ಕರ್ನಾಟಕ ರಾಜ್ಯೋತ್ಸವ ವಿಶೇಷ

ಕನ್ನಡವೇ ಸತ್ಯ….!

ಶಿವಲೀಲಾ ಹುಣಸಗಿ

ಕನ್ನಡವೆಂಬುದು ಬರಿ ಭಾಷೆಯಲ್ಲ
ಕರುನಾಡ ಜೀವನಾಡಿಯಿದು
ಕನ್ನಡವೆಂಬುದು ಅಸಡ್ಡೆಯಲ್ಲ
ಅಸಡ್ಡೆಗೈವರ ಎದೆಬಗಿದರೆ ಕಾಂಬೆ
‘ಅಮ್ಮಾ’ ಎಂಬ ಹೆಸರೆ ಸಾಕೆಂಬೆ
ಮನಸಿನೊಳೊಂದು ಚೈತನ್ಯ ಚಿಗುರಿ
ಕನ್ನಡದ ನುಡಿಸಿರಿಯ ಮಿಂಚಾಗಲಿ
ಕೋಟಿ ಕನ್ನಡಿಗರ ಎದೆಮಿಡಿಯಲಿ
ಗಂಧದ ನಾಡಲ್ಲಿ ಹಸಿರುಡುಗೆ ತೊಟ್ಟಂತೆ
ಜೀವಜಲ ಕಾವೇರಿಯಂತೆಯುಕ್ಕಿ
ಕನ್ನಡವೆಂಬ ನುಡಿ ಕರುಳಬಳ್ಳಿಯಂತೆ
ಉಸಿರಿದ್ದಷ್ಟು ಗಳಿಗೆ ಕನ್ನಡವಪ್ಪಿ
ತಾರತಮ್ಯದ ಬದುಕ ಸುಟ್ಟು ಬಿಡಿ
ಕಿಟಕಿಗಳು ಪರಭಾಷೆಗಿರಲಿ
ಮಹಾದ್ವಾರ ಕನ್ನಡಾಂಬೆಯ ಕರೆತರಲಿ
ನಾವೆಲ್ಲ ಕನ್ನಡಿಗರೆಂಬ ಅಭಿಮಾನವಿರಲಿ
ನಮ್ಮ ಕೂಸ ನಾವ್ ಪೊರೆಯದೆ
ಅನ್ಯ ಕೂಸ ಮೆರೆಸಿದರೆ ಉಳಿಗಾಲ ಉಂಟೇ
ಕನ್ನಡಕ್ಕಾಗಿ ಜನನ
ಕನ್ನಡಕ್ಕಾಗಿ ಮರಣವೆಂಬ ಸಾಲ ನೆನಪಿಡಿ
ಕನ್ನಡಾಂಬೆಗೆ ಜೈಯೆನ್ನಿ.


One thought on “ಕರ್ನಾಟಕ ರಾಜ್ಯೋತ್ಸವ ವಿಶೇಷ

Leave a Reply

Back To Top