ಕಾವ್ಯಸಂಗಾತಿ
ಸೆಪ್ಟಿಕ್ ಟ್ಯಾಂಕು ಕ್ಲೀನಿಂಗಿಗಾಗಿ ಸಂಪರ್ಕಿಸಿ
ಬಿ.ಶ್ರೀನಿವಾಸ


ಹೊಟ್ಟೆ ಹಸಿದಿದ್ದರೂ ,
ಹಸಿದವರ ಕಂಡು
ಕಣ್ಣೀರು ಹಾಕಿದ ತಾಯಂದಿರ ಮಕ್ಕಳು ನಾವು .
ಹೊತ್ತು ತಿರುಗಿದೆವು ನಾವು,
ಅನಂತನಾಗರ ಬರ,
ರಂಗಣ್ಣನ ಪಬ್ಲಿಕ್ಕಿನ ಮಾತು
ಬೆಳವಾಡಿಯ ಡೈಲಾಗು
ಕಣ್ಣನ್ ಮಾಮನ ಡೆಲಿವರಿ
ಎಲ್ಲವಕ್ಕೂ ಕಟ್ಟಬೇಕಿದೆ ಕರ!
ಅವರು ದೈತ್ಯರು
ನಾವು ದಲಿತರು!
ಎನ್ನುವುದೂ ಹಳೆಯ ಮಾತು!
ಭಾರತದ ಸೆಪ್ಟಿಕ್ ಟ್ಯಾಂಕು ತುಂಬಿದೆ
ಎನ್ನೋದೂ ಈಗಿನ ಹೊಸ ಮಾತು!
ಮಲ ಹೊರುವ ಪದ್ಧತಿ ನಿಷೇಧಿಸಿದೆ
ಸರಕಾರದ ಜಾಹೀರಾತು,
“ಸೆಪ್ಟಿಕ್ ಟ್ಯಾಂಕು ಕ್ಲೀನಿಂಗಿಗಾಗಿ ಸಂಪರ್ಕಿಸಿ”
ಬೋರ್ಡಿನ ಕೆಳಗೇ ಇದೆ ನಂಬರು!