ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಅರುಣಾನರೇಂದ್ರ

ಜೀವಕ್ಕೆ ಜೀವ ಕೊಡುವವನೆ ಎಲ್ಲಿರುವಿ
ಉಸಿರಿಗೆ ಉಸಿರು ತುಂಬುವವನೆ ಎಲ್ಲಿರುವಿ

ನಾ ಬದುಕಿರುವಾಗಲೇ ಸಮಾಧಿಗೆ ಕಲ್ಲು ಖರೀದಿಸಿದ್ದಾರೆ
ಎದೆಯ ಬಡಿತದ ಲೆಕ್ಕ ಇಡುವವನೆ ಎಲ್ಲಿರುವಿ

ನಾ ಸತ್ತಮೇಲೆ ಖುಷಿಪಡುವವರ ಪಟ್ಟಿ ತಯಾರಾಗಿದೆ
ಸಾವಿನ ಮನೆಗೆ ಕಂಬನಿ ಮಿಡಿದು ಕಳಿಸುವವನೆ ಎಲ್ಲಿರುವಿ

ಮನುಷ್ಯರು ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ ಏನು ಮಾಡಲಿ
ಹೃದಯಗಳ ಜೊತೆಗೆ ಮಾತಾಡುವವನೆ ಎಲ್ಲಿರುವಿ

ಸತ್ತ ಮೇಲೆ ಸ್ವರ್ಗ ಸಿಗಬೇಕೆಂದು ಅರುಣಾ ಬಯಸುವುದಿಲ್ಲ
ನರಕದ ನೋವು ಬಳಿ ಬಾರದಂತೆ ತಡೆಯುವವನೆ ಎಲ್ಲಿರುವಿ


About The Author

3 thoughts on “ಗಜಲ್”

  1. ವಿಜಯ‌ ಅಮೃತರಾಜ್ ವಕೀಲರು ಕೊಪ್ಪಳ

    ವ್ಹಾ….

    ಪ್ರತಿ ಸಾಲು ರಕ್ತ , ಕಂಬನಿ ಹನಿಯುತ್ತಿದೆ ಗಜಲ್ ನ ಪ್ರತಿ ಅಕ್ಷರ ಅಕ್ಷರಗಳು….

  2. ಹೆಚ್. ಮಂಜುಳಾ.

    ಉಳಿದೆಲ್ಲಾ ಸಂಬಂಧಗಳು ಹೆಸರಿಗೆ ಮಾತ್ರ ಗೋಸುಂಬೆ ಬಣ್ಣವನ್ನು ನಂಬಲು ಸಾಧ್ಯವೇ? ಆದರೆ ನಮ್ಮ ಕೈ ಹಿಡಿದವನು ಜೊತೆಗಿದ್ದರೇ ಎಲ್ಲವನ್ನೂ ಎದುರಿಸಿ ನಿಲ್ಲಬಹುದು.ತುಂಬಾ ಚೆನ್ನಾಗಿದೆ ಮೇಡಂ ತಮ್ಮ ಗಜಲ್.

  3. ಅಶೋಕ ಬಾಬು ಟೇಕಲ್.

    ಕಾಡಿತು.ಮೇಡಂ..ಬದುಕಿರುವಾಗಲೆ ಸಮಾಧಿಗೆ ಕಲ್ಲು ಖರೀದಿಸಿದ್ದಾರೆ….

Leave a Reply

You cannot copy content of this page

Scroll to Top