ಕರ್ನಾಟಕ ರಾಜ್ಯೋತ್ಸವ ವಿಶೇಷ

ಚೆಲುವ ಕನ್ನಡ ನಾಡು

ಸವಿತಾ ಮುದ್ಗಲ್

ಕನ್ನಡದ ಕಂದಮ್ಮಗಳಿರ ನೋಡಿರಿ ಕನ್ನಡನಾಡನು
ಹಲವು ರಾಜಮನೆತನವಾಳಿದ
ನಮ್ಮ ಕನ್ನಡನಾಡನು
ಉತ್ತರದಿಂದ ದಕ್ಷಿಣದವರೆಗೂ ಹಬ್ಬಿದ ಕನ್ನಡನಾಡನು
ಎದ್ದುಬನ್ನಿ ಸಾರಲು ಕನ್ನಡದ ಕಂಪನು||

ಚಾಲುಕ್ಯರಾಳಿದ ಬಾದಾಮಿಯ ಕೆತ್ತನೆಯ ಸೊಬಗು
ಐಹೊಳೆ ಪಟ್ಟದಕಲ್ಲಿನ ಚಿತ್ತಾರದ ಬೆಡಗು
ಚಿತ್ರದುರ್ಗದ ಕಲ್ಲಿನ ಕೋಟೆಯ ನೋಡಲು
ಮೈಮನವೆಲ್ಲ ಕಂಪಿಸುವುದು ಭಾವದ ಒಡಲು||

ಕನ್ನಡದ ರನ್ನಪಂಪ ವ್ಯಾಸರನು ಮರೆಯದೆ
ಜ್ಞಾನಪೀಠ ತಂದುಕೊಟ್ಟ ದಿಗ್ಗಜರಿಗೆ ನಮಿಸುತ
ಹಳೆಗನ್ನಡ ಹೊಸಗನ್ನಡ ಎನ್ನದೆ
ನವಕನ್ನಡದ ಏಳಿಗೆಗಾಗಿ ಶ್ರಮಿಸುತ ||

ಪಠ್ಯಪುಸ್ತಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯನ್ನು
ಬೆಳಿಸಲು ಕಲಿಸಲು ನಮ್ಮಯ ಪೀಳಿಗೆಗೆ
ಒಂದಾಗುವ ನಾವೆಲ್ಲರೂ ಕನ್ನಡದ ವೈಯಾರವನ್ನು
ಗಿರಿಶಿಖರದಂತೆ ಗಟ್ಟಿಯಾಗಲು
ಕನ್ನಡದ ಭಾಷೆಗೆ ||


3 thoughts on “ಕರ್ನಾಟಕ ರಾಜ್ಯೋತ್ಸವ ವಿಶೇಷ

  1. ಧನ್ಯವಾದಗಳು ಸಂಪಾದಕರಿಗೆ , ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದು ಆಶಿಸುವೆ.
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸಂಗಾತಿ ಬಳಗಕ್ಕೆ ಮತ್ತು ಸದಸ್ಯರಿಗೂ ಜೈ ಕರ್ನಾಟಕ

Leave a Reply

Back To Top