ಕಾವ್ಯ ಸಂಗಾತಿ
ಗಜಲ್
ಸುಕನಸು
ಮೆಚ್ಚುಗೆ ಸೂಸುವ ಗುಣ ಕಳೆದುಹೋಗಿದೆ
ತಪ್ಪನು ಹುಡುಕುವ ಚಟ ಬೆಳೆದುಹೋಗಿದೆ
ತಮ್ಮತಮ್ಮ ಅವಗುಣಕೆ ವಕೀಲರೆ ಎಲ್ಲರೂ
ತಮ್ಮಂತೆ ಪ್ರತಿಯೊಬ್ಬರೆಂದು ಮರೆತುಹೋಗಿದೆ
ಅನ್ಯರ ದೋಷಗಳಿಗೆ ನ್ಯಾಯಾಧೀಶರೆಲ್ಲರು
ಮಾತಿನ ಸಿಡಿಮದ್ದು ರಕ್ತದಲಿ ಬೆರೆತುಹೋಗಿದೆ
ಸತ್ಯ ತಿರುಚಿ ಪಾಪದ ದಿಕ್ಕು ತಪ್ಪಿಸುವ ಖಳರು
ಹಾಲಲ್ಲಿ ನೀರಂತೆ ಸ್ವಾರ್ಥ ಜಗದಿ ಕಲೆತುಹೊಗಿದೆ
ಕೃತಕ ಸುಮ ಸುಂದರ ದುಂಬಿಯು ನೆಚ್ಚುವಷ್ಟು
ತರತಾರ ವೇಷದಿಂದ ನಂಬಿಕೆ ಒಡೆದುಹೋಗಿದೆ