಿತ್ರವಾದದ್ದಾಗಿದೆ. ಪತ್ರಕರ್ತರು ನೊಂದವರ ಪರವಾಗಿ ಧ್ವನಿಯಾಗಿ ನಿಲ್ಲಬೇಕು. ಹೃದಯದಲ್ಲಿ ನ್ಯಾಯಾಧೀಶ ಹಾಗೂ ಪತ್ರಕರ್ತ ಇದ್ದಾಗ ಮಾತ್ರ ಸಮಾಜ ಗುರುತಿಸುವಂತಹ ಕೆಲಸ ಮಾಡಲು ಸಾಧ್ಯವಾಗುತ್ತದೆ..! ಪತ್ರಕರ್ತರು ಈ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.!!

ಸುದ್ದಿ ಮನೆಯಲ್ಲಿರುವವರೆಲ್ಲರೂ ಪತ್ರಕರ್ತರೇ. ಅವರಲ್ಲಿ ಒಡುಕು ಮೂಡಬಾರದು. ಸಂಪಾದಕರ ಸಂಘ ಹಾಗೂ ಪತ್ರಕರ್ತರ ಸಂಘದ ಮಧ್ಯೆ ಭಿನ್ನಾಭಿಪ್ರಾಯಗಳು ಇರಬಾರದು. ಹಿಂದೆ, 56 ಕೋಟಿ ರೂಪಾಯಿ ಜಾಹೀರಾತು ಬಿಲ್ ಬಾಕಿ ಇದ್ದಾಗ ಸಂಪಾದಕರ ಸಂಘದವರು ಕೆಯುಡಬ್ಲ್ಯೂಜೆ‌ ಬಳಿ ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರ ಸಂಘವು ಮುಖ್ಯಮಂತ್ರಿಗೆ ಮನವಿ ಮಾಡಿ ಜಾಹೀರಾತು ಬಿಲ್‍ಗಳನ್ನು ಬಿಡುಗಡೆ ಮಾಡಿಸಿತ್ತು. ಹೀಗೆಯೇ ಇಂತಹ ಪತ್ರಕರ್ತರ ಕೆಲಸಗಳಿಗೆ ಕಟಿಬದ್ಧರಾಗಿ ನಿಂತಿದ್ದಾರೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು..!

ಪತ್ರಕರ್ತರು ಸಮಾಜಮುಖಿಯಾಗಿ ನಿಲ್ಲಬೇಕು ಎಂಬುದಕ್ಕೆ ಇಡೀ ನಾಡಿಗೆ ಚಿರಪರಿಚಿತರಾದ ಶಿವಾನಂದ ತಗಡೂರ ಅವರೇ ನೇರ ಸಾಕ್ಷಿಯಾಗಿದ್ದಾರೆ. ಕೋವಿಡ್ ಮೊದಲು ಹಾಗೂ ಎರಡನೇ ಅವಧಿಯಲ್ಲಿ ನಾಡಿನ ಸುಮಾರು ಐವತ್ತಕ್ಕೂ ಅಧಿಕ ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ‘ಕೋವಿಡ್ ಪರಿಹಾರ ನಿಧಿ’ಯನ್ನು ಕೊಡಿಸುವುದಲ್ಲದೇ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯದ ನೂರೈವತ್ತಕ್ಕೂ ಅಧಿಕ ಪತ್ರಕರ್ತರಿಗೆ ವೈದ್ಯಕೀಯ ನೆರವು ಕೊಡಿಸುವ ಕಾರ್ಯವನ್ನೂ ಈ ಶಿವಾನಂದ ತಗಡೂರ ಅವರು ಮಾಡಿದ್ದಾರೆ..!

ಅವರ ಮಾರ್ಗದರ್ಶನದಲ್ಲಿ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ’ ಹೆಮ್ಮರವಾಗಿ ಬೆಳೆದು ನಿಂತಿದೆ ಈಗ. ಸುದ್ದಿ ಮನೆಯಲ್ಲಿ ಕೆಲಸ ಮಾಡುವ ನಾವೆಲ್ಲರೂ ರಾಜ್ಯದ ಪತ್ರಕರ್ತರೆಲ್ಲರೂ ಅವರ ಮಾರ್ಗದರ್ಶನವನ್ನು ಪಡೆಯುತ್ತಾ ಮುಂದೆ ಸಾಗಬೇಕು..! ಆಗಲೇ ಒಂದು ಅರ್ಥಪೂರ್ಣ ‘ಸುದ್ದಿ ಮನೆ’ಯ ಕೆಲಸವನ್ನು ಮಾಡಲು ಸಾಧ್ಯವು ಎಂಬುದೇ ನನ್ನ ಅಭಿಪ್ರಾಯವಾಗಿದೆ..!

ಸತ್ಯ, ನಿಷ್ಠೆ ಹಾಗೂ ಪ್ರಾಮಾಣಿಕ ಪತ್ರಕರ್ತರಿಗೆ ಸಮಾಜದಲ್ಲಿ ಯಾವತ್ತೂ ಬೆಲೆ ಇದ್ದೇ ಇರುತ್ತದೆ. ನೈಜ ಪತ್ರಕರ್ತರಾದವರು ತಮ್ಮ ವೃತ್ತಿ ಧರ್ಮ ಪಾಲಿಸಲು ಸದಾ ಗಾಂಭಿರತೆಯಿಂದಿರಬೇಕಾಗುತ್ತದೆ. ಸತ್ಯಕ್ಕೆ ಸನಿಹ ಸುದ್ದಿಗಳು ಬಿತ್ತರಿಸುವ ಕಾಳಜಿ ಪತ್ರಕರ್ತರಲ್ಲಿರಬೇಕಾಗುತ್ತದೆ. ಇದನ್ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಸದಾ ಈ ನವನವೀನ ಪತ್ರಕರ್ತರಿಗೆ ಹೇಳುತ್ತಲೇ ಬರುತ್ತಿರುವುದು..!

ಕೆ.ಶಿವು.ಲಕ್ಕಣ್ಣವರ

Leave a Reply

Back To Top